ನವದೆಹಲಿ: ಲಾಕ್ಡೌನ್ನಿಂದಾಗಿ ರೈತರು ಬೆಳೆದಿರುವ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಆದರೆ, ಈ ನಡುವೆ ಕಬ್ಬು ಬೆಳೆಗಾರರ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ರಾಜ್ಯಸರ್ಕಾರಗಳು ಕಬ್ಬಿಗೆ ನಿಗದಿಪಡಿಸಿದ ಬೆಲೆ ಹೆಚ್ಚಿದ್ದರೆ, ಈ ಮೊದಲು ಕೇಂದ್ರ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ಬೆಂಬಲ ಬೆಲೆ ಸಹ ಅನ್ವಯವಾಗಲಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಈ ವಿಚಾರಣೆಯನ್ನು ಉನ್ನತ ಪೀಠಕ್ಕೆ ವರ್ಗಾಯಿಸಲು ನಿರಾಕರಿಸಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ ರಾಜ್ಯವು ನಿಗದಿಪಡಿಸಿದ ಬೆಲೆ ಹೆಚ್ಚಿದ್ದರೆ, ಕೇಂದ್ರವು ನಿಗದಿಪಡಿಸಿದ ಕನಿಷ್ಠ ಬೆಲೆ ಅನ್ವಯವಾಗುತ್ತದೆ ಎಂದು ತಿಳಿಸಿದೆ.
ಕೇಂದ್ರ ಸರ್ಕಾರ ಈ ಮೊದಲು ಕಬ್ಬಿಗೆ ಕನಿಷ್ಠ ಬೆಲೆ ನಿಗದಿ ಮಾಡಿದ ಬಳಿಕವೂ ಯುಪಿ ಸರ್ಕಾರಕ್ಕೆ ಅಥವಾ ರಾಜ್ಯ ಕಬ್ಬಿನ ಆಯುಕ್ತರಿಗೆ ಬೆಲೆ ನಿಗದಿ ಮಾಡುವ ಅಧಿಕಾರವಿದೆಯೇ ಎಂದು ಉತ್ತರ ಪ್ರದೇಶ ಕಬ್ಬಿನ ಕಾರ್ಖಾನೆ ಸಂಘ ಸಲ್ಲಿಸಿದ್ದ ಮನವಿಯ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ.
ಕೇಂದ್ರವು ನಿಗದಿಪಡಿಸಿದ ಬೆಲೆ ಶಾಸನಬದ್ಧ ಕನಿಷ್ಠ ಬೆಲೆ ಮತ್ತು ರಾಜ್ಯವು ನಿಗದಿಪಡಿಸಿದ ಬೆಲೆ ಸಲಹಾ ಕನಿಷ್ಠ ಬೆಲೆಯಾಗಿರಲಿದೆ ಎಂದು ಕೋರ್ಟ್ ತಿಳಿಸಿದೆ.