ETV Bharat / bharat

ನಾಳೆ ವಾರಣಾಸಿಯಲ್ಲಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಇಂದು ಬೃಹತ್‌ ರ‍್ಯಾಲಿ

author img

By

Published : Apr 25, 2019, 1:02 PM IST

ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ನಾಳೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಆ ಬಳಿಕ ವಾರಣಾಸಿಯಿಂದ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇನ್ನು ನಾಳಿನ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಬಿಜೆಪಿಯಿಂದ ಬೃಹತ್​ ರ‍್ಯಾಲಿ ನಡೆಯಲಿದೆ.

ವಾರಣಾಸಿಯಲ್ಲಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಆಧ್ಯಾತ್ಮಿಕ ನಗರ ವಾರಣಾಸಿ ಕ್ಷೇತ್ರದಿಂದ ಎರಡನೇ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದು, ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.

ಉಮೇದುವಾರಿಕೆ ಸಲ್ಲಿಕೆಗೂ ಒಂದು ದಿನ ಮೊದಲೇ ಭರ್ಜರಿ ಶಕ್ತಿ ಪ್ರದರ್ಶನ ನಡೆಸಲು ಬಿಜೆಪಿ ನಿರ್ಧರಿಸಿದೆ. ಹೀಗಾಗಿ ವಾರಣಾಸಿಯಲ್ಲಿ ಇಂದು ಸಂಜೆ 3 ಗಂಟೆಗೆ ಪಕ್ಷದಿಂದ ಬೃಹತ್‌ ರ‍್ಯಾಲಿ ನಡೆಸಲಿದ್ದಾರೆ. ನಗರದಲ್ಲಿ 7 ಕಿಲೋ ಮೀಟರ್‌ನ ಈ ರ‍್ಯಾಲಿ ಬನಾರಸ್‌ ಹಿಂದೂ ಯುನಿವರ್ಸಿಟಿ ಯಿಂದ ಕಚಾರಿ ಚೌಕ್‌ ವರೆಗೆ ಸಾಗಲಿದೆ. ಈ ವೇಳೆ ಬನಾರಸ್‌ ಹಿಂದೂ ವಿಶ್ವ ವಿದ್ಯಾಲಯದ ಸಂಸ್ಥಾಪಕ ಮದನ್ ಮೋಹನ್ ಮಾಳವಿಯಾ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.

ಪ್ರಧಾನಿ ಮೋದಿ ಗಂಗಾ ನದಿಗೆ ಸಾಗುವ ಮಾರ್ಗದ ಮುಖ್ಯ ದ್ವಾರವಾಗಿರೋ ದಶ ಅಶ್ವಮೇಧ ಘಾಟ್‌ ನಲ್ಲಿ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಇನ್ನು ಸಂಜೆ ಗಂಗಾ ಆರತಿ ಬೆಳಗಲಿದ್ದಾರೆ. ನಾಳೆ ನಾಮಪತ್ರ ಸಲ್ಲಿಕೆಗೂ ಮುನ್ನ ನಗರದಲ್ಲಿ ಅತಿ ಹಳೆಯದಾದ ಕಾಲಭೈರವ ದೇವಾಲಯಕ್ಕೆ ಭೇಟಿ ನೀಡಿ ಶಿವನ ಆಶೀರ್ವಾದ ಪಡೆಯಲಿದ್ದಾರೆ. ಈ ವೇಳೆ ಬಿಜೆಪಿಯ ಬಹುತೇಕ ನಾಯಕರು, ಎನ್‌ಡಿಎ ಅಂಗ ಪಕ್ಷಗಳ ನಾಯಕರು ಪ್ರಧಾನಿ ಸಾಥ್‌ ನೀಡಲಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಆಧ್ಯಾತ್ಮಿಕ ನಗರ ವಾರಣಾಸಿ ಕ್ಷೇತ್ರದಿಂದ ಎರಡನೇ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದು, ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.

ಉಮೇದುವಾರಿಕೆ ಸಲ್ಲಿಕೆಗೂ ಒಂದು ದಿನ ಮೊದಲೇ ಭರ್ಜರಿ ಶಕ್ತಿ ಪ್ರದರ್ಶನ ನಡೆಸಲು ಬಿಜೆಪಿ ನಿರ್ಧರಿಸಿದೆ. ಹೀಗಾಗಿ ವಾರಣಾಸಿಯಲ್ಲಿ ಇಂದು ಸಂಜೆ 3 ಗಂಟೆಗೆ ಪಕ್ಷದಿಂದ ಬೃಹತ್‌ ರ‍್ಯಾಲಿ ನಡೆಸಲಿದ್ದಾರೆ. ನಗರದಲ್ಲಿ 7 ಕಿಲೋ ಮೀಟರ್‌ನ ಈ ರ‍್ಯಾಲಿ ಬನಾರಸ್‌ ಹಿಂದೂ ಯುನಿವರ್ಸಿಟಿ ಯಿಂದ ಕಚಾರಿ ಚೌಕ್‌ ವರೆಗೆ ಸಾಗಲಿದೆ. ಈ ವೇಳೆ ಬನಾರಸ್‌ ಹಿಂದೂ ವಿಶ್ವ ವಿದ್ಯಾಲಯದ ಸಂಸ್ಥಾಪಕ ಮದನ್ ಮೋಹನ್ ಮಾಳವಿಯಾ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.

ಪ್ರಧಾನಿ ಮೋದಿ ಗಂಗಾ ನದಿಗೆ ಸಾಗುವ ಮಾರ್ಗದ ಮುಖ್ಯ ದ್ವಾರವಾಗಿರೋ ದಶ ಅಶ್ವಮೇಧ ಘಾಟ್‌ ನಲ್ಲಿ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಇನ್ನು ಸಂಜೆ ಗಂಗಾ ಆರತಿ ಬೆಳಗಲಿದ್ದಾರೆ. ನಾಳೆ ನಾಮಪತ್ರ ಸಲ್ಲಿಕೆಗೂ ಮುನ್ನ ನಗರದಲ್ಲಿ ಅತಿ ಹಳೆಯದಾದ ಕಾಲಭೈರವ ದೇವಾಲಯಕ್ಕೆ ಭೇಟಿ ನೀಡಿ ಶಿವನ ಆಶೀರ್ವಾದ ಪಡೆಯಲಿದ್ದಾರೆ. ಈ ವೇಳೆ ಬಿಜೆಪಿಯ ಬಹುತೇಕ ನಾಯಕರು, ಎನ್‌ಡಿಎ ಅಂಗ ಪಕ್ಷಗಳ ನಾಯಕರು ಪ್ರಧಾನಿ ಸಾಥ್‌ ನೀಡಲಿದ್ದಾರೆ.

Intro:Body:

ನಾಳೆ ವಾರಣಾಸಿಯಲ್ಲಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ; ಇಂದು ಬೃಹತ್‌ ರ‍್ಯಾಲಿ



ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಆಧ್ಯಾತ್ಮಿಕ ನಗರ ವಾರಣಾಸಿ ಕ್ಷೇತ್ರದಿಂದ ಎರಡನೇ ಬಾರಿಗೆ  ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದು, ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಉಮೇದುವಾರಿಕೆ ಸಲ್ಲಿಕೆಗೂ  ಒಂದು ದಿನ ಮೊದಲೇ  ಭರ್ಜರಿ ಶಕ್ತಿ ಪ್ರದರ್ಶನ ನಡೆಸಲು ಬಿಜೆಪಿ ನಿರ್ಧರಿಸಿದೆ.  ಹೀಗಾಗಿ ವಾರಣಾಸಿಯಲ್ಲಿಂದು  ಸಂಜೆ 3 ಗಂಟೆಗೆ ಪಕ್ಷದ ವತಿಯಿಂದ  ಬೃಹತ್‌ ಱಲಿ ನಡೆಸಲಿದ್ದಾರೆ.  ನಗರದಲ್ಲಿ 7 ಕಿಲೋ ಮೀಟರ್‌ನ  ಈ ಱಲಿ ಬನಾರಸ್‌ ಹಿಂದೂ ಯುನಿವರ್ಸಿಟಿ ಯಿಂದ  ಕಚಾರಿ ಚೌಕ್‌ ವರೆಗೆ ಸಾಗಲಿದೆ. ಈ ವೇಳೆ ಬನಾರಸ್‌  ಹಿಂದೂ ವಿಶ್ವ ವಿದ್ಯಾಲಯದ ಸಂಸ್ಥಾಪಕ  ಮದನ್ ಮೋಹನ್ ಮಾಳವಿಯಾ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.  ಪ್ರಧಾನಿ ಮೋದಿ ಗಂಗಾ ನದಿಗೆ ಸಾಗುವ ಮಾರ್ಗದ ಮುಖ್ಯ ದ್ವಾರವಾಗಿರೋ ದಶಅಶ್ವಮೇಧ ಘಾಟ್‌ ನಲ್ಲಿ ಱಲಿಯಲ್ಲಿ ಭಾಗವಹಿಸಲಿದ್ದಾರೆ. ಇನ್ನು ಸಂಜೆ ಗಂಗಾ ಆರತಿ ಬೆಳಗಲಿದ್ದಾರೆ.   ನಾಳೆ  ನಾಮಪತ್ರ ಸಲ್ಲಿಕೆಗೂ ಮುನ್ನ  ನಗರದಲ್ಲಿ ಅತಿ ಹಳೇಯದಾದ ಕಾಲಭೈರವ ದೇವಾಲಯಕ್ಕೆ ಭೇಟಿ ನೀಡಿ ಶಿವನ ಆಶೀರ್ವಾದ ಪಡೆಯಲಿದ್ದಾರೆ. ಈ ವೇಳೆ ಬಿಜೆಪಿಯ ಬಹುತೇಕ ನಾಯಕರು, ಎನ್‌ಡಿಎ ಅಂಗ ಪಕ್ಷಗಳ ನಾಯಕರು ಪ್ರಧಾನಿ ಸಾಥ್‌ ನೀಡಲಿದ್ದಾರೆ. 


Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.