ಅಸ್ಸೋಂ: ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ಉಚಿತ ಸೇವೆ ಒದಗಿಸುವ 25 ಗುಲಾಬಿ ಬಣ್ಣದ ಬಸ್ಗಳಿಗೆ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಹಸಿರು ನಿಶಾನೆ ತೋರಿದರು.
ಭ್ರಮನ್ ಸರತಿ ಯೋಜನೆಯಡಿಯಲ್ಲಿ ಗುವಾಹಟಿಯಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಈ ಉಚಿತ ಸಾರಿಗೆ ಸೇವೆಯು ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ಅಪಾರ ಸೇವೆ ಒದಗಿಸಲಿದೆ. ಹಾಗಾಗಿ ಪ್ರಯಾಣಿಕರು ಈ ಬಸ್ಸುಗಳ ಬಗ್ಗೆ ಸಾಕಷ್ಟು ಕಾಳಜಿ ವಹಿಸಬೇಕೆಂದು, ಖಾನಪುರದ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಮನವಿ ಮಾಡಿದರು.
ಬಸ್ಸುಗಳು ಐದು ಮಾರ್ಗಗಳಲ್ಲಿ ಸಂಚಾರ ನಡೆಸಲಿವೆ. ಕೋವಿಡ್ ಸಂದರ್ಭದಲ್ಲಿ ಕೂಡ ಅಗತ್ಯ ವಸ್ತುಗಳು ಮತ್ತು ಜನರನ್ನು ಸಾಗಿಸುವಲ್ಲಿ ಅಸ್ಸೋಂ ರಾಜ್ಯ ಸಾರಿಗೆ ನಿಗಮ ಮಹತ್ವದ ಪಾತ್ರ ವಹಿಸಿತ್ತು ಎಂದ ಸಿಎಂ, ರಾಜ್ಯ ಸಾರಿಗೆ ನಿಗಮ (ಎಎಸ್ಟಿಸಿ) ಸಾಮಾಜಿಕ ಸೇವೆಯಲ್ಲಿ ವಹಿಸಿರುವ ಮುಖ್ಯ ಪಾತ್ರವನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದರು.
ಈ ಸುದ್ದಿಯನ್ನೂ ಓದಿ: ರೈಲಿನಡಿ ಸಿಲುಕುತ್ತಿದ್ದ ಮಹಿಳೆಯ ಜೀವ ಉಳಿಸಿದ ಆರ್ಪಿಎಫ್ ಸಿಬ್ಬಂದಿ
ಸಾರಿಗೆ ಸಚಿವ ಚಂದ್ರ ಮೋಹನ್ ಪಟೋವರಿ ಮತ್ತು ಎಎಸ್ಟಿಸಿ ಅಧಿಕಾರಿಗಳು, ಚಾಲಕರು-ನಿರ್ವಾಹಕರು ಸೇರಿದಂತೆ ಇತರೆ ಸಿಬ್ಬಂದಿಯ ಸೇವೆಯನ್ನು ವಿಶೇಷವಾಗಿ ಶ್ಲಾಘಿಸಿದರು.