ಚಂಡೀಗಢ: ಲಾಕ್ಡೌನ್ ವೇಳೆ ವಾಹನದಲ್ಲಿ ಚಲಾಯಿಸುತ್ತಿದ್ದವರ ಬಳಿ ಪಾಸ್ ಕೇಳಿದ್ದಕ್ಕಾಗಿ, ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಕೈ ಕಳೆದುಕೊಂಡ ಪಿಎಸ್ಐಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಚಂಡೀಗಢದ ಆಸ್ಪತ್ರೆಯಲ್ಲಿ ಎಎಸ್ಐ ಹರ್ಜೀತ್ ಸಿಂಗ್ ಅವರ ಕೈಯನ್ನು ಮರು ಜೋಡಿಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿದ ಫೋಟೋಗಳು ಲಭ್ಯವಾಗಿವೆ.
![ASI](https://etvbharatimages.akamaized.net/etvbharat/prod-images/img-20200412-wa0044_1204newsroom_1586700694_527.jpg)
![ASI](https://etvbharatimages.akamaized.net/etvbharat/prod-images/img-20200412-wa0046_1204newsroom_1586700694_854.jpg)
ಇಂದು ನಸುಕಿನ ಜಾವ ಚೆಕ್ಪೋಸ್ಟ್ ಬಳಿ ಎಎಸ್ಐ ಹರ್ಜೀತ್ ಸಿಂಗ್ ಸೇರಿದಂತೆ ಅನೇಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ವಾಹನದಲ್ಲಿ ಬಂದ ಐವರು ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಬ್ಯಾರಿಕೇಡ್ ಮುರಿದು ಪರಾರಿಯಾಗಿದ್ದರು. ಇವರೆಲ್ಲರೂ ಸಿಖ್ನ ನಿಹಂಗರು ಎಂದು ಗುರುತಿಸಲಾಗಿತ್ತು.
![ASI](https://etvbharatimages.akamaized.net/etvbharat/prod-images/img-20200412-wa0045_1204newsroom_1586700694_525.jpg)
ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜೊತೆಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.