ETV Bharat / bharat

ಹೆಂಡ್ತಿಯ ರುಂಡ ಕತ್ತರಿಸಿ ವ್ಯಕ್ತಿಯ ಮನೆ ಬಾಗಿಲಿಗೆ ಎಸೆದ ಗಂಡ!

author img

By

Published : Oct 16, 2020, 7:17 AM IST

ಅನುಮಾನ ಎಂಬ ಭೂತಕ್ಕೆ ಮಹಿಳೆಯೊಬ್ಬಳು ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಗಂಡನೊಬ್ಬ ತನ್ನ ಹೆಂಡ್ತಿಯನ್ನು ಬರ್ಬರವಾಗಿ ಕೊಂದು ರುಂಡ-ಮುಂಡವನ್ನು ಬೇರ್ಪಡಿಸಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

Husband killed to wife, Husband killed to wife in Sangareddy, Sangareddy crime news, ಹೆಂಡ್ತಿಯನ್ನು ಕೊಂದ ಗಂಡ, ಸಂಗಾರೆಡ್ಡಿಯಲ್ಲಿ ಹೆಂಡ್ತಿಯನ್ನು ಕೊಂದ ಗಂಡ, ಸಂಗಾರೆಡ್ಡಿ ಅಪರಾಧ ಸುದ್ದಿ,
ಪತ್ನಿಯ ರುಂಡ ಕಡಿದು ಆತನ ಮನೆ ಬಾಗಿಲಿಗೆ ಎಸೆದ ಗಂಡ

ಸಂಗಾರೆಡ್ಡಿ: ಹೆಂಡ್ತಿ ತಲೆಯನ್ನು ಕೊಡಲಿಯಿಂದ ಕಡಿದು ವ್ಯಕ್ತಿಯೊಬ್ಬರ ಮನೆ ಬಾಗಿಲಿಗೆ ಬಿಸಾಡಿರುವ ಘಟನೆ ಇಲ್ಲಿನ ನಾರಾಯಣಖೇಡ್​ ತಾಲೂಕಿನಲ್ಲಿ ಬುಧವಾರ ನಡೆದಿದೆ.

ಅನಂತಸಾಗರ್​ ನಿವಾಸಿ ಜಾರ್ರು ಸಾಯಿಲು ಮತ್ತು ಅನೂಪಮ ದಂಪತಿ ಮಧ್ಯೆ ಕೌಟುಂಬಿಕ ಕಲಹಗಳು ನಡೆಯುತ್ತಲೇ ಇದ್ದವು. ಈ ದಂಪತಿಗೆ ಶ್ರೀಕಾಂತ್​ ಎಂಬ ಮಗನಿದ್ದು, ಆತ ಹೈದರಾಬಾದ್​ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಸಾಯಿಲು ಗ್ರಾಮದಲ್ಲಿ ವ್ಯವಸಾಯ ಮಾಡುತ್ತಲೇ ಬೇಸಿಗೆ ಕಾಲದಲ್ಲಿ ಹೈದರಾಬಾದ್​ನಲ್ಲಿ ಕಬ್ಬಿನ ರಸ ಮಾರುವ ಬಂಡಿ ಇಟ್ಟುಕೊಂಡಿದ್ದಾನೆ. ಹೈದರಾಬಾದ್​ಗೆ ತೆರಳಿದ್ದಾಗ ಹೆಂಡ್ತಿ ಗ್ರಾಮದ ನಿವಾಸಿಯೊಬ್ಬನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಸಾಯಿಲುಗೆ ಮೂಡಿದೆ. ಈ ಬಗ್ಗೆ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತಂತೆ.

Husband killed to wife, Husband killed to wife in Sangareddy, Sangareddy crime news, ಹೆಂಡ್ತಿಯನ್ನು ಕೊಂದ ಗಂಡ, ಸಂಗಾರೆಡ್ಡಿಯಲ್ಲಿ ಹೆಂಡ್ತಿಯನ್ನು ಕೊಂದ ಗಂಡ, ಸಂಗಾರೆಡ್ಡಿ ಅಪರಾಧ ಸುದ್ದಿ,
ಕೊಲೆಯಾದ ಮಹಿಳೆ

ಬುಧವಾರ ಮಧ್ಯ ರಾತ್ರಿ ದಂಪತಿ ಮಧ್ಯೆ ಜಗಳವಾಗಿದೆ. ಈ ವೇಳೆ ಸಾಯಿಲು ಕೊಡೊಲಿಯಿಂದ ತನ್ನ ಹೆಂಡ್ತಿಯ ರುಂಡವನ್ನು ಕಡಿದಿದ್ದಾನೆ. ಬಳಿಕ ಆಕೆಯ ರುಂಡವನ್ನು ಮೂರನೇ ವ್ಯಕ್ತಿಯ ಮನೆಯ ಮುಂದೆ ಬಿಸಾಡಿದ್ದಾನೆ. ಬಳಿಕ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

ಸಂಗಾರೆಡ್ಡಿ: ಹೆಂಡ್ತಿ ತಲೆಯನ್ನು ಕೊಡಲಿಯಿಂದ ಕಡಿದು ವ್ಯಕ್ತಿಯೊಬ್ಬರ ಮನೆ ಬಾಗಿಲಿಗೆ ಬಿಸಾಡಿರುವ ಘಟನೆ ಇಲ್ಲಿನ ನಾರಾಯಣಖೇಡ್​ ತಾಲೂಕಿನಲ್ಲಿ ಬುಧವಾರ ನಡೆದಿದೆ.

ಅನಂತಸಾಗರ್​ ನಿವಾಸಿ ಜಾರ್ರು ಸಾಯಿಲು ಮತ್ತು ಅನೂಪಮ ದಂಪತಿ ಮಧ್ಯೆ ಕೌಟುಂಬಿಕ ಕಲಹಗಳು ನಡೆಯುತ್ತಲೇ ಇದ್ದವು. ಈ ದಂಪತಿಗೆ ಶ್ರೀಕಾಂತ್​ ಎಂಬ ಮಗನಿದ್ದು, ಆತ ಹೈದರಾಬಾದ್​ನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಸಾಯಿಲು ಗ್ರಾಮದಲ್ಲಿ ವ್ಯವಸಾಯ ಮಾಡುತ್ತಲೇ ಬೇಸಿಗೆ ಕಾಲದಲ್ಲಿ ಹೈದರಾಬಾದ್​ನಲ್ಲಿ ಕಬ್ಬಿನ ರಸ ಮಾರುವ ಬಂಡಿ ಇಟ್ಟುಕೊಂಡಿದ್ದಾನೆ. ಹೈದರಾಬಾದ್​ಗೆ ತೆರಳಿದ್ದಾಗ ಹೆಂಡ್ತಿ ಗ್ರಾಮದ ನಿವಾಸಿಯೊಬ್ಬನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಸಾಯಿಲುಗೆ ಮೂಡಿದೆ. ಈ ಬಗ್ಗೆ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತಂತೆ.

Husband killed to wife, Husband killed to wife in Sangareddy, Sangareddy crime news, ಹೆಂಡ್ತಿಯನ್ನು ಕೊಂದ ಗಂಡ, ಸಂಗಾರೆಡ್ಡಿಯಲ್ಲಿ ಹೆಂಡ್ತಿಯನ್ನು ಕೊಂದ ಗಂಡ, ಸಂಗಾರೆಡ್ಡಿ ಅಪರಾಧ ಸುದ್ದಿ,
ಕೊಲೆಯಾದ ಮಹಿಳೆ

ಬುಧವಾರ ಮಧ್ಯ ರಾತ್ರಿ ದಂಪತಿ ಮಧ್ಯೆ ಜಗಳವಾಗಿದೆ. ಈ ವೇಳೆ ಸಾಯಿಲು ಕೊಡೊಲಿಯಿಂದ ತನ್ನ ಹೆಂಡ್ತಿಯ ರುಂಡವನ್ನು ಕಡಿದಿದ್ದಾನೆ. ಬಳಿಕ ಆಕೆಯ ರುಂಡವನ್ನು ಮೂರನೇ ವ್ಯಕ್ತಿಯ ಮನೆಯ ಮುಂದೆ ಬಿಸಾಡಿದ್ದಾನೆ. ಬಳಿಕ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.