ETV Bharat / bharat

ರಾಜಕೀಯ ಮ್ಯೂಸಿಕ್‌ ಚೇರ್: ಶಿವಸೇನೆಗೆ ಮುಳುವಾಯ್ತು 50:50 ಸೂತ್ರ, ಸಿಎಂ ಗಾದಿಗೆ ಎನ್​ಸಿಪಿ ಪಟ್ಟು!

author img

By

Published : Nov 12, 2019, 1:05 PM IST

ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ಕಸರತ್ತು ಮತ್ತಷ್ಟು ಬಿರುಸುಗೊಂಡಿದ್ದು, ರಾಜ್ಯಪಾಲರು ಇದೀಗ ಮೂರನೇ ಅತಿದೊಡ್ಡ ಪಕ್ಷವಾಗಿರುವ ಎನ್​​ಸಿಪಿಗೆ ಸರ್ಕಾರ ರಚನೆ ಮಾಡಲು ಆಹ್ವಾನ ನೀಡಿದ್ದು ಇಂದು ಸಂಜೆ 8.30ಗೆ ಡೆಡ್‌ಲೈನ್‌ ಕೊಟ್ಟಿದ್ದಾರೆ.

ಶಿವಸೇನೆಗೆ ಮುಳುವಾಯ್ತು 50:50 ಸೂತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ಮಾಡುವ ಕಸರತ್ತು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಬಿಜೆಪಿಯಿಂದ ಹೊರಬಂದು ಎನ್​​ಸಿಪಿ+ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲು ಮುಂದಾಗಿರುವ ಶಿವಸೇನೆಗೆ ಇದೀಗ 50:50 ಸೂತ್ರವೇ ಮುಳುವಾಗಿದೆ.

ಬಿಜೆಪಿ ಜತೆ 50:50 ಸೂತ್ರಕ್ಕೆ ಪಟ್ಟು ಹಿಡಿದು ಮುಖ್ಯಮಂತ್ರಿ ಪದವಿ ಬಿಟ್ಟುಕೊಡುವಂತೆ ಶಿವಸೇನೆ ಕೇಳಿತ್ತು. ಆದರೆ ಇದಕ್ಕೆ ಬಿಜೆಪಿ ಒಪ್ಪದ ಕಾರಣ ಉದ್ಧವ್​ ಠಾಕ್ರೆ ಎನ್​ಸಿಪಿ+ಕಾಂಗ್ರೆಸ್​ ಜೊತೆಗೂಡಿ ಸರ್ಕಾರ ರಚನೆ ಮಾಡುವ ಕಸರತ್ತಿಗೆ ಮುಂದಾದ್ರು.

ಈ ಕುರಿತು ಉದ್ಧವ್ ಠಾಕ್ರೆ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್​ ಹಾಗೂ ಕಾಂಗ್ರೆಸ್‌ನ ಸೋನಿಯಾ ಗಾಂಧಿ ಜತೆ ಮಾತನಾಡಿದ್ದು, ಇಂದು ಸಹ ಕಸರತ್ತು ಮುಂದುವರಿದಿದೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಶಿವಸೇನೆಗೆ ಬೆಂಬಲ ನೀಡಲು ಮುಂದಾಗಿರುವ ಎನ್​​ಸಿಪಿ ಕೂಡ ಸಿಎಂ ಗಾದಿ ಮೇಲೆ ಕಣ್ಣಿಟ್ಟಿದ್ದು 50:50 ಸೂತ್ರದಂತೆ ಸರ್ಕಾರ ರಚಿಸಲು ಪಟ್ಟು ಹಿಡಿದಿದೆ.

ಮಹಾರಾಷ್ಟ್ರ ಚುನಾವಣೆಗೂ ಮುನ್ನ ಎನ್​ಸಿಪಿ+ಕಾಂಗ್ರೆಸ್​ ಮೈತ್ರಿ ಮಾಡಿಕೊಂಡಿದ್ದು ಕ್ರಮವಾಗಿ 56 ಹಾಗೂ 54 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಒಂದು ವೇಳೆ ಶಿವಸೇನೆಗೆ ಸಪೋರ್ಟ್ ಮಾಡಿದರೆ 2.5 ವರ್ಷ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಶರದ್​ ಪವಾರ್ ಪಕ್ಷ ಎನ್​​ಸಿಪಿ ಪಟ್ಟು ಹಿಡಿದಿದೆ.

ಈಗಾಗಲೇ ಎನ್​ಸಿಪಿ-ಕಾಂಗ್ರೆಸ್​ ನಡುವೆ ಸಹ ಅನೇಕ ಸುತ್ತಿನ ಮಾತುಕತೆ ನಡೆದಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚನೆಯಂತೆ ಕಾಂಗ್ರೆಸ್​ ಹಿರಿಯ ಮುಖಂಡರಾಗಿರುವ ಮಲ್ಲಿಕಾರ್ಜುನ ಖರ್ಗೆ, ಅಹ್ಮದ್ ಪಟೇಲ್​ ಮುಂಬೈಗೆ ಆಗಮಿಸುತ್ತಿದ್ದು ಪವಾರ್​ ಜತೆ ಅಂತಿಮ ಹಂತದ ಮಾತುಕತೆ ನಡೆಸಲಿದ್ದಾರೆ.

ಮುಂಬೈ: ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ಮಾಡುವ ಕಸರತ್ತು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಬಿಜೆಪಿಯಿಂದ ಹೊರಬಂದು ಎನ್​​ಸಿಪಿ+ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲು ಮುಂದಾಗಿರುವ ಶಿವಸೇನೆಗೆ ಇದೀಗ 50:50 ಸೂತ್ರವೇ ಮುಳುವಾಗಿದೆ.

ಬಿಜೆಪಿ ಜತೆ 50:50 ಸೂತ್ರಕ್ಕೆ ಪಟ್ಟು ಹಿಡಿದು ಮುಖ್ಯಮಂತ್ರಿ ಪದವಿ ಬಿಟ್ಟುಕೊಡುವಂತೆ ಶಿವಸೇನೆ ಕೇಳಿತ್ತು. ಆದರೆ ಇದಕ್ಕೆ ಬಿಜೆಪಿ ಒಪ್ಪದ ಕಾರಣ ಉದ್ಧವ್​ ಠಾಕ್ರೆ ಎನ್​ಸಿಪಿ+ಕಾಂಗ್ರೆಸ್​ ಜೊತೆಗೂಡಿ ಸರ್ಕಾರ ರಚನೆ ಮಾಡುವ ಕಸರತ್ತಿಗೆ ಮುಂದಾದ್ರು.

ಈ ಕುರಿತು ಉದ್ಧವ್ ಠಾಕ್ರೆ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್​ ಹಾಗೂ ಕಾಂಗ್ರೆಸ್‌ನ ಸೋನಿಯಾ ಗಾಂಧಿ ಜತೆ ಮಾತನಾಡಿದ್ದು, ಇಂದು ಸಹ ಕಸರತ್ತು ಮುಂದುವರಿದಿದೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಶಿವಸೇನೆಗೆ ಬೆಂಬಲ ನೀಡಲು ಮುಂದಾಗಿರುವ ಎನ್​​ಸಿಪಿ ಕೂಡ ಸಿಎಂ ಗಾದಿ ಮೇಲೆ ಕಣ್ಣಿಟ್ಟಿದ್ದು 50:50 ಸೂತ್ರದಂತೆ ಸರ್ಕಾರ ರಚಿಸಲು ಪಟ್ಟು ಹಿಡಿದಿದೆ.

ಮಹಾರಾಷ್ಟ್ರ ಚುನಾವಣೆಗೂ ಮುನ್ನ ಎನ್​ಸಿಪಿ+ಕಾಂಗ್ರೆಸ್​ ಮೈತ್ರಿ ಮಾಡಿಕೊಂಡಿದ್ದು ಕ್ರಮವಾಗಿ 56 ಹಾಗೂ 54 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಒಂದು ವೇಳೆ ಶಿವಸೇನೆಗೆ ಸಪೋರ್ಟ್ ಮಾಡಿದರೆ 2.5 ವರ್ಷ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಶರದ್​ ಪವಾರ್ ಪಕ್ಷ ಎನ್​​ಸಿಪಿ ಪಟ್ಟು ಹಿಡಿದಿದೆ.

ಈಗಾಗಲೇ ಎನ್​ಸಿಪಿ-ಕಾಂಗ್ರೆಸ್​ ನಡುವೆ ಸಹ ಅನೇಕ ಸುತ್ತಿನ ಮಾತುಕತೆ ನಡೆದಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚನೆಯಂತೆ ಕಾಂಗ್ರೆಸ್​ ಹಿರಿಯ ಮುಖಂಡರಾಗಿರುವ ಮಲ್ಲಿಕಾರ್ಜುನ ಖರ್ಗೆ, ಅಹ್ಮದ್ ಪಟೇಲ್​ ಮುಂಬೈಗೆ ಆಗಮಿಸುತ್ತಿದ್ದು ಪವಾರ್​ ಜತೆ ಅಂತಿಮ ಹಂತದ ಮಾತುಕತೆ ನಡೆಸಲಿದ್ದಾರೆ.

Intro:Body:



ಶಿವಸೇನೆಗೆ ಮುಳುವಾಯ್ತು 50:50 ಸೂತ್ರ... ಇದೀಗ ಸಿಎಂ ಗಾದಿಗೆ ಎನ್​ಸಿಪಿ ಪಟ್ಟು! 



ಮುಂಬೈ: ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ಮಾಡುವ ಕಸರತ್ತು ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಬಿಜೆಪಿಯಿಂದ ಹೊರಬಂದು ಎನ್​​ಸಿಪಿ+ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲು ಮುಂದಾಗಿರುವ ಶಿವಸೇನೆ ಇದೀಗ 50:50 ಸೂತ್ರವೇ ಮುಳುವಾಗಿದೆ. 



ಬಿಜೆಪಿ ಜತೆ 50:50 ಸೂತ್ರಕ್ಕೆ ಪಟ್ಟು ಹಿಡಿದು ಮುಖ್ಯಮಂತ್ರಿ ಪದವಿ ಬಿಟ್ಟುಕೊಡುವಂತೆ ಶಿವಸೇನೆ ಕೇಳಿತ್ತು. ಆದರೆ ಇದಕ್ಕೆ ಬಿಜೆಪಿ ಸಿದ್ಧವಾಗದ ಕಾರಣಕ್ಕಾಗಿ ಉದ್ಧವ್​ ಠಾಕ್ರೆ ಇದೀಗ ಎನ್​ಸಿಪಿ+ ಕಾಂಗ್ರೆಸ್​ ಮೈತ್ರಿ ಜತೆ ಸರ್ಕಾರ ರಚನೆ ಮಾಡಲು ಕಸರತ್ತು ನಡೆಸುತ್ತಿದೆ. 



ಈಗಾಗಲೇ ಉದ್ಧವ್ ಠಾಕ್ರೆ ಅನೇಕ ಸಲದ ಮಾತುಕತೆಯನ್ನ ಶರದ್ ಪವಾರ್​ ಹಾಗೂ ಸೋನಿಯಾ ಗಾಂಧಿ ಜತೆ ಮಾತನಾಡಿದ್ದು, ಇಂದು ಸಹ ಕಸರತ್ತು ಮುಂದುವರಿದಿದೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ ಶಿವಸೇನೆಗೆ ಬೆಂಬಲ ನೀಡಲು ಮುಂದಾಗಿರುವ ಎನ್​​ಸಿಪಿ ಕೂಡ ಸಿಎಂ ಗಾದಿ ಮೇಲೆ ಕಣ್ಣಿಟ್ಟಿದ್ದು, 50:50 ಸೂತ್ರದಂತೆ ಸರ್ಕಾರ ರಚನೆ ಮಾಡಬೇಕು ಎಂದು ಪಟ್ಟು ಹಿಡಿದಿದೆ. 



ಈಗಾಗಲೇ ಎನ್​ಸಿಪಿ-ಕಾಂಗ್ರೆಸ್​ ನಡುವೆ ಸಹ ಅನೇಕ ಸುತ್ತಿನ ಮಾತುಕತೆ ನಡೆದಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚನೆಯಂತೆ ಕಾಂಗ್ರೆಸ್​ ಹಿರಿಯ ಮುಖಂಡರಾಗಿರುವ ಮಲ್ಲಿಕಾರ್ಜುನ್​ ಖರ್ಗೆ, ಅಹ್ಮದ್ ಪಟೇಲ್​ ಮುಂಬೈಗೆ ಆಗಮಿಸುತ್ತಿದ್ದು, ಶರದ್​ ಪವಾರ್​ ಜತೆ ಅಂತಿಮ ಹಂತದ ಮಾತುಕತೆ ನಡೆಸಲಿದ್ದಾರೆ.  


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.