ETV Bharat / bharat

'ಭಾರತ ಸಾಂಪ್ರದಾಯಿಕವಾಗಿ ಹಿಂದುತ್ವವಾದಿ ದೇಶ, ಇಲ್ಲಿ 130 ಕೋಟಿ ಜನರೂ ಹಿಂದೂಗಳೇ'

author img

By

Published : Dec 26, 2019, 9:04 AM IST

ಒಬ್ಬ ವ್ಯಕ್ತಿ ಯಾವುದೇ ಭಾಷೆ ಮಾತನಾಡಲಿ, ಯಾವುದೇ ಧರ್ಮದವರಾಗಿರಲಿ ಭಾರತವನ್ನ ತಾಯಿನಾಡು ಎಂದು ಪರಿಗಣಿಸುವವರು ಹಿಂದೂಗಳೇ ಎಂದು ಆರ್​ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

India has traditionally been Hindutvawadi , ಭಾರತ ಸಾಂಪ್ರದಾಯಿಕವಾಗಿ ಹಿಂದುತ್ವವಾದಿ
ಆರ್​ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಹೈದರಾಬಾದ್: ಭಾರತವು ಸಾಂಪ್ರದಾಯಿಕವಾಗಿ ಹಿಂದುತ್ವವಾದಿಯಾಗಿದೆ. ಇಲ್ಲಿ ಧರ್ಮ ಮತ್ತು ಸಂಸ್ಕೃತಿಯ ವೈವಿಧ್ಯತೆ ಲೆಕ್ಕಿಸದೆ ಸಂಘವು ದೇಶದ 130 ಕೋಟಿ ಜನರನ್ನೂ ಹಿಂದೂಗಳೆಂದು ಪರಿಗಣಿಸುತ್ತದೆ ಎಂದು ಆರ್​ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಹೈದರಾಬಾದ್​ನಲ್ಲಿ ನಡೆದ ಆರ್​ಎಸ್​​ಎಸ್​ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ವ್ಯಕ್ತಿ ಯಾವುದೇ ಭಾಷೆ ಮಾತನಾಡಲಿ, ಯಾವುದೇ ಧರ್ಮದವರಾಗಿರಲಿ ಭಾರತವನ್ನ ತಾಯಿನಾಡು ಎಂದು ಪರಿಗಣಿಸುವವರನ್ನು ಆರ್‌ಎಸ್‌ಎಸ್, ಹಿಂದೂ ಎಂದು ಕರೆಯುತ್ತದೆ ಎಂದು ಭಾಗವತ್ ಹೇಳಿದ್ದಾರೆ. ಭಾರತದ 130 ಕೋಟಿ ಜನರು ಹಿಂದೂ ಸಮಾಜದವರು. ಆರ್‌ಎಸ್‌ಎಸ್ ಪ್ರತಿಯೊಬ್ಬರನ್ನು ತಮ್ಮವರೇ ಎಂದು ಪರಿಗಣಿಸುತ್ತದೆ ಮತ್ತು ಎಲ್ಲರ ಅಭಿವೃದ್ಧಿಯನ್ನು ಬಯಸುತ್ತದೆ. ಎಲ್ಲರನ್ನೂ ಒಂದುಗೂಡಿಸಲು ಸಂಘ ಬಯಸಿದೆ ಎಂದಿದ್ದಾರೆ.

ಭಾರತದ ಸಾಂಪ್ರದಾಯಿಕ ಚಿಂತನೆ ಒಟ್ಟಿಗೆ ಮುಂದುವರಿಯುವುದು. ಜನರು ನಮ್ಮನ್ನು ಹಿಂದುತ್ವವಾದಿ ಎನ್ನುತ್ತಾರೆ. ನಮ್ಮ ದೇಶ ಸಾಂಪ್ರದಾಯಿಕವಾಗಿ ಹಿಂದುತ್ವವಾದಿಯಾಗಿದೆ. ನಮ್ಮ ಸಂಘವು ದೇಶಕ್ಕಾಗಿ ಕೆಲಸ ಮಾಡುತ್ತದೆ ಮತ್ತು ನಾವು ಯಾವಾಗಲೂ ಧರ್ಮ ಗೆಲ್ಲಬೇಕೆಂದು ಬಯಸುತ್ತೇವೆ. ರವೀಂದ್ರನಾಥ ಟ್ಯಾಗೋರ್ ಅವರ ಮಾತು ಉಲ್ಲೇಖಿಸಿದ ಭಾಗವತ್, ರಾಜಕೀಯದಿಂದ ಮಾತ್ರ ದೇಶದಲ್ಲಿ ಬದಲಾವಣೆಯನ್ನು ತರಲು ಸಾಧ್ಯವಿಲ್ಲ, ಬದಲಾವಣೆಯನ್ನು ಜನರು ಮಾತ್ರ ತರಬಹುದು ಎಂದಿದ್ದಾರೆ.

ವಿವಿಧತೆಯಲ್ಲಿ ಏಕತೆ ಇದೆ ಎಂಬ ಮಾತಿದೆ ಆದರೆ ನಮ್ಮ ದೇಶ ಒಂದು ಹೆಜ್ಜೆ ಮುಂದೆ ಹೋಗಿದೆ. ಇಲ್ಲಿ ನಮಗೆ ವೈವಿಧ್ಯತೆಯಲ್ಲಿ ಏಕತೆ ಮಾತ್ರವಲ್ಲ, ಏಕತೆಯ ವೈವಿಧ್ಯತೆಯೂ ಇದೆ ಎಂದು ಹೇಳಿದ್ದಾರೆ.

ಹೈದರಾಬಾದ್: ಭಾರತವು ಸಾಂಪ್ರದಾಯಿಕವಾಗಿ ಹಿಂದುತ್ವವಾದಿಯಾಗಿದೆ. ಇಲ್ಲಿ ಧರ್ಮ ಮತ್ತು ಸಂಸ್ಕೃತಿಯ ವೈವಿಧ್ಯತೆ ಲೆಕ್ಕಿಸದೆ ಸಂಘವು ದೇಶದ 130 ಕೋಟಿ ಜನರನ್ನೂ ಹಿಂದೂಗಳೆಂದು ಪರಿಗಣಿಸುತ್ತದೆ ಎಂದು ಆರ್​ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಹೈದರಾಬಾದ್​ನಲ್ಲಿ ನಡೆದ ಆರ್​ಎಸ್​​ಎಸ್​ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ವ್ಯಕ್ತಿ ಯಾವುದೇ ಭಾಷೆ ಮಾತನಾಡಲಿ, ಯಾವುದೇ ಧರ್ಮದವರಾಗಿರಲಿ ಭಾರತವನ್ನ ತಾಯಿನಾಡು ಎಂದು ಪರಿಗಣಿಸುವವರನ್ನು ಆರ್‌ಎಸ್‌ಎಸ್, ಹಿಂದೂ ಎಂದು ಕರೆಯುತ್ತದೆ ಎಂದು ಭಾಗವತ್ ಹೇಳಿದ್ದಾರೆ. ಭಾರತದ 130 ಕೋಟಿ ಜನರು ಹಿಂದೂ ಸಮಾಜದವರು. ಆರ್‌ಎಸ್‌ಎಸ್ ಪ್ರತಿಯೊಬ್ಬರನ್ನು ತಮ್ಮವರೇ ಎಂದು ಪರಿಗಣಿಸುತ್ತದೆ ಮತ್ತು ಎಲ್ಲರ ಅಭಿವೃದ್ಧಿಯನ್ನು ಬಯಸುತ್ತದೆ. ಎಲ್ಲರನ್ನೂ ಒಂದುಗೂಡಿಸಲು ಸಂಘ ಬಯಸಿದೆ ಎಂದಿದ್ದಾರೆ.

ಭಾರತದ ಸಾಂಪ್ರದಾಯಿಕ ಚಿಂತನೆ ಒಟ್ಟಿಗೆ ಮುಂದುವರಿಯುವುದು. ಜನರು ನಮ್ಮನ್ನು ಹಿಂದುತ್ವವಾದಿ ಎನ್ನುತ್ತಾರೆ. ನಮ್ಮ ದೇಶ ಸಾಂಪ್ರದಾಯಿಕವಾಗಿ ಹಿಂದುತ್ವವಾದಿಯಾಗಿದೆ. ನಮ್ಮ ಸಂಘವು ದೇಶಕ್ಕಾಗಿ ಕೆಲಸ ಮಾಡುತ್ತದೆ ಮತ್ತು ನಾವು ಯಾವಾಗಲೂ ಧರ್ಮ ಗೆಲ್ಲಬೇಕೆಂದು ಬಯಸುತ್ತೇವೆ. ರವೀಂದ್ರನಾಥ ಟ್ಯಾಗೋರ್ ಅವರ ಮಾತು ಉಲ್ಲೇಖಿಸಿದ ಭಾಗವತ್, ರಾಜಕೀಯದಿಂದ ಮಾತ್ರ ದೇಶದಲ್ಲಿ ಬದಲಾವಣೆಯನ್ನು ತರಲು ಸಾಧ್ಯವಿಲ್ಲ, ಬದಲಾವಣೆಯನ್ನು ಜನರು ಮಾತ್ರ ತರಬಹುದು ಎಂದಿದ್ದಾರೆ.

ವಿವಿಧತೆಯಲ್ಲಿ ಏಕತೆ ಇದೆ ಎಂಬ ಮಾತಿದೆ ಆದರೆ ನಮ್ಮ ದೇಶ ಒಂದು ಹೆಜ್ಜೆ ಮುಂದೆ ಹೋಗಿದೆ. ಇಲ್ಲಿ ನಮಗೆ ವೈವಿಧ್ಯತೆಯಲ್ಲಿ ಏಕತೆ ಮಾತ್ರವಲ್ಲ, ಏಕತೆಯ ವೈವಿಧ್ಯತೆಯೂ ಇದೆ ಎಂದು ಹೇಳಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.