ETV Bharat / bharat

ಅದೃಷ್ಟ ಇದ್ರೆ ವಿಕ್ರಂ ಲ್ಯಾಂಡರ್​ ಸಂಪರ್ಕಕ್ಕೆ ಬಂದರೂ ಬರಬಹುದು: ಬಿರ್ಲಾ ಕೇಂದ್ರದ ವಿಜ್ಞಾನಿ

ಭಾರತದ ಬಾಹ್ಯಾಕಾಶ್ಯ ಸಂಸ್ಥೆ ಇಸ್ರೋ ನಡೆಸಿದ್ದ ಚಂದ್ರಯಾನ-2 ಕೊನೆ ಕ್ಷಣದಲ್ಲಿ ಸಿಗ್ನಲ್​ ಕಳೆದುಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಬಿರ್ಲಾ ಸಂಶೋಧನಾ ಕೇಂದ್ರದ ನಿರ್ದೇಶಕ ಬಿ.ಜಿ. ಸಿದ್ಧಾರ್ಥ್ ಮಹತ್ವದ ಮಾಹಿತಿ ಹೊರಹಾಕಿದ್ದಾರೆ.

author img

By

Published : Sep 7, 2019, 8:04 AM IST

ಬಿರ್ಲಾ ಕೇಂದ್ರದ ವಿಜ್ಞಾನಿ

ಹೈದರಾಬಾದ್​: ಚಂದ್ರಯಾನ2 ಯೋಜನೆಯ ಭಾಗವಾದ ವಿಕ್ರಂ ಲ್ಯಾಂಡರ್​ ಸಂಪರ್ಕ ಕಡಿದುಕೊಂಡಿದ್ದರೂ, ಅದೃಷ್ಟವಿದ್ದರೆ ಮತ್ತ ಸಂಪರ್ಕಕ್ಕೆ ಸಿಗಬಹುದು ಎಂದು ಬಿರ್ಲಾ ಸಂಶೋಧನಾ ಕೇಂದ್ರದ ನಿರ್ದೇಶಕ ಬಿ.ಜಿ. ಸಿದ್ಧಾರ್ಥ್​ ತಿಳಿಸಿದ್ದಾರೆ.

ಬಿ.ಜಿ. ಸಿದ್ಧಾರ್ಥ್,ಬಿರ್ಲಾ ಸಂಶೋಧನಾ ಕೇಂದ್ರದ ನಿರ್ದೇಶಕ

ಸದ್ಯದ ಸ್ಥಿತಿಯಲ್ಲಿ ವಿಕ್ರಂ ಲ್ಯಾಂಡರ್​ ಸಂಪರ್ಕ ಕಡಿದುಕೊಂಡಿರುವುದರಿಂದ ಏನನ್ನೂ ಹೇಳಲಾಗುವುದಿಲ್ಲ. ಚಂದ್ರನ ಮೇಲೆ ಭೂಮಿಯಂತ ವಾತಾವರಣವಿಲ್ಲ ಹಾಗಾಗಿ ಅಲ್ಲಿ ಏನಾಗಿದೆ ಎಂಬುದನ್ನು ಕರಾರುವಕ್ಕಾಗಿ ಹೇಳಲು ಸಮಯ ಬೇಕಾಗುತ್ತದೆ.

ವಿಕ್ರಂ ಲ್ಯಾಂಡರ್​ ಸಂಪರ್ಕ ಕಡಿದುಕೊಂಡಿದ್ದರೂ ಉಪಗ್ರಹವು ಇನ್ನೂ ಚಂದ್ರನ ಸುತ್ತ ಸುತ್ತುತ್ತಲೇ ಇದೆ. ಅದರ ಮೂಲಕ ನಿಖರವಾಗಿ ಲ್ಯಾಂಡರ್​ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ತಿಳಿಯಬಹುದು ಎಂದು ಅವರು ತಿಳಿಸಿದರು.

ಈಗ ಸಂಪರ್ಕ ಕಳೆದುಕೊಂಡಿರುವ ಲ್ಯಾಂಡರ್​ ಉತ್ತಮ ಸ್ಥಿತಿಯಲ್ಲಿರುವ ಸಾಧ್ಯತೆಗಳೂ ಇವೆ. ಅದಕ್ಕೆ ಹತ್ತು ಲಕ್ಷದಲ್ಲಿ ಒಂದು ಚಾನ್ಸ್​ ಅಂತೂ ಇದೆ. ನಾವು ಅದನ್ನೂ ಮಿಸ್​ ಮಾಡಿಕೊಳ್ಳುವಂತಿಲ್ಲ. ಸಂಪರ್ಕ ಕಳೆದುಕೊಂಡಿರುವ ಲ್ಯಾಂಡರ್​ ಸೇಫ್​ ಆಗಿ ಲ್ಯಾಂಡ್​ ಆಗಿರಲೂಬಹುದು ಅದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರಯೋಗದ ಸಮಯದಲ್ಲೂ ಆಗಿತ್ತು:

ವಿಕ್ರಂ ಲ್ಯಾಂಡರ್​ ಅನ್ನು ಪ್ರಯೋಗಕ್ಕೆ ಒಳಪಡಿಸುವಾಗಲೂ ಅದು ಒಮ್ಮೆ ಸಂಪರ್ಕ ಕಳೆದುಕೊಂಡಿತ್ತು. ಆ ನಂತರ ಸಿಗ್ನಲ್​ ಮರು ಜೋಡಣೆ ಮಾಡಿ ಮತ್ತೆ ಸಂಪರ್ಕಕ್ಕೆ ತೆಗೆದುಕೊಳ್ಳಲಾಯಿತು ಎಂದು ಅವರು ತಿಳಿಸಿದರು.

ಹೈದರಾಬಾದ್​: ಚಂದ್ರಯಾನ2 ಯೋಜನೆಯ ಭಾಗವಾದ ವಿಕ್ರಂ ಲ್ಯಾಂಡರ್​ ಸಂಪರ್ಕ ಕಡಿದುಕೊಂಡಿದ್ದರೂ, ಅದೃಷ್ಟವಿದ್ದರೆ ಮತ್ತ ಸಂಪರ್ಕಕ್ಕೆ ಸಿಗಬಹುದು ಎಂದು ಬಿರ್ಲಾ ಸಂಶೋಧನಾ ಕೇಂದ್ರದ ನಿರ್ದೇಶಕ ಬಿ.ಜಿ. ಸಿದ್ಧಾರ್ಥ್​ ತಿಳಿಸಿದ್ದಾರೆ.

ಬಿ.ಜಿ. ಸಿದ್ಧಾರ್ಥ್,ಬಿರ್ಲಾ ಸಂಶೋಧನಾ ಕೇಂದ್ರದ ನಿರ್ದೇಶಕ

ಸದ್ಯದ ಸ್ಥಿತಿಯಲ್ಲಿ ವಿಕ್ರಂ ಲ್ಯಾಂಡರ್​ ಸಂಪರ್ಕ ಕಡಿದುಕೊಂಡಿರುವುದರಿಂದ ಏನನ್ನೂ ಹೇಳಲಾಗುವುದಿಲ್ಲ. ಚಂದ್ರನ ಮೇಲೆ ಭೂಮಿಯಂತ ವಾತಾವರಣವಿಲ್ಲ ಹಾಗಾಗಿ ಅಲ್ಲಿ ಏನಾಗಿದೆ ಎಂಬುದನ್ನು ಕರಾರುವಕ್ಕಾಗಿ ಹೇಳಲು ಸಮಯ ಬೇಕಾಗುತ್ತದೆ.

ವಿಕ್ರಂ ಲ್ಯಾಂಡರ್​ ಸಂಪರ್ಕ ಕಡಿದುಕೊಂಡಿದ್ದರೂ ಉಪಗ್ರಹವು ಇನ್ನೂ ಚಂದ್ರನ ಸುತ್ತ ಸುತ್ತುತ್ತಲೇ ಇದೆ. ಅದರ ಮೂಲಕ ನಿಖರವಾಗಿ ಲ್ಯಾಂಡರ್​ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ತಿಳಿಯಬಹುದು ಎಂದು ಅವರು ತಿಳಿಸಿದರು.

ಈಗ ಸಂಪರ್ಕ ಕಳೆದುಕೊಂಡಿರುವ ಲ್ಯಾಂಡರ್​ ಉತ್ತಮ ಸ್ಥಿತಿಯಲ್ಲಿರುವ ಸಾಧ್ಯತೆಗಳೂ ಇವೆ. ಅದಕ್ಕೆ ಹತ್ತು ಲಕ್ಷದಲ್ಲಿ ಒಂದು ಚಾನ್ಸ್​ ಅಂತೂ ಇದೆ. ನಾವು ಅದನ್ನೂ ಮಿಸ್​ ಮಾಡಿಕೊಳ್ಳುವಂತಿಲ್ಲ. ಸಂಪರ್ಕ ಕಳೆದುಕೊಂಡಿರುವ ಲ್ಯಾಂಡರ್​ ಸೇಫ್​ ಆಗಿ ಲ್ಯಾಂಡ್​ ಆಗಿರಲೂಬಹುದು ಅದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರಯೋಗದ ಸಮಯದಲ್ಲೂ ಆಗಿತ್ತು:

ವಿಕ್ರಂ ಲ್ಯಾಂಡರ್​ ಅನ್ನು ಪ್ರಯೋಗಕ್ಕೆ ಒಳಪಡಿಸುವಾಗಲೂ ಅದು ಒಮ್ಮೆ ಸಂಪರ್ಕ ಕಳೆದುಕೊಂಡಿತ್ತು. ಆ ನಂತರ ಸಿಗ್ನಲ್​ ಮರು ಜೋಡಣೆ ಮಾಡಿ ಮತ್ತೆ ಸಂಪರ್ಕಕ್ಕೆ ತೆಗೆದುಕೊಳ್ಳಲಾಯಿತು ಎಂದು ಅವರು ತಿಳಿಸಿದರು.

Intro:Body:

ಅದೃಷ್ಟ ಇದ್ರೆ ವಿಕ್ರಂ ಲ್ಯಾಂಡರ್​ ಸಂಪರ್ಕಕ್ಕೆ ಬಂದರೂ ಬರಬಹುದು: ಬಿರ್ಲಾ ಕೇಂದ್ರದ ವಿಜ್ಞಾನಿ

ಹೈದರಾಬಾದ್​: ಚಂದ್ರಯಾನ2 ಯೋಜನೆಯ ಭಾಗವಾದ ವಿಕ್ರಂ ಲ್ಯಾಂಡರ್​ ಸಂಪರ್ಕ ಕಡಿದುಕೊಂಡಿದ್ದರೂ, ಅದೃಷ್ಟವಿದ್ದರೆ ಮತ್ತ ಸಂಪರ್ಕಕ್ಕೆ ಸಿಗಬಹುದು ಎಂದು ಬಿರ್ಲಾ ಸಂಶೋಧನಾ ಕೇಂದ್ರದ ನಿರ್ದೇಶಕ ಬಿ.ಜಿ. ಸಿದ್ಧಾರ್ಥ್​ ತಿಳಿಸಿದ್ದಾರೆ. 

ಸದ್ಯದ ಸ್ಥಿತಿಯಲ್ಲಿ ವಿಕ್ರಂ ಲ್ಯಾಂಡರ್​ ಸಂಪರ್ಕ ಕಡಿದುಕೊಂಡಿರುವುದರಿಂದ ಏನನ್ನೂ ಹೇಳಲಾಗುವುದಿಲ್ಲ. ಚಂದ್ರನ ಮೇಲೆ ಭೂಮಿಯಂತ ವಾತಾವರಣವಿಲ್ಲ ಹಾಗಾಗಿ ಅಲ್ಲಿ ಏನಾಗಿದೆ ಎಂಬುದನ್ನು ಕರಾರುವಕ್ಕಾಗಿ ಹೇಳಲು ಸಮಯ ಬೇಕಾಗುತ್ತದೆ. 

ವಿಕ್ರಂ ಲ್ಯಾಂಡರ್​ ಸಂಪರ್ಕ ಕಡಿದುಕೊಂಡಿದ್ದರೂ ಉಪಗ್ರಹವು ಇನ್ನೂ ಚಂದ್ರನ ಸುತ್ತ ಸುತ್ತುತ್ತಲೇ ಇದೆ. ಅದರ ಮೂಲಕ ನಿಖರವಾಗಿ ಲ್ಯಾಂಡರ್​ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ತಿಳಿಯಬಹುದು ಎಂದು ಅವರು ತಿಳಿಸಿದರು. 

ಈಗ ಸಂಪರ್ಕ ಕಳೆದುಕೊಂಡಿರುವ ಲ್ಯಾಂಡರ್​ ಉತ್ತಮ ಸ್ಥಿತಿಯಲ್ಲಿರುವ ಸಾಧ್ಯತೆಗಳೂ ಇವೆ. ಅದಕ್ಕೆ ಹತ್ತು ಲಕ್ಷದಲ್ಲಿ ಒಂದು ಚಾನ್ಸ್​ ಅಂತೂ ಇದೆ. ನಾವು ಅದನ್ನೂ ಮಿಸ್​ ಮಾಡಿಕೊಳ್ಳುವಂತಿಲ್ಲ. ಸಂಪರ್ಕ ಕಳೆದುಕೊಂಡಿರುವ ಲ್ಯಾಂಡರ್​ ಸೇಫ್​ ಆಗಿ ಲ್ಯಾಂಡ್​ ಆಗಿರಲೂಬಹುದು ಅದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು. 

ಪ್ರಯೋಗದ ಸಮಯದಲ್ಲೂ ಆಗಿತ್ತು: 

ವಿಕ್ರಂ ಲ್ಯಾಂಡರ್​ ಅನ್ನು ಪ್ರಯೋಗಕ್ಕೆ ಒಳಪಡಿಸುವಾಗಲೂ ಅದು ಒಮ್ಮೆ ಸಂಪರ್ಕ ಕಳೆದುಕೊಂಡಿತ್ತು. ಆ ನಂತರ ಸಿಗ್ನಲ್​ ಮರು ಜೋಡಣೆ ಮಾಡಿ ಮತ್ತೆ ಸಂಪರ್ಕಕ್ಕೆ ತೆಗೆದುಕೊಳ್ಳಲಾಯಿತು ಎಂದು ಅವರು ತಿಳಿಸಿದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.