ETV Bharat / bharat

ಮಹಾಮಳೆಗೆ ತತ್ತರಿಸಿದ ಹೈದರಾಬಾದ್: ಛಾವಣಿ ಕುಸಿದು ತಾಯಿ, ಮಗಳು ಸಾವು, ಮಲ್ಕಜ್​ಗಿರಿಯಲ್ಲಿ 292 ಮಿ.ಮೀ. ಮಳೆ

author img

By

Published : Oct 14, 2020, 7:27 AM IST

ಇಬ್ರಾಹಿಂಪಟ್ಟಣಂ ಪ್ರದೇಶದಲ್ಲಿ ಮಂಗಳವಾರ ಮನೆಯ ಛಾವಣಿ ಕುಸಿದು 40 ವರ್ಷದ ಮಹಿಳೆ ಮತ್ತು ಅವರ ಮಗಳು ಮೃತಪಟ್ಟಿದ್ದಾರೆ. ಮಹಿಳೆ ಮತ್ತು ಆಕೆಯ 15 ವರ್ಷದ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾತ್ರಿ 8.00ರ ಸುಮಾರಿಗೆ ಅವರ ಹಳೆಯ ಮನೆಯ ಛಾವಣಿಯು ಕುಸಿದಿದ್ದು, ಮಗ ಸಣ್ಣ ಗಾಯಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Heavy rains
ಭಾರೀ ಮಳೆ

ಹೈದರಾಬಾದ್​: ಇತಿಹಾಸದಲ್ಲಿ ಕಾಣದ ಮಹಾಮಳೆಗೆ ಸಿಲುಕಿರುವ ಹೈದ್ರಾಬಾದ್ ಅಕ್ಷರಶಃ ತತ್ತರಿಸಿ ಹೋಗಿದೆ. ಮಂಗಳವಾರ ದಿನಪೂರ್ತಿ ಸುರಿದಿರುವ ಭೀಕರ ಮಳೆಗೆ ನಗರದ ನೂರಾರು ಮನೆಗಳು ಸಂಪೂರ್ಣ ಜಲಾವೃತವಾಗಿವೆ.

ರಾತ್ರಿ ಇಡೀ ಸುರಿದಿರುವ ಮಳೆ ನಗರದ ತಗ್ಗು ಪ್ರದೇಶಗಳಿಗೆ ನುಗ್ಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದು ವರದಿಯಾಗಿದೆ.

ಹವಾಮಾನ ಇಲಾಖೆ ನೀಡಿರುವ ವರದಿಯ ಪ್ರಕಾರ ಗುರುವಾರ ಮತ್ತು ಶುಕ್ರವಾರ ಇಲ್ಲಿನ ಗುಡಿಮಲ್ಕಾಪುರ್​, ರೆಡ್​ ಹಿಲ್ಸ್​, ನಾಮಪಲ್ಲಿ, ಸಿನಗಾರ್ ಕಾಲೋನಿ, ಜುಬಿಲಿ ಹಿಲ್ಸ್​, ಕಾರ್ವಾನ್​ ಹಾಗೂ ಆಸಿಫ್​ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಕನಿಷ್ಠ 10 ರಿಂದ 14 ಸೆಂ.ಮೀ ಮಳೆಯಾಗಿದೆ. ಪರಿಣಾಮ ಇಡೀ ನಗರದಾದ್ಯಂತ ಮೊಣಕಾಲಿನಷ್ಟು ಉದ್ದಕ್ಕೆ ನೀರು ನಿಂತಿದ್ದು, ಈ ನೀರನ್ನು ಹೊರಹಾಕಲು ಮಹಾ ನಗರ ಪಾಲಿಕೆ ಹರಸಾಹಸಪಡುತ್ತಿದೆ.

ಇಬ್ರಾಹಿಂಪಟ್ಟಣಂ ಪ್ರದೇಶದಲ್ಲಿ ಮಂಗಳವಾರ ಮನೆಯ ಛಾವಣಿ ಕುಸಿದು 40 ವರ್ಷದ ಮಹಿಳೆ ಮತ್ತು ಅವರ ಮಗಳು ಮೃತಪಟ್ಟಿದ್ದಾರೆ. ಮಹಿಳೆ ಮತ್ತು ಆಕೆಯ 15 ವರ್ಷದ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾತ್ರಿ 8.00ರ ಸುಮಾರಿಗೆ ಅವರ ಹಳೆಯ ಮನೆಯ ಛಾವಣಿಯು ಕುಸಿದಿದ್ದು, ಮಗ ಸಣ್ಣ ಗಾಯಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಳೆಯ ಅಧಿಕೃತ ಮಾಹಿತಿಯ ಪ್ರಕಾರ (ಮಂಗಳವಾರ ಬೆಳಗ್ಗೆ 8.30 ರಿಂದ 21:00 ಗಂಟೆಗಳವರೆಗೆ), ಮೇಡ್ಚಲ್ ಮಲ್ಕಜ್​ಗಿರಿ ಜಿಲ್ಲೆಯ ಸಿಂಗಾಪುರ ಟೌನ್‌ಶಿಪ್‌ನಲ್ಲಿ 292.5 ಮಿ.ಮೀ ಮಳೆಯಾಗಿದೆ. ಯಾಡಾದ್ರಿ-ಭೋಂಗೀರ್ ಜಿಲ್ಲೆಯ ವರ್ಕಾಟ್ ಪಲ್ಲೆಯಲ್ಲಿ 250.8 ಮಿ.ಮೀ ಮಳೆಯಾಗಿದೆ.

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಹೆಚ್ಎಂಸಿ) ವ್ಯಾಪ್ತಿಯಲ್ಲಿನ ಅನೇಕ ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜಿಎಚ್‌ಎಂಸಿಯಲ್ಲಿ ತಾತ್ಕಾಲಿಕ ಸರಾಸರಿ ಮಳೆ 98.9 ಮಿ.ಮೀ. ಭಾರಿ ಮಳೆಯಿಂದಾಗಿ ನಗರದ ಹಲವು ರಸ್ತೆಗಳು ಜಲಾವೃತವಾದವು. ಕಚೇರಿ ಕೆಲಸ ಮುಗಿಸಿ ಮನೆಗೆ ಹೋಗುವ ದಾವಂತದಲ್ಲಿದ್ದ ಸಾವಿರಾರು ವಾಹನ ಸವಾರರು ಸಂಜೆಯ ವೇಳೆ ರಸ್ತೆಯಲ್ಲಿ ತುಂಬಿದ್ದ ಮಳೆ ನೀರಿನಿಂದ ಪರದಾಡಿದರು.

ಭದ್ರಾದ್ರಿ-ಕೊಥಗುಡೆಮ್ ಜಿಲ್ಲೆಯಲ್ಲಿ ನದಿ ಹಾಗೂ ಹೊಳೆಗಳು ಅಪಾಯದ ಮಟ್ಟ ಮಿರಿ ಹರಿಯುತ್ತಿವೆ. ಪ್ರವಾಹದಲ್ಲಿ ಮುಳುಗಿರುವ ರಸ್ತೆ ಹಾಗೂ ಸೇತುವೆಗಳ ಮೇಲೆ ಜನರು ಪ್ರಯಾಣಿಸಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಅವರು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಮಹಾಮಳೆಯ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿನ ಭಾರಿ ಮಳೆಯ ಪರಿಸ್ಥಿತಿ ಬಗ್ಗೆ ಅವಲೋಕನ ನಡೆಸಿ, ಅಪಾಯದಲ್ಲಿ ಸಿಲುಕಿದವರ ರಕ್ಷಣೆಗೆ ಮುಂದಾಗಿ. ರಾಜ್ಯ ಸರ್ಕಾರವು ಅಗತ್ಯ ನೆರವು ನೀಡುತ್ತದೆ ಎಂದಿದ್ದಾರೆ.

ಮಳೆ ಪೀಡಿತ ಜಿಲ್ಲೆಗಳಲ್ಲಿನ ಆಡಳಿತವು ಹೆಚ್ಚಿನ ಜಾಗರೂಕರಾಗಿರಬೇಕು. ಈ ಮೊದಲು ಸಂವಹನ ನಡೆಸಿದ ಪ್ರವಾಹ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಆಗ್ರಹಿಸಿದರು.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಅವರು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಅಧಿಕಾರಿಯೊಂದಿಗೆ ಮಾತನಾಡಿದ್ದಾರೆ ಮತ್ತು ಪ್ರವಾಹ ಪೀಡಿತರ ಸಂತ್ರಸ್ತರ ರಕ್ಷಣೆಗೆ ತಂಡವನ್ನು ಸಿದ್ಧಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಹೈದರಾಬಾದ್​: ಇತಿಹಾಸದಲ್ಲಿ ಕಾಣದ ಮಹಾಮಳೆಗೆ ಸಿಲುಕಿರುವ ಹೈದ್ರಾಬಾದ್ ಅಕ್ಷರಶಃ ತತ್ತರಿಸಿ ಹೋಗಿದೆ. ಮಂಗಳವಾರ ದಿನಪೂರ್ತಿ ಸುರಿದಿರುವ ಭೀಕರ ಮಳೆಗೆ ನಗರದ ನೂರಾರು ಮನೆಗಳು ಸಂಪೂರ್ಣ ಜಲಾವೃತವಾಗಿವೆ.

ರಾತ್ರಿ ಇಡೀ ಸುರಿದಿರುವ ಮಳೆ ನಗರದ ತಗ್ಗು ಪ್ರದೇಶಗಳಿಗೆ ನುಗ್ಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದು ವರದಿಯಾಗಿದೆ.

ಹವಾಮಾನ ಇಲಾಖೆ ನೀಡಿರುವ ವರದಿಯ ಪ್ರಕಾರ ಗುರುವಾರ ಮತ್ತು ಶುಕ್ರವಾರ ಇಲ್ಲಿನ ಗುಡಿಮಲ್ಕಾಪುರ್​, ರೆಡ್​ ಹಿಲ್ಸ್​, ನಾಮಪಲ್ಲಿ, ಸಿನಗಾರ್ ಕಾಲೋನಿ, ಜುಬಿಲಿ ಹಿಲ್ಸ್​, ಕಾರ್ವಾನ್​ ಹಾಗೂ ಆಸಿಫ್​ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಕನಿಷ್ಠ 10 ರಿಂದ 14 ಸೆಂ.ಮೀ ಮಳೆಯಾಗಿದೆ. ಪರಿಣಾಮ ಇಡೀ ನಗರದಾದ್ಯಂತ ಮೊಣಕಾಲಿನಷ್ಟು ಉದ್ದಕ್ಕೆ ನೀರು ನಿಂತಿದ್ದು, ಈ ನೀರನ್ನು ಹೊರಹಾಕಲು ಮಹಾ ನಗರ ಪಾಲಿಕೆ ಹರಸಾಹಸಪಡುತ್ತಿದೆ.

ಇಬ್ರಾಹಿಂಪಟ್ಟಣಂ ಪ್ರದೇಶದಲ್ಲಿ ಮಂಗಳವಾರ ಮನೆಯ ಛಾವಣಿ ಕುಸಿದು 40 ವರ್ಷದ ಮಹಿಳೆ ಮತ್ತು ಅವರ ಮಗಳು ಮೃತಪಟ್ಟಿದ್ದಾರೆ. ಮಹಿಳೆ ಮತ್ತು ಆಕೆಯ 15 ವರ್ಷದ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾತ್ರಿ 8.00ರ ಸುಮಾರಿಗೆ ಅವರ ಹಳೆಯ ಮನೆಯ ಛಾವಣಿಯು ಕುಸಿದಿದ್ದು, ಮಗ ಸಣ್ಣ ಗಾಯಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಳೆಯ ಅಧಿಕೃತ ಮಾಹಿತಿಯ ಪ್ರಕಾರ (ಮಂಗಳವಾರ ಬೆಳಗ್ಗೆ 8.30 ರಿಂದ 21:00 ಗಂಟೆಗಳವರೆಗೆ), ಮೇಡ್ಚಲ್ ಮಲ್ಕಜ್​ಗಿರಿ ಜಿಲ್ಲೆಯ ಸಿಂಗಾಪುರ ಟೌನ್‌ಶಿಪ್‌ನಲ್ಲಿ 292.5 ಮಿ.ಮೀ ಮಳೆಯಾಗಿದೆ. ಯಾಡಾದ್ರಿ-ಭೋಂಗೀರ್ ಜಿಲ್ಲೆಯ ವರ್ಕಾಟ್ ಪಲ್ಲೆಯಲ್ಲಿ 250.8 ಮಿ.ಮೀ ಮಳೆಯಾಗಿದೆ.

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಹೆಚ್ಎಂಸಿ) ವ್ಯಾಪ್ತಿಯಲ್ಲಿನ ಅನೇಕ ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜಿಎಚ್‌ಎಂಸಿಯಲ್ಲಿ ತಾತ್ಕಾಲಿಕ ಸರಾಸರಿ ಮಳೆ 98.9 ಮಿ.ಮೀ. ಭಾರಿ ಮಳೆಯಿಂದಾಗಿ ನಗರದ ಹಲವು ರಸ್ತೆಗಳು ಜಲಾವೃತವಾದವು. ಕಚೇರಿ ಕೆಲಸ ಮುಗಿಸಿ ಮನೆಗೆ ಹೋಗುವ ದಾವಂತದಲ್ಲಿದ್ದ ಸಾವಿರಾರು ವಾಹನ ಸವಾರರು ಸಂಜೆಯ ವೇಳೆ ರಸ್ತೆಯಲ್ಲಿ ತುಂಬಿದ್ದ ಮಳೆ ನೀರಿನಿಂದ ಪರದಾಡಿದರು.

ಭದ್ರಾದ್ರಿ-ಕೊಥಗುಡೆಮ್ ಜಿಲ್ಲೆಯಲ್ಲಿ ನದಿ ಹಾಗೂ ಹೊಳೆಗಳು ಅಪಾಯದ ಮಟ್ಟ ಮಿರಿ ಹರಿಯುತ್ತಿವೆ. ಪ್ರವಾಹದಲ್ಲಿ ಮುಳುಗಿರುವ ರಸ್ತೆ ಹಾಗೂ ಸೇತುವೆಗಳ ಮೇಲೆ ಜನರು ಪ್ರಯಾಣಿಸಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಅವರು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಮಹಾಮಳೆಯ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿನ ಭಾರಿ ಮಳೆಯ ಪರಿಸ್ಥಿತಿ ಬಗ್ಗೆ ಅವಲೋಕನ ನಡೆಸಿ, ಅಪಾಯದಲ್ಲಿ ಸಿಲುಕಿದವರ ರಕ್ಷಣೆಗೆ ಮುಂದಾಗಿ. ರಾಜ್ಯ ಸರ್ಕಾರವು ಅಗತ್ಯ ನೆರವು ನೀಡುತ್ತದೆ ಎಂದಿದ್ದಾರೆ.

ಮಳೆ ಪೀಡಿತ ಜಿಲ್ಲೆಗಳಲ್ಲಿನ ಆಡಳಿತವು ಹೆಚ್ಚಿನ ಜಾಗರೂಕರಾಗಿರಬೇಕು. ಈ ಮೊದಲು ಸಂವಹನ ನಡೆಸಿದ ಪ್ರವಾಹ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಆಗ್ರಹಿಸಿದರು.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಅವರು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಅಧಿಕಾರಿಯೊಂದಿಗೆ ಮಾತನಾಡಿದ್ದಾರೆ ಮತ್ತು ಪ್ರವಾಹ ಪೀಡಿತರ ಸಂತ್ರಸ್ತರ ರಕ್ಷಣೆಗೆ ತಂಡವನ್ನು ಸಿದ್ಧಪಡಿಸಿದ್ದಾರೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.