ETV Bharat / bharat

ತಾಂಡವ ವೆಬ್ ಸರಣಿ ತಯಾರಕರ ವಿರುದ್ಧ ಕಠಿಣ ಕ್ರಮ: ಸಂಸದೆ ಪ್ರಜ್ಞಾ ಠಾಕೂರ್

ಬುಧವಾರ ಅಯೋಧ್ಯೆಗೆ ಆಗಮಿಸಿದ್ದ ಭೋಪಾಲ್ ಸಂಸದೆ ಪ್ರಜ್ಞಾ ಠಾಕೂರ್, 'ತಾಂಡವ' ತಯಾರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಚಿತ್ರ ಮಾಡದಂತೆ ಪರವಾನಗಿ ರದ್ದುಪಡಿಸಬೇಕು ಎಂದೂ ಇದೇ ವೇಳೆ ಆಗ್ರಹಿಸಿದರು. ಧರ್ಮದ್ರೋಹಿಗಳು ಇಂತಹ ಕೆಲಸಗಳನ್ನು ಮಾಡುತ್ತಾರೆ. ಆದರೆ, ನಮ್ಮ ಧರ್ಮವನ್ನು ರಕ್ಷಿಸಲು ನಾವೇ ಜಾಗರೂಕರಾಗಿರದಿರುವುದು ಬಹಳ ದುಃಖದ ಸಂಗತಿಯಾಗಿದೆ ಎಂದು ವಿಷಾದಿಸಿದರು.

author img

By

Published : Jan 21, 2021, 6:41 AM IST

Strict action to be taken against the makers of the Tandava Web Series: MP Pragya Thakur
ತಾಂಡವ ವೆಬ್ ಸರಣಿ ತಯಾರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು: ಸಂಸದೆ ಪ್ರಜ್ಞಾ ಠಾಕೂರ್

ಅಯೋಧ್ಯೆ: ತಾಂಡವ ವೆಬ್ ಸರಣಿಯ ವಿವಾದ ಸದ್ಯ ತಣ್ಣಗಾಗುವಂತೆ ಕಾಣುತ್ತಿಲ್ಲ. ರಾಮ್​​ಲಲ್ಲಾನ ದರ್ಶನಕ್ಕೆ ಎಂದು ಬುಧವಾರ ಅಯೋಧ್ಯಾಕ್ಕೆ ಆಗಮಿಸಿದ್ದ ಭೋಪಾಲ್ ಸಂಸದೆ ಪ್ರಜ್ಞಾ ಠಾಕೂರ್, 'ತಾಂಡವ' ತಯಾರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು ಮತ್ತು ಚಿತ್ರ ಮಾಡದಂತೆ ಪರವಾನಗಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಮಾಧ್ಯಮದೊಂದಿಗೆ ಸಂಸದೆ ಪ್ರಜ್ಞಾ ಠಾಕೂರ್ ಮಾತನಾಡಿ, ಧರ್ಮದ್ರೋಹಿಗಳು ಇಂತಹ ಕೆಲಸಗಳನ್ನು ಮಾಡುತ್ತಾರೆ. ಆದರೆ, ನಮ್ಮ ಧರ್ಮವನ್ನು ರಕ್ಷಿಸಲು ನಾವೇ ಜಾಗರೂಕರಾಗಿರದಿರುವುದು ಬಹಳ ದುಃಖದ ಸಂಗತಿಯಾಗಿದೆ. ಆದ್ದರಿಂದಲೇ ನಮ್ಮ ದೇವತೆಗಳ ಮೇಲೆ ಹೆಚ್ಚಾಗಿ ಇಂತಹ ಚಲನಚಿತ್ರಗಳನ್ನು ಮಾಡಲಾಗುತ್ತಿದೆ.

ಸನಾತನ ಧರ್ಮವು ಎಂದಿಗೂ ಯಾರ ಧರ್ಮಕ್ಕೂ ಕೇಡು ಬಯಸುವುದಿಲ್ಲ ಅಥವಾ ಯಾವುದೇ ಅನಿಯಂತ್ರಿತ ಕೆಲಸ ಮಾಡುವುದಿಲ್ಲ. ಇದರ ಹೊರತಾಗಿಯೂ, ಸನಾತನ ಧರ್ಮಕ್ಕೆ ದ್ರೋಹ ಬಗೆದಾಗ ಹಿಂದುತ್ವದ ಜಾಗೃತಿ ಹೊಂದಿರುವುದು ಬಹಳ ಮುಖ್ಯ. ಹಿಂದೂ ಎಚ್ಚರವಾದರೆ ದೇಶ ಉಳಿಯುತ್ತದೆ ಮತ್ತು ಹಿಂದೂ ವಿಭಜನೆಯಾದರೆ ದೇಶ ವಿಭಜನೆಯಾಗುತ್ತದೆ. ಆದ್ದರಿಂದ, ಅಂತಹ ಚಲನಚಿತ್ರಗಳನ್ನು ಮಾಡುವವರ ವಿರುದ್ಧ ಕಠಿಣ ಮತ್ತು ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

ಇಂತಹ ಚಲನಚಿತ್ರಗಳನ್ನು ಮಾಡುವ ವಿಕೃತ ಮನಸ್ಥಿತಿ ಹೊಂದಿರುವವರ ಹಕ್ಕುಗಳನ್ನು ಕಸಿದುಕೊಳ್ಳಬೇಕು. ನಮ್ಮ ಧಾರ್ಮಿಕ ಗ್ರಂಥಗಳನ್ನು ಮತ್ತು ದೇವತೆಗಳನ್ನು ಅವಮಾನಿಸುವವರನ್ನು ಶಿಕ್ಷಿಸಲು ಹಿಂದೂ ಸಮಾಜವು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಬಿಜೆಪಿ ಸಂಸದರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದರಿಂದ ಯಾರೂ ಮುಂದೆ ಅಂತಹ ಕೆಲಸ ಮಾಡಲು ಧೈರ್ಯ ಮಾಡಬಾರದು.

ಅಯೋಧ್ಯೆ: ತಾಂಡವ ವೆಬ್ ಸರಣಿಯ ವಿವಾದ ಸದ್ಯ ತಣ್ಣಗಾಗುವಂತೆ ಕಾಣುತ್ತಿಲ್ಲ. ರಾಮ್​​ಲಲ್ಲಾನ ದರ್ಶನಕ್ಕೆ ಎಂದು ಬುಧವಾರ ಅಯೋಧ್ಯಾಕ್ಕೆ ಆಗಮಿಸಿದ್ದ ಭೋಪಾಲ್ ಸಂಸದೆ ಪ್ರಜ್ಞಾ ಠಾಕೂರ್, 'ತಾಂಡವ' ತಯಾರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು ಮತ್ತು ಚಿತ್ರ ಮಾಡದಂತೆ ಪರವಾನಗಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಮಾಧ್ಯಮದೊಂದಿಗೆ ಸಂಸದೆ ಪ್ರಜ್ಞಾ ಠಾಕೂರ್ ಮಾತನಾಡಿ, ಧರ್ಮದ್ರೋಹಿಗಳು ಇಂತಹ ಕೆಲಸಗಳನ್ನು ಮಾಡುತ್ತಾರೆ. ಆದರೆ, ನಮ್ಮ ಧರ್ಮವನ್ನು ರಕ್ಷಿಸಲು ನಾವೇ ಜಾಗರೂಕರಾಗಿರದಿರುವುದು ಬಹಳ ದುಃಖದ ಸಂಗತಿಯಾಗಿದೆ. ಆದ್ದರಿಂದಲೇ ನಮ್ಮ ದೇವತೆಗಳ ಮೇಲೆ ಹೆಚ್ಚಾಗಿ ಇಂತಹ ಚಲನಚಿತ್ರಗಳನ್ನು ಮಾಡಲಾಗುತ್ತಿದೆ.

ಸನಾತನ ಧರ್ಮವು ಎಂದಿಗೂ ಯಾರ ಧರ್ಮಕ್ಕೂ ಕೇಡು ಬಯಸುವುದಿಲ್ಲ ಅಥವಾ ಯಾವುದೇ ಅನಿಯಂತ್ರಿತ ಕೆಲಸ ಮಾಡುವುದಿಲ್ಲ. ಇದರ ಹೊರತಾಗಿಯೂ, ಸನಾತನ ಧರ್ಮಕ್ಕೆ ದ್ರೋಹ ಬಗೆದಾಗ ಹಿಂದುತ್ವದ ಜಾಗೃತಿ ಹೊಂದಿರುವುದು ಬಹಳ ಮುಖ್ಯ. ಹಿಂದೂ ಎಚ್ಚರವಾದರೆ ದೇಶ ಉಳಿಯುತ್ತದೆ ಮತ್ತು ಹಿಂದೂ ವಿಭಜನೆಯಾದರೆ ದೇಶ ವಿಭಜನೆಯಾಗುತ್ತದೆ. ಆದ್ದರಿಂದ, ಅಂತಹ ಚಲನಚಿತ್ರಗಳನ್ನು ಮಾಡುವವರ ವಿರುದ್ಧ ಕಠಿಣ ಮತ್ತು ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

ಇಂತಹ ಚಲನಚಿತ್ರಗಳನ್ನು ಮಾಡುವ ವಿಕೃತ ಮನಸ್ಥಿತಿ ಹೊಂದಿರುವವರ ಹಕ್ಕುಗಳನ್ನು ಕಸಿದುಕೊಳ್ಳಬೇಕು. ನಮ್ಮ ಧಾರ್ಮಿಕ ಗ್ರಂಥಗಳನ್ನು ಮತ್ತು ದೇವತೆಗಳನ್ನು ಅವಮಾನಿಸುವವರನ್ನು ಶಿಕ್ಷಿಸಲು ಹಿಂದೂ ಸಮಾಜವು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಬಿಜೆಪಿ ಸಂಸದರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದರಿಂದ ಯಾರೂ ಮುಂದೆ ಅಂತಹ ಕೆಲಸ ಮಾಡಲು ಧೈರ್ಯ ಮಾಡಬಾರದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.