ದೇವ್ಘರ್ (ಜಾರ್ಖಂಡ್): ಸೈಬರ್ ಅಪರಾಧಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಮಾಯಕರನ್ನು ಟಾರ್ಗೆಟ್ ಮಾಡಿ ಹಣ ದೋಚುತ್ತಿದ್ದ ಸೈಬರ್ ಅಪರಾಧಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸೈಬರ್ ಅಪರಾಧಿಗಳಾಗಿ ದೇವ್ಘರ್ಗೆ ವಿವಿಧ ರಾಜ್ಯಗಳ ಪೊಲೀಸರು ತೆರಳುತ್ತಿರುವುದು ಸಾಮಾನ್ಯ. ಇಂದು ಮಧುಪುರ ಪೆಟ್ರೋಲ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳಿಂದ ಇಬ್ಬರು ಸಹೋದರರು ಸೇರಿದಂತೆ 9 ಸೈಬರ್ ಅಪರಾಧಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ನಕಲಿ ಮೊಬೈಲ್ನಿಂದ ಬ್ಯಾಂಕ್ ಅಧಿಕಾರಿಗಳು ಮತ್ತು ಕಸ್ಟಮರ್ ಕೇರ್ ಅಧಿಕಾರಿಗಳೆಂದು ಗ್ರಾಹಕರಿಗೆ ಫೋನ್ ಮಾಡಿ ಎಟಿಎಂ ಮತ್ತು ಸಿವಿವಿ ನಂಬರ್ ಪಡೆದು ಹಣ ದೋಚುತ್ತಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿದ ಪೊಲೀಸರು 9 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಅಪರಾಧಿಗಳಿಂದ 18 ಫೋನ್ಗಳು, ಎರಡು ಸಿಮ್ ಕಾರ್ಡ್ಗಳು, 9 ಬ್ಯಾಂಕ್ ಪಾಸ್ಬುಕ್ಗಳು, ಮೂರು ಎಂಟಿಎಂ ಕಾರ್ಡ್ಗಳು ಮತ್ತು 33 ಸಾವಿರ ನಗದು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.