ETV Bharat / bharat

ಇಂದು ಸಂಜೆ 4ಕ್ಕೆ ವಿಶೇಷ ಪ್ಯಾಕೇಜ್​​ 2.0: ಕೃಷಿ ಸೇರಿ ಇನ್ನಷ್ಟು ಕ್ಷೇತ್ರಗಳ ಬಗ್ಗೆ ವಿತ್ತ ಸಚಿವೆ ವಿವರ - ವಿಶೇಷ ಸ್ವಾವಲಂಬಿ ಪ್ಯಾಕೇಜ್​

ಕೊರೊನಾ ವೈರಸ್​ ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಸರ್ಕಾರದಿಂದ ಘೋಷಣೆಯಾಗಿರುವ 20 ಲಕ್ಷ ಕೋಟಿ ರೂ. ಯಾವ ವಲಯಕ್ಕೆ ಹೇಗೆ ಹಂಚಿಕೆಯಾಗಲಿದೆ ಎಂಬುದರ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಈಗಾಗಲೇ ಒಂದು ಸುತ್ತಿನ ವಿವರಣೆ ನೀಡಿದ್ದಾರೆ. ಈ ವಿಶೇಷ ಪ್ಯಾಕೇಜಿನ ಮತ್ತಷ್ಟು ವಿವರಣೆಯನ್ನು ಅವರಿಂದು ಸುದ್ದಿಗೋಷ್ಟಿ ನಡೆಸಿ ಒದಗಿಸಲಿದ್ದಾರೆ.

Sitharaman
Sitharaman
author img

By

Published : May 14, 2020, 10:31 AM IST

Updated : May 14, 2020, 11:00 AM IST

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಇಂದು ಕೂಡಾ ವಿಶೇಷ ಸುದ್ದಿಗೋಷ್ಟಿ ನಡೆಸಲಿದ್ದು, ಸ್ವಾವಲಂಬಿ ಭಾರತಕ್ಕೆ ಘೋಷಣೆಯಾಗಿರುವ ವಿಶೇಷ ಪ್ಯಾಕೇಜ್‌ನ ಉಳಿದ ವಿವರ ನೀಡಲಿದ್ದಾರೆ.​​ ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಅವರು ಅತಿ ಸಣ್ಣ, ಸಣ್ಣ ಮಧ್ಯಮ ಕೈಗಾರಿಕೆಗಳು ಸೇರಿದಂತೆ ವಿವಿಧ ವಲಯಗಳಿಗೆ ಆದ್ಯತೆ ನೀಡಿರುವ ಸುಮಾರು 5.5 ಲಕ್ಷ ಕೋಟಿ ರೂ ಪ್ಯಾಕೇಜ್ ಪ್ರಕಟಿಸಿದ್ದರು.

ಆದಾಯ ತೆರಿಗೆ ದಿನಾಂಕ ವಿಸ್ತರಣೆ: ನವೆಂಬರ್ 30ರವರೆಗೆ ತೆರಿಗೆ ಕಟ್ಟಲು ಅವಕಾಶ

ಇಂದು ನಡೆಸಲಿರುವ ಸುದ್ದಿಗೋಷ್ಟಿಯಲ್ಲಿ ಪ್ರಮುಖವಾಗಿ ದೇಶದ ಆಧಾರಸ್ತಂಭವಾಗಿರುವ ಕೃಷಿ ಮತ್ತು ಅಸಂಘಟಿತ ಕಾರ್ಮಿಕರು, ವಲಸೆ ಕಾರ್ಮಿಕರು, ಬ್ಯಾಂಕಿಂಗ್​ ಕ್ಷೇತ್ರ ಸೇರಿದಂತೆ ವಾಹನೋದ್ಯಮದ ಬಗ್ಗೆ ಮಾತನಾಡುವ ಸಾಧ್ಯತೆ ಇದೆ.

ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಅತಿಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಅಡಮಾನ ರಹಿತ ಸಾಲ ನೀಡುವ ಬಗ್ಗೆ ಅವರು ಮಾತನಾಡಿದ್ದು, ಅದರ ಮರುಪಾವತಿಗೆ 4 ವರ್ಷಗಳವರೆಗೆ ಕಾಲಾವಕಾಶ ಪ್ರಕಟಿಸಿದ್ದರು. ಇದರ ಜತೆಗೆ ಆದಾಯ ತೆರಿಗೆ ಕಟ್ಟಲು ನೀಡಲಾಗಿದ್ದ ದಿನಾಂಕ ವಿಸ್ತರಣೆ, ಪಿಎಫ್​ ಹಣದಲ್ಲಿ ಕಡಿತ ಸೇರಿ ಅನೇಕ ವಿಷಯಗಳನ್ನು ವಿವರಿಸಿದ್ದರು.

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಇಂದು ಕೂಡಾ ವಿಶೇಷ ಸುದ್ದಿಗೋಷ್ಟಿ ನಡೆಸಲಿದ್ದು, ಸ್ವಾವಲಂಬಿ ಭಾರತಕ್ಕೆ ಘೋಷಣೆಯಾಗಿರುವ ವಿಶೇಷ ಪ್ಯಾಕೇಜ್‌ನ ಉಳಿದ ವಿವರ ನೀಡಲಿದ್ದಾರೆ.​​ ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಅವರು ಅತಿ ಸಣ್ಣ, ಸಣ್ಣ ಮಧ್ಯಮ ಕೈಗಾರಿಕೆಗಳು ಸೇರಿದಂತೆ ವಿವಿಧ ವಲಯಗಳಿಗೆ ಆದ್ಯತೆ ನೀಡಿರುವ ಸುಮಾರು 5.5 ಲಕ್ಷ ಕೋಟಿ ರೂ ಪ್ಯಾಕೇಜ್ ಪ್ರಕಟಿಸಿದ್ದರು.

ಆದಾಯ ತೆರಿಗೆ ದಿನಾಂಕ ವಿಸ್ತರಣೆ: ನವೆಂಬರ್ 30ರವರೆಗೆ ತೆರಿಗೆ ಕಟ್ಟಲು ಅವಕಾಶ

ಇಂದು ನಡೆಸಲಿರುವ ಸುದ್ದಿಗೋಷ್ಟಿಯಲ್ಲಿ ಪ್ರಮುಖವಾಗಿ ದೇಶದ ಆಧಾರಸ್ತಂಭವಾಗಿರುವ ಕೃಷಿ ಮತ್ತು ಅಸಂಘಟಿತ ಕಾರ್ಮಿಕರು, ವಲಸೆ ಕಾರ್ಮಿಕರು, ಬ್ಯಾಂಕಿಂಗ್​ ಕ್ಷೇತ್ರ ಸೇರಿದಂತೆ ವಾಹನೋದ್ಯಮದ ಬಗ್ಗೆ ಮಾತನಾಡುವ ಸಾಧ್ಯತೆ ಇದೆ.

ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಅತಿಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಅಡಮಾನ ರಹಿತ ಸಾಲ ನೀಡುವ ಬಗ್ಗೆ ಅವರು ಮಾತನಾಡಿದ್ದು, ಅದರ ಮರುಪಾವತಿಗೆ 4 ವರ್ಷಗಳವರೆಗೆ ಕಾಲಾವಕಾಶ ಪ್ರಕಟಿಸಿದ್ದರು. ಇದರ ಜತೆಗೆ ಆದಾಯ ತೆರಿಗೆ ಕಟ್ಟಲು ನೀಡಲಾಗಿದ್ದ ದಿನಾಂಕ ವಿಸ್ತರಣೆ, ಪಿಎಫ್​ ಹಣದಲ್ಲಿ ಕಡಿತ ಸೇರಿ ಅನೇಕ ವಿಷಯಗಳನ್ನು ವಿವರಿಸಿದ್ದರು.

Last Updated : May 14, 2020, 11:00 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.