ETV Bharat / bharat

ಈಜಲು ಬೀಚ್​ಗೆ ಇಳಿದ ಆರು ಯುವಕರಲ್ಲಿ ನಾಲ್ವರ ರಕ್ಷಣೆ, ಇಬ್ಬರ ಸಾವು

author img

By

Published : Nov 15, 2020, 2:14 AM IST

ದಪೋಲಿ ತಾಲೂಕಿನ ಹಾರ್ನೆ ಪಾಲಂಡೆಯಲ್ಲಿ ಈ ಘಟನೆ ಜರುಗಿದೆ. ಮಹಾದ್‌ನಿಂದ 8 ಯುವಕರು ಇಲ್ಲಿಗೆ ಬಂದಿದ್ದರು. ಈ ಎಲ್ಲಾ ಎಂಟು ಯುವಕರು ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ ಎನ್ನಲಾಗಿದೆ.

Six drowned in Ratnagiri, four rescued, two died
ಈಜಲು ಬೀಚ್​ಗೆ ಇಳಿದ ಆರು ಯುವಕರಲ್ಲಿ ನಾಲ್ವರ ರಕ್ಷಣೆ, ಇಬ್ಬರ ಸಾವು

ಮಹಾರಾಷ್ಟ್ರ: ದೀಪಾವಳಿ ಹಿನ್ನೆಲೆ ಒಟ್ಟಾಗಿ ಸೇರಿದ ಸ್ನೇಹಿತರು ಸಮುದ್ರದಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿದ್ದು ಇಬ್ಬರು ಸಾವಿಗೀಡಾಗಿದ್ದು, ಇನ್ನುಳಿದವರನ್ನು ರಕ್ಷಣೆ ಮಾಡಲಾಗಿದೆ.

ದಪೋಲಿ ತಾಲೂಕಿನ ಹಾರ್ನೆ ಪಾಲಂಡೆಯಲ್ಲಿ ಈ ಘಟನೆ ಜರುಗಿದೆ. ಮಹಾದ್‌ನಿಂದ 8 ಯುವಕರು ಇಲ್ಲಿಗೆ ಬಂದಿದ್ದರು. ಈ ಎಲ್ಲಾ ಎಂಟು ಯುವಕರು ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ ಎನ್ನಲಾಗಿದೆ.

ಈ ಎಂಟು ಸ್ನೇಹಿತರಲ್ಲಿ ಇಬ್ಬರು ತೀರದಲ್ಲಿದ್ದರೆ, ಉಳಿದ ಆರು ಮಂದಿ ಈಜಲು ಬೀಚ್​ಗೆ ಇಳಿದಿದ್ದಾರೆ. ಅದೇ ವೇಳೆಗೆ ಈ ಆರು ಜನರು ದೊಡ್ಡ ಅಲೆಗೆ ಸಿಲುಕಿಕೊಂಡಿದ್ದಾರೆ. ತಕ್ಷಣವೇ ದಡದಲ್ಲಿದ್ದವರು ಅವರ ರಕ್ಷಣೆಗೆ ಧಾವಿಸಿದ್ದಾರೆ. ಮುಳುಗಿದ ಆರು ಜನರಲ್ಲಿ ನಾಲ್ವರನ್ನು ರಕ್ಷಿಸಲಾಗಿದೆ. ಈ ನಾಲ್ವರಲ್ಲಿ ಓರ್ವ ಯುವಕ ಗಂಭೀರವಾಗಿದ ಹಿನ್ನೆಲೆ ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನುಳಿದಂತೆ ಕಾಣೆಯಾಗಿರುವ ಇನ್ನಿಬ್ಬರ ಶವಗಳು ದೊರಕಿವೆ.

ಮಹಾರಾಷ್ಟ್ರ: ದೀಪಾವಳಿ ಹಿನ್ನೆಲೆ ಒಟ್ಟಾಗಿ ಸೇರಿದ ಸ್ನೇಹಿತರು ಸಮುದ್ರದಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿದ್ದು ಇಬ್ಬರು ಸಾವಿಗೀಡಾಗಿದ್ದು, ಇನ್ನುಳಿದವರನ್ನು ರಕ್ಷಣೆ ಮಾಡಲಾಗಿದೆ.

ದಪೋಲಿ ತಾಲೂಕಿನ ಹಾರ್ನೆ ಪಾಲಂಡೆಯಲ್ಲಿ ಈ ಘಟನೆ ಜರುಗಿದೆ. ಮಹಾದ್‌ನಿಂದ 8 ಯುವಕರು ಇಲ್ಲಿಗೆ ಬಂದಿದ್ದರು. ಈ ಎಲ್ಲಾ ಎಂಟು ಯುವಕರು ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ ಎನ್ನಲಾಗಿದೆ.

ಈ ಎಂಟು ಸ್ನೇಹಿತರಲ್ಲಿ ಇಬ್ಬರು ತೀರದಲ್ಲಿದ್ದರೆ, ಉಳಿದ ಆರು ಮಂದಿ ಈಜಲು ಬೀಚ್​ಗೆ ಇಳಿದಿದ್ದಾರೆ. ಅದೇ ವೇಳೆಗೆ ಈ ಆರು ಜನರು ದೊಡ್ಡ ಅಲೆಗೆ ಸಿಲುಕಿಕೊಂಡಿದ್ದಾರೆ. ತಕ್ಷಣವೇ ದಡದಲ್ಲಿದ್ದವರು ಅವರ ರಕ್ಷಣೆಗೆ ಧಾವಿಸಿದ್ದಾರೆ. ಮುಳುಗಿದ ಆರು ಜನರಲ್ಲಿ ನಾಲ್ವರನ್ನು ರಕ್ಷಿಸಲಾಗಿದೆ. ಈ ನಾಲ್ವರಲ್ಲಿ ಓರ್ವ ಯುವಕ ಗಂಭೀರವಾಗಿದ ಹಿನ್ನೆಲೆ ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನುಳಿದಂತೆ ಕಾಣೆಯಾಗಿರುವ ಇನ್ನಿಬ್ಬರ ಶವಗಳು ದೊರಕಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.