ETV Bharat / bharat

ಒಂದೇ ಕುಟುಂಬದ ಮೂವರ ನಿಗೂಢ ಸಾವು: ಗರ್ಭಿಣಿ, ಪತಿ, ಮಗಳ ಬರ್ಬರ ಕೊಲೆ ಶಂಕೆ - ಬಿಹಾರ್​​ನ ನಳಂದಾ ಜಿಲ್ಲೆಯ ಅಪರಾಧ ಸುದ್ದಿ

ಬಿಹಾರ್​​ದ ನಳಂದಾ ಜಿಲ್ಲೆಯ ಬಿಂದ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗರ್ಭಿಣಿ ಮಹಿಳೆ, ಆಕೆಯ ಪತಿ ಮತ್ತು ಹೆಣ್ಣು ಮಗು ಭೀಕರವಾಗಿ ಕೊಲೆಯಾಗಿರುವ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಆದ್ರೆ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನೂ ಖಚಿತವಾಗಿಲ್ಲ.

triple murder case in nalanda
ನಳಂದಾದಲ್ಲಿ ತ್ರಿವಳಿ ಹತ್ಯೆ
author img

By

Published : Dec 3, 2019, 7:54 PM IST

ನಳಂದಾ(ಬಿಹಾರ್​): ಬಿಹಾರ್​​ದ ನಳಂದಾ ಜಿಲ್ಲೆಯ ಬಿಂದ್​ ಪೊಲೀಸ್ ಠಾಣಾ ವ್ಯಾಪ್ತಿಯ ಮಸೀಹಾಡಿಯಾ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಗರ್ಭಿಣಿ ಮಹಿಳೆ, ಆಕೆಯ ಪತಿ ಮತ್ತು ಹೆಣ್ಣು ಮಗುವನ್ನು ಕೊಂದು ಎಸೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದ್ರೆ, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನೂ ಖಚಿತವಾಗಿಲ್ಲ. ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಎಲ್ಲಾ ಮೃತದೇಹಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ನಳಂದಾದಲ್ಲಿ ತ್ರಿವಳಿ ಹತ್ಯೆ ಶಂಕೆ

ಮೃತರನ್ನು ಗರ್ಭಿಣಿ ಮಿಂತು ದೇವಿ, ಆಕೆಯ ಪತಿ ಸನ್ನಿ ಯಾದವ್ ಹಾಗೂ ಎರಡು ವರ್ಷದ ಮಗಳು ಎಂದು ಗುರುತಿಸಲಾಗಿದೆ. ಮಿಂತು ದೇವಿ ಕೆಲ ದಿನಗಳಿಂದ ತನ್ನ ಮಗಳೊಂದಿಗೆ ತವರು ಮನೆಯಲ್ಲಿ ವಾಸವಿದ್ದಳು. ಈಗ ಮಸೀಹಾಡಿಯಾ ಗ್ರಾಮಕ್ಕೆ ಮೂವರು ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಆದರೆ ಮೃತಳ ತಂದೆ ಇದು ಕೊಲೆ ಎಂದು ಆರೋಪಿಸಿದ್ದಾರೆ.

ಮೃತದೇಹಗಳ ಮೇಲೆ ಗಾಯಗಳ ಗುರುತುಗಳಿದ್ದು, ಮರಣೋತ್ತರ ವರದಿಯ ನಂತರವೇ ಈ ಪ್ರಕರಣ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಖಚಿತವಾಗಲಿದೆ. ತನಿಖೆ ಮುಂದುವರೆದಿದೆ ಎಂದು ಬಿಂದ್​ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.

ನಳಂದಾ(ಬಿಹಾರ್​): ಬಿಹಾರ್​​ದ ನಳಂದಾ ಜಿಲ್ಲೆಯ ಬಿಂದ್​ ಪೊಲೀಸ್ ಠಾಣಾ ವ್ಯಾಪ್ತಿಯ ಮಸೀಹಾಡಿಯಾ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಗರ್ಭಿಣಿ ಮಹಿಳೆ, ಆಕೆಯ ಪತಿ ಮತ್ತು ಹೆಣ್ಣು ಮಗುವನ್ನು ಕೊಂದು ಎಸೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದ್ರೆ, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನೂ ಖಚಿತವಾಗಿಲ್ಲ. ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಎಲ್ಲಾ ಮೃತದೇಹಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ನಳಂದಾದಲ್ಲಿ ತ್ರಿವಳಿ ಹತ್ಯೆ ಶಂಕೆ

ಮೃತರನ್ನು ಗರ್ಭಿಣಿ ಮಿಂತು ದೇವಿ, ಆಕೆಯ ಪತಿ ಸನ್ನಿ ಯಾದವ್ ಹಾಗೂ ಎರಡು ವರ್ಷದ ಮಗಳು ಎಂದು ಗುರುತಿಸಲಾಗಿದೆ. ಮಿಂತು ದೇವಿ ಕೆಲ ದಿನಗಳಿಂದ ತನ್ನ ಮಗಳೊಂದಿಗೆ ತವರು ಮನೆಯಲ್ಲಿ ವಾಸವಿದ್ದಳು. ಈಗ ಮಸೀಹಾಡಿಯಾ ಗ್ರಾಮಕ್ಕೆ ಮೂವರು ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ. ಆದರೆ ಮೃತಳ ತಂದೆ ಇದು ಕೊಲೆ ಎಂದು ಆರೋಪಿಸಿದ್ದಾರೆ.

ಮೃತದೇಹಗಳ ಮೇಲೆ ಗಾಯಗಳ ಗುರುತುಗಳಿದ್ದು, ಮರಣೋತ್ತರ ವರದಿಯ ನಂತರವೇ ಈ ಪ್ರಕರಣ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಖಚಿತವಾಗಲಿದೆ. ತನಿಖೆ ಮುಂದುವರೆದಿದೆ ಎಂದು ಬಿಂದ್​ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.

Intro:Body:

national


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.