ಜೈಪುರ : ಗುಜರಾತ್ ಜುನಾಗಡದ ಶಕರ್ಬಾಗ್ ಮೃಗಾಲಯದಿಂದ ಏಷ್ಯಾಟಿಕ್ ಸಿಂಹಿಣಿ 'ಸೃಷ್ಟಿ'ಯನ್ನು ಜಿಲ್ಲೆಯ ನಹರ್ಗಡ ಜೈವಿಕ ಉದ್ಯಾನವನಕ್ಕೆ ಕರೆತರಲಾಗುತ್ತಿದೆ. ಬುಧವಾರ ರಾತ್ರಿಯ ವೇಳೆ ಉದ್ಯಾನ ತಲುಪುವ ಸಾಧ್ಯತೆಯಿದೆ.
ಶಕರ್ಬಾಗ್ ಮೃಗಾಲಯದಲ್ಲಿದ್ದ ಏಕೈಕ ಏಷ್ಯಾಟಿಕ್ ಸಿಂಹಿಣಿ 'ತೇಜಿಕ' ಕಳೆದ ವರ್ಷ ಎರಡು ಮರಿಗಳಿಗೆ ಜನ್ಮ ನೀಡಿದ ಬಳಿಕ ಮೃತಪಟ್ಟಿತ್ತು. ಹೀಗಾಗಿ, ಎರಡು ಸಿಂಹದ ಮರಿಗಳನ್ನು ನಹರ್ಗಡಕ್ಕೆ ಸ್ಥಳಾಂತರಿಸಲಾಗ್ತಿದೆ. ಇಲ್ಲಿ, ತ್ರಿಪುರ ಸಿಂಹಿಣಿ ಜೊತೆ ಸೃಷ್ಟಿ ಸೇರಿಕೊಳ್ಳಲಿದೆ.
ಓದಿ : ಅಸ್ಸೋಂ-ಮಿಜೋರಾಂ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ: ಮನೆಗಳಿಗೆ ಬೆಂಕಿ
ಈ ಬಾರಿ ಒಂದು ವರ್ಷದ ಒಂದು ಸಿಂಹಿಣಿಯನ್ನು ಕರೆತಂದರೆ, ಮುಂದಿನ 6 ತಿಂಗಳೊಳಗೆ ಮತ್ತೊಂದು ಸಿಂಹಿಣಿಯನ್ನು ಕರೆ ತರಲಾಗುತ್ತದೆ. ಸಿಂಹಿಣಿಗಳ ಬದಲಾಗಿ ನಹರ್ಗಡ ಉದ್ಯಾನವನದಿಂದ ಎರಡು ತೋಳದ ಮರಿಗಳನ್ನು ಕಳುಹಿಸಿಕೊಡಲಾಗುತ್ತದೆ.