ETV Bharat / bharat

ಬಿಗಿ ಭದ್ರತೆ ಮಧ್ಯೆಯೂ ಜೈಲಿನ ಕಂಬಿ ಮುರಿದ ಕೈದಿಗಳು.. ಅತ್ಯಾಚಾರ, ಕೊಲೆ ಆರೋಪಿಗಳೂ ಎಸ್ಕೇಪ್! - undefined

ಮಧ್ಯಪ್ರದೇಶದ ನೀಮಚ್​ ಜಿಲ್ಲೆಯ ಕಾರಾಗೃಹದ ಜೈಲಿನ ಕಂಬಿ ಮುರಿದು, ನಾಲ್ವರು ಕೈದಿಗಳು ಪರಾರಿಯಾಗಿದ್ದಾರೆ. ಪೊಲೀಸರು ತಕ್ಷಣ ಎಚ್ಚೆತ್ತುಕೊಂಡು, ಕೈದಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Neemuch
author img

By

Published : Jun 23, 2019, 12:50 PM IST

ಭೋಪಾಲ್​: ಪೊಲೀಸ್​ ಬಿಗಿ ಭದ್ರತೆ ನಡುವೆಯೂ ಜೈಲಿನ ಕಂಬಿ ಮುರಿದು, ನಾಲ್ವರು ಕೈದಿಗಳು ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ನೀಮಚ್​ ಜಿಲ್ಲೆಯ ಕಾರಾಗೃಹದಲ್ಲಿ ನಡೆದಿದೆ.

ಜೈಲರ್​ ಆರ್​ಸಿ ಬಸುನಿಯಾ ಮಾಹಿತಿಯಂತೆ, ನರಸಿಂಗ್, ದುಬೆ ಲಾಲ್​, ಪಂಕಜ್​ ಹಾಗೂ ಲೇಖ್ ರಾಮ್ ಎಂಬ ಕೈದಿಗಳು ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಜೈಲಿನ ಕಂಬಿಗಳನ್ನು ಮುರಿದು, ಕಾಂಪೌಂಡ್​ ಹಾರಿ ಪರಾರಿಯಾಗಿದ್ದಾರೆ.

ಜೈಲಿನ ಕಂಬಿ ಮುರಿದ ಕೈದಿಗಳು ಎಸ್ಕೇಪ್!

ಪರಾರಿಯಾದವರಲ್ಲಿ ಲೇಖ್ ರಾಮ್ ಎಂಬಾತ ಕೊಲೆ ಕೇಸ್, ದುಬೆ ಲಾಲ್ ಎಂಬಾತ ಅತ್ಯಾಚಾರ ಪ್ರಕರಣ, ನರಸಿಂಗ್ ಹಾಗೂ ಪಂಕಜ್ ಎಂಬಿಬ್ಬರ ಮೇಲೆ ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಪ್ರಕರಣಗಳಡಿ ಜೈಲು ಶಿಕ್ಷೆ ಅನುಭವಿಸುತ್ತಿದ್ದರು. ಸ್ಥಳೀಯ ಪೊಲೀಸರು ತಕ್ಷಣ ಎಚ್ಚೆತ್ತುಕೊಂಡು, ಕೈದಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಭೋಪಾಲ್​: ಪೊಲೀಸ್​ ಬಿಗಿ ಭದ್ರತೆ ನಡುವೆಯೂ ಜೈಲಿನ ಕಂಬಿ ಮುರಿದು, ನಾಲ್ವರು ಕೈದಿಗಳು ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ನೀಮಚ್​ ಜಿಲ್ಲೆಯ ಕಾರಾಗೃಹದಲ್ಲಿ ನಡೆದಿದೆ.

ಜೈಲರ್​ ಆರ್​ಸಿ ಬಸುನಿಯಾ ಮಾಹಿತಿಯಂತೆ, ನರಸಿಂಗ್, ದುಬೆ ಲಾಲ್​, ಪಂಕಜ್​ ಹಾಗೂ ಲೇಖ್ ರಾಮ್ ಎಂಬ ಕೈದಿಗಳು ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಜೈಲಿನ ಕಂಬಿಗಳನ್ನು ಮುರಿದು, ಕಾಂಪೌಂಡ್​ ಹಾರಿ ಪರಾರಿಯಾಗಿದ್ದಾರೆ.

ಜೈಲಿನ ಕಂಬಿ ಮುರಿದ ಕೈದಿಗಳು ಎಸ್ಕೇಪ್!

ಪರಾರಿಯಾದವರಲ್ಲಿ ಲೇಖ್ ರಾಮ್ ಎಂಬಾತ ಕೊಲೆ ಕೇಸ್, ದುಬೆ ಲಾಲ್ ಎಂಬಾತ ಅತ್ಯಾಚಾರ ಪ್ರಕರಣ, ನರಸಿಂಗ್ ಹಾಗೂ ಪಂಕಜ್ ಎಂಬಿಬ್ಬರ ಮೇಲೆ ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಪ್ರಕರಣಗಳಡಿ ಜೈಲು ಶಿಕ್ಷೆ ಅನುಭವಿಸುತ್ತಿದ್ದರು. ಸ್ಥಳೀಯ ಪೊಲೀಸರು ತಕ್ಷಣ ಎಚ್ಚೆತ್ತುಕೊಂಡು, ಕೈದಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Intro:Body:

Neemuch 


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.