ETV Bharat / bharat

ಕೃಷಿ ಭೂಮಿಗೆ ನೀರು ಪೂರೈಸಲು ಯೋಜನೆ ರೂಪಿಸಿ: ಅಧಿಕಾರಿಗಳಿಗೆ ಸಿಎಂ​ ಸೂಚನೆ

author img

By

Published : Jul 13, 2020, 8:40 AM IST

ಶ್ರೀರಾಮ್ ಸಾಗರ್ ಪ್ರವಾಹ ಹರಿವಿನ ಕಾಲುವೆಗಾಗಿ, ಹೆಚ್ಚಿನ ಒಟಿಗಳನ್ನು ರಚಿಸಬೇಕು ಮತ್ತು ಇತರ ಯೋಜನೆಗಳೊಂದಿಗೆ ನೀರಾವರಿ ನೀರು ಲಭ್ಯವಿಲ್ಲದ ಜಮೀನುಗಳಿಗೆ ನೀರು ಪೂರೈಸಲು ಹಾಗೂ ಟ್ಯಾಂಕ್‌ಗಳನ್ನು ತುಂಬಲು ನೀರು ಸರಬರಾಜು ಮಾಡಬೇಕು ಎಂದು ತೆಲಂಗಾಣ ಸಿಎಂ ಕೆ ಚಂದ್ರಶೇಖರ್​ ರಾವ್​ ಹೇಳಿದರು.

ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್
ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್

ಹೈದರಾಬಾದ್: ನೀರಾವರಿ ಯೋಜನೆಗಳಿಂದ ಬರುವ ನದಿ ನೀರನ್ನು ರಾಜ್ಯದಲ್ಲಿ ಸಾಧ್ಯವಾದಷ್ಟು ಕೃಷಿ ಭೂಮಿಗೆ ಪೂರೈಸಲು ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮುಖ್ಯಮಂತ್ರಿಗಳ ಕಚೇರಿಯ (ಸಿಎಮ್‌ಒ) ಅಧಿಕೃತ ಬಿಡುಗಡೆಯ ಪ್ರಕಾರ, ಯೋಜನೆಗಳಿಂದ ನೀರನ್ನು ಮೊದಲು ಟ್ಯಾಂಕ್‌ಗಳು, ನಂತರ ಜಲಾಶಯಗಳು ಮತ್ತು ಅಂತಿಮವಾಗಿ ಅಣೆಕಟ್ಟು ತುಂಬಲು ಬಳಸಿಕೊಳ್ಳಬೇಕು ಎಂದು ರಾವ್ ಹೇಳಿದರು.

ಶ್ರೀರಾಮ್ ಸಾಗರ್ ಪ್ರವಾಹದ ಹರಿವಿನ ಕಾಲುವೆಗಾಗಿ, ಹೆಚ್ಚಿನ ಒಟಿಗಳನ್ನು ರಚಿಸಬೇಕು ಮತ್ತು ಇತರ ಯೋಜನೆಗಳೊಂದಿಗೆ ನೀರಾವರಿ ನೀರು ಲಭ್ಯವಿಲ್ಲದ ಜಮೀನುಗಳಿಗೆ ನೀರು ಪೂರೈಸಲು ಟ್ಯಾಂಕ್‌ಗಳನ್ನು ತುಂಬಲು ನೀರು ಸರಬರಾಜು ಮಾಡಬೇಕು ಎಂದು ಅವರು ಹೇಳಿದರು.

ನೀರಾವರಿ ಸೌಲಭ್ಯವಿಲ್ಲದ ಪ್ರದೇಶಗಳನ್ನು ಗುರುತಿಸುವುದು ಮತ್ತು ಆ ಪ್ರದೇಶಗಳಿಗೆ ನೀರು ಪೂರೈಸುವ ಯೋಜನೆ ಕುರಿತು ಸಿಎಂ ಭಾನುವಾರ ಪ್ರಗತಿ ಭವನದಲ್ಲಿ ವಿವರವಾದ ಸಮಾಲೋಚನೆ ನಡೆಸಿದರು.

"ರಾಜ್ಯ ಸರ್ಕಾರವು ಕೃಷ್ಣ ಮತ್ತು ಗೋದಾವರಿ ನದಿಗಳಲ್ಲಿ ಹಲವಾರು ಅಡೆತಡೆಗಳನ್ನು ನಿವಾರಿಸಿ, ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿದೆ. ಸರ್ಕಾರವು ಬಾಕಿ ಇರುವ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿದೆ. ತೆಲಂಗಾಣ ರಾಜ್ಯ ರಚನೆಯ ನಂತರ, ಟಿಆರ್​ಎಸ್​ ಸರ್ಕಾರ ನೀರಾವರಿ ಕ್ಷೇತ್ರಕ್ಕೆ ಆದ್ಯತೆ ನೀಡಿದೆ. ಕಾಲೇಶ್ವರಂ ಮತ್ತು ಇತರ ಯೋಜನೆಗಳೊಂದಿಗೆ ನಾವು ಈಗ ನೀರಿನ ಸಮೃದ್ಧಿಯನ್ನು ಹೊಂದಿದ್ದೇವೆ "ಎಂದು ಮುಖ್ಯಮಂತ್ರಿ ರಾವ್ ಸ್ಪಷ್ಟಪಡಿಸಿದರು.

"ನಾವು ಅಣೆಕಟ್ಟುಗಳಿಗೆ ಹೆಚ್ಚು ನೀರನ್ನು ಪೂರೈಸಬೇಕಾಗಿದೆ. ಅಣೆಟ್ಟೆಯಿಂದ ಕಾಲುವೆ ಮೂಲಕ ಕೊನೆಯ ತುಂಡು ಭೂಮಿಗೂ ನೀರು ಸರಬರಾಜು ಮಾಡಬಹುದೇ ಎಂಬುದನ್ನ ಯೋಚಿಸಿ ಕಾರ್ಯಗತ ಮಾಡಬೇಕಿದೆ. ಈ ಸಂಬಂಧ ಕಾಲುವೆಗಳ ಸಾಮರ್ಥ್ಯವನ್ನು ಪರೀಕ್ಷಿಸಿ. ಅಗತ್ಯವಿದ್ದರೆ ಕಾಲುವೆಗಳ ಹರಿವಿನ ಸಾಮರ್ಥ್ಯವನ್ನು ಹೆಚ್ಚಿಸಿ. ಎಲ್ಲ ಟ್ಯಾಂಕ್‌ಗಳು ಮತ್ತು ಚೆಕ್ ಡ್ಯಾಮ್‌ಗಳನ್ನು ತುಂಬಬೇಕು ಎಂದು ಅಧಿಕಾರಿಗಳಿಗೆ ಸಿಎಂ ಚಂದ್ರಶೇಖರ್​ ರಾವ್​ ಸೂಚಿಸಿದ್ದಾರೆ.

ಹೈದರಾಬಾದ್: ನೀರಾವರಿ ಯೋಜನೆಗಳಿಂದ ಬರುವ ನದಿ ನೀರನ್ನು ರಾಜ್ಯದಲ್ಲಿ ಸಾಧ್ಯವಾದಷ್ಟು ಕೃಷಿ ಭೂಮಿಗೆ ಪೂರೈಸಲು ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮುಖ್ಯಮಂತ್ರಿಗಳ ಕಚೇರಿಯ (ಸಿಎಮ್‌ಒ) ಅಧಿಕೃತ ಬಿಡುಗಡೆಯ ಪ್ರಕಾರ, ಯೋಜನೆಗಳಿಂದ ನೀರನ್ನು ಮೊದಲು ಟ್ಯಾಂಕ್‌ಗಳು, ನಂತರ ಜಲಾಶಯಗಳು ಮತ್ತು ಅಂತಿಮವಾಗಿ ಅಣೆಕಟ್ಟು ತುಂಬಲು ಬಳಸಿಕೊಳ್ಳಬೇಕು ಎಂದು ರಾವ್ ಹೇಳಿದರು.

ಶ್ರೀರಾಮ್ ಸಾಗರ್ ಪ್ರವಾಹದ ಹರಿವಿನ ಕಾಲುವೆಗಾಗಿ, ಹೆಚ್ಚಿನ ಒಟಿಗಳನ್ನು ರಚಿಸಬೇಕು ಮತ್ತು ಇತರ ಯೋಜನೆಗಳೊಂದಿಗೆ ನೀರಾವರಿ ನೀರು ಲಭ್ಯವಿಲ್ಲದ ಜಮೀನುಗಳಿಗೆ ನೀರು ಪೂರೈಸಲು ಟ್ಯಾಂಕ್‌ಗಳನ್ನು ತುಂಬಲು ನೀರು ಸರಬರಾಜು ಮಾಡಬೇಕು ಎಂದು ಅವರು ಹೇಳಿದರು.

ನೀರಾವರಿ ಸೌಲಭ್ಯವಿಲ್ಲದ ಪ್ರದೇಶಗಳನ್ನು ಗುರುತಿಸುವುದು ಮತ್ತು ಆ ಪ್ರದೇಶಗಳಿಗೆ ನೀರು ಪೂರೈಸುವ ಯೋಜನೆ ಕುರಿತು ಸಿಎಂ ಭಾನುವಾರ ಪ್ರಗತಿ ಭವನದಲ್ಲಿ ವಿವರವಾದ ಸಮಾಲೋಚನೆ ನಡೆಸಿದರು.

"ರಾಜ್ಯ ಸರ್ಕಾರವು ಕೃಷ್ಣ ಮತ್ತು ಗೋದಾವರಿ ನದಿಗಳಲ್ಲಿ ಹಲವಾರು ಅಡೆತಡೆಗಳನ್ನು ನಿವಾರಿಸಿ, ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿದೆ. ಸರ್ಕಾರವು ಬಾಕಿ ಇರುವ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿದೆ. ತೆಲಂಗಾಣ ರಾಜ್ಯ ರಚನೆಯ ನಂತರ, ಟಿಆರ್​ಎಸ್​ ಸರ್ಕಾರ ನೀರಾವರಿ ಕ್ಷೇತ್ರಕ್ಕೆ ಆದ್ಯತೆ ನೀಡಿದೆ. ಕಾಲೇಶ್ವರಂ ಮತ್ತು ಇತರ ಯೋಜನೆಗಳೊಂದಿಗೆ ನಾವು ಈಗ ನೀರಿನ ಸಮೃದ್ಧಿಯನ್ನು ಹೊಂದಿದ್ದೇವೆ "ಎಂದು ಮುಖ್ಯಮಂತ್ರಿ ರಾವ್ ಸ್ಪಷ್ಟಪಡಿಸಿದರು.

"ನಾವು ಅಣೆಕಟ್ಟುಗಳಿಗೆ ಹೆಚ್ಚು ನೀರನ್ನು ಪೂರೈಸಬೇಕಾಗಿದೆ. ಅಣೆಟ್ಟೆಯಿಂದ ಕಾಲುವೆ ಮೂಲಕ ಕೊನೆಯ ತುಂಡು ಭೂಮಿಗೂ ನೀರು ಸರಬರಾಜು ಮಾಡಬಹುದೇ ಎಂಬುದನ್ನ ಯೋಚಿಸಿ ಕಾರ್ಯಗತ ಮಾಡಬೇಕಿದೆ. ಈ ಸಂಬಂಧ ಕಾಲುವೆಗಳ ಸಾಮರ್ಥ್ಯವನ್ನು ಪರೀಕ್ಷಿಸಿ. ಅಗತ್ಯವಿದ್ದರೆ ಕಾಲುವೆಗಳ ಹರಿವಿನ ಸಾಮರ್ಥ್ಯವನ್ನು ಹೆಚ್ಚಿಸಿ. ಎಲ್ಲ ಟ್ಯಾಂಕ್‌ಗಳು ಮತ್ತು ಚೆಕ್ ಡ್ಯಾಮ್‌ಗಳನ್ನು ತುಂಬಬೇಕು ಎಂದು ಅಧಿಕಾರಿಗಳಿಗೆ ಸಿಎಂ ಚಂದ್ರಶೇಖರ್​ ರಾವ್​ ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.