ETV Bharat / bharat

ದೀದಿ ರಕ್ಷಣೆಯಲ್ಲಿರುವ ರಾಜೀವ್ ಕುಮಾರ್​ ವಿರುದ್ಧ ಲುಕ್​ಔಟ್​ ನೋಟಿಸ್​

author img

By

Published : May 26, 2019, 5:21 PM IST

Updated : May 26, 2019, 5:49 PM IST

ಕೋಲ್ಕತ್ತಾದ ಶಾರದಾ ಚಿಟ್​ ಫಂಡ್​ನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಲುಕ್​ಔಟ್​ ನೋಟಿಸ್​ ಜಾರಿ ಮಾಡಿರುವ ಸಿಬಿಐ ಅವರು ವಿದೇಶಕ್ಕೆ ತೆರಳದಂತೆ ನಿರ್ಬಂಧ ಹೇರಿದೆ.

ರಾಜೀವ್ ಕುಮಾರ್

ನವದೆಹಲಿ: ಶಾರದಾ ಚಿಟ್ ಫಂಡ್​ನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾದ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್​ ವಿರುದ್ಧ ಸಿಬಿಐ ಲುಕ್​ಔಟ್​ ನೋಟಿಸ್​ ಜಾರಿ ಮಾಡಿದೆ.

ಕೋಲ್ಕತಾದ ಶಾರದಾ ಚಿಟ್​ ಫಂಡ್​ನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಲುಕ್​ಔಟ್​ ನೋಟಿಸ್​ ಜಾರಿ ಮಾಡಿರುವ ಸಿಬಿಐ ಅವರು ವಿದೇಶಕ್ಕೆ ತೆರಳದಂತೆ ನಿರ್ಬಂಧ ಹೇರಿದೆ.

ಕಳೆದ ಶುಕ್ರವಾರ ಕುಮಾರ್​ ಅವರಿಗೆ ವಿಸ್ತರಿಸಿದ್ದ ಬಂಧನ ವಿನಾಯಿತಿ ಮುಕ್ತಾಯಗೊಂಡ ಹಿನ್ನೆಲೆ ಅವರಿಗೆ ಲುಕ್​ಔಟ್​ ನೋಟಿಸ್ ಜಾರಿ ಮಾಡಿದೆ.

ಮೇ 17ರಂದು ಸುಪ್ರೀಂಕೋರ್ಟ್​ ಸಿಬಿಐ ಹಾಗೂ ಪಶ್ಚಿಮ ಬಂಗಾಳ ಪೊಲೀಸರ ನಡುವೆ ಶಾರದಾ ಚಿಟ್​ ಫಂಡ್​ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಉಂಟಾದ ಸಂಘರ್ಷಕ್ಕೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು. ಈ ಹಗರಣ ಮೂಲಕ ಗ್ರಾಮೀಣ ಭಾಗದ ಜನರಿಂದ ಕೋಟ್ಯಂತರ ರೂ. ಲಪಟಾಯಿಸಿದ ಕುರಿತು ಗಂಭೀರವಾಗಿ ಪರಿಗಣಿಸಿತ್ತು.

2014ರಲ್ಲಿ ಸಿಬಿಐ ಶಾರದಾ ಚಿಟ್​ ಫಂಡ್​ ಹಗರಣಕ್ಕೆ ಸಂಬಂಧ ತನಿಖೆ ಆರಂಭಿಸಿತ್ತು. ಈ ವೇಳೆ 17 ಲಕ್ಷ ಠೇವಣಿದಾರರು ಶಾರದಾ ಚಿಟ್​ ಫಂಡ್​ನಲ್ಲಿ ಒಟ್ಟು ₹ 3,500 ಕೋಟಿಯಷ್ಟು ಠೇವಣಿ ಇರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಫಂಡ್​ನ ಸಂಸ್ಥಾಪಕ ಸುದೀಪತ್​ ಸೇನ್​ ಅವರು ಸಿಬಿಐಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದರು.

ನವದೆಹಲಿ: ಶಾರದಾ ಚಿಟ್ ಫಂಡ್​ನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾದ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್​ ವಿರುದ್ಧ ಸಿಬಿಐ ಲುಕ್​ಔಟ್​ ನೋಟಿಸ್​ ಜಾರಿ ಮಾಡಿದೆ.

ಕೋಲ್ಕತಾದ ಶಾರದಾ ಚಿಟ್​ ಫಂಡ್​ನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಲುಕ್​ಔಟ್​ ನೋಟಿಸ್​ ಜಾರಿ ಮಾಡಿರುವ ಸಿಬಿಐ ಅವರು ವಿದೇಶಕ್ಕೆ ತೆರಳದಂತೆ ನಿರ್ಬಂಧ ಹೇರಿದೆ.

ಕಳೆದ ಶುಕ್ರವಾರ ಕುಮಾರ್​ ಅವರಿಗೆ ವಿಸ್ತರಿಸಿದ್ದ ಬಂಧನ ವಿನಾಯಿತಿ ಮುಕ್ತಾಯಗೊಂಡ ಹಿನ್ನೆಲೆ ಅವರಿಗೆ ಲುಕ್​ಔಟ್​ ನೋಟಿಸ್ ಜಾರಿ ಮಾಡಿದೆ.

ಮೇ 17ರಂದು ಸುಪ್ರೀಂಕೋರ್ಟ್​ ಸಿಬಿಐ ಹಾಗೂ ಪಶ್ಚಿಮ ಬಂಗಾಳ ಪೊಲೀಸರ ನಡುವೆ ಶಾರದಾ ಚಿಟ್​ ಫಂಡ್​ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಉಂಟಾದ ಸಂಘರ್ಷಕ್ಕೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿತ್ತು. ಈ ಹಗರಣ ಮೂಲಕ ಗ್ರಾಮೀಣ ಭಾಗದ ಜನರಿಂದ ಕೋಟ್ಯಂತರ ರೂ. ಲಪಟಾಯಿಸಿದ ಕುರಿತು ಗಂಭೀರವಾಗಿ ಪರಿಗಣಿಸಿತ್ತು.

2014ರಲ್ಲಿ ಸಿಬಿಐ ಶಾರದಾ ಚಿಟ್​ ಫಂಡ್​ ಹಗರಣಕ್ಕೆ ಸಂಬಂಧ ತನಿಖೆ ಆರಂಭಿಸಿತ್ತು. ಈ ವೇಳೆ 17 ಲಕ್ಷ ಠೇವಣಿದಾರರು ಶಾರದಾ ಚಿಟ್​ ಫಂಡ್​ನಲ್ಲಿ ಒಟ್ಟು ₹ 3,500 ಕೋಟಿಯಷ್ಟು ಠೇವಣಿ ಇರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಫಂಡ್​ನ ಸಂಸ್ಥಾಪಕ ಸುದೀಪತ್​ ಸೇನ್​ ಅವರು ಸಿಬಿಐಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದರು.

Intro:Body:Conclusion:
Last Updated : May 26, 2019, 5:49 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.