ETV Bharat / bharat

ಬಾಲಕಿ ಸ್ಥಿತಿ ಗಂಭೀರ... ಅತ್ಯಾಚಾರಿ ಬಗ್ಗೆ ಮಾಹಿತಿ ಕೊಟ್ಟವರಿಗೆ ರಿವಾರ್ಡ್ ಘೋಷಿಸಿದ ಪೊಲೀಸ್ ಇಲಾಖೆ

author img

By

Published : Aug 12, 2020, 6:20 PM IST

ಬೈಕ್ ಮೇಲೆ ಬಂದು ಬಾಲಕಿಯನ್ನು ಅಪಹರಿಸಿ, ಬಳಿಕ ಅತ್ಯಾಚಾರ ಎಸಗಿದ್ದವನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅಪಹರಣವಾದ ಬಳಿಕ ಬಾಲಕಿ ಪತ್ತೆಯಾದಾಗ ಆಕೆ ರಕ್ತದ ಮಡುವಿನಲ್ಲಿದ್ದಳು ಮತ್ತು ಪ್ರಜ್ಞೆ ಕಳೆದುಕೊಂಡಿದ್ದಳು. ವೈದ್ಯಕೀಯ ಪರೀಕ್ಷೆ ಬಳಿಕ ಅತ್ಯಾಚಾರ ನಡೆದಿರುವುದು ಗೊತ್ತಾಗಿದೆ.

ಅತ್ಯಾಚಾರ
ಅತ್ಯಾಚಾರ

ಹಾಪುರ್ (ಉತ್ತರ ಪ್ರದೇಶ): ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿರುವ ಕಾಮುಕನ ಬಗ್ಗೆ ಮಾಹಿತಿ ಕೊಟ್ಟವರಿಗೆ 50 ಸಾವಿರ ಹಣ ಕೊಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿದೆ.

ಕಳೆದ ಗುರುವಾರ ಬಾಲಕಿಯನ್ನು ಅಪಹರಿಸಿ ಬಳಿಕ ಅತ್ಯಾಚಾರ ಎಸಗಿ ಕಾಮುಕ ಪರಾರಿಯಾಗಿದ್ದಾನೆ. ಸದ್ಯ ಬಾಲಕಿಯನ್ನು ಮೀರತ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಆಕೆಯ ಪರಿಸ್ಥಿತಿ ಗಂಭೀರವಾಗಿದೆ.

ಘಟನೆ ನಡೆದು ಮೂರು ದಿನಗಳ ನಂತರ, ಬಾಲಕಿಯ ಪೋಷಕರು ಹಾಗೂ ನೆರೆಯವರ ಹೇಳಿಕೆಯ ಆಧಾರದ ಆರೋಪಿಯ ಮೂರು ಸ್ಕೆಚ್​ಗಳನ್ನು ಬಿಡುಗಡೆ ಮಾಡಲಾಗಿದೆ. ಜೊತೆಗೆ ಪೊಲೀಸರು ತನಿಖೆ ತೀವ್ರಗೊಳಿಸಲು, ಕಾಮುಕನ ಬಗ್ಗೆ ಮಾಹಿತಿ ನೀಡಿದವರಿಗೆ ರಿವಾರ್ಡ್ ಘೋಷಿಸಿದ್ದಾರೆ.

ಕಾಮುಕನ ಬಗ್ಗೆ ಮಾಹಿತಿ ನೀಡಿದವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಪುರ್ (ಉತ್ತರ ಪ್ರದೇಶ): ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿರುವ ಕಾಮುಕನ ಬಗ್ಗೆ ಮಾಹಿತಿ ಕೊಟ್ಟವರಿಗೆ 50 ಸಾವಿರ ಹಣ ಕೊಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿದೆ.

ಕಳೆದ ಗುರುವಾರ ಬಾಲಕಿಯನ್ನು ಅಪಹರಿಸಿ ಬಳಿಕ ಅತ್ಯಾಚಾರ ಎಸಗಿ ಕಾಮುಕ ಪರಾರಿಯಾಗಿದ್ದಾನೆ. ಸದ್ಯ ಬಾಲಕಿಯನ್ನು ಮೀರತ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಆಕೆಯ ಪರಿಸ್ಥಿತಿ ಗಂಭೀರವಾಗಿದೆ.

ಘಟನೆ ನಡೆದು ಮೂರು ದಿನಗಳ ನಂತರ, ಬಾಲಕಿಯ ಪೋಷಕರು ಹಾಗೂ ನೆರೆಯವರ ಹೇಳಿಕೆಯ ಆಧಾರದ ಆರೋಪಿಯ ಮೂರು ಸ್ಕೆಚ್​ಗಳನ್ನು ಬಿಡುಗಡೆ ಮಾಡಲಾಗಿದೆ. ಜೊತೆಗೆ ಪೊಲೀಸರು ತನಿಖೆ ತೀವ್ರಗೊಳಿಸಲು, ಕಾಮುಕನ ಬಗ್ಗೆ ಮಾಹಿತಿ ನೀಡಿದವರಿಗೆ ರಿವಾರ್ಡ್ ಘೋಷಿಸಿದ್ದಾರೆ.

ಕಾಮುಕನ ಬಗ್ಗೆ ಮಾಹಿತಿ ನೀಡಿದವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.