ETV Bharat / bharat

ವಿದೇಶದಲ್ಲಿ ಸಿಲುಕಿರುವವರನ್ನು ಕರೆತರಲು ಸರ್ಕಾರಕ್ಕೆ ನಿರ್ದೇಶನ ನೀಡಿ: ಸುಪ್ರೀಂಗೆ ಅರ್ಜಿ

author img

By

Published : Apr 11, 2020, 6:53 PM IST

ವಿಶ್ವದಾದ್ಯಂತ ಕೊರೊನಾ ಭೀತಿ ಎದುರಾಗಿದ್ದ ಬೆನ್ನಲ್ಲೆ ಎಲ್ಲ ಅಂತಾರಾಷ್ಟ್ರೀಯ ವಿಮಾನಯಾನಗಳು ತಮ್ಮ ಸೇವೆ ಮೊಟಕುಗೊಳಿಸಿದ್ದವು. ಇದರಿಂದಾಗಿ ವಿದೇಶಗಳಲ್ಲಿರುವ ಭಾರತೀಯ ನಾಗರೀಕರು ತಾಯ್ನಾಡಿಗೆ ಬರಲಾಗದೇ ಸಿಲುಕಿದ್ದರು. ಇಂತಹವರನ್ನು ಮರಳಿ ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂಕೋರ್ಟ್​ಗೆ ಕೇರಳದ ಶಾಸಕ ಎಂ.ಕೆ ರಾಘವನ್​​​ ಮನವಿ ಮಾಡಿದ್ದಾರೆ.

Kerala MP moves SC, seeks evacuation of Indian citizens stranded in gulf countries
ವಿದೇಶದಲ್ಲಿ ಸಿಲುಕಿರುವವರನ್ನು ಕರೆತರಲು ಸರ್ಕಾರಕ್ಕೆ ನಿರ್ದೇಶನ ನಿಡುವಂತೆ ಸುಪ್ರೀಂಕೋರ್ಟ್​​ ಮೊರೆ

ನವದೆಹಲಿ: ಕೊರೊನಾ ವೈರಸ್ ಭಾರತದಾದ್ಯಂತ ಭೀತಿ ಹುಟ್ಟುಹಾಕಿದೆ. ದೇಶದೆಲ್ಲೆಡೆ ಲಾಕ್​ಡೌನ್ ಜಾರಿ ಮಾಡಲಾಗಿದ್ದು, ವೈರಸ್ ಹರಡುವಿಕೆಯನ್ನು ತಕ್ಕ ಮಟ್ಟಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ನಡುವೆ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆಸಿಕೊಳ್ಳಲು ಕೇಂದ್ರ ಸರ್ಕಾರ ವಿಶೇಷ ತಂಡ ರಚಿಸಬೇಕು ಎಂದು ಸುಪ್ರೀಂಕೋರ್ಟ್​​ನ ಮೊರೆ ಹೋಗಲಾಗಿದೆ.

ಕೇರಳದ ಕೋಯಿಕ್ಕೋಡ್​​​​ನ ಕಾಂಗ್ರೆಸ್ ಶಾಸಕ ಎಂ,ಕೆ ರಾಘವನ್​ ಸುಪ್ರೀಂಕೋರ್ಟ್​​ಗೆ ಮನವಿ ಮಾಡಿದ್ದಾರೆ. ವಿದೇಶಗಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ವಾಪಾಸು ಕರೆಸಿಕೊಳ್ಳಲು ಅನೂಕೂಲವಾಗುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು. ಸೌದಿ ಅರೇಬಿಯಾ, ಓಮನ್​, ಕತಾರ್​ನಿಂದ ವಾಪಾಸಾಗಲು ಸಾಧ್ಯವಾಗದೇ ಇರುವ ನಾಗರಿಕರನ್ನು ಸ್ಥಳಾಂತರಿಸಬೇಕಿದೆ ಎಂದಿದ್ದಾರೆ.

ಅಲ್ಲದೇ ಕೊಲ್ಲಿ ರಾಷ್ಟ್ರದಲ್ಲಿ ಸಿಲುಕಿರುವ ನಾಗರಿಕರು ತಮ್ಮ ಸ್ವಂತ ಖರ್ಚಿನಲ್ಲಿ ವಾಪಸ್​ ಆಗಲು ಇಚ್ಚಿಸುತ್ತಿದ್ದರೆ ಅಂತವರಿಗಾಗಿ ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಬೇಕು ಅಂತ ಅರ್ಜಿಯಲ್ಲಿ ತಿಳಿಸಿದ್ದಾರೆ.

ಇದಿಷ್ಟೇ ಅಲ್ಲದೇ ವಿದೇಶದಲ್ಲಿ ಸಿಲುಕಿರುವ ಭಾರತೀಯರಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದಂತೆ ಆರೋಗ್ಯ ತಪಾಸಣೆ ಹಾಗೂ ಸೌಲಭ್ಯ ನೀಡಲಾಗಿತ್ತೆ ಎಂಬುದನ್ನು ಅಧ್ಯಯನ ತಂಡ ಖಚಿತಪಡಿಸಿಕೊಳ್ಳಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ನವದೆಹಲಿ: ಕೊರೊನಾ ವೈರಸ್ ಭಾರತದಾದ್ಯಂತ ಭೀತಿ ಹುಟ್ಟುಹಾಕಿದೆ. ದೇಶದೆಲ್ಲೆಡೆ ಲಾಕ್​ಡೌನ್ ಜಾರಿ ಮಾಡಲಾಗಿದ್ದು, ವೈರಸ್ ಹರಡುವಿಕೆಯನ್ನು ತಕ್ಕ ಮಟ್ಟಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ನಡುವೆ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆಸಿಕೊಳ್ಳಲು ಕೇಂದ್ರ ಸರ್ಕಾರ ವಿಶೇಷ ತಂಡ ರಚಿಸಬೇಕು ಎಂದು ಸುಪ್ರೀಂಕೋರ್ಟ್​​ನ ಮೊರೆ ಹೋಗಲಾಗಿದೆ.

ಕೇರಳದ ಕೋಯಿಕ್ಕೋಡ್​​​​ನ ಕಾಂಗ್ರೆಸ್ ಶಾಸಕ ಎಂ,ಕೆ ರಾಘವನ್​ ಸುಪ್ರೀಂಕೋರ್ಟ್​​ಗೆ ಮನವಿ ಮಾಡಿದ್ದಾರೆ. ವಿದೇಶಗಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ವಾಪಾಸು ಕರೆಸಿಕೊಳ್ಳಲು ಅನೂಕೂಲವಾಗುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು. ಸೌದಿ ಅರೇಬಿಯಾ, ಓಮನ್​, ಕತಾರ್​ನಿಂದ ವಾಪಾಸಾಗಲು ಸಾಧ್ಯವಾಗದೇ ಇರುವ ನಾಗರಿಕರನ್ನು ಸ್ಥಳಾಂತರಿಸಬೇಕಿದೆ ಎಂದಿದ್ದಾರೆ.

ಅಲ್ಲದೇ ಕೊಲ್ಲಿ ರಾಷ್ಟ್ರದಲ್ಲಿ ಸಿಲುಕಿರುವ ನಾಗರಿಕರು ತಮ್ಮ ಸ್ವಂತ ಖರ್ಚಿನಲ್ಲಿ ವಾಪಸ್​ ಆಗಲು ಇಚ್ಚಿಸುತ್ತಿದ್ದರೆ ಅಂತವರಿಗಾಗಿ ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಬೇಕು ಅಂತ ಅರ್ಜಿಯಲ್ಲಿ ತಿಳಿಸಿದ್ದಾರೆ.

ಇದಿಷ್ಟೇ ಅಲ್ಲದೇ ವಿದೇಶದಲ್ಲಿ ಸಿಲುಕಿರುವ ಭಾರತೀಯರಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದಂತೆ ಆರೋಗ್ಯ ತಪಾಸಣೆ ಹಾಗೂ ಸೌಲಭ್ಯ ನೀಡಲಾಗಿತ್ತೆ ಎಂಬುದನ್ನು ಅಧ್ಯಯನ ತಂಡ ಖಚಿತಪಡಿಸಿಕೊಳ್ಳಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.