ETV Bharat / bharat

ಬೇಹುಗಾರಿಕೆ: 24 ಗಂಟೆಯಲ್ಲಿ ಭಾರತ ತೊರೆಯಲು ಪಾಕ್​ನ ಇಬ್ಬರು ಅಧಿಕಾರಿಗಳಿಗೆ ಸೂಚನೆ!

author img

By

Published : May 31, 2020, 10:53 PM IST

Updated : Jun 1, 2020, 1:17 AM IST

Pakistan High Commission
Pakistan High Commission

22:45 May 31

ಭಾರತದಲ್ಲಿದ್ದುಕೊಂಡು ಬೇಹುಗಾರಿಕೆ ನಡೆಸಿದ ಆರೋಪ

ನವದೆಹಲಿ: ಬೇಹುಗಾರಿಕೆಯಲ್ಲಿ ತೊಡಗಿದ್ದ ಪಾಕಿಸ್ತಾನದ ಇಬ್ಬರು ಹೈಕಮೀಷನ್​ ಅಧಿಕಾರಿಗಳ ಬಂಧನ ಮಾಡಿರುವ ವಿದೇಶಾಂಗ ಇಲಾಖೆ, ಮುಂದಿನ 24 ಗಂಟೆಯಲ್ಲಿ ಭಾರತ ತೊರೆಯುವಂತೆ ಅವರಿಗೆ ಸೂಚನೆ ನೀಡಿದೆ.

ಭಾರತದಲ್ಲಿರುವ ಪಾಕ್​ ಹೈಕಮೀಷನ್​ ಕಚೇರಿಯಲ್ಲಿ ವೀಸಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಅಧಿಕಾರಿಗಳು ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಹೀಗಾಗಿ 24 ಗಂಟೆಗಳಲ್ಲಿ ದೇಶ ತೊರೆಯುವಂತೆ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.  

ಪಾಕ್​ ಹೈ ಕಮೀಷನ್​ ಅಧಿಕಾರಿಗಳಾಗಿರುವ ಅಬಿದ್​ ಹುಸೇನ್​ ಮತ್ತು ತಾಹೀರ್​ ಹುಸೇನ್​ ಬೇಹುಗಾರಿಕೆ ನಡೆಸಿರುವ ಆರೋಪ ಹೊತ್ತಿದ್ದು, ಇವರನ್ನ ಭಾರತೀಯ ಭದ್ರತಾ ಪಡೆ ಸಾಕ್ಷಿ ಸಮೇತವಾಗಿ ಹಿಡಿದಿದೆ.

ಭಾರತದ ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿ ಚಟುವಟಿಕೆ ನಡೆಸಿರುವ ಆರೋಪದ ಮೇಲೆ ಇವರ ಬಂಧನ ಮಾಡಲಾಗಿದೆ ಎಂದು ತಿಳಿಸಲಾಗಿದ್ದು, ವಿವಿಧ ಸ್ಥಳಗಳಲ್ಲಿ ಭಾರತೀಯ ನಕಲಿ ಗುರುತಿನ ಚೀಟಿಗಳ ಬಳಕೆ ಮಾಡಿದ್ದಾರೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

22:45 May 31

ಭಾರತದಲ್ಲಿದ್ದುಕೊಂಡು ಬೇಹುಗಾರಿಕೆ ನಡೆಸಿದ ಆರೋಪ

ನವದೆಹಲಿ: ಬೇಹುಗಾರಿಕೆಯಲ್ಲಿ ತೊಡಗಿದ್ದ ಪಾಕಿಸ್ತಾನದ ಇಬ್ಬರು ಹೈಕಮೀಷನ್​ ಅಧಿಕಾರಿಗಳ ಬಂಧನ ಮಾಡಿರುವ ವಿದೇಶಾಂಗ ಇಲಾಖೆ, ಮುಂದಿನ 24 ಗಂಟೆಯಲ್ಲಿ ಭಾರತ ತೊರೆಯುವಂತೆ ಅವರಿಗೆ ಸೂಚನೆ ನೀಡಿದೆ.

ಭಾರತದಲ್ಲಿರುವ ಪಾಕ್​ ಹೈಕಮೀಷನ್​ ಕಚೇರಿಯಲ್ಲಿ ವೀಸಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಅಧಿಕಾರಿಗಳು ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಹೀಗಾಗಿ 24 ಗಂಟೆಗಳಲ್ಲಿ ದೇಶ ತೊರೆಯುವಂತೆ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.  

ಪಾಕ್​ ಹೈ ಕಮೀಷನ್​ ಅಧಿಕಾರಿಗಳಾಗಿರುವ ಅಬಿದ್​ ಹುಸೇನ್​ ಮತ್ತು ತಾಹೀರ್​ ಹುಸೇನ್​ ಬೇಹುಗಾರಿಕೆ ನಡೆಸಿರುವ ಆರೋಪ ಹೊತ್ತಿದ್ದು, ಇವರನ್ನ ಭಾರತೀಯ ಭದ್ರತಾ ಪಡೆ ಸಾಕ್ಷಿ ಸಮೇತವಾಗಿ ಹಿಡಿದಿದೆ.

ಭಾರತದ ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿ ಚಟುವಟಿಕೆ ನಡೆಸಿರುವ ಆರೋಪದ ಮೇಲೆ ಇವರ ಬಂಧನ ಮಾಡಲಾಗಿದೆ ಎಂದು ತಿಳಿಸಲಾಗಿದ್ದು, ವಿವಿಧ ಸ್ಥಳಗಳಲ್ಲಿ ಭಾರತೀಯ ನಕಲಿ ಗುರುತಿನ ಚೀಟಿಗಳ ಬಳಕೆ ಮಾಡಿದ್ದಾರೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

Last Updated : Jun 1, 2020, 1:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.