ETV Bharat / bharat

ಮಿತಿಮೀರಿದ ಜೆಎನ್​​ಯು ವಿದ್ಯಾರ್ಥಿಗಳ ಹೋರಾಟ.. ಉಪಕುಲಪತಿ ಕಾರಿಗೆ ಕಲ್ಲು ತೂರಾಟ.. - ಜವಾಹರಲಾಲ್​ ನೆಹರೂ ವಿಶ್ವವಿದ್ಯಾಲಯ

15-20 ವಿದ್ಯಾರ್ಥಿಗಳ ಗುಂಪೊಂದು ಉಪಕುಲಪತಿ ಜಗದೀಶ್​ ಅವರ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಅವರ ಕಾರಿನ ಮುಂಭಾಗದ ಗಾಜು ಜಖಂಗೊಂಡಿದೆ. ಬಳಿಕ ಕ್ಯಾಂಪಸ್​ ಆವರಣದಲ್ಲಿದ್ದ ಭದ್ರತಾ ಸಿಬ್ಬಂದಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.

JNU VC says students tried to attack him on campus
JNU VC says students tried to attack him on campus
author img

By

Published : Dec 14, 2019, 8:35 PM IST

ನವದೆಹಲಿ: ಹಾಸ್ಟೆಲ್​ ಶುಲ್ಕ ಹೆಚ್ಚಳ ವಿರೋಧಿಸಿ ಜವಾಹರಲಾಲ್​ ನೆಹರೂ ವಿಶ್ವವಿದ್ಯಾಲಯದ (ಜೆಎನ್​ಯು) ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಇಂದು ವಿವಿ ಉಪ ಕುಲಪತಿ ಮಾಮಿಡಾಳ ಜಗದೀಶ್​ಕುಮಾರ್​ ಅವರ ಕಾರಿನ ಮೇಲೆ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದಾರೆ.

15-20 ವಿದ್ಯಾರ್ಥಿಗಳ ಗುಂಪೊಂದು ಉಪಕುಲಪತಿ ಜಗದೀಶ್​ ಅವರ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಅವರ ಕಾರಿನ ಮುಂಭಾಗದ ಗಾಜು ಜಖಂಗೊಂಡಿದೆ. ಬಳಿಕ ಕ್ಯಾಂಪಸ್​ ಆವರಣದಲ್ಲಿದ್ದ ಭದ್ರತಾ ಸಿಬ್ಬಂದಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.

ಪರೀಕ್ಷೆಗಳು ನಡೆಯುತ್ತಿದ್ದ ಸಲುವಾಗಿ ಪರಿಶೀಲನೆಗಾಗಿ ಅಲ್ಲಿಗೆ ಹೋಗಿದ್ದೆ. ಬಳಿಕ ಆಡಳಿತ ವಿಭಾಗದ ಕಟ್ಟಡದತ್ತ ಹಿಂದಿರುಗಿದಾಗ 15-20 ವಿದ್ಯಾರ್ಥಿಗಳ ಗುಂಪು ಸುತ್ತುವರಿದು ದಾಳಿ ನಡೆಸಿತು. ಆದರೆ, ವಿವಿ ಭದ್ರತಾ ಸಿಬ್ಬಂದಿ, ಪೊಲೀಸರು ನನ್ನನ್ನು ರಕ್ಷಿಸಿದರು ಎಂದು ಉಪ ಕುಲಪತಿ ಜಗದೀಶ್​ ಕುಮಾರ್​ ಘಟನೆ ವಿವರಿಸಿದರು.

ನವದೆಹಲಿ: ಹಾಸ್ಟೆಲ್​ ಶುಲ್ಕ ಹೆಚ್ಚಳ ವಿರೋಧಿಸಿ ಜವಾಹರಲಾಲ್​ ನೆಹರೂ ವಿಶ್ವವಿದ್ಯಾಲಯದ (ಜೆಎನ್​ಯು) ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಇಂದು ವಿವಿ ಉಪ ಕುಲಪತಿ ಮಾಮಿಡಾಳ ಜಗದೀಶ್​ಕುಮಾರ್​ ಅವರ ಕಾರಿನ ಮೇಲೆ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದಾರೆ.

15-20 ವಿದ್ಯಾರ್ಥಿಗಳ ಗುಂಪೊಂದು ಉಪಕುಲಪತಿ ಜಗದೀಶ್​ ಅವರ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಅವರ ಕಾರಿನ ಮುಂಭಾಗದ ಗಾಜು ಜಖಂಗೊಂಡಿದೆ. ಬಳಿಕ ಕ್ಯಾಂಪಸ್​ ಆವರಣದಲ್ಲಿದ್ದ ಭದ್ರತಾ ಸಿಬ್ಬಂದಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.

ಪರೀಕ್ಷೆಗಳು ನಡೆಯುತ್ತಿದ್ದ ಸಲುವಾಗಿ ಪರಿಶೀಲನೆಗಾಗಿ ಅಲ್ಲಿಗೆ ಹೋಗಿದ್ದೆ. ಬಳಿಕ ಆಡಳಿತ ವಿಭಾಗದ ಕಟ್ಟಡದತ್ತ ಹಿಂದಿರುಗಿದಾಗ 15-20 ವಿದ್ಯಾರ್ಥಿಗಳ ಗುಂಪು ಸುತ್ತುವರಿದು ದಾಳಿ ನಡೆಸಿತು. ಆದರೆ, ವಿವಿ ಭದ್ರತಾ ಸಿಬ್ಬಂದಿ, ಪೊಲೀಸರು ನನ್ನನ್ನು ರಕ್ಷಿಸಿದರು ಎಂದು ಉಪ ಕುಲಪತಿ ಜಗದೀಶ್​ ಕುಮಾರ್​ ಘಟನೆ ವಿವರಿಸಿದರು.

Intro:Body:

national


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.