ETV Bharat / bharat

ಅಗತ್ಯ ಬಿದ್ದರೆ ಜಮ್ಮು-ಕಾಶ್ಮೀರಕ್ಕೆ ನಾನೇ ಭೇಟಿ ನೀಡುವೆ: ಸಿಜೆಐ ರಂಜನ್​ ಗೊಗೊಯ್​

author img

By

Published : Sep 16, 2019, 11:36 AM IST

Updated : Sep 16, 2019, 3:20 PM IST

370 ನೇ ವಿಧಿ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​​ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ರಂಜನ್​ ಗೊಗೊಯ್​ ಅಗತ್ಯ ಬಿದ್ದರೆ ಜಮ್ಮು ಕಾಶ್ಮೀರಕ್ಕೆ ನಾನೇ ಜಮ್ಮು -ಕಾಶ್ಮೀರಕ್ಕೆ ಭೇಟಿ ನೀಡುತ್ತೇನೆ ಎಂದಿದ್ದಾರೆ.

ಸುಪ್ರೀಂನಲ್ಲಿ 370 ನೇ ವಿಧಿ ರದ್ದತಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ಅಂತಿಮ ವಿಚಾರಣೆ...!

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಗೆ ಸಲ್ಲಿಸಲಾಗಿದ್ದ ಅರ್ಜಿಗಳ ಅಂತಿಮ ವಿಚಾರಣೆ ಇಂದು ನಡೆಯಿತು.ಅಗತ್ಯ ಬಿದ್ದರೆ ಜಮ್ಮು ಕಾಶ್ಮೀರದ ಪರಿಸ್ಥಿತಿ ಪರಿಶೀಲಿಸಲು ನಾನೇ ಜಮ್ಮು -ಕಾಶ್ಮೀರಕ್ಕೆ ಭೇಟಿ ನೀಡುತ್ತೇನೆ ಎಂದು ಸಿಜೆಐ ರಂಜನ್​ ಗೊಗೊಯ್​ ತಿಳಿಸಿದ್ರು.

ಇನ್ನು ಕೇಂದ್ರ ಹಾಗೂ ಜಮ್ಮು- ಕಾಶ್ಮೀರ ಸರ್ಕಾರಗಳಿಗೆ ಈ ಪ್ರಕರಣದ ಬಗ್ಗೆ ಅಫಿಡವಿಟ್​ ಸಲ್ಲಿಸಲು ಸೂಚಿಸಿದ ಕೋರ್ಟ್​​​ ಹೆಚ್ಚಿನ ವಿಚಾರಣೆಯನ್ನ ಸೆಪ್ಟೆಂಬರ್​ 30ಕ್ಕೆ ನಿಗದಿಗೊಳಿಸಿತು. ಈ ನಡುವೆ, ಭಾರತ ಸರ್ಕಾರದ ಪರ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ವಾದ ಮಂಡಿಸಿದರು.

ಈ ನಡುವೆ ಗುಲಾಂ ನಜಿ ಆಜಾದ್​ ಕಾಶ್ಮೀರದ ನಾಲ್ಕು ಜಿಲ್ಲೆಗಳ ಭೇಟಿ ನೀಡಲು ನ್ಯಾಯಾಲಯ ಅವಕಾಶ ಕಲ್ಪಿಸಿದೆ. ಶ್ರೀನಗರ, ಅನಂತನಾಗ್​, ಬಾರಾಮುಲ್ಲಾ ಮತ್ತು ಜಮ್ಮುಗೆ ಭೇಟಿ ನೀಡಲು ಅವಕಾಶ ನೀಡಿತು. ಆದರೆ ಸಾವರ್ಜನಿಕರನ್ನುದ್ದೇಶಿಸಿ ಯಾವುದೇ ಭಾಷಣವನ್ನು ಮಾಡುವಂತಿಲ್ಲ ಎಂಬ ಷರತ್ತು ಕೂಡ ಅವರಿಗೆ ಸುಪ್ರೀಂ ವಿಧಿಸಿದೆ.

ಕಾಶ್ಮೀರಕ್ಕೆ ಭೇಟಿ ನೀಡಲು ಕಾಂಗ್ರೆಸ್​ ನಾಯಕ ಗುಲಾಂ ನಬಿ ಆಜಾದ್​ ಎರಡು ಬಾರಿ ಪ್ರಯತ್ನಿಸಿದ್ದರು. ಅಲ್ಲಿನ ಆಡಳಿತ ಅವರಿಗೆ ಅವಕಾಶ ನಿರಾಕರಿಸಿತ್ತು. ಶ್ರೀನಗರ ಏರ್​ಪೋರ್ಟ್​ನಿಂದಲೇ ವಾಪಸ್​ ಕಳುಹಿಸಿತ್ತು.

ಕೇಂದ್ರಕ್ಕೆ ಖಡಕ್​ ವಾರ್ನಿಂಗ್​

ಈ ನಡುವೆ ಅರ್ಜಿದಾರರ ವಾದ ಆಲಿಸಿದ ಸುಪ್ರೀಂಕೋರ್ಟ್​​​ ಕಣಿವೆ ರಾಜ್ಯದಲ್ಲಿ ಸಹಜ ಜೀವನಕ್ಕೆ ಅವಕಾಶವಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮತ್ತೊಮ್ಮೆ ಸೂಚನೆ ಕೊಟ್ಟಿದೆ.

ಈ ಸಂಬಂಧ ಸೆಪ್ಟೆಂಬರ್​ 30ಕ್ಕೆ ಅಫಿಡವಿಡ್ ಸಲ್ಲಿಸುವಂತೆ ಸೂಚಿಸಿತಲ್ಲದೇ ಅಂದೇ ಅಂತಿಮ ವಿಚಾರಣೆಯನ್ನ ನಿಗದಿ ಮಾಡಿತು.

ಟೈಮ್ಸ್ ಎಡಿಟರ್​​​ ಪ್ರಶ್ನಿಸಿ ಸುಪ್ರೀಂ

ಸಮಸ್ಯೆ ಸ್ಥಳೀಯವಾಗಿಯೇ ಇದ್ದರೆ ಅದನ್ನು ಅಲ್ಲಿನ ಕೋರ್ಟ್​ನಲ್ಲೇ ಏಕೆ ಪ್ರಶ್ನಿಸಬಾರದು ಎಂದು ಟ್ರೈಮ್ಸ್​ ಎಡಿಟರ್​​ ಪರ ವಕೀಲರಿಗೆ ಪ್ರಶ್ನಿಸಿತು. ಟೈಮ್ಸ್ ಎಡಿಟರ್​ ಅನುರಾಧ ಪರ ವಕೀಲ ಗ್ರೋವರ್​ ವಾದ ಮಂಡನೆ ಮಾಡಿದ್ದರು.

370 ನೇ ವಿಧಿ ರದ್ಧತಿ ನಂತರ ಜಮ್ಮು ಕಾಶ್ಮೀರ ಮಾಜಿ ಸಿಎಂ ಫಾರೂಕ್​ ಅಬ್ದುಲ್ಲಾ ಗೃಹ ಬಂಧನದಲ್ಲಿರಿಸಲಾಗಿದೆ ಹಾಗೂ ಯಾರ ಭೇಟಿಗೂ ಅವಕಾಶ ನೀಡಿಲ್ಲ. ಹೀಗಾಗಿ ಇದನ್ನು ಪ್ರಶ್ನಿಸಿ ಹಾಗೂ ಅವರನ್ನು ಗೃಹಬಂಧನದಿಂದ ಬಿಡುಗಡೆ ಮಾಡುವಂತೆ ಎಂ​ಡಿಎಂಕೆ ಮುಖ್ಯಸ್ಥ ವೈಕೋ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ರು. ಈ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್​ ಈ ಕುರಿತು ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಜಮ್ಮು ಕಾಶ್ಮೀರ ಸರ್ಕಾರಕ್ಕೆ ನೋಟಿಸ್​ ನೀಡಿತು.

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಗೆ ಸಲ್ಲಿಸಲಾಗಿದ್ದ ಅರ್ಜಿಗಳ ಅಂತಿಮ ವಿಚಾರಣೆ ಇಂದು ನಡೆಯಿತು.ಅಗತ್ಯ ಬಿದ್ದರೆ ಜಮ್ಮು ಕಾಶ್ಮೀರದ ಪರಿಸ್ಥಿತಿ ಪರಿಶೀಲಿಸಲು ನಾನೇ ಜಮ್ಮು -ಕಾಶ್ಮೀರಕ್ಕೆ ಭೇಟಿ ನೀಡುತ್ತೇನೆ ಎಂದು ಸಿಜೆಐ ರಂಜನ್​ ಗೊಗೊಯ್​ ತಿಳಿಸಿದ್ರು.

ಇನ್ನು ಕೇಂದ್ರ ಹಾಗೂ ಜಮ್ಮು- ಕಾಶ್ಮೀರ ಸರ್ಕಾರಗಳಿಗೆ ಈ ಪ್ರಕರಣದ ಬಗ್ಗೆ ಅಫಿಡವಿಟ್​ ಸಲ್ಲಿಸಲು ಸೂಚಿಸಿದ ಕೋರ್ಟ್​​​ ಹೆಚ್ಚಿನ ವಿಚಾರಣೆಯನ್ನ ಸೆಪ್ಟೆಂಬರ್​ 30ಕ್ಕೆ ನಿಗದಿಗೊಳಿಸಿತು. ಈ ನಡುವೆ, ಭಾರತ ಸರ್ಕಾರದ ಪರ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ವಾದ ಮಂಡಿಸಿದರು.

ಈ ನಡುವೆ ಗುಲಾಂ ನಜಿ ಆಜಾದ್​ ಕಾಶ್ಮೀರದ ನಾಲ್ಕು ಜಿಲ್ಲೆಗಳ ಭೇಟಿ ನೀಡಲು ನ್ಯಾಯಾಲಯ ಅವಕಾಶ ಕಲ್ಪಿಸಿದೆ. ಶ್ರೀನಗರ, ಅನಂತನಾಗ್​, ಬಾರಾಮುಲ್ಲಾ ಮತ್ತು ಜಮ್ಮುಗೆ ಭೇಟಿ ನೀಡಲು ಅವಕಾಶ ನೀಡಿತು. ಆದರೆ ಸಾವರ್ಜನಿಕರನ್ನುದ್ದೇಶಿಸಿ ಯಾವುದೇ ಭಾಷಣವನ್ನು ಮಾಡುವಂತಿಲ್ಲ ಎಂಬ ಷರತ್ತು ಕೂಡ ಅವರಿಗೆ ಸುಪ್ರೀಂ ವಿಧಿಸಿದೆ.

ಕಾಶ್ಮೀರಕ್ಕೆ ಭೇಟಿ ನೀಡಲು ಕಾಂಗ್ರೆಸ್​ ನಾಯಕ ಗುಲಾಂ ನಬಿ ಆಜಾದ್​ ಎರಡು ಬಾರಿ ಪ್ರಯತ್ನಿಸಿದ್ದರು. ಅಲ್ಲಿನ ಆಡಳಿತ ಅವರಿಗೆ ಅವಕಾಶ ನಿರಾಕರಿಸಿತ್ತು. ಶ್ರೀನಗರ ಏರ್​ಪೋರ್ಟ್​ನಿಂದಲೇ ವಾಪಸ್​ ಕಳುಹಿಸಿತ್ತು.

ಕೇಂದ್ರಕ್ಕೆ ಖಡಕ್​ ವಾರ್ನಿಂಗ್​

ಈ ನಡುವೆ ಅರ್ಜಿದಾರರ ವಾದ ಆಲಿಸಿದ ಸುಪ್ರೀಂಕೋರ್ಟ್​​​ ಕಣಿವೆ ರಾಜ್ಯದಲ್ಲಿ ಸಹಜ ಜೀವನಕ್ಕೆ ಅವಕಾಶವಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮತ್ತೊಮ್ಮೆ ಸೂಚನೆ ಕೊಟ್ಟಿದೆ.

ಈ ಸಂಬಂಧ ಸೆಪ್ಟೆಂಬರ್​ 30ಕ್ಕೆ ಅಫಿಡವಿಡ್ ಸಲ್ಲಿಸುವಂತೆ ಸೂಚಿಸಿತಲ್ಲದೇ ಅಂದೇ ಅಂತಿಮ ವಿಚಾರಣೆಯನ್ನ ನಿಗದಿ ಮಾಡಿತು.

ಟೈಮ್ಸ್ ಎಡಿಟರ್​​​ ಪ್ರಶ್ನಿಸಿ ಸುಪ್ರೀಂ

ಸಮಸ್ಯೆ ಸ್ಥಳೀಯವಾಗಿಯೇ ಇದ್ದರೆ ಅದನ್ನು ಅಲ್ಲಿನ ಕೋರ್ಟ್​ನಲ್ಲೇ ಏಕೆ ಪ್ರಶ್ನಿಸಬಾರದು ಎಂದು ಟ್ರೈಮ್ಸ್​ ಎಡಿಟರ್​​ ಪರ ವಕೀಲರಿಗೆ ಪ್ರಶ್ನಿಸಿತು. ಟೈಮ್ಸ್ ಎಡಿಟರ್​ ಅನುರಾಧ ಪರ ವಕೀಲ ಗ್ರೋವರ್​ ವಾದ ಮಂಡನೆ ಮಾಡಿದ್ದರು.

370 ನೇ ವಿಧಿ ರದ್ಧತಿ ನಂತರ ಜಮ್ಮು ಕಾಶ್ಮೀರ ಮಾಜಿ ಸಿಎಂ ಫಾರೂಕ್​ ಅಬ್ದುಲ್ಲಾ ಗೃಹ ಬಂಧನದಲ್ಲಿರಿಸಲಾಗಿದೆ ಹಾಗೂ ಯಾರ ಭೇಟಿಗೂ ಅವಕಾಶ ನೀಡಿಲ್ಲ. ಹೀಗಾಗಿ ಇದನ್ನು ಪ್ರಶ್ನಿಸಿ ಹಾಗೂ ಅವರನ್ನು ಗೃಹಬಂಧನದಿಂದ ಬಿಡುಗಡೆ ಮಾಡುವಂತೆ ಎಂ​ಡಿಎಂಕೆ ಮುಖ್ಯಸ್ಥ ವೈಕೋ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ರು. ಈ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್​ ಈ ಕುರಿತು ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಜಮ್ಮು ಕಾಶ್ಮೀರ ಸರ್ಕಾರಕ್ಕೆ ನೋಟಿಸ್​ ನೀಡಿತು.

Intro:Body:

https://www.etvbharat.com/english/national/bharat/bharat-news/jem-threatens-to-blow-up-temples-railway-station-in-rohtak/na20190915195204938

Conclusion:
Last Updated : Sep 16, 2019, 3:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.