ETV Bharat / bharat

ಸೋದರ ಮಾವನಿಗೆ ಟಾಂಗ್​​​.... ಮಧ್ಯಪ್ರದೇಶ ಸಿಎಂ ಸಂಬಂಧಿ ಈಗ ರಾಜ್ಯ ಕಾಂಗ್ರೆಸ್​​ ಉಪಾಧ್ಯಕ್ಷ

author img

By

Published : Jul 16, 2020, 7:52 AM IST

ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಒಂದು ಕಡೆಯಾದ್ರೆ ಈಗ ಮಧ್ಯಪ್ರದೇಶದಲ್ಲಿ ಉಪಚುನಾವಣೆ ಕಾವು ಜೋರಾಗಿದೆ. ಸಿಎಂ ಚೌಹಾಣ್​​ಗೆ ಅವರ ಸಂಬಂಧಿಯೇ ಎದುರಾಳಿಯಾಗಿದ್ದಾರೆ.

Sanjay Singh Masani, Shivraj Singh Chauhan, Madhya Pradesh politics, Kamal Nath, Sanjay Singh Masani news,  Kamal Nath news, Madhya Pradesh politics news, ಶಿವರಾಜ್ ಸಿಂಗ್ ಚೌಹಾಣ್, ಶಿವರಾಜ್ ಸಿಂಗ್ ಚೌಹಾಣ್ ಸುದ್ದಿ, ಸಂಜಯ್ ಮಸಾನಿ, ಸಂಜಯ್ ಮಸಾನಿ ಸುದ್ದಿ, ಕಮಲ್​ ನಾಥ್​, ಕಮಲ್​ ನಾಥ್​ ಸುದ್ದಿ, ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು, ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು ಸುದ್ದಿ,
ಮಧ್ಯೆಪ್ರದೇಶದಲ್ಲಿ ಕುತೂಹಲಕಾರ ರಾಜಕೀಯ ಬೆಳವಣಿಗೆಗಳು

ಭೋಪಾಲ್: ಮಧ್ಯಪ್ರದೇಶದಲ್ಲಿ ಕುತೂಹಲಕಾರಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ.

ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಸಂಬಂಧಿ ಸಂಜಯ್ ಮಸಾನಿ ಅವರನ್ನ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷರನ್ನಾಗಿ ರಾಜ್ಯ ಕಾಂಗ್ರೆಸ್ ಸಮಿತಿ ಬುಧವಾರ ನೇಮಕ ಮಾಡಿದೆ. ಮಸಾನಿ ತಮ್ಮ ಸೋದರ ಮಾವನ ವಿರುದ್ಧವೇ ದಂಗೆ ಎದ್ದಿದ್ದರು. 2018ರಲ್ಲಿ ವಾರಸೋನಿಯಿಂದ ಕಾಂಗ್ರೆಸ್ ಟಿಕೆಟ್‌ನಿಂದ ವಿಧಾನಸಭೆ ಚುನಾವಣೆ ಎದುರಿಸಿ ಸ್ವತಂತ್ರ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದರು.

ಇನ್ನು ಹರಸಾಹಸ ಮಾಡಿ ಅಧಿಕಾರ ಹಿಡಿದಿದ್ದ ಕಮಲನಾಥ್, ಮಸಾನಿ ವಿರುದ್ಧ ಗೆದ್ದಿದ್ದ ಸ್ವತಂತ್ರ ಶಾಸಕರ ಪ್ರದೀಪ್​ ಜೈಸ್ವಾಲ್​ ಅವರನ್ನ ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಮಂತ್ರಿ ಮಾಡಿದ್ದರು. ಆದರೆ, ಜೈಸ್ವಾಲ್​​ ಕಮಲನಾಥ್​ ಸರ್ಕಾರದ ವಿರುದ್ಧ ಬಂಡೆದ್ದಿದ್ದರು. ಬಳಿಕ ಜೈಸ್ವಾಲ್​ ಶಿವರಾಜ್​ ಸಿಂಗ್​ ಚೌಹಾಣ್​ ಅವರ ಆಡಳಿತದಲ್ಲಿ ರಾಜ್ಯ ಖನಿಜ ನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ನಡುವೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪರಾಜಯವಾಗಿದ್ದ ಶಿವರಾಜ್​ ಸಿಂಗ್​​ ಚೌಹಾಣ್​ ಅವರ ಸೋದರ ಮಾವ ಸಂಜತ್​ ಮಸಾನಿ ಅವರನ್ನ ಮಧ್ಯಪ್ರದೇಶ ಕಾಂಗ್ರೆಸ್​ ಅಧ್ಯಕ್ಷ ಕಮಲನಾಥ್​, ರಾಜ್ಯ ಕಾಂಗ್ರೆಸ್​ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಈಗ ಉಪ ಚುನಾವಣೆಯ ಪ್ರದೇಶ ಸಂಯೋಜಕರ ಜವಾಬ್ದಾರಿ ನೀಡಿ, ಸಿಎಂ ವಿರುದ್ಧ ಅಖಾಡಕ್ಕೆ ಇಳಿಸಿದೆ.

ಭೋಪಾಲ್: ಮಧ್ಯಪ್ರದೇಶದಲ್ಲಿ ಕುತೂಹಲಕಾರಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ.

ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಸಂಬಂಧಿ ಸಂಜಯ್ ಮಸಾನಿ ಅವರನ್ನ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷರನ್ನಾಗಿ ರಾಜ್ಯ ಕಾಂಗ್ರೆಸ್ ಸಮಿತಿ ಬುಧವಾರ ನೇಮಕ ಮಾಡಿದೆ. ಮಸಾನಿ ತಮ್ಮ ಸೋದರ ಮಾವನ ವಿರುದ್ಧವೇ ದಂಗೆ ಎದ್ದಿದ್ದರು. 2018ರಲ್ಲಿ ವಾರಸೋನಿಯಿಂದ ಕಾಂಗ್ರೆಸ್ ಟಿಕೆಟ್‌ನಿಂದ ವಿಧಾನಸಭೆ ಚುನಾವಣೆ ಎದುರಿಸಿ ಸ್ವತಂತ್ರ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದರು.

ಇನ್ನು ಹರಸಾಹಸ ಮಾಡಿ ಅಧಿಕಾರ ಹಿಡಿದಿದ್ದ ಕಮಲನಾಥ್, ಮಸಾನಿ ವಿರುದ್ಧ ಗೆದ್ದಿದ್ದ ಸ್ವತಂತ್ರ ಶಾಸಕರ ಪ್ರದೀಪ್​ ಜೈಸ್ವಾಲ್​ ಅವರನ್ನ ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಮಂತ್ರಿ ಮಾಡಿದ್ದರು. ಆದರೆ, ಜೈಸ್ವಾಲ್​​ ಕಮಲನಾಥ್​ ಸರ್ಕಾರದ ವಿರುದ್ಧ ಬಂಡೆದ್ದಿದ್ದರು. ಬಳಿಕ ಜೈಸ್ವಾಲ್​ ಶಿವರಾಜ್​ ಸಿಂಗ್​ ಚೌಹಾಣ್​ ಅವರ ಆಡಳಿತದಲ್ಲಿ ರಾಜ್ಯ ಖನಿಜ ನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ನಡುವೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪರಾಜಯವಾಗಿದ್ದ ಶಿವರಾಜ್​ ಸಿಂಗ್​​ ಚೌಹಾಣ್​ ಅವರ ಸೋದರ ಮಾವ ಸಂಜತ್​ ಮಸಾನಿ ಅವರನ್ನ ಮಧ್ಯಪ್ರದೇಶ ಕಾಂಗ್ರೆಸ್​ ಅಧ್ಯಕ್ಷ ಕಮಲನಾಥ್​, ರಾಜ್ಯ ಕಾಂಗ್ರೆಸ್​ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಈಗ ಉಪ ಚುನಾವಣೆಯ ಪ್ರದೇಶ ಸಂಯೋಜಕರ ಜವಾಬ್ದಾರಿ ನೀಡಿ, ಸಿಎಂ ವಿರುದ್ಧ ಅಖಾಡಕ್ಕೆ ಇಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.