ನಳಂದ (ಬಿಹಾರ): ರಾಷ್ಟ್ರೀಯ ಜನತಾದಳದ ಅಭ್ಯರ್ಥಿ, ಅಟ್ರಿ ಮುನಿ ಅಲಿಯಾಸ್ ಶಕ್ತಿ ಸಿಂಗ್ ಯಾದವ್ ಅವರು ನಳಂದ ಜಿಲ್ಲೆಯ ಹಿಲ್ಸಾ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 13 ಮತಗಳಿಂದ ಸೋಲು ಕಂಡಿದ್ದು, ಅವರ ಬೆಂಬಲಿಗರು ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಮತ್ತು ಆಡಳಿತದಿಂದ ವಂಚನೆ ಆಗಿದೆ ಆರೋಪಿಸಿದ ಪ್ರತಿಭಟನೆ ಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಟ್ರಿ ಮುನಿ ಅವರು ಉತ್ತಮ ಬಹುಮತದೊಂದಿಗೆ ಚುನಾವಣೆಯಲ್ಲಿ ಜಯಗಳಿಸಿದ್ದರು ಆದರೆ, ಅವರನ್ನು ಸೋಲುವಂತೆ ಮಾಡಲಾಯಿತು ಎಂದು ಬೆಂಬಲಿಗರು ಆರೋಪಿಸಿದ್ದಾರೆ.
ಸೋಗ್ರಾ ಕಾಲೇಜಿನಲ್ಲಿ ಮತ ಎಣಿಕೆಯ ನಂತರ ಆರ್ಜೆಡಿ ಅಭ್ಯರ್ಥಿಯ ಸೋಲು ಘೋಷಿಸಲಾಯಿತು. ಈ ವೇಳೆ ಆರ್ಜೆಡಿ ಬೆಂಬಲಿಗರು ಬೀದಿಗಿಳಿದು ಸರ್ಕಾರ ಮತ್ತು ಆಡಳಿತದ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಕೇಂದ್ರ ಮೀಸಲು ಪೊಲೀಸ್ ಪಡೆ ಸೇರಿದಂತೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆ ಸ್ಥಳಕ್ಕೆ ತಲುಪಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದವು.