ETV Bharat / bharat

ಪಂಜಾಬ್​ ಕಳ್ಳಭಟ್ಟಿ​ ದುರಂತ: 108ಕ್ಕೇರಿದ ಸಾವಿನ ಸಂಖ್ಯೆ, 37 ಆರೋಪಿಗಳು ಪೊಲೀಸರ​ ವಶಕ್ಕೆ

author img

By

Published : Aug 4, 2020, 12:30 PM IST

ಪಂಜಾಬ್​ನ ಹೂಚ್ ದುರಂತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 108ಕ್ಕೆ ಏರಿಕೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು 12 ಮಂದಿ ಸೇರಿ ಒಟ್ಟು 37 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Punjab  police
ಪಂಜಾಬ್ ಪೊಲೀಸ್

ಚಂಡೀಗಢ(ಪಂಜಾಬ್​): ಪಂಜಾಬ್​ನಲ್ಲಿ ನಡೆದ ಹೂಚ್ ದುರಂತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 108ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ಮತ್ತೆ 12 ಮಂದಿಯನ್ನು ವಶಕ್ಕೆ ಪಡೆದು ಪಂಜಾಬ್​ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದರ ಜೊತೆಗೆ ಮೂರು ಡ್ರಮ್​ಗಳಷ್ಟು ಕಳ್ಳಭಟ್ಟಿ ಪೂರೈಸಿದ್ದ, ಲುದಿಯಾನ ಮೂಲದ ಪೇಂಟ್​ ವ್ಯಾಪಾರ ಮಾಡುತ್ತಿದ್ದ ಉದ್ಯಮಿಯನ್ನು ಸೆರೆ ಹಿಡಿಯಲು ಪಂಜಾಬ್​ ಪೊಲೀಸರು ಯೋಜನೆ ರೂಪಿಸಿದ್ದಾರೆ.

ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಈಗಾಗಲೇ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿನಾರ್ ಗುಪ್ತಾ ಅವರಿಗೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಪತ್ತೆ ಹಚ್ಚಲು ಮತ್ತು ಬಂಧಿಸಲು ಸಂಪೂರ್ಣ ಅಧಿಕಾರ ನೀಡಿ, ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.

ಈಗ 12 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. ಇವರಲ್ಲಿ 6 ಮಂದಿ ಪೊಲೀಸರು ಹಾಗೂ 7 ಮಂದಿ ಅಬಕಾರಿ ಮತ್ತು ತೆರಿಗೆ ಅಧಿಕಾರಿಗಳ ವಿರುದ್ಧವೂ ತನಿಖೆಗೆ ಆದೇಶ ನೀಡಲಾಗಿದೆ.

ಪಂಜಾಬ್​ನ ಹಲವು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಅಕ್ರಮ ಮದ್ಯ ದಂಧೆಯಲ್ಲಿ ಐವರು ಕಿಂಗ್​ಪಿನ್​ಗಳಿದ್ದು, ಲುದಿಯಾನಾದ ರಾಜೇಶ್​ ಜೋಷಿ ಸೇರಿ 8 ಮಂದಿ ಆರೋಪಿಗಳ ಸೆರೆಗೆ ಬಲೆ ಬೀಸಲಾಗಿದೆ ಎಂದು ಡಿಜಿಪಿ ದಿನಕರ್ ಗುಪ್ತಾ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಸಾವಿನ ಸಂಖ್ಯೆ 108ಕ್ಕೆ ಏರಿದ್ದು, ತಾರ್ನ್ ತರನ್​​​‌ನಲ್ಲಿ 82 ಮತ್ತು ಅಮೃತಸರ್​ ಮತ್ತು ಬಟಾಲಾದಲ್ಲಿ ತಲಾ 13 ಸಾವುಗಳು ಸಂಭವಿಸಿವೆ. ಲುದಿಯಾನಾ ಪೊಲೀಸರು ಅಕ್ರಮ ಮದ್ಯ ಉತ್ಪಾದನಾ ದಂಧೆಯನ್ನು ಪತ್ತೆ ಹಚ್ಚಿ 2 ಲಕ್ಷ ಲೀಟರ್ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ ಈ ದುರಂತದಲ್ಲಿ ಸಾವನ್ನಪ್ಪಿದವರಿಗೆ ಪಂಜಾಬ್​ ಸಿಎಂ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಚಂಡೀಗಢ(ಪಂಜಾಬ್​): ಪಂಜಾಬ್​ನಲ್ಲಿ ನಡೆದ ಹೂಚ್ ದುರಂತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 108ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ಮತ್ತೆ 12 ಮಂದಿಯನ್ನು ವಶಕ್ಕೆ ಪಡೆದು ಪಂಜಾಬ್​ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದರ ಜೊತೆಗೆ ಮೂರು ಡ್ರಮ್​ಗಳಷ್ಟು ಕಳ್ಳಭಟ್ಟಿ ಪೂರೈಸಿದ್ದ, ಲುದಿಯಾನ ಮೂಲದ ಪೇಂಟ್​ ವ್ಯಾಪಾರ ಮಾಡುತ್ತಿದ್ದ ಉದ್ಯಮಿಯನ್ನು ಸೆರೆ ಹಿಡಿಯಲು ಪಂಜಾಬ್​ ಪೊಲೀಸರು ಯೋಜನೆ ರೂಪಿಸಿದ್ದಾರೆ.

ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಈಗಾಗಲೇ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿನಾರ್ ಗುಪ್ತಾ ಅವರಿಗೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಪತ್ತೆ ಹಚ್ಚಲು ಮತ್ತು ಬಂಧಿಸಲು ಸಂಪೂರ್ಣ ಅಧಿಕಾರ ನೀಡಿ, ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.

ಈಗ 12 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. ಇವರಲ್ಲಿ 6 ಮಂದಿ ಪೊಲೀಸರು ಹಾಗೂ 7 ಮಂದಿ ಅಬಕಾರಿ ಮತ್ತು ತೆರಿಗೆ ಅಧಿಕಾರಿಗಳ ವಿರುದ್ಧವೂ ತನಿಖೆಗೆ ಆದೇಶ ನೀಡಲಾಗಿದೆ.

ಪಂಜಾಬ್​ನ ಹಲವು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಅಕ್ರಮ ಮದ್ಯ ದಂಧೆಯಲ್ಲಿ ಐವರು ಕಿಂಗ್​ಪಿನ್​ಗಳಿದ್ದು, ಲುದಿಯಾನಾದ ರಾಜೇಶ್​ ಜೋಷಿ ಸೇರಿ 8 ಮಂದಿ ಆರೋಪಿಗಳ ಸೆರೆಗೆ ಬಲೆ ಬೀಸಲಾಗಿದೆ ಎಂದು ಡಿಜಿಪಿ ದಿನಕರ್ ಗುಪ್ತಾ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಸಾವಿನ ಸಂಖ್ಯೆ 108ಕ್ಕೆ ಏರಿದ್ದು, ತಾರ್ನ್ ತರನ್​​​‌ನಲ್ಲಿ 82 ಮತ್ತು ಅಮೃತಸರ್​ ಮತ್ತು ಬಟಾಲಾದಲ್ಲಿ ತಲಾ 13 ಸಾವುಗಳು ಸಂಭವಿಸಿವೆ. ಲುದಿಯಾನಾ ಪೊಲೀಸರು ಅಕ್ರಮ ಮದ್ಯ ಉತ್ಪಾದನಾ ದಂಧೆಯನ್ನು ಪತ್ತೆ ಹಚ್ಚಿ 2 ಲಕ್ಷ ಲೀಟರ್ ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ ಈ ದುರಂತದಲ್ಲಿ ಸಾವನ್ನಪ್ಪಿದವರಿಗೆ ಪಂಜಾಬ್​ ಸಿಎಂ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.