ETV Bharat / bharat

ಶಾರದಾ ಚಿಟ್​ ಫಂಡ್​ ಹಗರಣ : ಸಿಬಿಐ ಸಮನ್ಸ್​ಗೂ ಜಗ್ಗದ ಸಿಐಡಿ ರಾಜೀವ್​ಕುಮಾರ್ - undefined

ಚಿಟ್​ ಫಂಡ್​ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಹಾಜರಾಗುವಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಕೋಲ್ಕತಾದ ಮಾಜಿ ಪೊಲೀಸ್ ಆಯುಕ್ತ/ ಪ್ರಸ್ತುತ ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್​ಮೆಂಟ್​ನ (ಸಿಐಡಿ) ಹೆಚ್ಚುವರಿ ಮಹಾನಿರ್ದೇಶಕ ರಾಜೀವ್​ ಕುಮಾರ್​ ಅವರಿಗೆ ಸಮನ್ಸ್​ ನೀಡಿತ್ತು. ಆದರೆ, ಅವರು ಈ ವಿಚಾರಣೆಗೆ ಗೈರು ಹಾಜರಾಗಿದ್ದರು.

ಸಾಂದರ್ಭಿಕ ಚಿತ್ರ
author img

By

Published : May 29, 2019, 11:04 AM IST

Updated : May 29, 2019, 3:07 PM IST

ಕೋಲ್ಕತಾ : ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಸಿಐಡಿ ಹೆಚ್ಚುವರಿ ಮಹಾನಿರ್ದೇಶಕ/ ಮಾಜಿ ಪೊಲೀಸ್ ಆಯುಕ್ತ ರಾಜೀವ್​ ಕುಮಾರ್ ಅವರಿಗೆ ಸಿಬಿಐ ಕೆಲವು ದಾಖಲೆಗಳನ್ನು ಕಳುಹಿಸಿದೆ.

ಚಿಟ್​ ಫಂಡ್​ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಹಾಜರಾಗುವಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಕೋಲ್ಕತಾದ ಮಾಜಿ ಪೊಲೀಸ್ ಆಯುಕ್ತ/ ಪ್ರಸ್ತುತ ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್​ಮೆಂಟ್​ನ (ಸಿಐಡಿ) ಹೆಚ್ಚುವರಿ ಮಹಾನಿರ್ದೇಶಕ ರಾಜೀವ್​ ಕುಮಾರ್​ ಅವರಿಗೆ ಸಮನ್ಸ್​ ನೀಡಿತ್ತು. ಆದರೆ, ಅವರು ಈ ವಿಚಾರಣೆಗೆ ಗೈರು ಹಾಜರಾಗಿದ್ದರು.

ರಾಜೀವ್ ಕುಮಾರ್ ಕಚೇರಿಯಲ್ಲಿ ಸಿಬಿಐ ಅಧಿಕಾರಿಗಳು ದಾಖಲೆಗಳನ್ನು ನೀಡಿದ್ದಾರೆ. ಈ ದಾಖಲೆಗಳು ಸಮನ್ಸ್ ಅಲ್ಲ. ಹೊಸದಾಗಿ ಯಾವುದೇ ಸಮನ್ಸ್​ ನೀಡಿಲ್ಲ. ತನಿಖೆಗೆ ಸಂಬಂಧಿಸಿದ ದಾಖಲೆಗಳಾಗಿವೆ ಎಂದು ಸಿಐಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶಾರದಾ ಚಿಟ್ ಫಂಡ್​ ಹಗರಣದ ತನಿಖೆಯನ್ನು ಸಿಬಿಐ ವಹಿಸಿಕೊಳ್ಳುವ ಮುನ್ನ ರಾಜೀವ್ ಕುಮಾರ್ ಅವರು ನೇತೃತ್ವ ವಹಿಸಿಕೊಂಡಿದ್ದರು. ಹೀಗಾಗಿ, ರಾಜೀವ್​ ಅವರನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಸಿಬಿಐ ಕೋರಿತ್ತು. ಈ ಕುರಿತು ಸುಪ್ರೀಂಕೋರ್ಟ್​ನಲ್ಲಿ ಕಳೆದ ತಿಂಗಳು ಸಿಬಿಐ ಮನವಿ ಸಲ್ಲಿಸಿತ್ತು. ಜೊತೆಗೆ ತನಿಖೆಗೆ ರಾಜೀವ್​ ಸಹಕರಿಸದೆ ತಪ್ಪಿಸಿಕೊಳ್ಳುತ್ತಿದ್ದಾರೆ. ವಿಚಾರಣೆಯಲ್ಲಿ ಕೇಳುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲ್ಲ ಎಂದು ಆಪಾದಿಸಿತ್ತು.

2014ರಲ್ಲಿ ಸಿಬಿಐ ಶಾರದಾ ಚಿಟ್​ ಫಂಡ್​ ಹಗರಣಕ್ಕೆ ಸಂಬಂಧ ತನಿಖೆ ಆರಂಭಿಸಿತ್ತು. ಈ ವೇಳೆ 17 ಲಕ್ಷ ಠೇವಣಿದಾರರು ಶಾರದಾ ಚಿಟ್​ ಫಂಡ್​ನಲ್ಲಿ ಒಟ್ಟು ₹ 3,500 ಕೋಟಿಯಷ್ಟು ಠೇವಣಿ ಇರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಫಂಡ್​ನ ಸಂಸ್ಥಾಪಕ ಸುದಿಪ್ತೊ​ ಸೇನ್​ ಅವರು ಸಿಬಿಐಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದರು.

ಕೋಲ್ಕತಾ : ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಸಿಐಡಿ ಹೆಚ್ಚುವರಿ ಮಹಾನಿರ್ದೇಶಕ/ ಮಾಜಿ ಪೊಲೀಸ್ ಆಯುಕ್ತ ರಾಜೀವ್​ ಕುಮಾರ್ ಅವರಿಗೆ ಸಿಬಿಐ ಕೆಲವು ದಾಖಲೆಗಳನ್ನು ಕಳುಹಿಸಿದೆ.

ಚಿಟ್​ ಫಂಡ್​ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಹಾಜರಾಗುವಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಕೋಲ್ಕತಾದ ಮಾಜಿ ಪೊಲೀಸ್ ಆಯುಕ್ತ/ ಪ್ರಸ್ತುತ ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್​ಮೆಂಟ್​ನ (ಸಿಐಡಿ) ಹೆಚ್ಚುವರಿ ಮಹಾನಿರ್ದೇಶಕ ರಾಜೀವ್​ ಕುಮಾರ್​ ಅವರಿಗೆ ಸಮನ್ಸ್​ ನೀಡಿತ್ತು. ಆದರೆ, ಅವರು ಈ ವಿಚಾರಣೆಗೆ ಗೈರು ಹಾಜರಾಗಿದ್ದರು.

ರಾಜೀವ್ ಕುಮಾರ್ ಕಚೇರಿಯಲ್ಲಿ ಸಿಬಿಐ ಅಧಿಕಾರಿಗಳು ದಾಖಲೆಗಳನ್ನು ನೀಡಿದ್ದಾರೆ. ಈ ದಾಖಲೆಗಳು ಸಮನ್ಸ್ ಅಲ್ಲ. ಹೊಸದಾಗಿ ಯಾವುದೇ ಸಮನ್ಸ್​ ನೀಡಿಲ್ಲ. ತನಿಖೆಗೆ ಸಂಬಂಧಿಸಿದ ದಾಖಲೆಗಳಾಗಿವೆ ಎಂದು ಸಿಐಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶಾರದಾ ಚಿಟ್ ಫಂಡ್​ ಹಗರಣದ ತನಿಖೆಯನ್ನು ಸಿಬಿಐ ವಹಿಸಿಕೊಳ್ಳುವ ಮುನ್ನ ರಾಜೀವ್ ಕುಮಾರ್ ಅವರು ನೇತೃತ್ವ ವಹಿಸಿಕೊಂಡಿದ್ದರು. ಹೀಗಾಗಿ, ರಾಜೀವ್​ ಅವರನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಸಿಬಿಐ ಕೋರಿತ್ತು. ಈ ಕುರಿತು ಸುಪ್ರೀಂಕೋರ್ಟ್​ನಲ್ಲಿ ಕಳೆದ ತಿಂಗಳು ಸಿಬಿಐ ಮನವಿ ಸಲ್ಲಿಸಿತ್ತು. ಜೊತೆಗೆ ತನಿಖೆಗೆ ರಾಜೀವ್​ ಸಹಕರಿಸದೆ ತಪ್ಪಿಸಿಕೊಳ್ಳುತ್ತಿದ್ದಾರೆ. ವಿಚಾರಣೆಯಲ್ಲಿ ಕೇಳುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲ್ಲ ಎಂದು ಆಪಾದಿಸಿತ್ತು.

2014ರಲ್ಲಿ ಸಿಬಿಐ ಶಾರದಾ ಚಿಟ್​ ಫಂಡ್​ ಹಗರಣಕ್ಕೆ ಸಂಬಂಧ ತನಿಖೆ ಆರಂಭಿಸಿತ್ತು. ಈ ವೇಳೆ 17 ಲಕ್ಷ ಠೇವಣಿದಾರರು ಶಾರದಾ ಚಿಟ್​ ಫಂಡ್​ನಲ್ಲಿ ಒಟ್ಟು ₹ 3,500 ಕೋಟಿಯಷ್ಟು ಠೇವಣಿ ಇರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಫಂಡ್​ನ ಸಂಸ್ಥಾಪಕ ಸುದಿಪ್ತೊ​ ಸೇನ್​ ಅವರು ಸಿಬಿಐಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದರು.

Intro:Body:Conclusion:
Last Updated : May 29, 2019, 3:07 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.