ETV Bharat / bharat

ಐತಿಹಾಸಿಕ... ಕಾಶ್ಮೀರದ ಪ್ರಥಮ ಡೊಮಿಸೈಲ್ ಸರ್ಟಿಫಿಕೇಟ್ ಬಿಹಾರ ಐಎಎಸ್​ ಅಧಿಕಾರಿಗೆ!

author img

By

Published : Jun 26, 2020, 6:26 PM IST

ಬಿಹಾರ ಮೂಲದ ಐಎಎಸ್ ಅಧಿಕಾರಿಯಾಗಿರುವ ನವೀನ್ ಕುಮಾರ ಚೌಧರಿ ಇವರು ಸದ್ಯ ಕಾಶ್ಮೀರ ಸರ್ಕಾರದ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಜಮ್ಮು ಕಾಶ್ಮೀರದ ನಿವಾಸಿ ಪ್ರಮಾಣ ಪತ್ರ ಪಡೆದ ಪ್ರಥಮ ವ್ಯಕ್ತಿ ಇವರಾಗಿದ್ದು, ಕಾಶ್ಮೀರದಲ್ಲಿ ಭೂಮಿ ಖರೀದಿಸುವ ಹಾಗೂ ಆಸ್ತಿ ಹೊಂದುವ ಮುಂತಾದ ಎಲ್ಲ ಹಕ್ಕುಗಳು ಈಗ ಇವರದಾಗಿವೆ.

first non-local to get JK domicile
first non-local to get JK domicile

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಬಿಹಾರ ಮೂಲದ ಐಎಎಸ್ ಅಧಿಕಾರಿಯೊಬ್ಬರು ರಾಜ್ಯದ ಪ್ರಥಮ ನಿವಾಸಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ಸ್ಥಳೀಯರಲ್ಲದ ವ್ಯಕ್ತಿಯೊಬ್ಬರು ಜಮ್ಮು ಕಾಶ್ಮೀರದ ನಿವಾಸಿ ಪ್ರಮಾಣ ಪತ್ರ (ಡೊಮಿಸೈಲ್ ಸರ್ಟಿಫಿಕೇಟ್) ಪಡೆಯುತ್ತಿರುವುದು ಇದೇ ಪ್ರಥಮ ಬಾರಿಯಾಗಿದೆ. ಹೊರರಾಜ್ಯದವರಿಗೆ ಜಮ್ಮು ಕಾಶ್ಮೀರ ರಾಜ್ಯದ ನಾಗರಿಕತೆ ನಿರಾಕರಿಸುವ ಶಾಶ್ವತ ನಾಗರಿಕತೆ ಕಾಯ್ದೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ಇತ್ತೀಚೆಗೆ ತೆಗೆದು ಹಾಕಿ ಐತಿಹಾಸಿಕ ನಿರ್ಣಯ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಿಹಾರ ಮೂಲದ ಐಎಎಸ್ ಅಧಿಕಾರಿಯಾಗಿರುವ ನವೀನ್ ಕುಮಾರ ಚೌಧರಿ ಇವರು ಸದ್ಯ ಕಾಶ್ಮೀರ ಸರ್ಕಾರದ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಜಮ್ಮು ಕಾಶ್ಮೀರದ ನಿವಾಸಿ ಪ್ರಮಾಣ ಪತ್ರ ಪಡೆದ ಪ್ರಥಮ ವ್ಯಕ್ತಿ ಇವರಾಗಿದ್ದು, ಕಾಶ್ಮೀರದಲ್ಲಿ ಭೂಮಿ ಖರೀದಿಸುವ ಹಾಗೂ ಆಸ್ತಿ ಹೊಂದುವ ಮುಂತಾದ ಎಲ್ಲ ಹಕ್ಕುಗಳು ಈಗ ಇವರದಾಗಿವೆ.

ಕಾಯ್ದೆ 35 ಎ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊರರಾಜ್ಯದ ಯಾರೊಬ್ಬರೂ ಆಸ್ತಿ ಖರೀದಿಸುವಂತಿರಲಿಲ್ಲ. ಕಳೆದ ವರ್ಷ ಆಗಸ್ಟ್​ 5 ರಂದು ಆರ್ಟಿಕಲ್ 370 ಮತ್ತು 35 ಎ ಎರಡೂ ಕಾನೂನುಗಳನ್ನು ರದ್ದುಗೊಳಿಸಿದ ನಂತರ ಈ ನಿಯಮ ಕೊನೆಗೊಂಡಿತ್ತು. ಇದರೊಂದಿಗೆ ಹೊಸ ನಿಯಮಾವಳಿಗೆ ಅರ್ಹರಾದ ಯಾವುದೇ ಭಾರತೀಯ ನಾಗರಿಕ ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆಸ್ತಿ-ಪಾಸ್ತಿ ಖರೀದಿಸಿ ಕಾಶ್ಮೀರ ನಾಗರಿಕತೆಯ ಹಕ್ಕು ಪಡೆದುಕೊಳ್ಳುವ ಅವಕಾಶ ಸಿಕ್ಕಿದೆ.

ಪ್ರಸ್ತುತ ಕೇಂದ್ರಾಡಳಿತ ಪ್ರದೇಶವಾಗಿರುವ ಕಾಶ್ಮೀರದಲ್ಲಿ ಆರಂಭಿಕವಾಗಿ ಕೇಂದ್ರ ಸರ್ಕಾರ 25 ಸಾವಿರ ಜನರಿಗೆ ಡೊಮಿಸೈಲ್ ಸರ್ಟಿಫಿಕೇಟ್​ಗಳನ್ನು ನೀಡುತ್ತಿದೆ. ಹೊಸ ಡೊಮಿಸೈಲ್ ಕಾಯ್ದೆಯ ಪ್ರಕಾರ 15 ವರ್ಷ ಅಥವಾ ಅದಕ್ಕೂ ಹೆಚ್ಚು ಕಾಲದಿಂದ ಕಾಶ್ಮೀರದಲ್ಲಿ ನೆಲೆಸಿರುವ ಹೊರರಾಜ್ಯದವರು ನಿವಾಸಿ ಪ್ರಮಾಣ ಪತ್ರ ಪಡೆಯಲು ಅರ್ಹರಾಗಿದ್ದಾರೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಬಿಹಾರ ಮೂಲದ ಐಎಎಸ್ ಅಧಿಕಾರಿಯೊಬ್ಬರು ರಾಜ್ಯದ ಪ್ರಥಮ ನಿವಾಸಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ಸ್ಥಳೀಯರಲ್ಲದ ವ್ಯಕ್ತಿಯೊಬ್ಬರು ಜಮ್ಮು ಕಾಶ್ಮೀರದ ನಿವಾಸಿ ಪ್ರಮಾಣ ಪತ್ರ (ಡೊಮಿಸೈಲ್ ಸರ್ಟಿಫಿಕೇಟ್) ಪಡೆಯುತ್ತಿರುವುದು ಇದೇ ಪ್ರಥಮ ಬಾರಿಯಾಗಿದೆ. ಹೊರರಾಜ್ಯದವರಿಗೆ ಜಮ್ಮು ಕಾಶ್ಮೀರ ರಾಜ್ಯದ ನಾಗರಿಕತೆ ನಿರಾಕರಿಸುವ ಶಾಶ್ವತ ನಾಗರಿಕತೆ ಕಾಯ್ದೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ಇತ್ತೀಚೆಗೆ ತೆಗೆದು ಹಾಕಿ ಐತಿಹಾಸಿಕ ನಿರ್ಣಯ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಿಹಾರ ಮೂಲದ ಐಎಎಸ್ ಅಧಿಕಾರಿಯಾಗಿರುವ ನವೀನ್ ಕುಮಾರ ಚೌಧರಿ ಇವರು ಸದ್ಯ ಕಾಶ್ಮೀರ ಸರ್ಕಾರದ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಜಮ್ಮು ಕಾಶ್ಮೀರದ ನಿವಾಸಿ ಪ್ರಮಾಣ ಪತ್ರ ಪಡೆದ ಪ್ರಥಮ ವ್ಯಕ್ತಿ ಇವರಾಗಿದ್ದು, ಕಾಶ್ಮೀರದಲ್ಲಿ ಭೂಮಿ ಖರೀದಿಸುವ ಹಾಗೂ ಆಸ್ತಿ ಹೊಂದುವ ಮುಂತಾದ ಎಲ್ಲ ಹಕ್ಕುಗಳು ಈಗ ಇವರದಾಗಿವೆ.

ಕಾಯ್ದೆ 35 ಎ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊರರಾಜ್ಯದ ಯಾರೊಬ್ಬರೂ ಆಸ್ತಿ ಖರೀದಿಸುವಂತಿರಲಿಲ್ಲ. ಕಳೆದ ವರ್ಷ ಆಗಸ್ಟ್​ 5 ರಂದು ಆರ್ಟಿಕಲ್ 370 ಮತ್ತು 35 ಎ ಎರಡೂ ಕಾನೂನುಗಳನ್ನು ರದ್ದುಗೊಳಿಸಿದ ನಂತರ ಈ ನಿಯಮ ಕೊನೆಗೊಂಡಿತ್ತು. ಇದರೊಂದಿಗೆ ಹೊಸ ನಿಯಮಾವಳಿಗೆ ಅರ್ಹರಾದ ಯಾವುದೇ ಭಾರತೀಯ ನಾಗರಿಕ ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆಸ್ತಿ-ಪಾಸ್ತಿ ಖರೀದಿಸಿ ಕಾಶ್ಮೀರ ನಾಗರಿಕತೆಯ ಹಕ್ಕು ಪಡೆದುಕೊಳ್ಳುವ ಅವಕಾಶ ಸಿಕ್ಕಿದೆ.

ಪ್ರಸ್ತುತ ಕೇಂದ್ರಾಡಳಿತ ಪ್ರದೇಶವಾಗಿರುವ ಕಾಶ್ಮೀರದಲ್ಲಿ ಆರಂಭಿಕವಾಗಿ ಕೇಂದ್ರ ಸರ್ಕಾರ 25 ಸಾವಿರ ಜನರಿಗೆ ಡೊಮಿಸೈಲ್ ಸರ್ಟಿಫಿಕೇಟ್​ಗಳನ್ನು ನೀಡುತ್ತಿದೆ. ಹೊಸ ಡೊಮಿಸೈಲ್ ಕಾಯ್ದೆಯ ಪ್ರಕಾರ 15 ವರ್ಷ ಅಥವಾ ಅದಕ್ಕೂ ಹೆಚ್ಚು ಕಾಲದಿಂದ ಕಾಶ್ಮೀರದಲ್ಲಿ ನೆಲೆಸಿರುವ ಹೊರರಾಜ್ಯದವರು ನಿವಾಸಿ ಪ್ರಮಾಣ ಪತ್ರ ಪಡೆಯಲು ಅರ್ಹರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.