ETV Bharat / bharat

ಜೆಸ್ಸಿಕಾ ಲಾಲ್ ಕೊಲೆ ಅಪರಾಧಿಯ ಅವಧಿ ಪೂರ್ವ ಬಿಡುಗಡೆಗೆ ಶಿಫಾರಸು - ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್

ಜೆಸ್ಸಿಕಾ ಲಾಲ್ ಕೊಲೆ ಅಪರಾಧಿ ಮನು ಶರ್ಮಾ ಅವಧಿ ಪೂರ್ವ ಬಿಡುಗಡೆ ಆದೇಶವನ್ನು ದೆಹಲಿ ಶಿಕ್ಷಾವಧಿ ಪರಿಶೀಲನಾ ಮಂಡಳಿ ಅಂಗೀಕರಿಸಿದ್ದು, ಅಂತಿಮ ತೀರ್ಮಾನವನ್ನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ತೆಗೆದುಕೊಳ್ಳಲಿದ್ದಾರೆ.

court
court
author img

By

Published : May 13, 2020, 8:26 AM IST

ನವದೆಹಲಿ: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜೆಸ್ಸಿಕಾ ಲಾಲ್ ಕೊಲೆ ಅಪರಾಧಿ ಮನು ಶರ್ಮಾನನ್ನು ಅವಧಿ ಪೂರ್ವ ಬಿಡುಗಡೆಗೆ ದೆಹಲಿ ಶಿಕ್ಷಾವಧಿ ಪರಿಶೀಲನಾ ಮಂಡಳಿ (ಎಸ್‌ಆರ್‌ಬಿ) ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಈ ಶಿಫಾರಸಿನ ಬಗ್ಗೆ ಅಂತಿಮ ತೀರ್ಮಾನವನ್ನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ತೆಗೆದುಕೊಳ್ಳಲಿದ್ದಾರೆ. ದೆಹಲಿ ಗೃಹ ಸಚಿವ ಸತ್ಯೇಂದರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಎಸ್‌ಆರ್‌ಬಿ ಸಭೆಯಲ್ಲಿ ಈ ಶಿಫಾರಸು ಮಾಡಲಾಗಿದೆ.


"ಅಂತಿಮ ಅನುಮೋದನೆಗಾಗಿ ಮನವಿಯನ್ನು ಲೆಫ್ಟಿನೆಂಟ್ ಗವರ್ನರ್​ಗೆ ಕಳುಹಿಸಲಾಗುವುದು" ಎಂದು ಮೂಲಗಳು ತಿಳಿಸಿವೆ. "ಮನು ಶರ್ಮಾ ಅವಧಿ ಪೂರ್ವ ಬಿಡುಗಡೆಗೆ ಅಗತ್ಯವಿರುವ ಎಲ್ಲಾ ನಿಯಮಗಳನ್ನು ಪೂರೈಸುತ್ತಾರೆ" ಎಂದು ಅವರ ವಕೀಲ ಅಮಿತ್ ಸಾಹ್ನಿ ಹೇಳಿದ್ದಾರೆ.

ಏಪ್ರಿಲ್ 30, 1999 ರ ರಾತ್ರಿ ರೆಸ್ಟೋರೆಂಟ್ ಮಹಿಳಾ ಪರಿಚಾರಕಿಯಾಗಿದ್ದ ಜೆಸ್ಸಿಕಾ ಲಾಲ್​ ಅವರು ಮದ್ಯ ನೀಡಲು ನಿರಾಕರಿಸಿದ್ದರಿಂದ ಮನು ಶರ್ಮಾ ಆಕೆಯನ್ನು ಗುಂಡಿಕ್ಕಿ ಕೊಂದಿದ್ದ.

ಏನಿದು ಅವಧಿ ಪೂರ್ವ ಬಿಡುಗಡೆ?: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯು 14 ವರ್ಷಗಳ ಸಜೆ ಪೂರೈಸಿದ ನಂತರ ಅದು ತೃಪ್ತಿಕರವಾಗಿ ಕಂಡುಬಂದಲ್ಲಿ ಶಿಕ್ಷಾವಧಿ ಪರಿಶೀಲನಾ ಮಂಡಳಿಯು ಅಪರಾಧಿಯನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡಲು ಶಿಫಾರಸು ಮಾಡುತ್ತದೆ.

ನವದೆಹಲಿ: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜೆಸ್ಸಿಕಾ ಲಾಲ್ ಕೊಲೆ ಅಪರಾಧಿ ಮನು ಶರ್ಮಾನನ್ನು ಅವಧಿ ಪೂರ್ವ ಬಿಡುಗಡೆಗೆ ದೆಹಲಿ ಶಿಕ್ಷಾವಧಿ ಪರಿಶೀಲನಾ ಮಂಡಳಿ (ಎಸ್‌ಆರ್‌ಬಿ) ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಈ ಶಿಫಾರಸಿನ ಬಗ್ಗೆ ಅಂತಿಮ ತೀರ್ಮಾನವನ್ನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ತೆಗೆದುಕೊಳ್ಳಲಿದ್ದಾರೆ. ದೆಹಲಿ ಗೃಹ ಸಚಿವ ಸತ್ಯೇಂದರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಎಸ್‌ಆರ್‌ಬಿ ಸಭೆಯಲ್ಲಿ ಈ ಶಿಫಾರಸು ಮಾಡಲಾಗಿದೆ.


"ಅಂತಿಮ ಅನುಮೋದನೆಗಾಗಿ ಮನವಿಯನ್ನು ಲೆಫ್ಟಿನೆಂಟ್ ಗವರ್ನರ್​ಗೆ ಕಳುಹಿಸಲಾಗುವುದು" ಎಂದು ಮೂಲಗಳು ತಿಳಿಸಿವೆ. "ಮನು ಶರ್ಮಾ ಅವಧಿ ಪೂರ್ವ ಬಿಡುಗಡೆಗೆ ಅಗತ್ಯವಿರುವ ಎಲ್ಲಾ ನಿಯಮಗಳನ್ನು ಪೂರೈಸುತ್ತಾರೆ" ಎಂದು ಅವರ ವಕೀಲ ಅಮಿತ್ ಸಾಹ್ನಿ ಹೇಳಿದ್ದಾರೆ.

ಏಪ್ರಿಲ್ 30, 1999 ರ ರಾತ್ರಿ ರೆಸ್ಟೋರೆಂಟ್ ಮಹಿಳಾ ಪರಿಚಾರಕಿಯಾಗಿದ್ದ ಜೆಸ್ಸಿಕಾ ಲಾಲ್​ ಅವರು ಮದ್ಯ ನೀಡಲು ನಿರಾಕರಿಸಿದ್ದರಿಂದ ಮನು ಶರ್ಮಾ ಆಕೆಯನ್ನು ಗುಂಡಿಕ್ಕಿ ಕೊಂದಿದ್ದ.

ಏನಿದು ಅವಧಿ ಪೂರ್ವ ಬಿಡುಗಡೆ?: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಯು 14 ವರ್ಷಗಳ ಸಜೆ ಪೂರೈಸಿದ ನಂತರ ಅದು ತೃಪ್ತಿಕರವಾಗಿ ಕಂಡುಬಂದಲ್ಲಿ ಶಿಕ್ಷಾವಧಿ ಪರಿಶೀಲನಾ ಮಂಡಳಿಯು ಅಪರಾಧಿಯನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡಲು ಶಿಫಾರಸು ಮಾಡುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.