ಹೈದರಾಬಾದ್: ಕೊರೊನಾ ಮಮಾಹಾಮರಿ ದಿನದಿಂದ ದಿನಕ್ಕೆ ತನ್ನ ರಕ್ಕಸತನ ಮುಂದುವರೆಸಿದೆ. ಪ್ರತಿದಿನವೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ತೆಲಂಗಾಣದಲ್ಲಿ ಮತ್ತೆ ಮೂರು ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂವರೂ ಸೋಂಕಿತರು ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯವರಾಗಿದ್ದಾರೆ. ಇವರು ವಿದೇಶದ ಪ್ರಯಾಣದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ತೆಲಂಗಾಣದಲ್ಲಿ ಒಟ್ಟು 39 ಪ್ರಕರಣಗಳು ಕಂಡು ಬಂದಿವೆ. ಅಲ್ಲಿನ ಸರ್ಕಾರ ಈ ಸೋಂಕನ್ನ ತಡೆಯಲು ದಿಟ್ಟವಾದ ಕ್ರಮವನ್ನ ಈಗಾಗಲೇ ಕೈಗೊಂಡಿದೆ. ಲಾಕ್ಡೌನ್ ಉಲ್ಲಂಘಿಸಿದ್ರೆ ಕಂಡಲ್ಲಿ ಗುಂಡಿಕ್ಕುವ ಆದೇಶವನ್ನೂ ಸಿಎಂ ಕೆಸಿಆರ್ ನಿನ್ನೆಯಷ್ಟೇ ನೀಡಿದ್ದಾರೆ.