ETV Bharat / bharat

ಕಣ್ಣೆದುರು ಹೆಂಡ್ತಿ, ಮಕ್ಕಳ ಸಾವು ನೋಡಲಾಗದೇ ವ್ಯಕ್ತಿ ಆತ್ಮಹತ್ಯೆ - ಚಿತ್ತೂರು ಜಿಲ್ಲೆಯಲ್ಲಿ ನಾಲ್ವರು ಆತ್ಮಹತ್ಯೆ

ಕೌಟಂಬಿಕ ಕಲಹಕ್ಕೆ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

Four members suicide, Four members suicide in Chittoor, Chittoor family suicide, Chittoor family suicide news, ನಾಲ್ವರು ಆತ್ಮಹತ್ಯೆ, ಚಿತ್ತೂರು ಜಿಲ್ಲೆಯಲ್ಲಿ ನಾಲ್ವರು ಆತ್ಮಹತ್ಯೆ, ಚಿತ್ತೂರು ಆತ್ಮಹತ್ಯೆ ಸುದ್ದಿ,
ಹೆಂಡ್ತಿ, ಮಕ್ಕಳ ಸಾವು ನೋಡದೇ ವ್ಯಕ್ತಿ ಆತ್ಮಹತ್ಯೆ
author img

By

Published : Jul 21, 2020, 6:31 AM IST

ಚಿತ್ತೂರು: ಕೌಟುಂಬಿಕ ಕಲಹದಿಂದಾಗಿ ಒಂದೇ ಕುಟುಂಬದ ನಾಲ್ವರು ಪ್ರಾಣ ಕಳೆದುಕೊಂಡಿರುವ ಘಟನೆ ಎಸ್​.ಆರ್​ ಪುರಂ ತಾಲೂಕಿನ ಚಿನ್ನತಯ್ಯಾರು ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಸುಧಾಕರ್​ ಮತ್ತು ಆತನ ಪತ್ನಿ ಸಿಂಧು ಪ್ರಿಯಾಗೆ ಇಬ್ಬರು ಹೆಣ್ಮಕ್ಕಳು. ಪದೇ ಪದೆ ಗಂಡ - ಹೆಂಡ್ತಿ ಕಿತ್ತಾಡಿಕೊಳ್ಳುತ್ತಿದ್ದರು. ಇದರಿಂದ ಮನನೊಂದ ಪತ್ನಿ ಸಿಂಧು ಪ್ರಿಯಾ ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನು ಕಣ್ಣೆದರೇ ಹೆಂಡ್ತಿ ಮತ್ತು ಮಕ್ಕಳು ಸಾವು ನೋಡಲಾರದೇ ಗಂಡ ಸುಧಾಕರ್​ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಾವಿಯಿಂದ ಮೂರು ಮೃತದೇಹಗಳನ್ನು ಹೊರ ತೆಗೆದರು.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಚಿತ್ತೂರು: ಕೌಟುಂಬಿಕ ಕಲಹದಿಂದಾಗಿ ಒಂದೇ ಕುಟುಂಬದ ನಾಲ್ವರು ಪ್ರಾಣ ಕಳೆದುಕೊಂಡಿರುವ ಘಟನೆ ಎಸ್​.ಆರ್​ ಪುರಂ ತಾಲೂಕಿನ ಚಿನ್ನತಯ್ಯಾರು ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಸುಧಾಕರ್​ ಮತ್ತು ಆತನ ಪತ್ನಿ ಸಿಂಧು ಪ್ರಿಯಾಗೆ ಇಬ್ಬರು ಹೆಣ್ಮಕ್ಕಳು. ಪದೇ ಪದೆ ಗಂಡ - ಹೆಂಡ್ತಿ ಕಿತ್ತಾಡಿಕೊಳ್ಳುತ್ತಿದ್ದರು. ಇದರಿಂದ ಮನನೊಂದ ಪತ್ನಿ ಸಿಂಧು ಪ್ರಿಯಾ ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನು ಕಣ್ಣೆದರೇ ಹೆಂಡ್ತಿ ಮತ್ತು ಮಕ್ಕಳು ಸಾವು ನೋಡಲಾರದೇ ಗಂಡ ಸುಧಾಕರ್​ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಾವಿಯಿಂದ ಮೂರು ಮೃತದೇಹಗಳನ್ನು ಹೊರ ತೆಗೆದರು.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.