ನವದೆಹಲಿ: ಪುಲ್ವಾಮ ದಾಳಿಯಲ್ಲಿ ಪಾಕ್ ಪಾತ್ರವಿದೆ ಎಂದು ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕ್ ತಂಡಕ್ಕೆ ಅವಕಾಶ ನೀಡಬಾರದು ಎಂದು ಕೂಗು ಕೇಳಿಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಕ್ ಕ್ರಿಕೆಟ್ ಅಭಿಮಾನಿ ಆದಿಲ್ ತಾಜ್, ಪಾಕ್ ತಂಡವನ್ನು ರದ್ದು ಮಾಡುವುದು ಬೇಡ ಎಂದು ಮನವಿ ಮಾಡಿದ್ದಾರೆ.
ರಾಜ್, 2018ರ ಇಂಡೋ-ಪಾಕ್ ಏಷ್ಯಾ ಕಪ್ ವೇಳೆ ಹಾಗೂ 2019ರ ಇಂಡೋ-ಪಾಕ್ ವರ್ಲ್ಡ್ ಕಪ್ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆ ಹಾಡಿ ಉಭಯ ರಾಷ್ಟ್ರಗಳ ಗಮನ ಸೆಳೆದಿದ್ದರು. ಒಬ್ಬ ಕ್ರಿಕೆಟ್ ಅಭಿಮಾನಿಯಾಗಿ ಬಹುನಿರೀಕ್ಷಿತ ಇಂಡೋ-ಪಾಕ್ ಪಂದ್ಯಗಳನ್ನು ಕಾಣಲು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ಪುಲ್ವಾಮ ಘಟನೆ ಹಿನ್ನೆಲೆ ವಿಶ್ವಕಪ್ ಪಂದ್ಯಗಳಲ್ಲಿ ಪಾಕ್ ತಂಡವನ್ನು ರದ್ದು ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಇಂಡೋ-ಪಾಕ್ ಆಟಗಾರರಲ್ಲಿ ಹಾಗೂ ಅಭಿಮಾನಿಗಳಲ್ಲಿ ಉತ್ತಮ ಬಾಂಧವ್ಯವಿದೆ. ಪಾಕ್ನ ಕ್ರಿಕೆಟಿಗ ಶಾಹಿದ್ ಅಫ್ರಿದಿ, ಭಾರತದ ಸಚಿನ್ ಹಾಗೂ ಕೊಹ್ಲಿ ಉತ್ತಮ ಬಾಂದವ್ಯ ಪ್ರದರ್ಶಿಸಿದ್ದಾರೆ. ಕೊಹ್ಲಿ, ಅಫ್ರಿದಿ ಫೌಂಡೇಶನ್ಗೆ ಹಣವನ್ನೂ ನೀಡಿದ್ದಾರೆ. ಆಟಗಾರರ ಸ್ನೇಹ-ಪ್ರೀತಿ ಎಲ್ಲರಿಗೂ ಗೊತ್ತು. ಹೀಗಿರುವಾಗ ಪಾಕ್ ಅನ್ನು ವಿಶ್ವಕಪ್ನಿಂದ ಹೊರಗಿಡುವುದು ಸರಿ ಅಲ್ಲ ಎಂದು ಹೇಳಿದ್ದಾರೆ.