ETV Bharat / bharat

ಕೇಂದ್ರದ ವಿಶೇಷ ಪ್ಯಾಕೇಜ್ ಪೂರೈಕೆ ಸಮಸ್ಯೆ ಪರಿಹರಿಸಲಿದೆ, ಆದರೆ ಬೇಡಿಕೆ ಖಚಿತವಿಲ್ಲ: ಮೋಹನ್‌ದಾಸ್ ಪೈ - ಪ್ರಧಾನಿ ಮೋದಿ

ಕೇಂದ್ರ ಸರ್ಕಾರದ ವಿಶೇಷ ಪ್ಯಾಕೇಜ್ ಕುರಿತು ಮಣಿಪಾಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್‌ದಾಸ್ ಪೈ, ಈಟಿವಿ ಭಾರತದ ಜೊತೆಗೆ ದೂರವಾಣಿ ಮೂಲಕ ಮಾತನಾಡಿದರು.

mohandas pai
mohandas pai
author img

By

Published : May 18, 2020, 9:27 AM IST

Updated : May 18, 2020, 10:34 AM IST

ಬೆಂಗಳೂರು/ಹೈದರಾಬಾದ್: ವಿಶೇಷ ಪ್ಯಾಕೇಜ್ ಪ್ರಕಟಣೆಯು ಪೂರೈಕೆಯ ಸಮಸ್ಯೆಗಳನ್ನು ಪರಿಹರಿಸಲಿದೆ. ಆದರೆ ಡಿಬಿಟಿ ಮತ್ತು ಇತರ ಪ್ರಕಟಣೆಗಳು ಸಾಕಷ್ಟಿರುವುದರಿಂದ ಬೇಡಿಕೆಯ ಕುರಿತು ಖಚಿತವಿಲ್ಲ ಎಂದು ಈಟಿವಿ ಭಾರತದ ಜೊತೆಗೆ ದೂರವಾಣಿ ಮೂಲಕ ಮಣಿಪಾಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್‌ದಾಸ್ ಪೈ ಹೇಳಿದರು.

ದೂರವಾಣಿ ಮೂಲಕ ಮಾತನಾಡಿದ ಮೋಹನ್‌ದಾಸ್ ಪೈ

ಹೆಚ್ಚುತ್ತಿರುವ ಸಾಲಗಳನ್ನು ಸುಧಾರಿಸಲು ಸುಮಾರು 4.5 ಲಕ್ಷ ಕೋಟಿ ಹೆಚ್ಚುವರಿ ಸಾಲಕ್ಕೆ ಅನುಮತಿ ನೀಡುವ ಮೂಲಕ ಕೇಂದ್ರವು ಹೊಸ ಸುಧಾರಣೆಗಳನ್ನು ತಂದಿದೆ. ಹೀಗಾಗಿ ದೊಡ್ಡ ಪ್ರಮಾಣದ ಸುಧಾರಣಾ ಕಾರ್ಯಕ್ಕಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ಭರವಸೆ ನೀಡಿದಂತೆ ಲ್ಯಾಂಡ್, ಲಿಕ್ವಿಡಿಟಿ, ಉದ್ಯೋಗ ಮತ್ತು ತಂತ್ರಜ್ಞಾನವನ್ನು ಬಳಸುವ ವ್ಯವಹಾರಗಳಲ್ಲಿ ಸುಧಾರಣೆ ತರಲು ಪ್ಯಾಕೇಜ್‌ನಲ್ಲಿ ಕೊಡುಗೆ ನೀಡಬಹುದು ಎಂದರು.

ಸಮಸ್ಯೆಗಳನ್ನು ಅನುಭವಿಸುತ್ತಿರುವ ವಾಯುಯಾನ ಉದ್ಯಮ, ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳ ಕುರಿತು ಯಾವುದೇ ಮಾತುಕತೆ ನಡೆದಿಲ್ಲ. ಕೈಗಾರಿಕೆಗಳ ಎಲ್ಲಾ ಸಾಲದ ಕಂತುಗಳನ್ನು ಒಂದು ವರ್ಷದವರೆಗೆ ಮುಂದೂಡಲಾಗುವುದು ಮತ್ತು ನಿಯಮಗಳನ್ನು ಪುನರ್ ​ರಚಿಸಲಾಗುವುದು ಎಂದು ಆರ್‌ಬಿಐ ಹೇಳಿದರೆ ಉತ್ತಮ ಎಂದು ಅವರು ಹೇಳಿದರು.

ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಸೂಕ್ಷ್ಮವಾಗಿ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಇದೊಂದು ದೊಡ್ಡಮಟ್ಟದ ಸುಧಾರಣಾ ಕಾರ್ಯವಾಗಲಿದೆ. ತೆರಿಗೆ ಸಂಗ್ರಹವು ಈ ವರ್ಷ 25-30%ಕ್ಕೆ ಇಳಿಯಬಹುದು ಎಂದು ಹೇಳಿದರು.

ಸಾರ್ವಜನಿಕ ವಲಯದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಗೆ ಅವಕಾಶ ನೀಡಿದ್ದನ್ನು ಅವರು ಶ್ಲಾಘಿಸಿದರು.

ಬೆಂಗಳೂರು/ಹೈದರಾಬಾದ್: ವಿಶೇಷ ಪ್ಯಾಕೇಜ್ ಪ್ರಕಟಣೆಯು ಪೂರೈಕೆಯ ಸಮಸ್ಯೆಗಳನ್ನು ಪರಿಹರಿಸಲಿದೆ. ಆದರೆ ಡಿಬಿಟಿ ಮತ್ತು ಇತರ ಪ್ರಕಟಣೆಗಳು ಸಾಕಷ್ಟಿರುವುದರಿಂದ ಬೇಡಿಕೆಯ ಕುರಿತು ಖಚಿತವಿಲ್ಲ ಎಂದು ಈಟಿವಿ ಭಾರತದ ಜೊತೆಗೆ ದೂರವಾಣಿ ಮೂಲಕ ಮಣಿಪಾಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ್‌ದಾಸ್ ಪೈ ಹೇಳಿದರು.

ದೂರವಾಣಿ ಮೂಲಕ ಮಾತನಾಡಿದ ಮೋಹನ್‌ದಾಸ್ ಪೈ

ಹೆಚ್ಚುತ್ತಿರುವ ಸಾಲಗಳನ್ನು ಸುಧಾರಿಸಲು ಸುಮಾರು 4.5 ಲಕ್ಷ ಕೋಟಿ ಹೆಚ್ಚುವರಿ ಸಾಲಕ್ಕೆ ಅನುಮತಿ ನೀಡುವ ಮೂಲಕ ಕೇಂದ್ರವು ಹೊಸ ಸುಧಾರಣೆಗಳನ್ನು ತಂದಿದೆ. ಹೀಗಾಗಿ ದೊಡ್ಡ ಪ್ರಮಾಣದ ಸುಧಾರಣಾ ಕಾರ್ಯಕ್ಕಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ಭರವಸೆ ನೀಡಿದಂತೆ ಲ್ಯಾಂಡ್, ಲಿಕ್ವಿಡಿಟಿ, ಉದ್ಯೋಗ ಮತ್ತು ತಂತ್ರಜ್ಞಾನವನ್ನು ಬಳಸುವ ವ್ಯವಹಾರಗಳಲ್ಲಿ ಸುಧಾರಣೆ ತರಲು ಪ್ಯಾಕೇಜ್‌ನಲ್ಲಿ ಕೊಡುಗೆ ನೀಡಬಹುದು ಎಂದರು.

ಸಮಸ್ಯೆಗಳನ್ನು ಅನುಭವಿಸುತ್ತಿರುವ ವಾಯುಯಾನ ಉದ್ಯಮ, ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳ ಕುರಿತು ಯಾವುದೇ ಮಾತುಕತೆ ನಡೆದಿಲ್ಲ. ಕೈಗಾರಿಕೆಗಳ ಎಲ್ಲಾ ಸಾಲದ ಕಂತುಗಳನ್ನು ಒಂದು ವರ್ಷದವರೆಗೆ ಮುಂದೂಡಲಾಗುವುದು ಮತ್ತು ನಿಯಮಗಳನ್ನು ಪುನರ್ ​ರಚಿಸಲಾಗುವುದು ಎಂದು ಆರ್‌ಬಿಐ ಹೇಳಿದರೆ ಉತ್ತಮ ಎಂದು ಅವರು ಹೇಳಿದರು.

ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಸೂಕ್ಷ್ಮವಾಗಿ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಇದೊಂದು ದೊಡ್ಡಮಟ್ಟದ ಸುಧಾರಣಾ ಕಾರ್ಯವಾಗಲಿದೆ. ತೆರಿಗೆ ಸಂಗ್ರಹವು ಈ ವರ್ಷ 25-30%ಕ್ಕೆ ಇಳಿಯಬಹುದು ಎಂದು ಹೇಳಿದರು.

ಸಾರ್ವಜನಿಕ ವಲಯದಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಗೆ ಅವಕಾಶ ನೀಡಿದ್ದನ್ನು ಅವರು ಶ್ಲಾಘಿಸಿದರು.

Last Updated : May 18, 2020, 10:34 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.