ETV Bharat / bharat

ಕ್ರಿಸ್‌ಮಸ್​ ರಾಷ್ಟ್ರೀಯ ರಜಾದಿನ ಎಂದು ಏಕೆ ಘೋಷಿಸಲಿಲ್ಲ: ಕೆಂದ್ರವನ್ನು ಪ್ರಶ್ನಿಸಿದ ಮಮತಾ ಬ್ಯಾನರ್ಜಿ - ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಕ್ರಿಸ್‌ಮಸ್ ರಾಷ್ಟ್ರೀಯ ರಜಾದಿನ ಎಂದು ಏಕೆ ಘೋಷಿಸಲಿಲ್ಲ ಎಂದು ಕೇಂದ್ರವನ್ನು ಪ್ರಶ್ನಿಸಿದ್ದಾರೆ.

Mamata Banerjee
ಕೆಂದ್ರವನ್ನು ಪ್ರಶ್ನಿಸಿದ ಮಮತಾ ಬ್ಯಾನರ್ಜಿ
author img

By

Published : Dec 22, 2020, 2:39 PM IST

ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕ್ರಿಸ್‌ಮಸ್ ಅ​ನ್ನು ಏಕೆ ರಾಷ್ಟ್ರೀಯ ರಜಾದಿನ ಎಂದು ಘೋಷಿಸಲಿಲ್ಲ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಇಲ್ಲಿನ ಪಾರ್ಕ್ ಸ್ಟ್ರೀಟ್ ಪ್ರದೇಶದ ಅಲೆನ್ ಪಾರ್ಕ್‌ನಲ್ಲಿ ಕ್ರಿಸ್‌ಮಸ್ ಕಾರ್ನೀವಲ್‌ನಲ್ಲಿ ಮಾತನಾಡಿದ ಬ್ಯಾನರ್ಜಿ, ಕಳೆದ ವರ್ಷ ಮತ್ತು ಅದಕ್ಕೂ ಮುಂಚೆ ನಾನು ಹೇಳಿದ್ದೇನೆಂದರೆ, ಯೇಸುಕ್ರಿಸ್ತನ ಜನ್ಮದಿನವನ್ನು ಏಕೆ ರಾಷ್ಟ್ರೀಯ ರಜಾ ದಿನ ಎಂದು ಘೋಷಿಸಲಾಗುವುದಿಲ್ಲ.? ನೀವು ಹೇಳಿದ್ದೀರಿ ಅದು ಮೊದಲೇ ಇತ್ತು. ಬಿಜೆಪಿ ಸರ್ಕಾರ ಅದನ್ನು ಏಕೆ ಹಿಂತೆಗೆದುಕೊಂಡಿದೆ? ಈ ಹಬ್ಬ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಎಲ್ಲರಿಗೂ ಭಾವನೆಗಳಿವೆ. ಕ್ರಿಶ್ಚಿಯನ್ನರು ಏನು ಹಾನಿ ಮಾಡಿದ್ದಾರೆ.? ಎಂದು ಪ್ರಶ್ನಿಸಿದರು.

ಇನ್ನು ಈ ಬಾರಿ ಕೋವಿಡ್​-19 ನಿಂದಾಗಿ ಕೆಲವು ಸಮಸ್ಯೆಗಳಿವೆ. ನಾವು ಮುಖವಾಡಗಳನ್ನು ಧರಿಸಿ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದರು.

ಇನ್ನು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರು ಕೂಡ ಕೇಂದ್ರವು ದ್ವೇಷದ ರಾಜಕೀಯವನ್ನು ಅನುಸರಿಸುತ್ತಿದೆ ಎಂದು ಟೀಕಿಸಿ, ಆರೋಪ ಮಾಡಿದ್ದಾರೆ. ಭಾರತದಲ್ಲಿ ಜಾತ್ಯತೀತತೆ ಇದೆಯೇ? ಒಂದು ವಿಶಿಷ್ಟ ಧಾರ್ಮಿಕ ದ್ವೇಷದ ರಾಜಕೀಯ ನಡೆಯುತ್ತಿದೆ ಎಂದು ಹೇಳಲು ನನಗೆ ವಿಷಾದವಿದೆ. ಇದನ್ನು ನಾನು ಇಂದು ಖಂಡಿಸಲು ಬಯಸುತ್ತೇನೆ ಎಂದು ಬ್ಯಾನರ್ಜಿ ಹೇಳಿದರು.

ಬ್ಯಾನರ್ಜಿ ಈ ಹಿಂದಿನ ದಿನ ಪತ್ರಿಕಾಗೋಷ್ಠಿಯಲ್ಲಿ, ಅಮಿತ್ ಷಾ ಸುಳ್ಳು ಮಾತನಾಡಿದ್ದಾರೆ. ನಮ್ಮ ರಾಜ್ಯವು ಕೈಗಾರಿಕೆಗಳಲ್ಲಿ ಶೂನ್ಯವಾಗಿದೆ ಎಂದು ಅವರು ಹೇಳಿಕೊಂಡರು. ಆದರೆ ನಾವು ಎಂಎಸ್ಎಂಇ ವಲಯದಲ್ಲಿ ಪ್ರಥಮ ಸ್ಥಾನದಲ್ಲಿದ್ದೇವೆ. ನಾವು ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡರು. ಆದರೆ ನಾವು ಅದರಲ್ಲೂ ಕೂಡ 1 ನೇ ಸ್ಥಾನದಲ್ಲಿದ್ದೇವೆ. ಇದು ಭಾರತ ಸರ್ಕಾರದ ಅಂಕಿ - ಅಂಶಗಳನ್ನು ಆಧರಿಸಿದೆ ಎಂದು ಹೇಳಿದರು.

ಕೇವಲ ರಾಜಕೀಯ ಮೈಲೇಜ್​ಗಾಗಿ​ ಸುಳ್ಳು ಹೇಳುವುದು ಗೃಹ ಸಚಿವರಿಗೆ ಸರಿ ಹೊಂದುವುದಿಲ್ಲ. ಇನ್ನು ಭಾರತೀಯ ಜನತಾ ಪಕ್ಷ ಮೋಸ ಮಾಡುತ್ತಿದೆ ಅನ್ನುವುದಕ್ಕೆ ಪೂರಕವಾಗಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.

ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕ್ರಿಸ್‌ಮಸ್ ಅ​ನ್ನು ಏಕೆ ರಾಷ್ಟ್ರೀಯ ರಜಾದಿನ ಎಂದು ಘೋಷಿಸಲಿಲ್ಲ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಇಲ್ಲಿನ ಪಾರ್ಕ್ ಸ್ಟ್ರೀಟ್ ಪ್ರದೇಶದ ಅಲೆನ್ ಪಾರ್ಕ್‌ನಲ್ಲಿ ಕ್ರಿಸ್‌ಮಸ್ ಕಾರ್ನೀವಲ್‌ನಲ್ಲಿ ಮಾತನಾಡಿದ ಬ್ಯಾನರ್ಜಿ, ಕಳೆದ ವರ್ಷ ಮತ್ತು ಅದಕ್ಕೂ ಮುಂಚೆ ನಾನು ಹೇಳಿದ್ದೇನೆಂದರೆ, ಯೇಸುಕ್ರಿಸ್ತನ ಜನ್ಮದಿನವನ್ನು ಏಕೆ ರಾಷ್ಟ್ರೀಯ ರಜಾ ದಿನ ಎಂದು ಘೋಷಿಸಲಾಗುವುದಿಲ್ಲ.? ನೀವು ಹೇಳಿದ್ದೀರಿ ಅದು ಮೊದಲೇ ಇತ್ತು. ಬಿಜೆಪಿ ಸರ್ಕಾರ ಅದನ್ನು ಏಕೆ ಹಿಂತೆಗೆದುಕೊಂಡಿದೆ? ಈ ಹಬ್ಬ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಎಲ್ಲರಿಗೂ ಭಾವನೆಗಳಿವೆ. ಕ್ರಿಶ್ಚಿಯನ್ನರು ಏನು ಹಾನಿ ಮಾಡಿದ್ದಾರೆ.? ಎಂದು ಪ್ರಶ್ನಿಸಿದರು.

ಇನ್ನು ಈ ಬಾರಿ ಕೋವಿಡ್​-19 ನಿಂದಾಗಿ ಕೆಲವು ಸಮಸ್ಯೆಗಳಿವೆ. ನಾವು ಮುಖವಾಡಗಳನ್ನು ಧರಿಸಿ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದರು.

ಇನ್ನು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರು ಕೂಡ ಕೇಂದ್ರವು ದ್ವೇಷದ ರಾಜಕೀಯವನ್ನು ಅನುಸರಿಸುತ್ತಿದೆ ಎಂದು ಟೀಕಿಸಿ, ಆರೋಪ ಮಾಡಿದ್ದಾರೆ. ಭಾರತದಲ್ಲಿ ಜಾತ್ಯತೀತತೆ ಇದೆಯೇ? ಒಂದು ವಿಶಿಷ್ಟ ಧಾರ್ಮಿಕ ದ್ವೇಷದ ರಾಜಕೀಯ ನಡೆಯುತ್ತಿದೆ ಎಂದು ಹೇಳಲು ನನಗೆ ವಿಷಾದವಿದೆ. ಇದನ್ನು ನಾನು ಇಂದು ಖಂಡಿಸಲು ಬಯಸುತ್ತೇನೆ ಎಂದು ಬ್ಯಾನರ್ಜಿ ಹೇಳಿದರು.

ಬ್ಯಾನರ್ಜಿ ಈ ಹಿಂದಿನ ದಿನ ಪತ್ರಿಕಾಗೋಷ್ಠಿಯಲ್ಲಿ, ಅಮಿತ್ ಷಾ ಸುಳ್ಳು ಮಾತನಾಡಿದ್ದಾರೆ. ನಮ್ಮ ರಾಜ್ಯವು ಕೈಗಾರಿಕೆಗಳಲ್ಲಿ ಶೂನ್ಯವಾಗಿದೆ ಎಂದು ಅವರು ಹೇಳಿಕೊಂಡರು. ಆದರೆ ನಾವು ಎಂಎಸ್ಎಂಇ ವಲಯದಲ್ಲಿ ಪ್ರಥಮ ಸ್ಥಾನದಲ್ಲಿದ್ದೇವೆ. ನಾವು ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡರು. ಆದರೆ ನಾವು ಅದರಲ್ಲೂ ಕೂಡ 1 ನೇ ಸ್ಥಾನದಲ್ಲಿದ್ದೇವೆ. ಇದು ಭಾರತ ಸರ್ಕಾರದ ಅಂಕಿ - ಅಂಶಗಳನ್ನು ಆಧರಿಸಿದೆ ಎಂದು ಹೇಳಿದರು.

ಕೇವಲ ರಾಜಕೀಯ ಮೈಲೇಜ್​ಗಾಗಿ​ ಸುಳ್ಳು ಹೇಳುವುದು ಗೃಹ ಸಚಿವರಿಗೆ ಸರಿ ಹೊಂದುವುದಿಲ್ಲ. ಇನ್ನು ಭಾರತೀಯ ಜನತಾ ಪಕ್ಷ ಮೋಸ ಮಾಡುತ್ತಿದೆ ಅನ್ನುವುದಕ್ಕೆ ಪೂರಕವಾಗಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.