ETV Bharat / bharat

ಯೆಸ್​​ ಬ್ಯಾಂಕ್​ ವಿಚಾರವಾಗಿ ನಮೋ ವಿರುದ್ಧ ರಾಗಾ ವಾಗ್ದಾಳಿ... ಗ್ರಾಹಕರಿಟ್ಟ ಹಣ ಸೇಫ್​ ಎಂದ ಹಣಕಾಸು ಸಚಿವೆ! - ಪ್ರಧಾನಿ ನರೇಂದ್ರ ಮೋದಿ

ಯೆಸ್​ ಬ್ಯಾಂಕ್​ ಆರ್ಥಿಕ ಸಂಕಷ್ಟಕ್ಕೊಳಗಾಗುತ್ತಿದ್ದಂತೆ ರಾಹುಲ್​ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ಕಾಲೆಳೆಯುವ ಕೆಲಸ ಮಾಡಿದ್ದು, ಟ್ಟೀಟ್​ನಲ್ಲಿ ಮೋದಿ ವಿಚಾರಧಾರೆಯಿಂದ ಆರ್ಥಿಕ ಸಂಕಷ್ಟ ಎಂದಿದ್ದಾರೆ.

Rahul Gandhi spark against modi
Rahul Gandhi spark against modi
author img

By

Published : Mar 6, 2020, 2:06 PM IST

Updated : Mar 6, 2020, 2:13 PM IST

ನವದಹಲಿ: ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಯೆಸ್​ ಬ್ಯಾಂಕ್​ ವಿಚಾರವಾಗಿ ಪ್ರಧಾನಿ ವಿರುದ್ಧ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದ್ದು, ಟ್ವೀಟ್​ ಮಾಡುವ ಮೂಲಕ ನಮೋ ಕಾಲೆಳೆದಿದ್ದಾರೆ.

  • No Yes Bank.

    Modi and his ideas have destroyed India’s economy.

    #NoBank

    — Rahul Gandhi (@RahulGandhi) March 6, 2020 " class="align-text-top noRightClick twitterSection" data=" ">

ನೋ ಯೆಸ್​ ಬ್ಯಾಂಕ್​, ಪ್ರಧಾನಿ ನರೇಂದ್ರ ಮೋದಿ ವಿಚಾರಧಾರೆಗಳಿಂದ ದೇಶದ ಆರ್ಥಿಕತೆ ಹಾಳಾಗಿದ್ದು, ಅದಕ್ಕೆ ಯೆಸ್​ ಬ್ಯಾಂಕ್​ ಉದಾಹರಣೆ ಎಂದು ಟ್ವೀಟ್​ ಮಾಡಿದ್ದಾರೆ.

  • BJP has been in power for six years. Their ability to govern and regulate financial institutions stands exposed

    First, it was PMC Bank. Now it is YES Bank. Is the government concerned at all? Can it shirk its responsibility?

    Is there a third bank in the line?

    — P. Chidambaram (@PChidambaram_IN) March 6, 2020 " class="align-text-top noRightClick twitterSection" data=" ">

ಇದರ ಬೆನ್ನಲ್ಲೇ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಕೂಡ ಟ್ವೀಟ್​ ಮಾಡಿದ್ದು, ಬಿಜೆಪಿ ಆಡಳಿತ ನಡೆಸುವ ರೀತಿಗೆ ಇದು ನಿದರ್ಶನ ಎಂದು ಹೇಳಿದ್ದಾರೆ. ಕಳೆದ ಆರು ವರ್ಷಗಳಿಂದ ಬಿಜೆಪಿ ಆಡಳಿತ ನಡೆಸುತ್ತಿದ್ದು, ಹಣಕಾಸು ಸಂಸ್ಥೆಗಳನ್ನ ಯಾವ ರೀತಿ ನಿರ್ವಹಿಸುತ್ತಿದೆ ಎಂಬ ಬಿಕ್ಕಟ್ಟನ್ನು ಇದೀಗ ಯೆಸ್​ ಬ್ಯಾಂಕ್​ ಬಿಚ್ಚಿಟ್ಟಿದೆ ಎಂದಿದ್ದಾರೆ. ಈ ಹಿಂದೆ ಪಿಎಂಸಿ ಬ್ಯಾಂಕ್​ ಇದೀಗ ಯೆಸ್​ ಬ್ಯಾಂಕ್​. ಇದರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದಿದ್ದಾರೆ.

ಗ್ರಾಹಕರಿಟ್ಟ ಹಣ ಸೇಫ್​ ಎಂದ ಹಣಕಾಸು ಸಚಿವೆ

ಇದೇ ವಿಷಯಕ್ಕೆ ಸಂಬಂಧಿಸಿಂತೆ ಪ್ರತಿಕ್ರಿಯೆ ನೀಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಬ್ಯಾಂಕ್​ ಗ್ರಾಹಕರು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಅವರು ಠೇವಣಿ ಇಟ್ಟಿರುವ ಹಣ ಸುರಕ್ಷಿತವಾಗಿದ್ದು, ಕೆಲವೇ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದಾರೆ.

ನವದಹಲಿ: ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಯೆಸ್​ ಬ್ಯಾಂಕ್​ ವಿಚಾರವಾಗಿ ಪ್ರಧಾನಿ ವಿರುದ್ಧ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದ್ದು, ಟ್ವೀಟ್​ ಮಾಡುವ ಮೂಲಕ ನಮೋ ಕಾಲೆಳೆದಿದ್ದಾರೆ.

  • No Yes Bank.

    Modi and his ideas have destroyed India’s economy.

    #NoBank

    — Rahul Gandhi (@RahulGandhi) March 6, 2020 " class="align-text-top noRightClick twitterSection" data=" ">

ನೋ ಯೆಸ್​ ಬ್ಯಾಂಕ್​, ಪ್ರಧಾನಿ ನರೇಂದ್ರ ಮೋದಿ ವಿಚಾರಧಾರೆಗಳಿಂದ ದೇಶದ ಆರ್ಥಿಕತೆ ಹಾಳಾಗಿದ್ದು, ಅದಕ್ಕೆ ಯೆಸ್​ ಬ್ಯಾಂಕ್​ ಉದಾಹರಣೆ ಎಂದು ಟ್ವೀಟ್​ ಮಾಡಿದ್ದಾರೆ.

  • BJP has been in power for six years. Their ability to govern and regulate financial institutions stands exposed

    First, it was PMC Bank. Now it is YES Bank. Is the government concerned at all? Can it shirk its responsibility?

    Is there a third bank in the line?

    — P. Chidambaram (@PChidambaram_IN) March 6, 2020 " class="align-text-top noRightClick twitterSection" data=" ">

ಇದರ ಬೆನ್ನಲ್ಲೇ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಕೂಡ ಟ್ವೀಟ್​ ಮಾಡಿದ್ದು, ಬಿಜೆಪಿ ಆಡಳಿತ ನಡೆಸುವ ರೀತಿಗೆ ಇದು ನಿದರ್ಶನ ಎಂದು ಹೇಳಿದ್ದಾರೆ. ಕಳೆದ ಆರು ವರ್ಷಗಳಿಂದ ಬಿಜೆಪಿ ಆಡಳಿತ ನಡೆಸುತ್ತಿದ್ದು, ಹಣಕಾಸು ಸಂಸ್ಥೆಗಳನ್ನ ಯಾವ ರೀತಿ ನಿರ್ವಹಿಸುತ್ತಿದೆ ಎಂಬ ಬಿಕ್ಕಟ್ಟನ್ನು ಇದೀಗ ಯೆಸ್​ ಬ್ಯಾಂಕ್​ ಬಿಚ್ಚಿಟ್ಟಿದೆ ಎಂದಿದ್ದಾರೆ. ಈ ಹಿಂದೆ ಪಿಎಂಸಿ ಬ್ಯಾಂಕ್​ ಇದೀಗ ಯೆಸ್​ ಬ್ಯಾಂಕ್​. ಇದರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದಿದ್ದಾರೆ.

ಗ್ರಾಹಕರಿಟ್ಟ ಹಣ ಸೇಫ್​ ಎಂದ ಹಣಕಾಸು ಸಚಿವೆ

ಇದೇ ವಿಷಯಕ್ಕೆ ಸಂಬಂಧಿಸಿಂತೆ ಪ್ರತಿಕ್ರಿಯೆ ನೀಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಬ್ಯಾಂಕ್​ ಗ್ರಾಹಕರು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಅವರು ಠೇವಣಿ ಇಟ್ಟಿರುವ ಹಣ ಸುರಕ್ಷಿತವಾಗಿದ್ದು, ಕೆಲವೇ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದಾರೆ.

Last Updated : Mar 6, 2020, 2:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.