ETV Bharat / bharat

ರಕ್ಷಣಾ ಸಂಸದೀಯ ಸಮಿತಿ ಸಭೆಗೆ ಹಾಜರಾದ ರಾಹುಲ್​ ಗಾಂಧಿ

ಗಡಿ ಉದ್ವಿಗ್ನತೆ ಕುರಿತು ಚರ್ಚಿಸಲು ಭಾರತ-ಚೀನಾ ಮಾಸ್ಕೋದಲ್ಲಿ ಸಭೆ ನಡೆಸಿದ್ದು, ಒಂದು ದಿನದ ನಂತರ ಅಂದರೆ ನಿನ್ನೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ರಕ್ಷಣಾ ಸಂಸದೀಯ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದರು.

author img

By

Published : Sep 12, 2020, 7:50 AM IST

Rahul Gandhi attends first Parliamentary panel meet on Defense
ರಕ್ಷಣಾ ಸಂಸದೀಯ ಸಮಿತಿ ಸಭೆಗೆ ಹಾಜರಾದ ರಾಹುಲ್​ ಗಾಂಧಿ

ನವದೆಹಲಿ: ಉಲ್ಬಣಗೊಳ್ಳುತ್ತಿರುವ ಗಡಿ ಉದ್ವಿಗ್ನತೆ ಕುರಿತು ಚರ್ಚಿಸಲು ಭಾರತ-ಚೀನಾ ಮಾಸ್ಕೋದಲ್ಲಿ ಸಭೆ ನಡೆಸಿದ್ದು, ಒಂದು ದಿನದ ನಂತರ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ರಕ್ಷಣಾ ಸಂಸದೀಯ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದರು.

ಗಡಿ ಉದ್ವಿಗ್ನತೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತುತ್ತಿರುವ ರಾಹುಲ್​ ಗಾಂಧಿ ಈವರೆಗೆ ಯಾವುದೇ ಸಮಿತಿ ಸಭೆಗಳಿಗೆ ಹಾಜರಾಗಿಲ್ಲ ಎಂದು ಆಡಳಿತ ಪಕ್ಷ ಬಿಜೆಪಿಯ ಟೀಕೆಗೆ ಗುರಿಯಾಗಿದೆ.

ರಕ್ಷಣಾ ಪಡೆಗಳಿಗೆ ಅದರಲ್ಲೂ ವಿಶೇಷವಾಗಿ ಗಡಿ ಭಾಗದ ಪಡೆಗಳಿಗೆ ಪೌಷ್ಟಿಕ ಆಹಾರ ಒದಗಿಸುವ ವ್ಯವಸ್ಥೆ, ಮೇಲ್ವಿಚಾರಣೆ ಕುರಿತು ಚರ್ಚಿಸುವುದೇ ಈ ಸಭೆಯ ಮುಖ್ಯ ಉದ್ದೇಶವಾಗಿತ್ತು. ಸಭೆಯಲ್ಲಿ ಗಡಿ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಜವಾನರಿಗೆ ನೀಡಲಾಗುವ ಆಹಾರದಲ್ಲಿನ ವ್ಯತ್ಯಾಸವನ್ನು ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದ್ದರು. ಜವಾನ್ ತೇಜ್ ಬಹದ್ದೂರ್, ಅಲ್ಲಿ ನೀಡಲಾಗುವ ಆಹಾರದ ಗುಣಮಟ್ಟದ ಕುರಿತು ತಮ್ಮ ವಿಡಿಯೋ ಹಂಚಿಕೊಂಡ ನಂತರ ಈ ವಿಷಯ ಬೆಳಕಿಗೆ ಬಂದಿದೆ. ನಂತರ ಆತನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಯಿತು ಎಂದು ತಿಳಿಸಿದರು.

ಮೂಲಗಳ ಪ್ರಕಾರ, ಅಧಿಕಾರಿಗಳಿಗೆ ಹೋಲಿಸಿದರೆ ಜವಾನರಿಗೆ ನೀಡುವ ಆಹಾರ ಪದ್ಧತಿಯಲ್ಲಿ ವ್ಯತ್ಯಾಸವಿದೆ. ಅವರು ಗ್ರಾಮೀಣ ಪ್ರದೇಶಗಳಿಂದ ಬಂದ ಕಾರಣ ಈ ರೀತಿಯ ವ್ಯವಸ್ಥೆಯಿದೆ ಎಂದು ಸಭೆಯಲ್ಲಿ ಸ್ಪಷ್ಟಪಡಿಸಿದರು. ಹಾಗಾಗಿ ಮತ್ತೊಮ್ಮೆ ರಾಹುಲ್​ ಗಾಂಧಿ ಟೀಕೆಗೆ ಒಳಪಟ್ಟರು.

  • The only “talk” to have with China is about restoration of ‘Status Quo Ante’ as of March 2020.

    PM & GOI refuse to take responsibility for pushing China out of our land.

    All other “talk” is worthless.

    — Rahul Gandhi (@RahulGandhi) September 11, 2020 " class="align-text-top noRightClick twitterSection" data=" ">

ಸಭೆಯಲ್ಲಿ ಹಲವರು ಲಡಾಖ್ ಪರಿಸ್ಥಿತಿಯ ಕುರಿತು ಧ್ವನಿ ಎತ್ತಿದರು. ಸಭೆಯ ನಂತರ ರಾಹುಲ್ ಗಾಂಧಿ ಭಾರತ-ಚೀನಾ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಉಲ್ಬಣಗೊಳ್ಳುತ್ತಿರುವ ಗಡಿ ಉದ್ವಿಗ್ನತೆ ಕುರಿತು ಚರ್ಚಿಸಲು ಭಾರತ-ಚೀನಾ ಮಾಸ್ಕೋದಲ್ಲಿ ಸಭೆ ನಡೆಸಿದ್ದು, ಒಂದು ದಿನದ ನಂತರ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ರಕ್ಷಣಾ ಸಂಸದೀಯ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದರು.

ಗಡಿ ಉದ್ವಿಗ್ನತೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತುತ್ತಿರುವ ರಾಹುಲ್​ ಗಾಂಧಿ ಈವರೆಗೆ ಯಾವುದೇ ಸಮಿತಿ ಸಭೆಗಳಿಗೆ ಹಾಜರಾಗಿಲ್ಲ ಎಂದು ಆಡಳಿತ ಪಕ್ಷ ಬಿಜೆಪಿಯ ಟೀಕೆಗೆ ಗುರಿಯಾಗಿದೆ.

ರಕ್ಷಣಾ ಪಡೆಗಳಿಗೆ ಅದರಲ್ಲೂ ವಿಶೇಷವಾಗಿ ಗಡಿ ಭಾಗದ ಪಡೆಗಳಿಗೆ ಪೌಷ್ಟಿಕ ಆಹಾರ ಒದಗಿಸುವ ವ್ಯವಸ್ಥೆ, ಮೇಲ್ವಿಚಾರಣೆ ಕುರಿತು ಚರ್ಚಿಸುವುದೇ ಈ ಸಭೆಯ ಮುಖ್ಯ ಉದ್ದೇಶವಾಗಿತ್ತು. ಸಭೆಯಲ್ಲಿ ಗಡಿ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಜವಾನರಿಗೆ ನೀಡಲಾಗುವ ಆಹಾರದಲ್ಲಿನ ವ್ಯತ್ಯಾಸವನ್ನು ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದ್ದರು. ಜವಾನ್ ತೇಜ್ ಬಹದ್ದೂರ್, ಅಲ್ಲಿ ನೀಡಲಾಗುವ ಆಹಾರದ ಗುಣಮಟ್ಟದ ಕುರಿತು ತಮ್ಮ ವಿಡಿಯೋ ಹಂಚಿಕೊಂಡ ನಂತರ ಈ ವಿಷಯ ಬೆಳಕಿಗೆ ಬಂದಿದೆ. ನಂತರ ಆತನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಯಿತು ಎಂದು ತಿಳಿಸಿದರು.

ಮೂಲಗಳ ಪ್ರಕಾರ, ಅಧಿಕಾರಿಗಳಿಗೆ ಹೋಲಿಸಿದರೆ ಜವಾನರಿಗೆ ನೀಡುವ ಆಹಾರ ಪದ್ಧತಿಯಲ್ಲಿ ವ್ಯತ್ಯಾಸವಿದೆ. ಅವರು ಗ್ರಾಮೀಣ ಪ್ರದೇಶಗಳಿಂದ ಬಂದ ಕಾರಣ ಈ ರೀತಿಯ ವ್ಯವಸ್ಥೆಯಿದೆ ಎಂದು ಸಭೆಯಲ್ಲಿ ಸ್ಪಷ್ಟಪಡಿಸಿದರು. ಹಾಗಾಗಿ ಮತ್ತೊಮ್ಮೆ ರಾಹುಲ್​ ಗಾಂಧಿ ಟೀಕೆಗೆ ಒಳಪಟ್ಟರು.

  • The only “talk” to have with China is about restoration of ‘Status Quo Ante’ as of March 2020.

    PM & GOI refuse to take responsibility for pushing China out of our land.

    All other “talk” is worthless.

    — Rahul Gandhi (@RahulGandhi) September 11, 2020 " class="align-text-top noRightClick twitterSection" data=" ">

ಸಭೆಯಲ್ಲಿ ಹಲವರು ಲಡಾಖ್ ಪರಿಸ್ಥಿತಿಯ ಕುರಿತು ಧ್ವನಿ ಎತ್ತಿದರು. ಸಭೆಯ ನಂತರ ರಾಹುಲ್ ಗಾಂಧಿ ಭಾರತ-ಚೀನಾ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.