ETV Bharat / bharat

ಗುಂಡು ಹಾರಿಸಿಕೊಂಡು ಎಸ್​ಎಸ್​ಬಿ ಯೋಧ ಆತ್ಮಹತ್ಯೆ

author img

By

Published : Oct 12, 2020, 11:13 AM IST

Updated : Oct 12, 2020, 11:36 AM IST

ಎಸ್​ಎಸ್​ಬಿ ಪಡೆಯ ಯೋಧನೋರ್ವ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ವಿಲ್ಗಾಂ ಪ್ರದೇಶದಲ್ಲಿ ನಡೆದಿದೆ.

ಎಸ್​ಎಸ್​ಬಿ ಯೋಧ ಸಾವಿಗೆ ಶರಣು
ಎಸ್​ಎಸ್​ಬಿ ಯೋಧ ಸಾವಿಗೆ ಶರಣು

ಹಂದ್ವಾರ(ಜಮ್ಮು-ಕಾಶ್ಮೀರ): ಸಶಸ್ತ್ರ ಸೀಮಾ ಬಲ (ಎಸ್​ಎಸ್​ಬಿ) ಪಡೆಯ ಯೋಧನೋರ್ವ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ವಿಲ್ಗಾಂ ಪ್ರದೇಶದಲ್ಲಿ ನಡೆದಿದೆ.

ಈ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು, "ಉತ್ತರಪ್ರದೇಶ ಮೂಲದ ಅಮಿತ್​ ಕುಮಾರ್​ ಎಂಬಾತ ಸಾವಿಗೆ ಶರಣಾಗಿದ್ದಾನೆ. ಈತ 37ನೇ ಬಿಎನ್ ಸಶಸ್ತ್ರ ಸೀಮಾ ಬಲದ ಯೋಧನಾಗಿದ್ದು, ವಿಲ್ಗಾಂಗೆ ನಿಯೋಜನೆಗೊಂಡಿದ್ದ. ಆತ ಗುಂಡು ಹಾರಿಸಿಕೊಂಡ ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ ಸಹ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ ಎಂಬುದನ್ನು ವೈದ್ಯರು ಖಚಿತಪಡಿಸಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.

ಯೋಧನ ಆತ್ಮಹತ್ಯೆಗೆ ಕಾರಣ ಏನು ಎಂಬುದರ ಕುರಿತಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಂದ್ವಾರ(ಜಮ್ಮು-ಕಾಶ್ಮೀರ): ಸಶಸ್ತ್ರ ಸೀಮಾ ಬಲ (ಎಸ್​ಎಸ್​ಬಿ) ಪಡೆಯ ಯೋಧನೋರ್ವ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ವಿಲ್ಗಾಂ ಪ್ರದೇಶದಲ್ಲಿ ನಡೆದಿದೆ.

ಈ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು, "ಉತ್ತರಪ್ರದೇಶ ಮೂಲದ ಅಮಿತ್​ ಕುಮಾರ್​ ಎಂಬಾತ ಸಾವಿಗೆ ಶರಣಾಗಿದ್ದಾನೆ. ಈತ 37ನೇ ಬಿಎನ್ ಸಶಸ್ತ್ರ ಸೀಮಾ ಬಲದ ಯೋಧನಾಗಿದ್ದು, ವಿಲ್ಗಾಂಗೆ ನಿಯೋಜನೆಗೊಂಡಿದ್ದ. ಆತ ಗುಂಡು ಹಾರಿಸಿಕೊಂಡ ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ ಸಹ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ ಎಂಬುದನ್ನು ವೈದ್ಯರು ಖಚಿತಪಡಿಸಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.

ಯೋಧನ ಆತ್ಮಹತ್ಯೆಗೆ ಕಾರಣ ಏನು ಎಂಬುದರ ಕುರಿತಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Last Updated : Oct 12, 2020, 11:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.