ETV Bharat / bharat

17ನೇ ಕರ್ಮಪಾ ಭೇಟಿ ವಿಚಾರ: ಪ್ರಧಾನಿಗೆ ಪತ್ರ ಬರೆದ ಸಿಕ್ಕಿಂ ಸಿಎಂ - ಕರ್ಮಪ ಭಾರತ ಭೇಟಿ

ಸಿಕ್ಕಿಂನ ಭಕ್ತರು 17 ನೇ ಕರ್ಮಪಾ ಓಗಿಯೆನ್ ಟ್ರಿನ್ಲೆ ಡೋರ್ಜಿ ಅವರ ದೈಹಿಕ ದರ್ಶನ ಪಡೆಯಲು ಬಯಸುತ್ತಾರೆ ಎಂಬುದು ನಿಮ್ಮ ಒಳ್ಳೆಯ ಆತ್ಮಕ್ಕೆ ತಿಳಿದಿದೆ ಎಂದು ಭಾವಿಸಿದ್ದೇನೆ. ಸಿಕ್ಕಿಂನವರೆಲ್ಲರೂ ಆದಷ್ಟು ಬೇಗ ಅವರ ಭೇಟಿಯನ್ನು ಎದುರು ನೋಡುತ್ತಿದ್ದಾರೆ ”ಎಂದು ಸಿಕ್ಕಿಂ ಸಿಎಂ ತಮಾಂಗ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

Sikkim CM letters to PM
ಪ್ರಧಾನ ಮಂತ್ರಿಗೆ ಪತ್ರ ಬರೆದ ಸಿಕ್ಕಿಂ ಸಿಎಂ
author img

By

Published : Aug 13, 2020, 10:27 AM IST

Updated : Aug 13, 2020, 11:15 AM IST

ಸಿಕ್ಕಿಂ: 17 ನೇ ಕರ್ಮಪಾ ರಾಜ್ಯಕ್ಕೆ ಭೇಟಿ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಸಿಕ್ಕಿಂ ಸಿಎಂ ಪತ್ರ ಬರೆದಿದ್ದಾರೆ. ಲಡಾಖ್‌ ಪ್ರದೇಶದ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಚೀನಾದೊಂದಿಗೆ ನಿರ್ಮಾಣವಾಗಿರುವ ಪ್ರಕ್ಷುಬ್ಧ ವಾತಾವರಣದ ಮಧ್ಯೆ ಬೌದ್ಧ 17 ನೇ ಕರ್ಮಪಾ ಓಗೆನ್ ಟ್ರಿನ್ಲೆ ಡೋರ್ಜೆ ಭಾರತಕ್ಕೆ ಮರಳುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಪತ್ರದಲ್ಲಿ ಪ್ರಧಾನಿ ಮೋದಿಗೆ ಸಿಕ್ಕಿಂ ಮುಖ್ಯಮಂತ್ರಿ ಮನವಿ ಮಾಡಿಕೊಂಡಿದ್ದಾರೆ. ಟಿಬೆಟಿಯನ್ ಬೌದ್ಧ ಧರ್ಮದ 900 ವರ್ಷಗಳ ಹಳೆಯ ಕರ್ಮ ಕಾಗು ಶಾಲೆಯ ಮುಖ್ಯಸ್ಥರಾದ 35 ವರ್ಷದ ಕರ್ಮಪಾ 2017 ರಿಂದ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಅಮೆರಿಕದಲ್ಲಿದ್ದಾರೆ. ಆದರೆ, ಭಾರತೀಯ ಅಧಿಕಾರಿಗಳು ಈ ಹಿಂದೆ ಅವರ ಉದ್ದೇಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

20 ಭಾರತೀಯ ಜವಾನರ ಪ್ರಾಣಹಾನಿಗೆ ಕಾರಣವಾದ ಗಾಲ್ವಾನ್ ಹಿಂಸಾಚಾರದ ಹಿನ್ನೆಲೆಯಲ್ಲಿ ಇಂಡೋ - ಚೀನಾ ಸಂಬಂಧಗಳು ತೀವ್ರವಾಗಿ ಹದಗೆಟ್ಟ ನಂತರ, ಭಾರತವು ತನ್ನ ರಕ್ಷಣಾ ಸನ್ನದ್ಧತೆಯನ್ನು ಹೆಚ್ಚಿಸಿದೆ. ಚೀನಾದೊಂದಿಗೆ ವ್ಯಾಪಾರ ಬೇರ್ಪಡಿಸುವತ್ತ ಸದ್ದು ಮಾಡಿದೆ. ಹಾಂಕಾಂಗ್​‌ ಕುರಿತ ಕಾರ್ಯತಂತ್ರದ ಬದಲಾವಣೆ ಬಗ್ಗೆ ಮಾತನಾಡಲಾಗಿದೆ ಮತ್ತು ಟಿಬೆಟ್ ಮತ್ತು ತೈವಾನ್‌ನೊಂದಿಗಿನ ಅದರ ಹತೋಟಿಯನ್ನು ಪುನಃ ಸ್ಥಾಪಿಸಲು ನೋಡುತ್ತಿದೆ. ಜುಲೈ 18 ರಂದು ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ಪ್ರಧಾನಿ ಮೋದಿಗೆ ಬರೆದ ಪತ್ರವು ಅದರ ಸಮಯಕ್ಕೆ ಅನುಗುಣವಾಗಿ ಮಹತ್ವವನ್ನು ಪಡೆದುಕೊಂಡಿದೆ. ಸಿಕ್ಕಿಂನ ಭಕ್ತರು 17 ನೇ ಕರ್ಮಪಾ ಓಗಿಯೆನ್ ಟ್ರಿನ್ಲೆ ಡೋರ್ಜಿಯವರ ದೈಹಿಕ ದರ್ಶನ ಪಡೆಯಲು ಬಯಸುತ್ತಾರೆ ಎಂಬುದು ನಿಮ್ಮ ಒಳ್ಳೆಯ ಆತ್ಮಕ್ಕೆ ತಿಳಿದಿದೆ. ಸಿಕ್ಕಿಂನವರೆಲ್ಲರೂ ಆದಷ್ಟು ಬೇಗ ಅವರ ಭೇಟಿಯನ್ನು ಎದುರು ನೋಡುತ್ತಿದ್ದಾರೆ ”ಎಂದು ತಮಾಂಗ್ ಪತ್ರದಲ್ಲಿ ವಿವರಿಸಿದ್ದಾರೆ.

Sikkim CM letters to PM
ಸಿಕ್ಕಿ ಸಿಎಂ ಪ್ರಧಾನಿಗೆ ಬರೆದ ಪತ್ರ

17 ನೇ ಕರ್ಮಪ ಅವರು ಟಿಬೆಟ್‌ನಿಂದ ನಾಟಕೀಯವಾಗಿ ಎಸ್ಕೇಪ್ ಆದ ನಂತರ 2000 ರಲ್ಲಿ ಅಂದಿನ ಪ್ರಧಾನಿ ವಾಜಪೇಯಿ ಅವರು ಭಾರತದಲ್ಲಿ ಆಶ್ರಯ ನೀಡಿದ್ದರು. ಭಾರತೀಯ ಗುಪ್ತಚರ ಸಂಸ್ಥೆಗಳಿಂದ ‘ಚೀನೀ ಗೂಢಾಚಾರ’ ಎಂಬ ಆರೋಪದ ಹಿನ್ನೆಲೆಯಲ್ಲಿ ಆತನ ಮೇಲೆ ಕೆಲವು ಸಮಯದ ನಿರ್ಬಂಧ ಹೇರಿದ ನಂತರ, ಕರ್ಮಪಾ ಲಾಮಾ ಅವರಿಗೆ ಸಿಕ್ಕಿಂ ಭೇಟಿ ಸೇರಿದಂತೆ ದೇಶಾದ್ಯಂತ ಮುಕ್ತವಾಗಿ ಸಂಚರಿಸಲು ಅವಕಾಶ ನೀಡಲಾಯಿತು. "ಅದೃಷ್ಟವಶಾತ್, ನಿರಂತರ ಸಾರ್ವಜನಿಕ ಬೇಡಿಕೆಯನ್ನು ಅನುಸರಿಸಿ ರುಮ್ಟೆಕ್ ಮಠವನ್ನು ಹೊರತುಪಡಿಸಿ 2018 ರಲ್ಲಿ ಅವರ ಪವಿತ್ರ ಧಾರ್ಮಿಕ ಚಳವಳಿಯ ಮೇಲಿನ ಈ ನಿರ್ಬಂಧಗಳನ್ನು ತೆಗೆದುಹಾಕಲಾಯಿತು. ಈ ನಿರ್ಬಂಧಿತ ಕ್ರಮಗಳನ್ನು ಪ್ರಸ್ತುತ ಸರ್ಕಾರವು ನಿಮ್ಮ ಸೌಮ್ಯ ನಾಯಕತ್ವದಲ್ಲಿ 2018 ರಲ್ಲಿ ತೆಗೆದು ಹಾಕಿದ್ದಕ್ಕಾಗಿ ನಾನು ಮತ್ತು ನನ್ನ ಸಹವರ್ತಿ ಸಿಕ್ಕಿಮರು ಅತ್ಯಂತ ಕೃತಜ್ಞರಾಗಿರುತ್ತೇನೆ. ಭಕ್ತರು ಅವರ ಪಾಲಿಸಬೇಕಾದ ಅಧ್ಯಾತ್ಮಿಕ ಆಕಾಂಕ್ಷೆಗಳಿಗೆ ಅನುಗುಣವಾಗಿ ಸಿಕ್ಕಿಂಗೆ ಅವರ ಪವಿತ್ರ ಭೇಟಿಗಾಗಿ ಈಗ ನನ್ನ ಸರ್ಕಾರವನ್ನು ಸಂಪರ್ಕಿಸುತ್ತಿದ್ದೇನೆ "ಎಂದು ಸಿಎಂ ತಮಾಂಗ್ ಪತ್ರದಲ್ಲಿ ಅರಿಕೆ ಮಾಡಿಕೊಂಡಿದ್ದಾರೆ.

ದಲೈ ಲಾಮಾ ಮತ್ತು ಚೀನಾ ಗುರುತಿಸಿರುವ ಒಗೆನ್ ಟ್ರಿನ್ಲೆ ಡೋರ್ಜೆ ಇಬ್ಬರನ್ನೂ 17 ನೇ ಕರ್ಮಪಾ ಎಂದು ಗುರುತಿಸಲಾಗುತ್ತದೆ. ಭಾರತವು ತನ್ನ ಪ್ರತಿಸ್ಪರ್ಧಿ ಎಂದೇ ದೀರ್ಘಕಾಲ ಥಾಯೆ ಟ್ರಿನ್ಲೆ ಡೋರ್ಜೆಯನ್ನು ಗುರುತಿಸಿದೆ. ಆದರೆ, ದಲೈ ಲಾಮಾ ನಂತರದ ಸನ್ನಿವೇಶದಲ್ಲಿ, ಟಿಬೆಟಿಯನ್ ವಲಸೆಗಾರರ ಮೇಲೆ ಪ್ರಭಾವ ಬೀರುವುದು ಕರ್ಮಪಾ ಲಾಮಾ ಅವರ ಉದ್ದೇಶವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಕರ್ಮಪಾ, ದಲೈ ಲಾಮಾ ಮತ್ತು ದಿ ಕೇಂದ್ರ ಟಿಬೆಟಿಯನ್ ಆಡಳಿತದ ಪ್ರತಿನಿಧಿಗಳು ಮತ್ತು ಚೀನಾದ ಭಿನ್ನಮತೀಯರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವ ಮೂಲಕ ಬೆಂಬಲ ತೋರ್ಪಡಿಸಿದ್ದಾರೆ.

ದೇಶ ಭ್ರಷ್ಟರಾಗಿರುವ ಟಿಬೆಟಿಯನ್ ಸರ್ಕಾರವು ಧರ್ಮಶಾಲಾದ ಪ್ರಧಾನ ಕೇಂದ್ರ 17 ನೇ ಕರ್ಮಪಾ ಮೇಲಿನ ನಂಬಿಕೆಯನ್ನು ಬಹಿರಂಗವಾಗಿ ಒಪ್ಪಿಕೊಂಡಿದೆ. ಆದರೆ, 2018 ರಿಂದ ಕಾರ್ಪಮಾ ಲಾಮಾ ಮತ್ತು ನವದೆಹಲಿ ನಡುವಿನ ಸಂಬಂಧ ಕೊಂಚ ಏರುಪೇರಾಗಿಯೇ ಇದೆ. ಅದೇ ವರ್ಷ ನವೆಂಬರ್‌ನಲ್ಲಿ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಟಿಬೆಟಿಯನ್ ಬೌದ್ಧ ಧರ್ಮದ 13 ನೇ ಧಾರ್ಮಿಕ ಸಮ್ಮೇಳನಕ್ಕಾಗಿ ಅವರು ಬರುವಿಕೆ ನಿರೀಕ್ಷಿಸಲಾಗಿತ್ತು. ಆದರೆ, ನೈಂಗ್‌ಮಾಪಾ ಸಂಪ್ರದಾಯದ ಏಳನೇ ಮುಖ್ಯಸ್ಥ ಕ್ಯಾಥೋಕ್ ಗೆಟ್ಸೆ ರಿನ್‌ಪೊಚೆ ಅವರ ಮರಣದಿಂದಾಗಿ ಸಮ್ಮೇಳನವನ್ನು ಮುಂದೂಡಲಾಯಿತು. ಅಂದಿನಿಂದ ಇಂದಿನವರೆಗೂ ಅವರ ವಾಪಾಸಾತಿ ವಿಷಯದ ಕುರಿತಾದ ಭಾರತೀಯ ಅಧಿಕಾರಿಗಳ ಮುಂದಿದೆ. ಬಳಿಕ ಭಾರತಕ್ಕೆ ಮರಳಲು ಅಗತ್ಯವಾದ ದಾಖಲಾತಿಗಾಗಿ ಕರ್ಮಪ ಲಾಮಾ ಅರ್ಜಿ ಸಲ್ಲಿಸಲಿಲ್ಲ ಮತ್ತು ಈಗ ಡೊಮಿನಿಕನ್ ಪೌರತ್ವವನ್ನು ಹೊಂದಿರುವ ಕರ್ಮಪಾ ಅವರು ಸ್ಪರ್ಧಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಟಿಬೆಟಿಯನ್ ವ್ಯವಹಾರಗಳ ಕುರಿತು ಜಿಒಐಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿದ ಮಾಜಿ ವಿಶೇಷ ಕಾರ್ಯದರ್ಶಿ ರಾ ಅಮಿತಾಭ್ ಮಾಥುರ್ ಈ ಹಿಂದೆ ವೆಬಿನಾರ್ ಅನ್ನು ಉದ್ದೇಶಿಸಿ, , “ಚೀನಾ ತಮ್ಮ ದಲೈ ಲಾಮಾವನ್ನು ಸ್ಥಾಪಿಸಲು ಕಾಯುತ್ತಿದೆ. ಭಾರತವು ದಲೈ ಲಾಮಾ ಅವರ ಆಯ್ಕೆಯಾಗಿದೆ ಎಂದು ನಿಸ್ಸಂದಿಗ್ಧವಾಗಿ ಹೇಳಬೇಕು. ಅದು ದೇಶಭ್ರಷ್ಟ ಟಿಬೆಟಿಯನ್ನರಿಗೆ ಧೈರ್ಯ ತುಂಬುತ್ತದೆ. ಅವರ ಇಚ್ಛೆಯಯ ಬಗ್ಗೆ ಭಾರತ ಕೂಡಲೇ ಅವರೊಂದಿಗೆ ಸಮಾಲೋಚಿಸಬೇಕು ”. ಇಂಡೋ-ಚೀನಾ ಸಂಬಂಧಗಳ ಹಿನ್ನೆಲೆಯಲ್ಲಿ ಟಿಬೆಟ್ ಬಗ್ಗೆ ಮಾತನಾಡುತ್ತಾ ಕರ್ಮಪ ಲಾಮಾ ಅವರು ಭಾರತದಲ್ಲಿ ಮರಳಲು ಮತ್ತು ಮುಕ್ತವಾಗಿ ವಾಸಿಸಲು ಅನುಕೂಲಕರ ವಾತಾವರಣದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ಏಕೆಂದರೆ ಅವರು ಈಗಾಗಲೇ ದಲೈ ಲಾಮಾರಿಂದ ಗುರುತಿಸಲ್ಪಟ್ಟಿದ್ದಾರೆ ಮತ್ತು ಪಂಥೀಯ ರೇಖೆಗಳನ್ನು ಕತ್ತರಿಸುವ ಮೂಲಕ ಟಿಬೆಟಿಯನ್ನರ ಭಾವನೆಗಳನ್ನ ಸೆಳೆದಿದ್ದಾರೆ.

ಏತನ್ಮಧ್ಯೆ, ತಮಂಗ್ ಅವರ ಸಂಪುಟದಲ್ಲಿ ಸಚಿವರಾದ ಸೋನಂ ಲಾಮಾ ಅವರು ಸಿಕ್ಕಿಂಗೆ ಭೇಟಿ ನೀಡಲು ಮತ್ತು ಅವರ ಭಕ್ತರನ್ನು ಆಶೀರ್ವದಿಸಲು 17 ನೇ ಕರ್ಮಪ ಅವರಿಗೆ ಆಹ್ವಾನ ಪತ್ರವನ್ನು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಿಕ್ಕಿಂ: 17 ನೇ ಕರ್ಮಪಾ ರಾಜ್ಯಕ್ಕೆ ಭೇಟಿ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಸಿಕ್ಕಿಂ ಸಿಎಂ ಪತ್ರ ಬರೆದಿದ್ದಾರೆ. ಲಡಾಖ್‌ ಪ್ರದೇಶದ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಚೀನಾದೊಂದಿಗೆ ನಿರ್ಮಾಣವಾಗಿರುವ ಪ್ರಕ್ಷುಬ್ಧ ವಾತಾವರಣದ ಮಧ್ಯೆ ಬೌದ್ಧ 17 ನೇ ಕರ್ಮಪಾ ಓಗೆನ್ ಟ್ರಿನ್ಲೆ ಡೋರ್ಜೆ ಭಾರತಕ್ಕೆ ಮರಳುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಪತ್ರದಲ್ಲಿ ಪ್ರಧಾನಿ ಮೋದಿಗೆ ಸಿಕ್ಕಿಂ ಮುಖ್ಯಮಂತ್ರಿ ಮನವಿ ಮಾಡಿಕೊಂಡಿದ್ದಾರೆ. ಟಿಬೆಟಿಯನ್ ಬೌದ್ಧ ಧರ್ಮದ 900 ವರ್ಷಗಳ ಹಳೆಯ ಕರ್ಮ ಕಾಗು ಶಾಲೆಯ ಮುಖ್ಯಸ್ಥರಾದ 35 ವರ್ಷದ ಕರ್ಮಪಾ 2017 ರಿಂದ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಅಮೆರಿಕದಲ್ಲಿದ್ದಾರೆ. ಆದರೆ, ಭಾರತೀಯ ಅಧಿಕಾರಿಗಳು ಈ ಹಿಂದೆ ಅವರ ಉದ್ದೇಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

20 ಭಾರತೀಯ ಜವಾನರ ಪ್ರಾಣಹಾನಿಗೆ ಕಾರಣವಾದ ಗಾಲ್ವಾನ್ ಹಿಂಸಾಚಾರದ ಹಿನ್ನೆಲೆಯಲ್ಲಿ ಇಂಡೋ - ಚೀನಾ ಸಂಬಂಧಗಳು ತೀವ್ರವಾಗಿ ಹದಗೆಟ್ಟ ನಂತರ, ಭಾರತವು ತನ್ನ ರಕ್ಷಣಾ ಸನ್ನದ್ಧತೆಯನ್ನು ಹೆಚ್ಚಿಸಿದೆ. ಚೀನಾದೊಂದಿಗೆ ವ್ಯಾಪಾರ ಬೇರ್ಪಡಿಸುವತ್ತ ಸದ್ದು ಮಾಡಿದೆ. ಹಾಂಕಾಂಗ್​‌ ಕುರಿತ ಕಾರ್ಯತಂತ್ರದ ಬದಲಾವಣೆ ಬಗ್ಗೆ ಮಾತನಾಡಲಾಗಿದೆ ಮತ್ತು ಟಿಬೆಟ್ ಮತ್ತು ತೈವಾನ್‌ನೊಂದಿಗಿನ ಅದರ ಹತೋಟಿಯನ್ನು ಪುನಃ ಸ್ಥಾಪಿಸಲು ನೋಡುತ್ತಿದೆ. ಜುಲೈ 18 ರಂದು ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ಪ್ರಧಾನಿ ಮೋದಿಗೆ ಬರೆದ ಪತ್ರವು ಅದರ ಸಮಯಕ್ಕೆ ಅನುಗುಣವಾಗಿ ಮಹತ್ವವನ್ನು ಪಡೆದುಕೊಂಡಿದೆ. ಸಿಕ್ಕಿಂನ ಭಕ್ತರು 17 ನೇ ಕರ್ಮಪಾ ಓಗಿಯೆನ್ ಟ್ರಿನ್ಲೆ ಡೋರ್ಜಿಯವರ ದೈಹಿಕ ದರ್ಶನ ಪಡೆಯಲು ಬಯಸುತ್ತಾರೆ ಎಂಬುದು ನಿಮ್ಮ ಒಳ್ಳೆಯ ಆತ್ಮಕ್ಕೆ ತಿಳಿದಿದೆ. ಸಿಕ್ಕಿಂನವರೆಲ್ಲರೂ ಆದಷ್ಟು ಬೇಗ ಅವರ ಭೇಟಿಯನ್ನು ಎದುರು ನೋಡುತ್ತಿದ್ದಾರೆ ”ಎಂದು ತಮಾಂಗ್ ಪತ್ರದಲ್ಲಿ ವಿವರಿಸಿದ್ದಾರೆ.

Sikkim CM letters to PM
ಸಿಕ್ಕಿ ಸಿಎಂ ಪ್ರಧಾನಿಗೆ ಬರೆದ ಪತ್ರ

17 ನೇ ಕರ್ಮಪ ಅವರು ಟಿಬೆಟ್‌ನಿಂದ ನಾಟಕೀಯವಾಗಿ ಎಸ್ಕೇಪ್ ಆದ ನಂತರ 2000 ರಲ್ಲಿ ಅಂದಿನ ಪ್ರಧಾನಿ ವಾಜಪೇಯಿ ಅವರು ಭಾರತದಲ್ಲಿ ಆಶ್ರಯ ನೀಡಿದ್ದರು. ಭಾರತೀಯ ಗುಪ್ತಚರ ಸಂಸ್ಥೆಗಳಿಂದ ‘ಚೀನೀ ಗೂಢಾಚಾರ’ ಎಂಬ ಆರೋಪದ ಹಿನ್ನೆಲೆಯಲ್ಲಿ ಆತನ ಮೇಲೆ ಕೆಲವು ಸಮಯದ ನಿರ್ಬಂಧ ಹೇರಿದ ನಂತರ, ಕರ್ಮಪಾ ಲಾಮಾ ಅವರಿಗೆ ಸಿಕ್ಕಿಂ ಭೇಟಿ ಸೇರಿದಂತೆ ದೇಶಾದ್ಯಂತ ಮುಕ್ತವಾಗಿ ಸಂಚರಿಸಲು ಅವಕಾಶ ನೀಡಲಾಯಿತು. "ಅದೃಷ್ಟವಶಾತ್, ನಿರಂತರ ಸಾರ್ವಜನಿಕ ಬೇಡಿಕೆಯನ್ನು ಅನುಸರಿಸಿ ರುಮ್ಟೆಕ್ ಮಠವನ್ನು ಹೊರತುಪಡಿಸಿ 2018 ರಲ್ಲಿ ಅವರ ಪವಿತ್ರ ಧಾರ್ಮಿಕ ಚಳವಳಿಯ ಮೇಲಿನ ಈ ನಿರ್ಬಂಧಗಳನ್ನು ತೆಗೆದುಹಾಕಲಾಯಿತು. ಈ ನಿರ್ಬಂಧಿತ ಕ್ರಮಗಳನ್ನು ಪ್ರಸ್ತುತ ಸರ್ಕಾರವು ನಿಮ್ಮ ಸೌಮ್ಯ ನಾಯಕತ್ವದಲ್ಲಿ 2018 ರಲ್ಲಿ ತೆಗೆದು ಹಾಕಿದ್ದಕ್ಕಾಗಿ ನಾನು ಮತ್ತು ನನ್ನ ಸಹವರ್ತಿ ಸಿಕ್ಕಿಮರು ಅತ್ಯಂತ ಕೃತಜ್ಞರಾಗಿರುತ್ತೇನೆ. ಭಕ್ತರು ಅವರ ಪಾಲಿಸಬೇಕಾದ ಅಧ್ಯಾತ್ಮಿಕ ಆಕಾಂಕ್ಷೆಗಳಿಗೆ ಅನುಗುಣವಾಗಿ ಸಿಕ್ಕಿಂಗೆ ಅವರ ಪವಿತ್ರ ಭೇಟಿಗಾಗಿ ಈಗ ನನ್ನ ಸರ್ಕಾರವನ್ನು ಸಂಪರ್ಕಿಸುತ್ತಿದ್ದೇನೆ "ಎಂದು ಸಿಎಂ ತಮಾಂಗ್ ಪತ್ರದಲ್ಲಿ ಅರಿಕೆ ಮಾಡಿಕೊಂಡಿದ್ದಾರೆ.

ದಲೈ ಲಾಮಾ ಮತ್ತು ಚೀನಾ ಗುರುತಿಸಿರುವ ಒಗೆನ್ ಟ್ರಿನ್ಲೆ ಡೋರ್ಜೆ ಇಬ್ಬರನ್ನೂ 17 ನೇ ಕರ್ಮಪಾ ಎಂದು ಗುರುತಿಸಲಾಗುತ್ತದೆ. ಭಾರತವು ತನ್ನ ಪ್ರತಿಸ್ಪರ್ಧಿ ಎಂದೇ ದೀರ್ಘಕಾಲ ಥಾಯೆ ಟ್ರಿನ್ಲೆ ಡೋರ್ಜೆಯನ್ನು ಗುರುತಿಸಿದೆ. ಆದರೆ, ದಲೈ ಲಾಮಾ ನಂತರದ ಸನ್ನಿವೇಶದಲ್ಲಿ, ಟಿಬೆಟಿಯನ್ ವಲಸೆಗಾರರ ಮೇಲೆ ಪ್ರಭಾವ ಬೀರುವುದು ಕರ್ಮಪಾ ಲಾಮಾ ಅವರ ಉದ್ದೇಶವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಕರ್ಮಪಾ, ದಲೈ ಲಾಮಾ ಮತ್ತು ದಿ ಕೇಂದ್ರ ಟಿಬೆಟಿಯನ್ ಆಡಳಿತದ ಪ್ರತಿನಿಧಿಗಳು ಮತ್ತು ಚೀನಾದ ಭಿನ್ನಮತೀಯರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವ ಮೂಲಕ ಬೆಂಬಲ ತೋರ್ಪಡಿಸಿದ್ದಾರೆ.

ದೇಶ ಭ್ರಷ್ಟರಾಗಿರುವ ಟಿಬೆಟಿಯನ್ ಸರ್ಕಾರವು ಧರ್ಮಶಾಲಾದ ಪ್ರಧಾನ ಕೇಂದ್ರ 17 ನೇ ಕರ್ಮಪಾ ಮೇಲಿನ ನಂಬಿಕೆಯನ್ನು ಬಹಿರಂಗವಾಗಿ ಒಪ್ಪಿಕೊಂಡಿದೆ. ಆದರೆ, 2018 ರಿಂದ ಕಾರ್ಪಮಾ ಲಾಮಾ ಮತ್ತು ನವದೆಹಲಿ ನಡುವಿನ ಸಂಬಂಧ ಕೊಂಚ ಏರುಪೇರಾಗಿಯೇ ಇದೆ. ಅದೇ ವರ್ಷ ನವೆಂಬರ್‌ನಲ್ಲಿ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಟಿಬೆಟಿಯನ್ ಬೌದ್ಧ ಧರ್ಮದ 13 ನೇ ಧಾರ್ಮಿಕ ಸಮ್ಮೇಳನಕ್ಕಾಗಿ ಅವರು ಬರುವಿಕೆ ನಿರೀಕ್ಷಿಸಲಾಗಿತ್ತು. ಆದರೆ, ನೈಂಗ್‌ಮಾಪಾ ಸಂಪ್ರದಾಯದ ಏಳನೇ ಮುಖ್ಯಸ್ಥ ಕ್ಯಾಥೋಕ್ ಗೆಟ್ಸೆ ರಿನ್‌ಪೊಚೆ ಅವರ ಮರಣದಿಂದಾಗಿ ಸಮ್ಮೇಳನವನ್ನು ಮುಂದೂಡಲಾಯಿತು. ಅಂದಿನಿಂದ ಇಂದಿನವರೆಗೂ ಅವರ ವಾಪಾಸಾತಿ ವಿಷಯದ ಕುರಿತಾದ ಭಾರತೀಯ ಅಧಿಕಾರಿಗಳ ಮುಂದಿದೆ. ಬಳಿಕ ಭಾರತಕ್ಕೆ ಮರಳಲು ಅಗತ್ಯವಾದ ದಾಖಲಾತಿಗಾಗಿ ಕರ್ಮಪ ಲಾಮಾ ಅರ್ಜಿ ಸಲ್ಲಿಸಲಿಲ್ಲ ಮತ್ತು ಈಗ ಡೊಮಿನಿಕನ್ ಪೌರತ್ವವನ್ನು ಹೊಂದಿರುವ ಕರ್ಮಪಾ ಅವರು ಸ್ಪರ್ಧಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಟಿಬೆಟಿಯನ್ ವ್ಯವಹಾರಗಳ ಕುರಿತು ಜಿಒಐಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿದ ಮಾಜಿ ವಿಶೇಷ ಕಾರ್ಯದರ್ಶಿ ರಾ ಅಮಿತಾಭ್ ಮಾಥುರ್ ಈ ಹಿಂದೆ ವೆಬಿನಾರ್ ಅನ್ನು ಉದ್ದೇಶಿಸಿ, , “ಚೀನಾ ತಮ್ಮ ದಲೈ ಲಾಮಾವನ್ನು ಸ್ಥಾಪಿಸಲು ಕಾಯುತ್ತಿದೆ. ಭಾರತವು ದಲೈ ಲಾಮಾ ಅವರ ಆಯ್ಕೆಯಾಗಿದೆ ಎಂದು ನಿಸ್ಸಂದಿಗ್ಧವಾಗಿ ಹೇಳಬೇಕು. ಅದು ದೇಶಭ್ರಷ್ಟ ಟಿಬೆಟಿಯನ್ನರಿಗೆ ಧೈರ್ಯ ತುಂಬುತ್ತದೆ. ಅವರ ಇಚ್ಛೆಯಯ ಬಗ್ಗೆ ಭಾರತ ಕೂಡಲೇ ಅವರೊಂದಿಗೆ ಸಮಾಲೋಚಿಸಬೇಕು ”. ಇಂಡೋ-ಚೀನಾ ಸಂಬಂಧಗಳ ಹಿನ್ನೆಲೆಯಲ್ಲಿ ಟಿಬೆಟ್ ಬಗ್ಗೆ ಮಾತನಾಡುತ್ತಾ ಕರ್ಮಪ ಲಾಮಾ ಅವರು ಭಾರತದಲ್ಲಿ ಮರಳಲು ಮತ್ತು ಮುಕ್ತವಾಗಿ ವಾಸಿಸಲು ಅನುಕೂಲಕರ ವಾತಾವರಣದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ಏಕೆಂದರೆ ಅವರು ಈಗಾಗಲೇ ದಲೈ ಲಾಮಾರಿಂದ ಗುರುತಿಸಲ್ಪಟ್ಟಿದ್ದಾರೆ ಮತ್ತು ಪಂಥೀಯ ರೇಖೆಗಳನ್ನು ಕತ್ತರಿಸುವ ಮೂಲಕ ಟಿಬೆಟಿಯನ್ನರ ಭಾವನೆಗಳನ್ನ ಸೆಳೆದಿದ್ದಾರೆ.

ಏತನ್ಮಧ್ಯೆ, ತಮಂಗ್ ಅವರ ಸಂಪುಟದಲ್ಲಿ ಸಚಿವರಾದ ಸೋನಂ ಲಾಮಾ ಅವರು ಸಿಕ್ಕಿಂಗೆ ಭೇಟಿ ನೀಡಲು ಮತ್ತು ಅವರ ಭಕ್ತರನ್ನು ಆಶೀರ್ವದಿಸಲು 17 ನೇ ಕರ್ಮಪ ಅವರಿಗೆ ಆಹ್ವಾನ ಪತ್ರವನ್ನು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

Last Updated : Aug 13, 2020, 11:15 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.