ETV Bharat / bharat

ಪಿಎಂ ಕೇರ್ಸ್​ ನಿಧಿಯಲ್ಲಿ ಸಂಗ್ರಹವಾದ ಹಣವೆಷ್ಟು..? ಎಷ್ಟು ಬಳಕೆಯಾಗಿದೆ: ಇಲ್ಲಿದೆ ಸಂಪೂರ್ಣ ಮಾಹಿತಿ

author img

By

Published : Aug 18, 2020, 5:46 PM IST

ವಿರೋಧ ಪಕ್ಷಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದ್ದ ಪಿಎಂ ಕೇರ್ಸ್​ ಫಂಡ್​ ಸಂಬಂಧಿಸಿ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದ್ದು, ನ್ಯಾಯಾಲಯದ ತೀರ್ಪು ಪ್ರತಿಪಕ್ಷಗಳ ಗೊಂದಲಕ್ಕೆ ತೆರೆ ಎಳೆದಂತಾಗಿದೆ.

Supreme Court's verdict on PM Cares
ಪಿಎಂ ಕೇರ್ಸ್​ ಕುರಿತು ಸುಪ್ರೀಂ ಕೋಟ್​ ಮಹತ್ವದ ತೀರ್ಪು

ನವದೆಹಲಿ : ಕೋವಿಡ್​ ಪರಿಹಾರಕ್ಕಾಗಿ ಸ್ಥಾಪಿಸಲಾದ ಪಿಎಂ ಕೇರ್ಸ್​ ನಿಧಿಯಯಲ್ಲಿ ಸಂಗ್ರಹವಾದ ಹಣವನ್ನು ಎನ್​​ಡಿಆರ್​ಎಫ್​ಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಪಿಎಂ ಕೇರ್ಸ್​ ಫಂಡ್​ಅನ್ನು ಎನ್​ಡಿಆರ್​ಎಫ್​ಗೆ ವರ್ಗಾಯಿಸಲು ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್. ಸುಭಾಷ್ ರೆಡ್ಡಿ, ಮತ್ತು ಎಂ.ಆರ್ ಶಾ ಅವರನ್ನೊಳಗೊಂಡ ನ್ಯಾಯ ಪೀಠ, ಪಿಎಂ ಕೇರ್ಸ್ ಫಂಡ್​ನಲ್ಲಿ ಸಂಗ್ರಹಿಸಿದ ಹಣವು ಎನ್​ಡಿಆರ್​ಎಫ್​ ನಿಧಿಗಿಂತ ಸಂಪೂರ್ಣ ಭಿನ್ನವಾಗಿದೆ ಎಂದು ತಿಳಿಸಿದೆ. ಅಲ್ಲದೆ, ಕೋವಿಡ್​ ನಿರ್ವಹಣೆಗಾಗಿ ರಾಷ್ಟ್ರೀಯ ಯೋಜನೆ ರೂಪಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕೆಂಬ ಅರ್ಜಿದಾರರ ಮನವಿಗೆ, ಸದ್ಯ ಸರ್ಕಾರ ರೂಪಿಸಿರುವ ಯೋಜನೆಗಳು ಕೋವಿಡ್​ ನಿರ್ವಹಣೆಗೆ ಸಾಕು ಎಂದು ಅಭಿಪ್ರಾಯಪಟ್ಟಿದೆ.

ಸುಪ್ರೀಂ ಕೋರ್ಟ್​ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಪಿಎಂ ಕೇರ್ಸ್​ ಫಂಡ್​ ಕುರಿತು ವಿವಿಧ ರೀತಿಯಲ್ಲಿ ಕೊಂಕು ನುಡಿಯುತ್ತಿದ್ದ ರಾಹುಲ್​ ಗಾಂಧಿಯವರಿಗೆ ತೀರ್ಪು ಸರಿಯಾದ ಹೊಡೆತ ನೀಡಿದೆ. ರಾಹುಲ್ ಗಾಂಧಿ ಮತ್ತು ಅವರ ಸಹವರ್ತಿಗಳ ದುರುದ್ದೇಶಪೂರಿತ ಪ್ರಯತ್ನಗಳ ಹೊರತಾಗಿಯೂ ಸತ್ಯ ಗೆದ್ದಿದೆ. ಪಿಎಂ ಕೇರ್ಸ್​ ನಿಧಿಗೆ ಸಹಾಯಧನ ನೀಡಿದ ಜನ ಸಾಮಾನ್ಯರ ವಿರುದ್ಧದ ರಾಹುಲ್​ ಗಾಂಧಿಯವರ ಅಸಮಧಾನ ಇದರಿಂದ ಕೊನೆಗೊಂಡಿದೆ ಎಂದು ಹೇಳಿದ್ದಾರೆ.

ಗಾಂಧಿ ಕುಟುಂಬವು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್​ಆರ್​ಎಫ್​) ಯನ್ನು ದಶಕಗಳಿಂದ ತಮ್ಮ ವೈಯುಕ್ತಿಕ ಆಸ್ತಿ ತರ ಪರಿಗಣಿಸಿತ್ತು. ಅಲ್ಲದೆ, ಬಡ ಜನರು ಕಷ್ಟ ಪಟ್ಟು ಸಂಪಾದಿಸಿದ ಹಣವವಾದ ಪಿಎಂಎನ್​ಆರ್​ಎಫ್​ ಫಂಡ್​ನ್ನು ತಮ್ಮ ಕುಟುಂಬ ಟ್ರಸ್ಟ್​ಗಳಿಗೆ ವರ್ಗಾಯಿಸಿದೆ ಎಂದು ನಡ್ಡಾ ಆರೋಪಿಸಿದ್ದಾರೆ.

ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಪ್ರತಿಕ್ರಿಯಿಸಿ, ಸುಪ್ರೀಂ ಕೋರ್ಟ್ ತೀರ್ಪು ಪಿಎಂ ಕೇರ್ಸ್ ನಿಧಿಯ ಕುರಿತು ಇದ್ದ ಊಹಾ ಪೋಹಾಗಳಿಗೆ ತೆರೆ ಎಳೆದಿದೆ. ಪಿಎಂ ಕೇರ್ಸ್​ ನಿಧಿಗೆ ನೀಡುವ ದೇಣಿಗೆಯನ್ನು ಪಾರದರ್ಶಕವಾಗಿ ನಿರ್ವಹಣೆ ಮಾಡಲಾಗುವುದು ಎಂದಿದ್ದಾರೆ.

ಪಿಎಂ ಕೇರ್ಸ್​ ನಿಧಿಯಲ್ಲಿ ಸಂಗ್ರಹವಾದ ಒಟ್ಟು 3,100 ಕೋಟಿ ರೂಪಾಯಿ ಹಣದಲ್ಲಿ 2 ಸಾವಿರ ಕೋಟಿ ರೂಪಾಯಿಯನ್ನು 50 ಸಾವಿರ ವೆಂಟಿಲೇಟರ್‌ ಖರೀದಿಸಲು ಖರ್ಚು ಮಾಡಲಾಗಿದೆ. ಕೋವಿಡ್​ ರೋಗಿಗಳ ತುರ್ತು ಅಗತ್ಯತೆಗಳನ್ನು ಪೂರೈಸಲು ಈ ವೆಂಟಿಲೇಟರ್‌ಗಳನ್ನು ಬಳಸಲಾಗುತ್ತದೆ. ವಲಸೆ ಕಾರ್ಮಿಕರ ಆರೈಕೆಗಾಗಿ ಈ ನಿಧಿಯಿಂದ ಒಂದು ಸಾವಿರ ಕೋಟಿ ರೂಪಾಯಿಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ಕೋವಿಡ್ ಲಸಿಕೆ ಅಭಿವೃದ್ಧಿಗೆ 100 ಕೋಟಿ ರೂಪಾಯಿ ನೀಡಲಾಗಿದೆ ಎಂದು ಸಚಿವ ರವಿಶಂಕರ್​ ಪ್ರಸಾದ್​ ಮಾಹಿತಿ ನೀಡಿದರು.

ಪಿಎಂ ಕೇರ್ಸ್​ ನೋಂದಾಯಿತ ನಂಬಿಕಸ್ಥ ನಿಧಿಯಾಗಿದೆ. ಅದರ ಕಾನೂನು ನಿಯಮಗಳು ಮತ್ತು ನಿರ್ವಹಣೆಯಲ್ಲಿ ಪಾರದರ್ಶಕತೆ ಕಾಪಾಡಲಾಗುತ್ತಿದೆ. ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ರಾಷ್ಟ್ರೀಯ ಸಂಕಲ್ಪವನ್ನು ದುರ್ಬಲಗೊಳಿಸಲು ಪ್ರತಿಪಕ್ಷಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸಚಿವ ಪ್ರಸಾದ್​ ಹೇಳಿದರು.

ನವದೆಹಲಿ : ಕೋವಿಡ್​ ಪರಿಹಾರಕ್ಕಾಗಿ ಸ್ಥಾಪಿಸಲಾದ ಪಿಎಂ ಕೇರ್ಸ್​ ನಿಧಿಯಯಲ್ಲಿ ಸಂಗ್ರಹವಾದ ಹಣವನ್ನು ಎನ್​​ಡಿಆರ್​ಎಫ್​ಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಪಿಎಂ ಕೇರ್ಸ್​ ಫಂಡ್​ಅನ್ನು ಎನ್​ಡಿಆರ್​ಎಫ್​ಗೆ ವರ್ಗಾಯಿಸಲು ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್. ಸುಭಾಷ್ ರೆಡ್ಡಿ, ಮತ್ತು ಎಂ.ಆರ್ ಶಾ ಅವರನ್ನೊಳಗೊಂಡ ನ್ಯಾಯ ಪೀಠ, ಪಿಎಂ ಕೇರ್ಸ್ ಫಂಡ್​ನಲ್ಲಿ ಸಂಗ್ರಹಿಸಿದ ಹಣವು ಎನ್​ಡಿಆರ್​ಎಫ್​ ನಿಧಿಗಿಂತ ಸಂಪೂರ್ಣ ಭಿನ್ನವಾಗಿದೆ ಎಂದು ತಿಳಿಸಿದೆ. ಅಲ್ಲದೆ, ಕೋವಿಡ್​ ನಿರ್ವಹಣೆಗಾಗಿ ರಾಷ್ಟ್ರೀಯ ಯೋಜನೆ ರೂಪಿಸಲು ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕೆಂಬ ಅರ್ಜಿದಾರರ ಮನವಿಗೆ, ಸದ್ಯ ಸರ್ಕಾರ ರೂಪಿಸಿರುವ ಯೋಜನೆಗಳು ಕೋವಿಡ್​ ನಿರ್ವಹಣೆಗೆ ಸಾಕು ಎಂದು ಅಭಿಪ್ರಾಯಪಟ್ಟಿದೆ.

ಸುಪ್ರೀಂ ಕೋರ್ಟ್​ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಪಿಎಂ ಕೇರ್ಸ್​ ಫಂಡ್​ ಕುರಿತು ವಿವಿಧ ರೀತಿಯಲ್ಲಿ ಕೊಂಕು ನುಡಿಯುತ್ತಿದ್ದ ರಾಹುಲ್​ ಗಾಂಧಿಯವರಿಗೆ ತೀರ್ಪು ಸರಿಯಾದ ಹೊಡೆತ ನೀಡಿದೆ. ರಾಹುಲ್ ಗಾಂಧಿ ಮತ್ತು ಅವರ ಸಹವರ್ತಿಗಳ ದುರುದ್ದೇಶಪೂರಿತ ಪ್ರಯತ್ನಗಳ ಹೊರತಾಗಿಯೂ ಸತ್ಯ ಗೆದ್ದಿದೆ. ಪಿಎಂ ಕೇರ್ಸ್​ ನಿಧಿಗೆ ಸಹಾಯಧನ ನೀಡಿದ ಜನ ಸಾಮಾನ್ಯರ ವಿರುದ್ಧದ ರಾಹುಲ್​ ಗಾಂಧಿಯವರ ಅಸಮಧಾನ ಇದರಿಂದ ಕೊನೆಗೊಂಡಿದೆ ಎಂದು ಹೇಳಿದ್ದಾರೆ.

ಗಾಂಧಿ ಕುಟುಂಬವು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್​ಆರ್​ಎಫ್​) ಯನ್ನು ದಶಕಗಳಿಂದ ತಮ್ಮ ವೈಯುಕ್ತಿಕ ಆಸ್ತಿ ತರ ಪರಿಗಣಿಸಿತ್ತು. ಅಲ್ಲದೆ, ಬಡ ಜನರು ಕಷ್ಟ ಪಟ್ಟು ಸಂಪಾದಿಸಿದ ಹಣವವಾದ ಪಿಎಂಎನ್​ಆರ್​ಎಫ್​ ಫಂಡ್​ನ್ನು ತಮ್ಮ ಕುಟುಂಬ ಟ್ರಸ್ಟ್​ಗಳಿಗೆ ವರ್ಗಾಯಿಸಿದೆ ಎಂದು ನಡ್ಡಾ ಆರೋಪಿಸಿದ್ದಾರೆ.

ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಪ್ರತಿಕ್ರಿಯಿಸಿ, ಸುಪ್ರೀಂ ಕೋರ್ಟ್ ತೀರ್ಪು ಪಿಎಂ ಕೇರ್ಸ್ ನಿಧಿಯ ಕುರಿತು ಇದ್ದ ಊಹಾ ಪೋಹಾಗಳಿಗೆ ತೆರೆ ಎಳೆದಿದೆ. ಪಿಎಂ ಕೇರ್ಸ್​ ನಿಧಿಗೆ ನೀಡುವ ದೇಣಿಗೆಯನ್ನು ಪಾರದರ್ಶಕವಾಗಿ ನಿರ್ವಹಣೆ ಮಾಡಲಾಗುವುದು ಎಂದಿದ್ದಾರೆ.

ಪಿಎಂ ಕೇರ್ಸ್​ ನಿಧಿಯಲ್ಲಿ ಸಂಗ್ರಹವಾದ ಒಟ್ಟು 3,100 ಕೋಟಿ ರೂಪಾಯಿ ಹಣದಲ್ಲಿ 2 ಸಾವಿರ ಕೋಟಿ ರೂಪಾಯಿಯನ್ನು 50 ಸಾವಿರ ವೆಂಟಿಲೇಟರ್‌ ಖರೀದಿಸಲು ಖರ್ಚು ಮಾಡಲಾಗಿದೆ. ಕೋವಿಡ್​ ರೋಗಿಗಳ ತುರ್ತು ಅಗತ್ಯತೆಗಳನ್ನು ಪೂರೈಸಲು ಈ ವೆಂಟಿಲೇಟರ್‌ಗಳನ್ನು ಬಳಸಲಾಗುತ್ತದೆ. ವಲಸೆ ಕಾರ್ಮಿಕರ ಆರೈಕೆಗಾಗಿ ಈ ನಿಧಿಯಿಂದ ಒಂದು ಸಾವಿರ ಕೋಟಿ ರೂಪಾಯಿಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ಕೋವಿಡ್ ಲಸಿಕೆ ಅಭಿವೃದ್ಧಿಗೆ 100 ಕೋಟಿ ರೂಪಾಯಿ ನೀಡಲಾಗಿದೆ ಎಂದು ಸಚಿವ ರವಿಶಂಕರ್​ ಪ್ರಸಾದ್​ ಮಾಹಿತಿ ನೀಡಿದರು.

ಪಿಎಂ ಕೇರ್ಸ್​ ನೋಂದಾಯಿತ ನಂಬಿಕಸ್ಥ ನಿಧಿಯಾಗಿದೆ. ಅದರ ಕಾನೂನು ನಿಯಮಗಳು ಮತ್ತು ನಿರ್ವಹಣೆಯಲ್ಲಿ ಪಾರದರ್ಶಕತೆ ಕಾಪಾಡಲಾಗುತ್ತಿದೆ. ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ರಾಷ್ಟ್ರೀಯ ಸಂಕಲ್ಪವನ್ನು ದುರ್ಬಲಗೊಳಿಸಲು ಪ್ರತಿಪಕ್ಷಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸಚಿವ ಪ್ರಸಾದ್​ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.