ETV Bharat / bharat

ನೆಹರೂ, ಗಾಂಧಿ ವಂಶಕ್ಕೆ ಎಂದಿಗೂ ಪ್ರಧಾನಿ ಕಚೇರಿ ಮೇಲೆ ಗೌರವವಿಲ್ಲ: ನಡ್ಡಾ

ಪಂಜಾಬ್​ನಲ್ಲಿ ಪ್ರಧಾನಿ ಮೋದಿ ಪ್ರತಿಮೆ ದಹಿಸಿದ ಘಟನೆಗೆ ಜೆ.ಪಿ. ನಡ್ಡಾ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

author img

By

Published : Oct 26, 2020, 4:29 PM IST

nadda
ನಡ್ಡಾ

ನವದೆಹಲಿ: ಪಂಜಾಬ್​ನಲ್ಲಿ ಪ್ರಧಾನಿ ಮೋದಿ ಪ್ರತಿಮೆ ದಹಿಸಿದ ಘಟನೆಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಖಂಡಿಸಿದ್ದಾರೆ. ನೆಹರೂ, ಗಾಂಧಿ ವಂಶಕ್ಕೆ ಎಂದಿಗೂ ಪ್ರಧಾನ ಮಂತ್ರಿ ಕಚೇರಿ ಮೇಲೆ ಗೌರವವಿಲ್ಲ. ​​​​ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ದ್ವೇಷದ ರಾಜಕೀಯದಲ್ಲಿ ತೊಡಗಿದೆ. ಪಂಜಾಬ್​ನಲ್ಲಿ ಪ್ರಧಾನಿ ಪ್ರತಿಕೃತಿ ದಹಿಸಿರೋದು ಅನಿರೀಕ್ಷಿತವಲ್ಲ. ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ನಿರ್ದೇಶನದ ಮೇರೆಗೆ ಈ ಘಟನೆ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.

2004 ರಿಂದ 2014 ರ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಮಂತ್ರಿಯ ಅಧಿಕಾರವನ್ನು ದುರ್ಬಲಗೊಳಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸಹ್ಯವರ್ತನೆ ತೋರುವ ಯಾವುದಾದರೊಂದು ಪಕ್ಷವಿದ್ದರೆ ಅದು ಕಾಂಗ್ರೆಸ್. ರಾಜಸ್ಥಾನದಲ್ಲಿ ಎಸ್​​ಸಿ, ಎಸ್​ಟಿ ಸಮುದಾಯಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಪಂಜಾಬ್​​ನಲ್ಲಿ ಮಂತ್ರಿಗಳು ವಿದ್ಯಾರ್ಥಿ ವೇತನ ಹಗರಣಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ದಶಕಗಳಿಂದಲೂ ಕಾಂಗ್ರೆಸ್​​​ಗೆ ಭಿನ್ನಾಭಿಪ್ರಾಯ ಧ್ವನಿಗಳ ಬಗ್ಗೆ ತಿರಸ್ಕಾರವಿದೆ. ತುರ್ತು ಸಮಯದಲ್ಲಿ ನಾವದನ್ನು ಕಂಡಿದ್ದೇವೆ. ರಾಜೀವ್ ಗಾಂಧಿ ಸರ್ಕಾರ ಪತ್ರಿಕಾ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ಒಂದು ಲಜ್ಜೆಗೆಟ್ಟ ಪ್ರಯತ್ನ ಮಾಡಿತ್ತು ಎಂದು ಹರಿಹಾಯ್ದಿದ್ದಾರೆ.

ಕಾಂಗ್ರೆಸ್​​​ ವಾಕ್​​ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೂಲಕ ವಿರೋಧಿಗಳಿಗೆ ತೊಂದರೆ ನೀಡುತ್ತಿದೆ. ಕಾಂಗ್ರೆಸ್ ಆಶೀರ್ವದಿಸಿದ ಮಹಾರಾಷ್ಟ್ರ ಸರ್ಕಾರ, ಆಡಳಿತ ಮಾಡುವುದನ್ನು ಬಿಟ್ಟು, ಉಳಿದೆಲ್ಲವನ್ನೂ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.

"ಬಡತನದಲ್ಲಿ ಜನಿಸಿ, ಪ್ರಧಾನ ಮಂತ್ರಿಯಾದ ವ್ಯಕ್ತಿಯ ವಿರುದ್ಧ ಒಂದು ರಾಜವಂಶದ ದ್ವೇಷ ಐತಿಹಾಸಿಕವಾಗಿದೆ. ಈ ದೇಶದ ಜನರ ಪ್ರೀತಿ ಮೋದಿಯವರ ಮೇಲಿರೋದು ಮತ್ತೊಂದು ಐತಿಹಾಸಿಕವಾಗಿದೆ. ಮೋದಿಯವರನ್ನು ಕಾಂಗ್ರೆಸ್ ಎಷ್ಟು ದ್ವೇಷಿಸುತ್ತೋ, ಜನರು ಅದಕ್ಕಿಂತ ದುಪ್ಟಟ್ಟು ಇಷ್ಟ ಪಡುತ್ತಾರೆ" ಎಂದು ವಿರೋಧಿಗಳಿಗೆ ಜೆ.ಪಿ. ನಡ್ಡಾ ತಿರುಗೇಟು ನೀಡಿದ್ದಾರೆ.

ನವದೆಹಲಿ: ಪಂಜಾಬ್​ನಲ್ಲಿ ಪ್ರಧಾನಿ ಮೋದಿ ಪ್ರತಿಮೆ ದಹಿಸಿದ ಘಟನೆಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಖಂಡಿಸಿದ್ದಾರೆ. ನೆಹರೂ, ಗಾಂಧಿ ವಂಶಕ್ಕೆ ಎಂದಿಗೂ ಪ್ರಧಾನ ಮಂತ್ರಿ ಕಚೇರಿ ಮೇಲೆ ಗೌರವವಿಲ್ಲ. ​​​​ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ದ್ವೇಷದ ರಾಜಕೀಯದಲ್ಲಿ ತೊಡಗಿದೆ. ಪಂಜಾಬ್​ನಲ್ಲಿ ಪ್ರಧಾನಿ ಪ್ರತಿಕೃತಿ ದಹಿಸಿರೋದು ಅನಿರೀಕ್ಷಿತವಲ್ಲ. ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ನಿರ್ದೇಶನದ ಮೇರೆಗೆ ಈ ಘಟನೆ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.

2004 ರಿಂದ 2014 ರ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಮಂತ್ರಿಯ ಅಧಿಕಾರವನ್ನು ದುರ್ಬಲಗೊಳಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸಹ್ಯವರ್ತನೆ ತೋರುವ ಯಾವುದಾದರೊಂದು ಪಕ್ಷವಿದ್ದರೆ ಅದು ಕಾಂಗ್ರೆಸ್. ರಾಜಸ್ಥಾನದಲ್ಲಿ ಎಸ್​​ಸಿ, ಎಸ್​ಟಿ ಸಮುದಾಯಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಪಂಜಾಬ್​​ನಲ್ಲಿ ಮಂತ್ರಿಗಳು ವಿದ್ಯಾರ್ಥಿ ವೇತನ ಹಗರಣಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ದಶಕಗಳಿಂದಲೂ ಕಾಂಗ್ರೆಸ್​​​ಗೆ ಭಿನ್ನಾಭಿಪ್ರಾಯ ಧ್ವನಿಗಳ ಬಗ್ಗೆ ತಿರಸ್ಕಾರವಿದೆ. ತುರ್ತು ಸಮಯದಲ್ಲಿ ನಾವದನ್ನು ಕಂಡಿದ್ದೇವೆ. ರಾಜೀವ್ ಗಾಂಧಿ ಸರ್ಕಾರ ಪತ್ರಿಕಾ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ಒಂದು ಲಜ್ಜೆಗೆಟ್ಟ ಪ್ರಯತ್ನ ಮಾಡಿತ್ತು ಎಂದು ಹರಿಹಾಯ್ದಿದ್ದಾರೆ.

ಕಾಂಗ್ರೆಸ್​​​ ವಾಕ್​​ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೂಲಕ ವಿರೋಧಿಗಳಿಗೆ ತೊಂದರೆ ನೀಡುತ್ತಿದೆ. ಕಾಂಗ್ರೆಸ್ ಆಶೀರ್ವದಿಸಿದ ಮಹಾರಾಷ್ಟ್ರ ಸರ್ಕಾರ, ಆಡಳಿತ ಮಾಡುವುದನ್ನು ಬಿಟ್ಟು, ಉಳಿದೆಲ್ಲವನ್ನೂ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.

"ಬಡತನದಲ್ಲಿ ಜನಿಸಿ, ಪ್ರಧಾನ ಮಂತ್ರಿಯಾದ ವ್ಯಕ್ತಿಯ ವಿರುದ್ಧ ಒಂದು ರಾಜವಂಶದ ದ್ವೇಷ ಐತಿಹಾಸಿಕವಾಗಿದೆ. ಈ ದೇಶದ ಜನರ ಪ್ರೀತಿ ಮೋದಿಯವರ ಮೇಲಿರೋದು ಮತ್ತೊಂದು ಐತಿಹಾಸಿಕವಾಗಿದೆ. ಮೋದಿಯವರನ್ನು ಕಾಂಗ್ರೆಸ್ ಎಷ್ಟು ದ್ವೇಷಿಸುತ್ತೋ, ಜನರು ಅದಕ್ಕಿಂತ ದುಪ್ಟಟ್ಟು ಇಷ್ಟ ಪಡುತ್ತಾರೆ" ಎಂದು ವಿರೋಧಿಗಳಿಗೆ ಜೆ.ಪಿ. ನಡ್ಡಾ ತಿರುಗೇಟು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.