ETV Bharat / bharat

ಅಂತರ್ಜಾತಿ ವಿವಾಹವಾಗಿದ್ದ ನವ ದಂಪತಿಗೆ 'ಸುಪ್ರೀಂ'ರಕ್ಷಣೆ.. - SC grants protection to newly married inter-caste couple

ನಮಗೆ ಕುಟುಂಬ ಹಾಗೂ ಪೊಲೀಸರಿಂದ ಬೆದರಿಕೆಯಿದೆ. ನಮಗೆ ರಕ್ಷಣೆ ನೀಡಿ ಎಂದು ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಅಂತರ್ಜಾತಿ ವಿವಾಹವಾಗಿದ್ದ ಜೈಪುರ ಮೂಲದ ನವ ದಂಪತಿ ಪರ ಕೋರ್ಟ್​ ನಿಂತಿದೆ. ಅಷ್ಟೇ ಅಲ್ಲ, ದಂಪತಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಿದೆ.

SC grants protection to newly married inter-caste couple
ಅಂತರ್ಜಾತಿ ವಿವಾಹವಾಗಿದ್ದ ನವ ದಂಪತಿಗೆ ಸುಪ್ರೀಂ ಕೋರ್ಟ್​ ರಕ್ಷಣೆ
author img

By

Published : Mar 9, 2020, 9:54 PM IST

ನವದೆಹಲಿ: ಅಂತರ್ಜಾತಿ ವಿವಾಹವಾಗಿದ್ದ ಜೈಪುರ ಮೂಲದ ನವ ದಂಪತಿ ವಿರುದ್ಧ ಯಾವುದೇ ಕ್ರಮಕೈಗೊಳ್ಳಬೇಡಿ. ಅವರಿಗೆ ರಕ್ಷಣೆ ನೀಡಿ ಎಂದು ರಾಜಸ್ಥಾನ, ದೆಹಲಿ ಹಾಗೂ ಉತ್ತರ ಪ್ರದೇಶ ಪೊಲೀಸರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಫೆ.28ರಂದು ಮದುವೆಯಾದ ಈ ದಂಪತಿಗೆ ಯುವತಿಯ ಕುಟುಂಬದ ಕಡೆಯಿಂದ ಬೆದರಿಕೆಯಿದೆ. ತಮ್ಮ ಜೀವಕ್ಕೆ ಅಪಾಯವಿದೆ. ತಮಗೆ ರಕ್ಷಣೆ ನೀಡಿ ಎಂದು ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ರಾಜಸ್ಥಾನ ಹಾಗೂ ಉತ್ತರ ಪ್ರದೇಶ ಪೊಲೀಸರು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ದೆಹಲಿ ಪೊಲೀಸರಿಂದ ನಮಗೆ ರಕ್ಷಣೆ ಕೊಡಿಸಿ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಇಂದು ಈ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾ. ಅಶೋಕ್​ ಭೂಷಣ್​ ಹಾಗೂ ನ್ಯಾ.ಸೂರ್ಯಕಾಂತ್​​ ನೇತೃತ್ವದ ನ್ಯಾಯಪೀಠವು, ಇವರಿಬ್ಬರೂ ವಯಸ್ಕರಾಗಿದ್ದು, ಪರಸ್ಪರ ಒಪ್ಪಿ ಮದುವೆಯಾಗಿದ್ದಾರೆ. ಮಾರ್ಚ್​ 2ರಂದು ತಮ್ಮ ಮದುವೆಯನ್ನು ರಿಜಿಸ್ಟರ್​ ಮಾಡಿಕೊಂಡಿದ್ದಾರೆ.

ಯುವತಿಯ ಕುಟುಂಬದ ಕಡೆಯಿಂದ ಇವರಿಗೆ ಬೆದರಿಕೆಯಿದೆ. ಅರ್ಜಿದಾರರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ. ಅಗತ್ಯವಿದ್ದರೆ ಅವರಿಗೆ ರಕ್ಷಣೆ ನೀಡಿ ಎಂದು ದೆಹಲಿ ಪೊಲೀಸ್​ ಆಯುಕ್ತರು, ಉತ್ತರಪ್ರದೇಶ ಮತ್ತು ರಾಜಸ್ಥಾನದ ಪೊಲೀಸ್​ ಮಹಾನಿರ್ದೇಶಕರಿಗೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದೆ.

ನವದೆಹಲಿ: ಅಂತರ್ಜಾತಿ ವಿವಾಹವಾಗಿದ್ದ ಜೈಪುರ ಮೂಲದ ನವ ದಂಪತಿ ವಿರುದ್ಧ ಯಾವುದೇ ಕ್ರಮಕೈಗೊಳ್ಳಬೇಡಿ. ಅವರಿಗೆ ರಕ್ಷಣೆ ನೀಡಿ ಎಂದು ರಾಜಸ್ಥಾನ, ದೆಹಲಿ ಹಾಗೂ ಉತ್ತರ ಪ್ರದೇಶ ಪೊಲೀಸರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಫೆ.28ರಂದು ಮದುವೆಯಾದ ಈ ದಂಪತಿಗೆ ಯುವತಿಯ ಕುಟುಂಬದ ಕಡೆಯಿಂದ ಬೆದರಿಕೆಯಿದೆ. ತಮ್ಮ ಜೀವಕ್ಕೆ ಅಪಾಯವಿದೆ. ತಮಗೆ ರಕ್ಷಣೆ ನೀಡಿ ಎಂದು ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ರಾಜಸ್ಥಾನ ಹಾಗೂ ಉತ್ತರ ಪ್ರದೇಶ ಪೊಲೀಸರು ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ದೆಹಲಿ ಪೊಲೀಸರಿಂದ ನಮಗೆ ರಕ್ಷಣೆ ಕೊಡಿಸಿ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಇಂದು ಈ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾ. ಅಶೋಕ್​ ಭೂಷಣ್​ ಹಾಗೂ ನ್ಯಾ.ಸೂರ್ಯಕಾಂತ್​​ ನೇತೃತ್ವದ ನ್ಯಾಯಪೀಠವು, ಇವರಿಬ್ಬರೂ ವಯಸ್ಕರಾಗಿದ್ದು, ಪರಸ್ಪರ ಒಪ್ಪಿ ಮದುವೆಯಾಗಿದ್ದಾರೆ. ಮಾರ್ಚ್​ 2ರಂದು ತಮ್ಮ ಮದುವೆಯನ್ನು ರಿಜಿಸ್ಟರ್​ ಮಾಡಿಕೊಂಡಿದ್ದಾರೆ.

ಯುವತಿಯ ಕುಟುಂಬದ ಕಡೆಯಿಂದ ಇವರಿಗೆ ಬೆದರಿಕೆಯಿದೆ. ಅರ್ಜಿದಾರರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ. ಅಗತ್ಯವಿದ್ದರೆ ಅವರಿಗೆ ರಕ್ಷಣೆ ನೀಡಿ ಎಂದು ದೆಹಲಿ ಪೊಲೀಸ್​ ಆಯುಕ್ತರು, ಉತ್ತರಪ್ರದೇಶ ಮತ್ತು ರಾಜಸ್ಥಾನದ ಪೊಲೀಸ್​ ಮಹಾನಿರ್ದೇಶಕರಿಗೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.