ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕಾಲೆಳೆಯುತ್ತಲೇ ಬಂದಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು, 'ಚಾಯ್ವಾಲಾ' ಪದ ಬಳಸಿ ಮತ್ತೆ ಕುಟುಕಿದ್ದಾರೆ.
ಟ್ವಿಟರ್ ಮೂಲಕ ಸಿಧು, ಒಂದು ತಪ್ಪು ಮತ ನಿಮ್ಮ ಮಕ್ಕಳನ್ನು ಚಾಯ್ವಾಲಾ, ಪಕೋಡವಾಲಾ ಅಥವಾ ಚೌಕಿದಾರರನ್ನಾಗಿ ಮಾಡಬಹುದು. ಆ ನಂತರ ಪಶ್ಚಾತಾಪ ಪಡುವುದಕ್ಕಿಂತ, ಈಗಲೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು ಎಂದು ಜನತಗೆ ಹೇಳಿದ್ದರು.
-
एक गलत वोट आपके बच्चों को चायवाला, पकौड़ेवाला या चौकीदार बना सकता है|
— Navjot Singh Sidhu (@sherryontopp) April 29, 2019 " class="align-text-top noRightClick twitterSection" data="
Better prevent and prepare, rather then repent and repair...
">एक गलत वोट आपके बच्चों को चायवाला, पकौड़ेवाला या चौकीदार बना सकता है|
— Navjot Singh Sidhu (@sherryontopp) April 29, 2019
Better prevent and prepare, rather then repent and repair...एक गलत वोट आपके बच्चों को चायवाला, पकौड़ेवाला या चौकीदार बना सकता है|
— Navjot Singh Sidhu (@sherryontopp) April 29, 2019
Better prevent and prepare, rather then repent and repair...
ಚಾಯ್ವಾಲಾ, ಚೌಕಿದಾರ್ ಎಂಬ ಪದಗಳನ್ನು ಪ್ರಧಾನಿ ಮೋದಿ ಹಲವು ಬಾರಿ ಬಳಸಿದ್ದಾರೆ. ಅವುಗಳನ್ನೇ ಬಳಸಿಕೊಂಡು ಸಿಧು ವ್ಯಂಗ್ಯವಾಡಿದ್ದಾರೆ.
ಸಿಧು ಹೇಳಿಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ, ಪ್ರಧಾನಿ ಅವರನ್ನು ಅವಹೇಳನ ಮಾಡಲು ಹೋಗಿ ಪಂಜಾಬ್ ಮಿನಿಸ್ಟರ್, ಈ ವೃತ್ತಿಗಳನ್ನು ಮಾಡುತ್ತಿರುವ ಜನರನ್ನು ಅಪಮಾನಿಸಿದ್ದಾರೆ. ದೇಶದ ಸಾಮಾನ್ಯ ಜನರ ಬಗ್ಗೆ ಕಾಂಗ್ರೆಸ್ ಎಂತಹ ಕಾಮೆಂಟ್ ಮಾಡಿದೆ ಎಂದಿದ್ದಾರೆ.