ETV Bharat / bharat

ಇಂಡಿಯನ್ ಜೇಮ್ಸ್​ ಬಾಂಡ್​ 'ಅಜಿತ್ ದೋವಲ್'​ಗೆ ಜನ್ಮದಿನದ ಸಂಭ್ರಮ - ಅಜಿತ್ ದೋವಲ್,

ಸರ್ಜಿಕಲ್ ಸ್ಟ್ರೈಕ್‌ನಲ್ಲಷ್ಟೇ ಅಲ್ಲದೆ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಬೇಹುಗಾರಿಕಾ ಮತ್ತು ರಾಜತಾಂತ್ರಿಕ ವಿದ್ಯಮಾನಗಳಲ್ಲಿ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸಿದ 'ಸೈಲೆಂಟ್ ಕಿಲ್ಲರ್' ಎಂದೇ ಹೆಸರುವಾಸಿಯಾದ ದೋವಲ್​ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ.

ajit doval News  ajit doval Birthday  NSA ajit doval Birthday  ajit doval in Uttarakhand  Uttarakhand Hindi Latest News  James Bond of India Ajit Doval  NSA Ajit Doval's 76th Birthday  अजीत डोभाल का आज 76वां जन्मदिन  India NSA Ajit Doval's 76th birthday today  NSA AJIT DOVAL TURNS 76 TODAY  ಅಜಿತ್ ದೋವಲ್​ಗೆ ಜನ್ಮದಿನದ ಸಂಭ್ರಮ,  ಇಂಡಿಯನ್ ಜೇಮ್ಸ್​ ಬಾಂಡ್​'ಅಜಿತ್ ದೋವಲ್​ಗೆ ಜನ್ಮದಿನದ ಸಂಭ್ರಮ,  ಇಂಡಿಯನ್ ಜೇಮ್ಸ್​ ಬಾಂಡ್​'ಅಜಿತ್ ದೋವಲ್​ಗೆ 76ನೇ ಜನ್ಮದಿನದ ಸಂಭ್ರಮ,  ಅಜಿತ್ ದೋವಲ್,  ಅಜಿತ್ ದೋವಲ್ ಸುದ್ದಿ,
ಸಂಗ್ರಹ ಚಿತ್ರ
author img

By

Published : Jan 20, 2021, 9:50 AM IST

ನವದೆಹಲಿ: ನೇರ, ದಿಟ್ಟ ಮಾತು, ಯುದ್ಧಕ್ಕಿಂತ ಮಿಗಿಲಾದ ಬುದ್ಧಿವಂತಿಕೆ, ಬರೀ ಕೌಶಲ್ಯಗಳಿಂದಲ್ಲೇ ಶತ್ರು ರಾಷ್ಟ್ರಗಳಿಗೆ ನಡುಕ ಹುಟ್ಟಿಸಬಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ 76ನೇ ಜನ್ಮದಿನ.

ನೆರೆಯ ರಾಷ್ಟ್ರಗಳಿಂದ ದೇಶಕ್ಕೆ ಆಪತ್ತು ಬಂದಾಗಲೂ, ಸಾಗರೋತ್ತರ ರಾಷ್ಟ್ರಗಳಲ್ಲಿ ಭಾರತೀಯರ ಸಂಕಷ್ಟದಲ್ಲಿ ಸಿಲುಕಿಕೊಂಡಾಗಲೂ ದೋವಲ್​ ತೆರೆಮರೆಯಲ್ಲಿ ನಿಂತು ಶ್ರಮಿಸುತ್ತಿದ್ದಾರೆ.

1945ರ ಜನವರಿ 20ರಂದು ಓರ್ವ ಮಿಲಿಟರಿ ಅಧಿಕಾರಿಯ ಮಗನಾಗಿ ಉತ್ತರಾಖಂಡದ ದೋವಲ್ ಎಂಬಲ್ಲಿ ಜನಿಸಿದ್ದರು. 1968ರಲ್ಲಿ ಭಾರತೀಯ ಪೊಲೀಸ್ ಸೇವೆಯಲ್ಲಿ ಕೇರಳ ಕೇಡರ್ ಆಗಿ ಅಧಿಕಾರ ವಹಿಸಿಕೊಂಡರು.

'ಸೈಲೆಂಟ್ ಕಿಲ್ಲರ್' ಎಂದೇ ಹೆಸರುವಾಸಿಯಾದ ದೋವಲ್​ ಸರ್ಜಿಕಲ್ ಸ್ಟ್ರೈಕ್‌ನಲ್ಲಷ್ಟೇ ಅಲ್ಲದೆ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಬೇಹುಗಾರಿಕಾ ಮತ್ತು ರಾಜತಾಂತ್ರಿಕ ವಿದ್ಯಮಾನಗಳಲ್ಲಿ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸಿದ್ದಾರೆ.

ಪಂಜಾಬ್, ಮಿಜೋರಾಂ ಹಾಗೂ ಜಮ್ಮು - ಕಾಶ್ಮೀರದಲ್ಲಿ ಭುಗಿಲೆದ್ದ ಆಂತರಿಕ ದಂಗೆಗಳನ್ನು ಶಮನ ಮಾಡುವಲ್ಲಿ ಇವರು ಮುಖ್ಯ ಪಾತ್ರವಹಿಸಿದ್ದರು.

ನೆರೆಯ ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ತೆರಳಿ ಕಠಿಣ ಸಂದರ್ಭದಲ್ಲಿ ಗೂಢಾಚಾರಿಕೆ ನಡೆಸಿ ಹಲವು ರಹಸ್ಯಗಳನ್ನು ಭಾರತೀಯ ರಿಸರ್ಚ್​ ಅಂಡ್​​​ ಅನಾಲಿಸಸ್​ ವಿಂಗ್​ (ರಾ) ಗಮನಕ್ಕೆ ತಂದರು. ಇಸ್ಲಾಮಾಬಾದ್‌ನಲ್ಲಿ ಭಾರತೀಯ ಹೈ ಕಮಿಷನ್‌ನಲ್ಲಿ 7 ವರ್ಷ ಕಳೆದ ದೋವಲ್ ವೇಷ ಮರೆಸಿಕೊಂಡು ಗುಪ್ತ ಮಾಹಿತಿಗಳನ್ನು ಕಲೆ ಹಾಕಿದ್ದು, ಇಂಡಿಯನ್​ ರಿಯಲ್​ ಜೇಮ್ಸ್​ ಬಾಂಡ್.

ಅತ್ಯಂತ ಧೈರ್ಯಶಾಲಿಯಾದ ದೋವಲ್ ತಮ್ಮ ಚಾಣಾಕ್ಷ್ಯ ಬುದ್ಧಿಯಿಂದಲೇ ದೇಶದ ಭದ್ರತೆ ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. 2016ರಲ್ಲಿ ಉರಿ ದಾಳಿಗೆ ಪ್ರತೀಕಾರವಾಗಿ ಸರ್ಜಿಕಲ್ ಸ್ಟ್ರೈಕ್ ಮತ್ತು 2019ರಲ್ಲಿ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಬಾಲಾಕೋಟ್ ಮೇಲೆ ನಡೆಸಿದ್ದ ವೈಮಾನಿಕ ದಾಳಿಯ ಹಿಂದೆಯೂ ದೋವಲ್​ ಮಾಸ್ಟರ್‌ಮೈಂಡ್ ಕೆಲಸ ಅಡಗಿದೆ.

ದೋವಲ್ ಸೇವೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರವು 'ಕೀರ್ತಿ ಚಕ್ರ' ಪ್ರಶಸ್ತಿ ನೀಡಿ ಗೌರವಿಸಿದೆ. ಕೀರ್ತಿ ಚಕ್ರ ಪಡೆದ ಮೊದಲ ಪೊಲೀಸ್ ಅಧಿಕಾರಿ ಎಂಬ ಖ್ಯಾತಿಗೆ ದೋವಲ್​ ಪಾತ್ರವಾಗಿದ್ದಾರೆ.

ಮಲ್ಟಿ ಏಜೆನ್ಸಿ ಸೆಂಟರ್ ಮತ್ತು ಜಾಯಿಂಟ್ ಟಾಸ್ಕ್ ಫೋರ್ಸ್ ಆನ್ ಇಂಟೆಲಿಜೆನ್ಸ್‌ನ ಮುಖ್ಯಸ್ಥ ಹಾಗೂ ಸ್ಥಾಪಕರು ಸಹ ದೋವಲ್​ ಆಗಿದ್ದಾರೆ.

ಪ್ರಧಾನಿ ಮೋದಿಯ ಬಲಗೈ ಬಂಟ ಆಗಿರುವುದರಿಂದಲೇ ದಶಕದಿಂದ ದೊಡ್ಡ ತಲೆನೋವಾಗಿದ್ದ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂಪಡೆಯುವಲ್ಲಿ ದೋವಲ್ ಬುದ್ಧಿವಂತಿಕೆಯೂ ಇದೆ.

ಅಜಿತ್​ ದೋವಲ್​ ನಡೆದು ಬಂದ ಹಾದಿ...

  • ಜನವರಿ 20, 1945 ರಂದು ಉತ್ತರಾಖಂಡದ ಪೌರಿ ಗರ್ವಾಲ್​ನಲ್ಲಿ ಜನಿಸಿದರು. ಅವರ ತಂದೆ ಭಾರತೀಯ ಸೇನೆಯಲ್ಲಿದ್ದರು
  • ಅಜ್ಮೀರ್‌ನ ಆರ್ಮಿ ಶಾಲೆಯಿಂದ ಪ್ರಾರಂಭವಾದ ಇವರ ಓದಿನ ಪ್ರಯಾಣ ಆಗ್ರಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿವರೆಗೂ ಮುಂದುವರಿತು
  • 1968ರಲ್ಲಿ ಭಾರತೀಯ ಪೊಲೀಸ್ ಸೇವೆಯಲ್ಲಿ ಕೇರಳ ಕೇಡರ್ ಆಗಿ ಅಧಿಕಾರ ವಹಿಸಿಕೊಂಡರು
  • ಅಜಿತ್ ದೋವಲ್ 1972 ರಲ್ಲಿ ಇಂಟೆಲಿಜೆನ್ಸ್ ಬ್ಯೂರೋಗೆ ಸೇರಿದರು. ಅವರು ಸುಮಾರು ಏಳು ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಗುಪ್ತಚರ ಪತ್ತೇದಾರಿ ಆಗಿ ಸೇವೆ ಸಲ್ಲಿಸಿದ್ದಾರೆ
  • ಪಾಕಿಸ್ತಾನ ವಿರುದ್ಧದ ಸರ್ಜಿಕಲ್ ಸ್ಟ್ರೈಕ್‌ನಲ್ಲಿ ದೋವಲ್​ ಪ್ರಮುಖ ಪಾತ್ರ ವಹಿಸಿದ್ದರು
  • ಜಮ್ಮು ಮತ್ತು ಕಾಶ್ಮೀರದಲ್ಲಿ ಒಳನುಗ್ಗುವವರು ಮತ್ತು ಶಾಂತಿಯನ್ನು ಬಯಸುವ ಜನರ ನಡುವೆ ಕೆಲಸ ಮಾಡಿದ್ದರು. ಈ ವೇಳೆ ಅನೇಕ ಭಯೋತ್ಪಾದಕರನ್ನು ಶರಣಾಗುವಂತೆ ಮಾಡಿದ್ದರು
  • ಮೇ 30, 2014 ರಂದು ಪ್ರಧಾನಿ ನರೇಂದ್ರ ಮೋದಿ ದೇಶದ 5ನೇ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್​ನ್ನು ನೇಮಕ ಮಾಡಿದ್ದರು ಮತ್ತು ಜವಾಬ್ದಾರಿ ವಹಿಸಿದ್ದರು
  • ದೋವಲ್ ಸೇವೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರವು 'ಕೀರ್ತಿ ಚಕ್ರ' ಪ್ರಶಸ್ತಿ ನೀಡಿ ಗೌರವಿಸಿದೆ. ಕೀರ್ತಿ ಚಕ್ರ ಪಡೆದ ಮೊದಲ ಪೊಲೀಸ್ ಅಧಿಕಾರಿ ಎಂಬ ಖ್ಯಾತಿಗೆ ದೋವಲ್​ ಪಾತ್ರವಾಗಿದ್ದಾರೆ

ನವದೆಹಲಿ: ನೇರ, ದಿಟ್ಟ ಮಾತು, ಯುದ್ಧಕ್ಕಿಂತ ಮಿಗಿಲಾದ ಬುದ್ಧಿವಂತಿಕೆ, ಬರೀ ಕೌಶಲ್ಯಗಳಿಂದಲ್ಲೇ ಶತ್ರು ರಾಷ್ಟ್ರಗಳಿಗೆ ನಡುಕ ಹುಟ್ಟಿಸಬಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ 76ನೇ ಜನ್ಮದಿನ.

ನೆರೆಯ ರಾಷ್ಟ್ರಗಳಿಂದ ದೇಶಕ್ಕೆ ಆಪತ್ತು ಬಂದಾಗಲೂ, ಸಾಗರೋತ್ತರ ರಾಷ್ಟ್ರಗಳಲ್ಲಿ ಭಾರತೀಯರ ಸಂಕಷ್ಟದಲ್ಲಿ ಸಿಲುಕಿಕೊಂಡಾಗಲೂ ದೋವಲ್​ ತೆರೆಮರೆಯಲ್ಲಿ ನಿಂತು ಶ್ರಮಿಸುತ್ತಿದ್ದಾರೆ.

1945ರ ಜನವರಿ 20ರಂದು ಓರ್ವ ಮಿಲಿಟರಿ ಅಧಿಕಾರಿಯ ಮಗನಾಗಿ ಉತ್ತರಾಖಂಡದ ದೋವಲ್ ಎಂಬಲ್ಲಿ ಜನಿಸಿದ್ದರು. 1968ರಲ್ಲಿ ಭಾರತೀಯ ಪೊಲೀಸ್ ಸೇವೆಯಲ್ಲಿ ಕೇರಳ ಕೇಡರ್ ಆಗಿ ಅಧಿಕಾರ ವಹಿಸಿಕೊಂಡರು.

'ಸೈಲೆಂಟ್ ಕಿಲ್ಲರ್' ಎಂದೇ ಹೆಸರುವಾಸಿಯಾದ ದೋವಲ್​ ಸರ್ಜಿಕಲ್ ಸ್ಟ್ರೈಕ್‌ನಲ್ಲಷ್ಟೇ ಅಲ್ಲದೆ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಬೇಹುಗಾರಿಕಾ ಮತ್ತು ರಾಜತಾಂತ್ರಿಕ ವಿದ್ಯಮಾನಗಳಲ್ಲಿ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸಿದ್ದಾರೆ.

ಪಂಜಾಬ್, ಮಿಜೋರಾಂ ಹಾಗೂ ಜಮ್ಮು - ಕಾಶ್ಮೀರದಲ್ಲಿ ಭುಗಿಲೆದ್ದ ಆಂತರಿಕ ದಂಗೆಗಳನ್ನು ಶಮನ ಮಾಡುವಲ್ಲಿ ಇವರು ಮುಖ್ಯ ಪಾತ್ರವಹಿಸಿದ್ದರು.

ನೆರೆಯ ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ತೆರಳಿ ಕಠಿಣ ಸಂದರ್ಭದಲ್ಲಿ ಗೂಢಾಚಾರಿಕೆ ನಡೆಸಿ ಹಲವು ರಹಸ್ಯಗಳನ್ನು ಭಾರತೀಯ ರಿಸರ್ಚ್​ ಅಂಡ್​​​ ಅನಾಲಿಸಸ್​ ವಿಂಗ್​ (ರಾ) ಗಮನಕ್ಕೆ ತಂದರು. ಇಸ್ಲಾಮಾಬಾದ್‌ನಲ್ಲಿ ಭಾರತೀಯ ಹೈ ಕಮಿಷನ್‌ನಲ್ಲಿ 7 ವರ್ಷ ಕಳೆದ ದೋವಲ್ ವೇಷ ಮರೆಸಿಕೊಂಡು ಗುಪ್ತ ಮಾಹಿತಿಗಳನ್ನು ಕಲೆ ಹಾಕಿದ್ದು, ಇಂಡಿಯನ್​ ರಿಯಲ್​ ಜೇಮ್ಸ್​ ಬಾಂಡ್.

ಅತ್ಯಂತ ಧೈರ್ಯಶಾಲಿಯಾದ ದೋವಲ್ ತಮ್ಮ ಚಾಣಾಕ್ಷ್ಯ ಬುದ್ಧಿಯಿಂದಲೇ ದೇಶದ ಭದ್ರತೆ ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. 2016ರಲ್ಲಿ ಉರಿ ದಾಳಿಗೆ ಪ್ರತೀಕಾರವಾಗಿ ಸರ್ಜಿಕಲ್ ಸ್ಟ್ರೈಕ್ ಮತ್ತು 2019ರಲ್ಲಿ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಬಾಲಾಕೋಟ್ ಮೇಲೆ ನಡೆಸಿದ್ದ ವೈಮಾನಿಕ ದಾಳಿಯ ಹಿಂದೆಯೂ ದೋವಲ್​ ಮಾಸ್ಟರ್‌ಮೈಂಡ್ ಕೆಲಸ ಅಡಗಿದೆ.

ದೋವಲ್ ಸೇವೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರವು 'ಕೀರ್ತಿ ಚಕ್ರ' ಪ್ರಶಸ್ತಿ ನೀಡಿ ಗೌರವಿಸಿದೆ. ಕೀರ್ತಿ ಚಕ್ರ ಪಡೆದ ಮೊದಲ ಪೊಲೀಸ್ ಅಧಿಕಾರಿ ಎಂಬ ಖ್ಯಾತಿಗೆ ದೋವಲ್​ ಪಾತ್ರವಾಗಿದ್ದಾರೆ.

ಮಲ್ಟಿ ಏಜೆನ್ಸಿ ಸೆಂಟರ್ ಮತ್ತು ಜಾಯಿಂಟ್ ಟಾಸ್ಕ್ ಫೋರ್ಸ್ ಆನ್ ಇಂಟೆಲಿಜೆನ್ಸ್‌ನ ಮುಖ್ಯಸ್ಥ ಹಾಗೂ ಸ್ಥಾಪಕರು ಸಹ ದೋವಲ್​ ಆಗಿದ್ದಾರೆ.

ಪ್ರಧಾನಿ ಮೋದಿಯ ಬಲಗೈ ಬಂಟ ಆಗಿರುವುದರಿಂದಲೇ ದಶಕದಿಂದ ದೊಡ್ಡ ತಲೆನೋವಾಗಿದ್ದ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂಪಡೆಯುವಲ್ಲಿ ದೋವಲ್ ಬುದ್ಧಿವಂತಿಕೆಯೂ ಇದೆ.

ಅಜಿತ್​ ದೋವಲ್​ ನಡೆದು ಬಂದ ಹಾದಿ...

  • ಜನವರಿ 20, 1945 ರಂದು ಉತ್ತರಾಖಂಡದ ಪೌರಿ ಗರ್ವಾಲ್​ನಲ್ಲಿ ಜನಿಸಿದರು. ಅವರ ತಂದೆ ಭಾರತೀಯ ಸೇನೆಯಲ್ಲಿದ್ದರು
  • ಅಜ್ಮೀರ್‌ನ ಆರ್ಮಿ ಶಾಲೆಯಿಂದ ಪ್ರಾರಂಭವಾದ ಇವರ ಓದಿನ ಪ್ರಯಾಣ ಆಗ್ರಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿವರೆಗೂ ಮುಂದುವರಿತು
  • 1968ರಲ್ಲಿ ಭಾರತೀಯ ಪೊಲೀಸ್ ಸೇವೆಯಲ್ಲಿ ಕೇರಳ ಕೇಡರ್ ಆಗಿ ಅಧಿಕಾರ ವಹಿಸಿಕೊಂಡರು
  • ಅಜಿತ್ ದೋವಲ್ 1972 ರಲ್ಲಿ ಇಂಟೆಲಿಜೆನ್ಸ್ ಬ್ಯೂರೋಗೆ ಸೇರಿದರು. ಅವರು ಸುಮಾರು ಏಳು ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಗುಪ್ತಚರ ಪತ್ತೇದಾರಿ ಆಗಿ ಸೇವೆ ಸಲ್ಲಿಸಿದ್ದಾರೆ
  • ಪಾಕಿಸ್ತಾನ ವಿರುದ್ಧದ ಸರ್ಜಿಕಲ್ ಸ್ಟ್ರೈಕ್‌ನಲ್ಲಿ ದೋವಲ್​ ಪ್ರಮುಖ ಪಾತ್ರ ವಹಿಸಿದ್ದರು
  • ಜಮ್ಮು ಮತ್ತು ಕಾಶ್ಮೀರದಲ್ಲಿ ಒಳನುಗ್ಗುವವರು ಮತ್ತು ಶಾಂತಿಯನ್ನು ಬಯಸುವ ಜನರ ನಡುವೆ ಕೆಲಸ ಮಾಡಿದ್ದರು. ಈ ವೇಳೆ ಅನೇಕ ಭಯೋತ್ಪಾದಕರನ್ನು ಶರಣಾಗುವಂತೆ ಮಾಡಿದ್ದರು
  • ಮೇ 30, 2014 ರಂದು ಪ್ರಧಾನಿ ನರೇಂದ್ರ ಮೋದಿ ದೇಶದ 5ನೇ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್​ನ್ನು ನೇಮಕ ಮಾಡಿದ್ದರು ಮತ್ತು ಜವಾಬ್ದಾರಿ ವಹಿಸಿದ್ದರು
  • ದೋವಲ್ ಸೇವೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರವು 'ಕೀರ್ತಿ ಚಕ್ರ' ಪ್ರಶಸ್ತಿ ನೀಡಿ ಗೌರವಿಸಿದೆ. ಕೀರ್ತಿ ಚಕ್ರ ಪಡೆದ ಮೊದಲ ಪೊಲೀಸ್ ಅಧಿಕಾರಿ ಎಂಬ ಖ್ಯಾತಿಗೆ ದೋವಲ್​ ಪಾತ್ರವಾಗಿದ್ದಾರೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.