ETV Bharat / bharat

ಆರೋಗ್ಯಯುತ ವ್ಯಕ್ತಿಯ ಮೇಲೆ ಶಸ್ತ್ರಚಿಕಿತ್ಸೆಗೆ ಯತ್ನಿಸಿದ ರೀತಿಯಿದೆ ಕೇಂದ್ರದ ನಿರ್ಧಾರ: ಕಮಲ್‌ ಹಾಸನ್‌

author img

By

Published : Dec 11, 2019, 5:24 PM IST

ಕೇಂದ್ರ ಸರ್ಕಾರ ದೇಶವ್ಯಾಪಿ ಜಾರಿಗೆ ತರಲು ನಿರ್ಧರಿಸಿರುವ 'ಪೌರತ್ವ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ' ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

Kamal Haasan
ನಟ ಕಮಲ್​ ಹಾಸನ್​​

ಚೆನ್ನೈ(ತಮಿಳುನಾಡು): ದೇಶಾದ್ಯಂತ ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಪರ-ವಿರೋಧ ಪ್ರತಿಕ್ರಿಯೆ, ಪ್ರತಿಭಟನೆಗಳು ನಡೆಯುತ್ತಿವೆ. ಇದೇ ವಿಚಾರವಾಗಿ ದಕ್ಷಿಣ ಭಾರತದ ಮೇರು ನಟ ಕಮಲ್​ ಹಾಸನ್ ಕೇಂದ್ರ ಸರ್ಕಾರದ ವಿರುದ್ಧ​ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಈ ಮಸೂದೆಯನ್ನು ಟೀಕಿಸಿದ ಅವರು, ಇದು ಆರೋಗ್ಯಯುತ ವ್ಯಕ್ತಿಯ ಮೇಲೆ ಶಸ್ತ್ರಚಿಕಿತ್ಸೆ ಮಾಡಿದ ರೀತಿಯಲ್ಲಿದೆ ಎಂದು ಕಿಡಿ ಕಾರಿದ್ದಾರೆ.

  • Kamal Haasan, MNM: We have a duty to amend the Constitution if there was any error, but to attempt to amend a flawless Constitution is a betrayal. Centre's law and plan is akin to a crime of attempting surgery on a healthy person. Those who attempted and failed are trying again. https://t.co/WcfIcF4LVr

    — ANI (@ANI) December 11, 2019 " class="align-text-top noRightClick twitterSection" data=" ">

ನಟ ಹಾಗು ಮಕ್ಕಳ್ ನೀಧಿ ಮಯಂ ಪಕ್ಷದ ಮುಖ್ಯಸ್ಥ ಕಮಲ್​ ಹಾಸನ್ ಪ್ರತಿಕ್ರಿಯಿಸಿ, ಇದೊಂದು ಮೂರ್ಖತನದ ನಿರ್ಧಾರ. ಯಂಗ್​ ಇಂಡಿಯಾ ಆದಷ್ಟು ಬೇಗ ಈ ನಿರ್ಧಾರ ​ತಿರಸ್ಕರಿಸಲಿದೆ. ನಿಮ್ಮ ಹಳೇ ಯೋಜನೆ ಇಲ್ಲಿ ಕಾರ್ಯರೂಪಕ್ಕೆ ತರಲು ಇದು ಪ್ರಾಚೀನ ಭಾರತವಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂವಿಧಾನದಲ್ಲಿ ಯಾವುದಾದರೂ ಬದಲಾವಣೆಗಳಿದ್ದರೆ ಅವುಗಳನ್ನ ತಿದ್ದುಪಡಿ ಮೂಲಕ ಸರಿ ಮಾಡಬಹುದು. ಆದರೆ ಇಷ್ಟೊಂದು ದೊಡ್ಡಮಟ್ಟದ ಮಸೂದೆ ತಿದ್ದುಪಡಿ ಮಾಡುತ್ತಿರುವುದು ನಿಜಕ್ಕೂ ವಿಷಾದದ ವಿಚಾರ. ಈ ಕ್ರಮ ತೆಗೆದುಕೊಳ್ಳುವುದರಿಂದ ಕೇಂದ್ರ ಸರ್ಕಾರ ಅತಿದೊಡ್ಡ ಅಪರಾಧ ಎಸಗುತ್ತಿದೆ ಎಂದು ಟೀಕಿಸಿದ್ದಾರೆ.

ಚೆನ್ನೈ(ತಮಿಳುನಾಡು): ದೇಶಾದ್ಯಂತ ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಪರ-ವಿರೋಧ ಪ್ರತಿಕ್ರಿಯೆ, ಪ್ರತಿಭಟನೆಗಳು ನಡೆಯುತ್ತಿವೆ. ಇದೇ ವಿಚಾರವಾಗಿ ದಕ್ಷಿಣ ಭಾರತದ ಮೇರು ನಟ ಕಮಲ್​ ಹಾಸನ್ ಕೇಂದ್ರ ಸರ್ಕಾರದ ವಿರುದ್ಧ​ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಈ ಮಸೂದೆಯನ್ನು ಟೀಕಿಸಿದ ಅವರು, ಇದು ಆರೋಗ್ಯಯುತ ವ್ಯಕ್ತಿಯ ಮೇಲೆ ಶಸ್ತ್ರಚಿಕಿತ್ಸೆ ಮಾಡಿದ ರೀತಿಯಲ್ಲಿದೆ ಎಂದು ಕಿಡಿ ಕಾರಿದ್ದಾರೆ.

  • Kamal Haasan, MNM: We have a duty to amend the Constitution if there was any error, but to attempt to amend a flawless Constitution is a betrayal. Centre's law and plan is akin to a crime of attempting surgery on a healthy person. Those who attempted and failed are trying again. https://t.co/WcfIcF4LVr

    — ANI (@ANI) December 11, 2019 " class="align-text-top noRightClick twitterSection" data=" ">

ನಟ ಹಾಗು ಮಕ್ಕಳ್ ನೀಧಿ ಮಯಂ ಪಕ್ಷದ ಮುಖ್ಯಸ್ಥ ಕಮಲ್​ ಹಾಸನ್ ಪ್ರತಿಕ್ರಿಯಿಸಿ, ಇದೊಂದು ಮೂರ್ಖತನದ ನಿರ್ಧಾರ. ಯಂಗ್​ ಇಂಡಿಯಾ ಆದಷ್ಟು ಬೇಗ ಈ ನಿರ್ಧಾರ ​ತಿರಸ್ಕರಿಸಲಿದೆ. ನಿಮ್ಮ ಹಳೇ ಯೋಜನೆ ಇಲ್ಲಿ ಕಾರ್ಯರೂಪಕ್ಕೆ ತರಲು ಇದು ಪ್ರಾಚೀನ ಭಾರತವಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂವಿಧಾನದಲ್ಲಿ ಯಾವುದಾದರೂ ಬದಲಾವಣೆಗಳಿದ್ದರೆ ಅವುಗಳನ್ನ ತಿದ್ದುಪಡಿ ಮೂಲಕ ಸರಿ ಮಾಡಬಹುದು. ಆದರೆ ಇಷ್ಟೊಂದು ದೊಡ್ಡಮಟ್ಟದ ಮಸೂದೆ ತಿದ್ದುಪಡಿ ಮಾಡುತ್ತಿರುವುದು ನಿಜಕ್ಕೂ ವಿಷಾದದ ವಿಚಾರ. ಈ ಕ್ರಮ ತೆಗೆದುಕೊಳ್ಳುವುದರಿಂದ ಕೇಂದ್ರ ಸರ್ಕಾರ ಅತಿದೊಡ್ಡ ಅಪರಾಧ ಎಸಗುತ್ತಿದೆ ಎಂದು ಟೀಕಿಸಿದ್ದಾರೆ.

Intro:Body:

ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಕಮಲ್​ ಹಾಸನ್​ ಕಿಡಿ... ಇದೊಂದು ಮೂರ್ಖತನದ ನಿರ್ಧಾರ ಎಂದ ನಟ! 



ಚೆನ್ನೈ: ದೇಶಾದ್ಯಂತ ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, ಈಶಾನ್ಯ ಭಾರತದಲ್ಲಿ ಈ ಮಸೂದೆ ವಿರುದ್ಧ ದೊಡ್ಡ ಪ್ರಮಾಣದ ಹೋರಾಟವೇ ಆರಂಭಗೊಂಡಿದೆ. ಇದರ ಮಧ್ಯೆ ಕೇಂದ್ರ ಸರ್ಕಾರದ ವಿರುದ್ಧ ದಕ್ಷಿಣ ಭಾರತದ ಮೇರು ನಟ ಕಮಲ್​ ಹಾಸನ್​ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. 



ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಮಸೂದೆ ವಿರುದ್ಧ ಮಾತನಾಡಿರುವ ನಟ, ಮಕ್ಕಲ್ ನೀಧಿ ಮಯಂ ಪಕ್ಷದ ಮುಖ್ಯಸ್ಥ ಮಕಲ್​ ಕಮಲ್​ ಹಾಸನ್, ಇದೊಂದು ಮೂರ್ಖತನದ ನಿರ್ಧಾರವಾಗಿದ್ದು, ಯಂಗ್​ ಇಂಡಿಯಾ ಆದಷ್ಟು ಬೇಗ ಈ ನಿರ್ಧಾರ ​ತಿರಸ್ಕಾರ ಮಾಡಲಿದ್ದಾರೆ. ನಿಮ್ಮ ಹಳೇ ಯೋಜನೆ ಇಲ್ಲಿ ಕಾರ್ಯರೂಪಕ್ಕೆ ತರಲು ಇದು ಪ್ರಾಚೀನ ಭಾರತವಲ್ಲ ಎಂದಿದ್ದಾರೆ. 



ಸಂವಿಧಾನದಲ್ಲಿ ಯಾವುದಾದರೂ ಬದಲಾವಣೆಗಳಿದ್ದರೆ ಅವುಗಳನ್ನ ತಿದ್ದುಪಡಿ ಮಾಡಬಹುದು. ಆದರೆ ಇಷ್ಟೊಂದು ದೊಡ್ಡ ಮಟ್ಟದ ಮಸೂದೆ ತಿದ್ದುಪಡಿ ಮಾಡುತ್ತಿರುವುದು ನಿಜಕ್ಕೂ ವಿಷಾದದ ವಿಚಾರ. ಈ ಕ್ರಮ ತೆಗೆದುಕೊಳ್ಳುವುದರಿಂದ ಕೇಂದ್ರ ಸರ್ಕಾರ ಅತಿದೊಡ್ಡ ಕ್ರೈಂ ಮಾಡುತ್ತಿದೆ ಎಂದು ಹೇಳಿದ್ದಾರೆ. 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.