ETV Bharat / bharat

ಕುಡಿಯುವ ನೀರಿಗಾಗಿ ಮಣ್ಣಿನ ಹೂಜಿಗಳನ್ನು ಬಳಸಿ: ಪ್ರಧಾನಿ ಮೋದಿ - ಪಿಎಂ ಮೋದಿ

ಆತ್ಮ ನಿರ್ಭರ ನಿಧಿ (ಪಿಎಂ ಎಸ್​ವಿಎ ನಿಧಿ) ಯೋಜನೆಯ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿ, ಕುಡಿಯುವ ನೀರಿಗಾಗಿ ಪ್ಲಾಸ್ಟಿಕ್ ಬಾಟಲಿಗಳ ಬದಲು ಮಣ್ಣಿನ ಹೂಜಿಗಳನ್ನು ಬಳಸಬೇಕೆಂದು ಕರೆ ನೀಡಿದರು.

pm modi
author img

By

Published : Sep 9, 2020, 3:03 PM IST

ಭೋಪಾಲ್ (ಮಧ್ಯಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದ ಪಿಎಂ ಸ್ಟ್ರೀಟ್ ಮಾರಾಟಗಾರರ ಆತ್ಮ ನಿರ್ಭರ ನಿಧಿ (ಪಿಎಂ ಎಸ್​ವಿಎ ನಿಧಿ) ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ, ಕುಡಿಯುವ ನೀರಿಗಾಗಿ ಪ್ಲಾಸ್ಟಿಕ್ ಬಾಟಲಿಗಳ ಬದಲು ಮಣ್ಣಿನ ಹೂಜಿಗಳನ್ನು ಬಳಸಬೇಕೆಂದು ಒತ್ತಿ ಹೇಳಿದರು.

ಇಂದೋರ್ ಜಿಲ್ಲೆಯ ಸ್ಯಾನ್ವರ್ ಮೂಲದ ಬೀದಿ ವ್ಯಾಪಾರಿ ಚಗನ್ ಲಾಲ್ ಮತ್ತು ಅವರ ಪತ್ನಿ, ಗ್ವಾಲಿಯರ್​ನ ಅರ್ಚನಾ ಶರ್ಮಾ ಮತ್ತು ರೈಸನ್ ಜಿಲ್ಲೆಯ ತರಕಾರಿ ಮಾರಾಟಗಾ ದಾಲ್ಚಂದ್ ಅವರೊಂದಿಗೆ ಮೋದಿ ವರ್ಚುವಲ್ ಸಂವಹನ ನಡೆಸಿದರು.

ಪೊರಕೆ ತಯಾರಿಸುವ ವೆಚ್ಚವನ್ನು ಕಡಿಮೆ ಮಾಡಲು, ಪೊರಕೆ ತಯಾರಿಸಲು ಬಳಸಿದ ಪೈಪ್​​ಅನ್ನು ಹಿಂದಿರುಗಿಸುವಂತೆ ಗ್ರಾಹಕರನ್ನು ಕೇಳುವ ಮೂಲಕ ತಮ್ಮ ವ್ಯವಹಾರವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಮೋದಿ ಚಗನ್ ಲಾಲ್​ಗೆ ಸಲಹೆ ನೀಡಿದರು.

ಪರಿಸರ ಉಳಿಸಲು ಕುಡಿಯುವ ನೀರಿಗಾಗಿ ಪ್ಲಾಸ್ಟಿಕ್ ಬಾಟಲಿಯ ಬದಲಾಗಿ ಮಣ್ಣಿನ ಹೂಜಿ ಬಳಸುವಂತೆ ಪ್ರಧಾನಿ ಸಲಹೆ ನೀಡಿದರು. ಉಜ್ವಲ ಯೋಜನೆ ಅವರ ಕುಟುಂಬಕ್ಕೆ ಹೇಗೆ ಪ್ರಯೋಜನ ನೀಡಿತು ಎಂದು ಕೇಳಿ ತಿಳಿದುಕೊಂಡರು.

ಗ್ವಾಲಿಯರ್‌ನ ಅರ್ಚನಾ ಶರ್ಮಾ ಅವರೊಂದಿಗೆ ಸಂವಹನ ನಡೆಸಿದ ಮೋದಿ, ಅವರಿಗೆ ಎಸ್​ವಿಎ ನಿಧಿ ಯೋಜನೆ ಹೇಗೆ ಪ್ರಯೋಜನವಾಯಿತು ಎಂದು ಕೇಳಿ ತಿಳಿದುಕೊಂಡರು.

ಆಯುಷ್ಮಾನ್ ಯೋಜನೆಯ ಕುರಿತು ನಿಮಗೆ ತಿಳಿದಿದೆಯೇ ಎಂದು ಅವರನ್ನು ಮೋದಿ ಕೇಳಿದಾಗ, ಈ ಯೋಜನೆಯ ಸಹಾಯದಿಂದ ನನ್ನ ಪತಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ಬಳಿಕ ಮೋದಿ, ಅವರ ಪತಿ ರಾಜೇಂದ್ರ ಶರ್ಮಾ ಅವರೊಂದಿಗೆ ಸಂವಹನ ನಡೆಸಿದರು.

ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಸಾಂಚಿಯ ತರಕಾರಿ ಮಾರಾಟಗಾರ ದಾಲ್ಚಂದ್ ಅವರೊಂದಿಗೆ ಮಾತನಾಡಿ, ಪಾವತಿಗಳನ್ನು ಸ್ವೀಕರಿಸಲು ಕ್ಯೂಆರ್ ಕೋಡ್ ಡಿಜಿಟಲ್ ಪ್ಲಾಟ್‌ಫಾರ್ಮ್ ಬಳಸಿದ್ದಕ್ಕಾಗಿ ಶ್ಲಾಘಿಸಿದರು.

ಅವರು ತಮ್ಮ ತರಕಾರಿ ವ್ಯವಹಾರವನ್ನು ಸುಧಾರಿಸುವ ಮಾರ್ಗಗಳನ್ನು ಕೂಡ ಸೂಚಿಸಿದರು.

ಭೋಪಾಲ್ (ಮಧ್ಯಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದ ಪಿಎಂ ಸ್ಟ್ರೀಟ್ ಮಾರಾಟಗಾರರ ಆತ್ಮ ನಿರ್ಭರ ನಿಧಿ (ಪಿಎಂ ಎಸ್​ವಿಎ ನಿಧಿ) ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ, ಕುಡಿಯುವ ನೀರಿಗಾಗಿ ಪ್ಲಾಸ್ಟಿಕ್ ಬಾಟಲಿಗಳ ಬದಲು ಮಣ್ಣಿನ ಹೂಜಿಗಳನ್ನು ಬಳಸಬೇಕೆಂದು ಒತ್ತಿ ಹೇಳಿದರು.

ಇಂದೋರ್ ಜಿಲ್ಲೆಯ ಸ್ಯಾನ್ವರ್ ಮೂಲದ ಬೀದಿ ವ್ಯಾಪಾರಿ ಚಗನ್ ಲಾಲ್ ಮತ್ತು ಅವರ ಪತ್ನಿ, ಗ್ವಾಲಿಯರ್​ನ ಅರ್ಚನಾ ಶರ್ಮಾ ಮತ್ತು ರೈಸನ್ ಜಿಲ್ಲೆಯ ತರಕಾರಿ ಮಾರಾಟಗಾ ದಾಲ್ಚಂದ್ ಅವರೊಂದಿಗೆ ಮೋದಿ ವರ್ಚುವಲ್ ಸಂವಹನ ನಡೆಸಿದರು.

ಪೊರಕೆ ತಯಾರಿಸುವ ವೆಚ್ಚವನ್ನು ಕಡಿಮೆ ಮಾಡಲು, ಪೊರಕೆ ತಯಾರಿಸಲು ಬಳಸಿದ ಪೈಪ್​​ಅನ್ನು ಹಿಂದಿರುಗಿಸುವಂತೆ ಗ್ರಾಹಕರನ್ನು ಕೇಳುವ ಮೂಲಕ ತಮ್ಮ ವ್ಯವಹಾರವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಮೋದಿ ಚಗನ್ ಲಾಲ್​ಗೆ ಸಲಹೆ ನೀಡಿದರು.

ಪರಿಸರ ಉಳಿಸಲು ಕುಡಿಯುವ ನೀರಿಗಾಗಿ ಪ್ಲಾಸ್ಟಿಕ್ ಬಾಟಲಿಯ ಬದಲಾಗಿ ಮಣ್ಣಿನ ಹೂಜಿ ಬಳಸುವಂತೆ ಪ್ರಧಾನಿ ಸಲಹೆ ನೀಡಿದರು. ಉಜ್ವಲ ಯೋಜನೆ ಅವರ ಕುಟುಂಬಕ್ಕೆ ಹೇಗೆ ಪ್ರಯೋಜನ ನೀಡಿತು ಎಂದು ಕೇಳಿ ತಿಳಿದುಕೊಂಡರು.

ಗ್ವಾಲಿಯರ್‌ನ ಅರ್ಚನಾ ಶರ್ಮಾ ಅವರೊಂದಿಗೆ ಸಂವಹನ ನಡೆಸಿದ ಮೋದಿ, ಅವರಿಗೆ ಎಸ್​ವಿಎ ನಿಧಿ ಯೋಜನೆ ಹೇಗೆ ಪ್ರಯೋಜನವಾಯಿತು ಎಂದು ಕೇಳಿ ತಿಳಿದುಕೊಂಡರು.

ಆಯುಷ್ಮಾನ್ ಯೋಜನೆಯ ಕುರಿತು ನಿಮಗೆ ತಿಳಿದಿದೆಯೇ ಎಂದು ಅವರನ್ನು ಮೋದಿ ಕೇಳಿದಾಗ, ಈ ಯೋಜನೆಯ ಸಹಾಯದಿಂದ ನನ್ನ ಪತಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ಬಳಿಕ ಮೋದಿ, ಅವರ ಪತಿ ರಾಜೇಂದ್ರ ಶರ್ಮಾ ಅವರೊಂದಿಗೆ ಸಂವಹನ ನಡೆಸಿದರು.

ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಸಾಂಚಿಯ ತರಕಾರಿ ಮಾರಾಟಗಾರ ದಾಲ್ಚಂದ್ ಅವರೊಂದಿಗೆ ಮಾತನಾಡಿ, ಪಾವತಿಗಳನ್ನು ಸ್ವೀಕರಿಸಲು ಕ್ಯೂಆರ್ ಕೋಡ್ ಡಿಜಿಟಲ್ ಪ್ಲಾಟ್‌ಫಾರ್ಮ್ ಬಳಸಿದ್ದಕ್ಕಾಗಿ ಶ್ಲಾಘಿಸಿದರು.

ಅವರು ತಮ್ಮ ತರಕಾರಿ ವ್ಯವಹಾರವನ್ನು ಸುಧಾರಿಸುವ ಮಾರ್ಗಗಳನ್ನು ಕೂಡ ಸೂಚಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.