ETV Bharat / bharat

ಸಿಯಾಚಿನ್​ನಲ್ಲಿ ಹಿಮಪಾತ.. ಇಬ್ಬರು ನಾಗರಿಕರು ಸೇರಿ ನಾಲ್ವರು ಯೋಧರು ಹುತಾತ್ಮ!

author img

By

Published : Nov 18, 2019, 11:21 PM IST

Updated : Nov 18, 2019, 11:52 PM IST

ಇಂದು ಮಧ್ಯಾಹ್ನ 3.30ರ ಸುಮಾರಿಗೆ ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎಂದೇ ಪರಿಗಣಿಸಲಾಗಿರುವ ಸಿಯಾಚಿನ್​ನಲ್ಲಿ ಹಿಮಪಾತವಾಗಿದ್ದು, ಹಿಮದಡಿ ಸಿಲುಕಿರುವ ಎಂಟು ಯೋಧರಲ್ಲಿ ನಾಲ್ವರು ಹುತಾತ್ಮರಾಗಿದ್ದಾರೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಇಂದು ಮಧ್ಯಾಹ್ನ 3.30ಕ್ಕೆ ಸಿಯಾಚಿನ್‌ನಲ್ಲಿ ಹಿಮಪಾತವಾಗಿದ್ದು, ಹಿಮದಡಿ ಸಿಲುಕಿರುವ ಎಂಟು ಮಂದಿ ಯೋಧರಲ್ಲಿ ನಾಲ್ವರು ಹುತಾತ್ಮರಾಗಿದ್ದಾರೆ.

ಗಸ್ತು ಕಾರ್ಯಾಚರಣೆ ವೇಳೆ ನಾಗರಿಕರು ಸೇರಿ ಯೋಧರು ಹಿಮದಡಿ ಸಿಲುಕಿದ್ದರು. ನಾಗರಿಕರಿಬ್ಬರು ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. -30 ಡಿಗ್ರಿ ಚಳಿಯ ಪ್ರದೇಶವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2016ರ ಫೆಬ್ರುವರಿಯಲ್ಲಿ ಸಂಭವಿಸಿದ್ದ ಹಿಮಪಾತದಲ್ಲಿ 10 ಜನ ಯೋಧರು ಮೃತಪಟ್ಟಿದ್ದರು. 25 ಅಡಿ ಆಳದಲ್ಲಿ ಹಿಮದಡಿ ಸಿಲುಕಿದ್ದ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ ಅವರನ್ನು ಆರು ದಿನಗಳ ಕಾರ್ಯಾಚರಣೆ ಬಳಿಕ ಹೊರತೆಗೆಯಲಾಗಿತ್ತು. ಆದರೆ, ಅವರು ಬಳಿಕ ಮೃತಪಟ್ಟಿದ್ದರು. ಘಟನೆಯಲ್ಲಿ ಮೈಸೂರಿನ ಹೆಚ್ ಡಿ ಕೋಟೆಯ ಮಹೇಶ್, ಹಾಸನದ ಸುಬೇದಾರ್ ಟಿ ಟಿ ನಾಗೇಶ್ ಸಹ ಘಟನೆಯಲ್ಲಿ ಹುತಾತ್ಮರಾಗಿದ್ದರು.

ನವದೆಹಲಿ: ಇಂದು ಮಧ್ಯಾಹ್ನ 3.30ಕ್ಕೆ ಸಿಯಾಚಿನ್‌ನಲ್ಲಿ ಹಿಮಪಾತವಾಗಿದ್ದು, ಹಿಮದಡಿ ಸಿಲುಕಿರುವ ಎಂಟು ಮಂದಿ ಯೋಧರಲ್ಲಿ ನಾಲ್ವರು ಹುತಾತ್ಮರಾಗಿದ್ದಾರೆ.

ಗಸ್ತು ಕಾರ್ಯಾಚರಣೆ ವೇಳೆ ನಾಗರಿಕರು ಸೇರಿ ಯೋಧರು ಹಿಮದಡಿ ಸಿಲುಕಿದ್ದರು. ನಾಗರಿಕರಿಬ್ಬರು ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. -30 ಡಿಗ್ರಿ ಚಳಿಯ ಪ್ರದೇಶವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2016ರ ಫೆಬ್ರುವರಿಯಲ್ಲಿ ಸಂಭವಿಸಿದ್ದ ಹಿಮಪಾತದಲ್ಲಿ 10 ಜನ ಯೋಧರು ಮೃತಪಟ್ಟಿದ್ದರು. 25 ಅಡಿ ಆಳದಲ್ಲಿ ಹಿಮದಡಿ ಸಿಲುಕಿದ್ದ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ ಅವರನ್ನು ಆರು ದಿನಗಳ ಕಾರ್ಯಾಚರಣೆ ಬಳಿಕ ಹೊರತೆಗೆಯಲಾಗಿತ್ತು. ಆದರೆ, ಅವರು ಬಳಿಕ ಮೃತಪಟ್ಟಿದ್ದರು. ಘಟನೆಯಲ್ಲಿ ಮೈಸೂರಿನ ಹೆಚ್ ಡಿ ಕೋಟೆಯ ಮಹೇಶ್, ಹಾಸನದ ಸುಬೇದಾರ್ ಟಿ ಟಿ ನಾಗೇಶ್ ಸಹ ಘಟನೆಯಲ್ಲಿ ಹುತಾತ್ಮರಾಗಿದ್ದರು.

Intro:Body:

Army jawans stuck under snow, Army jawans stuck under snow news, avalanche hits army post in Siachen, avalanche hits army post in Siachen news, Siachen avalanche news, Siachen avalanche latest news, ಹಿಮದಡಿ ಸಿಲುಕಿರುವ ಎಂಟು ಯೋಧರು, ಸಿಯಾಚಿನ್​ನಲ್ಲಿ ಹಿಮದಡಿ ಸಿಲುಕಿರುವ ಎಂಟು ಯೋಧರು, ಹಿಮದಡಿ ಸಿಲುಕಿರುವ ಎಂಟು ಯೋಧರು ಸುದ್ದಿ, ಸಿಯಾಚಿನ್​ನ ಹಿಮಪಾತ, ಸಿಯಾಚಿನ್​ನಲ್ಲಿ ಹಿಮಪಾತ ಸುದ್ದಿ, 



Army jawans stuck under snow after avalanche hits army post in Siachen



ಸಿಯಾಚಿನ್​ನಲ್ಲಿ ಹಿಮಪಾತ: ಹಿಮದಡಿ ಸಿಲುಕಿರುವ ಯೋಧರು, -30 ಡಿಗ್ರಿಯಲ್ಲಿ ಕಾರ್ಯಾಚರಣೆ! 



ಎಂಟು ಮಂದಿ ಯೋಧರು ಹಿಮದಡಿ ಸಿಲುಕಿರುವ ಘಟನೆ ಸಿಯಾಚಿನ್​ನಲ್ಲಿ ನಡೆದಿದೆ. 



ನವದೆಹಲಿ: ಇಂದು ಮಧ್ಯಾಹ್ನ 3.30ಕ್ಕೆ ಸಿಯಾಚಿನ್‌ನಲ್ಲಿ  ಹಿಮಪಾತವಾಗಿದ್ದು, ಎಂಟು ಮಂದಿ ಯೋಧರು ಹಿಮದಡಿ ಸಿಲುಕಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.



ಗಸ್ತು ಕಾರ್ಯಾಚರಣೆ ವೇಳೆ ಯೋಧರು ಹಿಮದಡಿ ಸಿಲುಕಿದ್ದಾರೆ. -30 ಡಿಗ್ರಿ ಚಳಿಯ ಪ್ರದೇಶವಾಗಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  



2016ರ ಫೆಬ್ರುವರಿಯಲ್ಲಿ ಸಂಭವಿಸಿದ್ದ ಹಿಮಪಾತದಲ್ಲಿ 10 ಜನ ಯೋಧರು ಮೃತಪಟ್ಟಿದ್ದರು. 25 ಅಡಿ ಆಳದಲ್ಲಿ ಹಿಮದಡಿ ಸಿಲುಕಿದ್ದ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ ಅವರನ್ನು ಆರು ದಿನಗಳ ಕಾರ್ಯಾಚರಣೆ ಬಳಿಕ ಹೊರತೆಗೆಯಲಾಗಿತ್ತು. ಆದರೆ ಅವರು ಬಳಿಕ ಮೃತಪಟ್ಟಿದ್ದರು. ಘಟನೆಯಲ್ಲಿ ಮೈಸೂರಿನ ಎಚ್.ಡಿ. ಕೋಟೆಯ ಮಹೇಶ್, ಹಾಸನದ ಸುಬೇದಾರ್ ಟಿ.ಟಿ. ನಾಗೇಶ್ ಸಹ ಘಟನೆಯಲ್ಲಿ ಹುತಾತ್ಮರಾಗಿದ್ದರು.


Conclusion:
Last Updated : Nov 18, 2019, 11:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.