ETV Bharat / bharat

ಚೀನಾ ಒಳನುಸುಳುವಿಕೆಯ ಸತ್ಯ ಮರೆಮಾಚುವವರು ರಾಷ್ಟ್ರ ವಿರೋಧಿಗಳು: ರಾಹುಲ್ ಕಿಡಿಕಿಡಿ

author img

By

Published : Jul 27, 2020, 1:05 PM IST

"ಚೀನಾ ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿದೆ. ಈ ಬಗೆಗಿನ ಸತ್ಯವನ್ನು ಮರೆಮಾಚಿ ಭಾರತದ ಭೂಮಿಯನ್ನು ಕಬಳಿಸಲು ಚೀನಾಗೆ ಅವಕಾಶ ನೀಡುವುದು ರಾಷ್ಟ್ರ ವಿರೋಧಿ ನಡವಳಿಕೆ. ಅದನ್ನು ಜನರ ಗಮನಕ್ಕೆ ತರುವುದೇ ನಿಜವಾದ ದೇಶಭಕ್ತಿ ಎಂದು , ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

Rahul
ರಾಹುಲ್ ಗಾಂಧಿ

ನವದೆಹಲಿ: ಚೀನಾದೊಂದಿಗಿನ ಗಡಿ ಸಮಸ್ಯೆಗಳ ಕುರಿತು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ವಿಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ರಾಹುಲ್​, ಚೀನಾ ಒಳನುಸುಳುವಿಕೆ ಬಗ್ಗೆ ಸುಳ್ಳು ಹೇಳುವವರು ನಿಜವಾದ ದೇಶಭಕ್ತರಲ್ಲ ಎಂದು ಕಿಡಿಕಾರಿದ್ದಾರೆ.

"ಚೀನಾ ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿದೆ. ಈ ಬಗೆಗಿನ ಸತ್ಯ ಮರೆಮಾಚಿ ಭಾರತದ ಭೂಮಿಯನ್ನು ಕಬಳಿಸಲು ಚೀನಾಗೆ ಅವಕಾಶ ನೀಡುವುದು ರಾಷ್ಟ್ರ ವಿರೋಧಿ ನಡವಳಿಕೆ. ಅದನ್ನು ಜನರ ಗಮನಕ್ಕೆ ತರುವುದೇ ನಿಜವಾದ ದೇಶಭಕ್ತಿ" ಎಂದು ರಾಹುಲ್​ ಗಾಂಧಿ ತಮ್ಮ ಸರಣಿಯಲ್ಲಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

'ಚೀನಾ ಕುರಿತು ಕಠಿಣ ಪ್ರಶ್ನೆಗಳು'(Tough questions on China) ಎಂಬ ಶೀರ್ಷಿಕೆಯ ವಿಡಿಯೋದಲ್ಲಿ ಮಾತನಾಡಿರುವ ಕೇರಳದ ವಯನಾಡಿನ ಕಾಂಗ್ರೆಸ್ ಸಂಸದ, " ಒಬ್ಬ ಭಾರತೀಯನಾಗಿ ನನ್ನ ಪ್ರಥಮ ಆದ್ಯತೆ ನನ್ನ ರಾಷ್ಟ್ರ ಮತ್ತು ಅದರ ಜನರು" ಎಂದು ಹೇಳಿದ್ದಾರೆ.

  • The Chinese have occupied Indian land.

    Hiding the truth and allowing them to take it is anti-national.

    Bringing it to people’s attention is patriotic. pic.twitter.com/H37UZaFk1x

    — Rahul Gandhi (@RahulGandhi) July 27, 2020 " class="align-text-top noRightClick twitterSection" data=" ">

ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಗಾಂಧಿ, " ಚೀನಾ ನಮ್ಮ ಭೂಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದೆ ಎಂಬುದು ಬಹಳ ಸ್ಪಷ್ಟವಾಗಿದೆ. ಇದು ನನ್ನ ರಕ್ತ ಕುದಿಯುವಂತೆ ಮಾಡುತ್ತಿದೆ. ಬೇರೊಂದು ರಾಷ್ಟ್ರ ಅಷ್ಟೊಂದು ಸುಲಭವಾಗಿ ಹೇಗೆ ನಮ್ಮ ಭೂಪ್ರದೇಶಕ್ಕೆ ನುಗ್ಗುತ್ತದೆ?" ಎಂದು ರಾಹುಲ್​ ಪ್ರಶ್ನಿಸಿದ್ದಾರೆ.

ನಾನು ಉಪಗ್ರಹ ಫೋಟೋಗಳನ್ನು ನೋಡಿ ಈ ವಿಷಯದ ಬಗ್ಗೆ ತಿಳಿದುಕೊಂಡಿದ್ದೇನೆ. ಅಲ್ಲದೇ ಮಾಜಿ ಸೇನಾಧಿಕಾರಿಗಳೊಂದಿಗೂ ಮಾತನಾಡಿದ್ದೇನೆ. ನೀವು ರಾಜಕಾರಣಿಗಳಾಗಿ ನಾನು ಮೌನವಾಗಿರಬೇಕು ಮತ್ತು ನನ್ನ ಜನರಿಗೆ ಸುಳ್ಳು ಹೇಳಬೇಕೆಂದು ಬಯಸಬಹುದು. ಚೀನಿಯರು ಈ ದೇಶವನ್ನು ಪ್ರವೇಶಿಸಿಲ್ಲ ಎಂದು ನಾನು ಸುಳ್ಳು ಹೇಳಬೇಕೆಂದು ನೀವು ಬಯಸಬಹುದು. ಆದರೆ ನಾನು ಸುಳ್ಳು ಹೇಳುವುದಿಲ್ಲ ಎಂದು ರಾಹುಲ್​ ಹೇಳಿದ್ದಾರೆ.

ನವದೆಹಲಿ: ಚೀನಾದೊಂದಿಗಿನ ಗಡಿ ಸಮಸ್ಯೆಗಳ ಕುರಿತು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ವಿಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ರಾಹುಲ್​, ಚೀನಾ ಒಳನುಸುಳುವಿಕೆ ಬಗ್ಗೆ ಸುಳ್ಳು ಹೇಳುವವರು ನಿಜವಾದ ದೇಶಭಕ್ತರಲ್ಲ ಎಂದು ಕಿಡಿಕಾರಿದ್ದಾರೆ.

"ಚೀನಾ ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿದೆ. ಈ ಬಗೆಗಿನ ಸತ್ಯ ಮರೆಮಾಚಿ ಭಾರತದ ಭೂಮಿಯನ್ನು ಕಬಳಿಸಲು ಚೀನಾಗೆ ಅವಕಾಶ ನೀಡುವುದು ರಾಷ್ಟ್ರ ವಿರೋಧಿ ನಡವಳಿಕೆ. ಅದನ್ನು ಜನರ ಗಮನಕ್ಕೆ ತರುವುದೇ ನಿಜವಾದ ದೇಶಭಕ್ತಿ" ಎಂದು ರಾಹುಲ್​ ಗಾಂಧಿ ತಮ್ಮ ಸರಣಿಯಲ್ಲಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

'ಚೀನಾ ಕುರಿತು ಕಠಿಣ ಪ್ರಶ್ನೆಗಳು'(Tough questions on China) ಎಂಬ ಶೀರ್ಷಿಕೆಯ ವಿಡಿಯೋದಲ್ಲಿ ಮಾತನಾಡಿರುವ ಕೇರಳದ ವಯನಾಡಿನ ಕಾಂಗ್ರೆಸ್ ಸಂಸದ, " ಒಬ್ಬ ಭಾರತೀಯನಾಗಿ ನನ್ನ ಪ್ರಥಮ ಆದ್ಯತೆ ನನ್ನ ರಾಷ್ಟ್ರ ಮತ್ತು ಅದರ ಜನರು" ಎಂದು ಹೇಳಿದ್ದಾರೆ.

  • The Chinese have occupied Indian land.

    Hiding the truth and allowing them to take it is anti-national.

    Bringing it to people’s attention is patriotic. pic.twitter.com/H37UZaFk1x

    — Rahul Gandhi (@RahulGandhi) July 27, 2020 " class="align-text-top noRightClick twitterSection" data=" ">

ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಗಾಂಧಿ, " ಚೀನಾ ನಮ್ಮ ಭೂಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದೆ ಎಂಬುದು ಬಹಳ ಸ್ಪಷ್ಟವಾಗಿದೆ. ಇದು ನನ್ನ ರಕ್ತ ಕುದಿಯುವಂತೆ ಮಾಡುತ್ತಿದೆ. ಬೇರೊಂದು ರಾಷ್ಟ್ರ ಅಷ್ಟೊಂದು ಸುಲಭವಾಗಿ ಹೇಗೆ ನಮ್ಮ ಭೂಪ್ರದೇಶಕ್ಕೆ ನುಗ್ಗುತ್ತದೆ?" ಎಂದು ರಾಹುಲ್​ ಪ್ರಶ್ನಿಸಿದ್ದಾರೆ.

ನಾನು ಉಪಗ್ರಹ ಫೋಟೋಗಳನ್ನು ನೋಡಿ ಈ ವಿಷಯದ ಬಗ್ಗೆ ತಿಳಿದುಕೊಂಡಿದ್ದೇನೆ. ಅಲ್ಲದೇ ಮಾಜಿ ಸೇನಾಧಿಕಾರಿಗಳೊಂದಿಗೂ ಮಾತನಾಡಿದ್ದೇನೆ. ನೀವು ರಾಜಕಾರಣಿಗಳಾಗಿ ನಾನು ಮೌನವಾಗಿರಬೇಕು ಮತ್ತು ನನ್ನ ಜನರಿಗೆ ಸುಳ್ಳು ಹೇಳಬೇಕೆಂದು ಬಯಸಬಹುದು. ಚೀನಿಯರು ಈ ದೇಶವನ್ನು ಪ್ರವೇಶಿಸಿಲ್ಲ ಎಂದು ನಾನು ಸುಳ್ಳು ಹೇಳಬೇಕೆಂದು ನೀವು ಬಯಸಬಹುದು. ಆದರೆ ನಾನು ಸುಳ್ಳು ಹೇಳುವುದಿಲ್ಲ ಎಂದು ರಾಹುಲ್​ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.