ETV Bharat / bharat

ಮೋದಿ ಸರ್ಕಾರದ ಕ್ರೌರ್ಯದ ವಿರುದ್ಧ ರೈತರು ದೃಢವಾಗಿ ನಿಂತಿದ್ದಾರೆ: ರಾಗಾ ಟ್ವೀಟ್​ - ಕೇಂದ್ರ ಸರ್ಕಾರದ ವಿರುದ್ಧ ರೈತರಿಂದ ಪ್ರತಿಭಟನೆ

ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ 'ದೆಹಲಿ ಚಲೋ' ನಡೆಸುತ್ತಿರುವ ರೈತರನ್ನು ಕಾಂಗ್ರೆಸ್​ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಶ್ಲಾಘಿಸಿದ್ದಾರೆ.

Farmers protested against centre's farm laws
ರೈತರ ಪ್ರತಿಭಟನೆ ಬಗ್ಗೆ ರಾಹುಲ್ ಗಾಂಧಿ ಟ್ವೀಟ್​
author img

By

Published : Nov 26, 2020, 7:38 PM IST

ನವದೆಹಲಿ : ಮೋದಿ ಸರ್ಕಾರ ಕ್ರೌರ್ಯದ ವಿರುದ್ಧ ರೈತರು ದೃಢವಾಗಿ ನಿಂತಿದ್ದಾರೆ ಎಂದು ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಹೇಳಿದ್ದಾರೆ.

ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್‌ನಿಂದ ದೆಹಲಿಯತ್ತ ಮೆರವಣಿಗೆ ನಡೆಸುತ್ತಿದ್ದ ನೂರಾರು ರೈತರನ್ನು ಚದುರಿಸಲು ಹರಿಯಾಣ ಪೊಲೀಸರು ಜಲ ಫಿರಂಗಿ ಬಳಿಸಿದ್ದಕ್ಕಾಗಿ ಕಿಡಿ ಕಾರಿರುವ ರಾಹುಲ್ ಈ ರೀತಿ ಹೇಳಿದ್ದಾರೆ.

  • नहीं हुआ है अभी सवेरा,
    पूरब की लाली पहचान
    चिड़ियों के जगने से पहले,
    खाट छोड़ उठ गया किसान
    काले क़ानूनों के बादल गरज रहे गड़-गड़,
    अन्याय की बिजली चमकती चम-चम
    मूसलाधार बरसता पानी,
    ज़रा ना रुकता लेता दम!

    मोदी सरकार की क्रूरता के ख़िलाफ़ देश का किसान डटकर खड़ा है। pic.twitter.com/UMtYbKqSkM

    — Rahul Gandhi (@RahulGandhi) November 26, 2020 " class="align-text-top noRightClick twitterSection" data=" ">

ರೈತರು ರಾಜ್ಯಕ್ಕೆ ಪ್ರವೇಶಿಸದಂತೆ ಹರಿಯಾಣದ ಪಂಜಾಬ್ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಹಲವೆಡೆ ಬಹು ಹಂತದ ಬ್ಯಾರಿಕೇಡ್​ ಅಳವಡಿಸಲಾಗಿದೆ. ಹರಿಯಾಣದ ಶಂಭು ಪ್ರದೇಶದ ಅಂತಾರಾಜ್ಯ ಗಡಿಯಲ್ಲಿ, ಪಂಜಾಬ್​ನಿಂದ 'ದೆಹಲಿ ಚಲೋ ರ್ಯಾಲಿ'ಯಲ್ಲಿ ಬರುತ್ತಿದ್ದ ರೈತರನ್ನು ಚದುರಿಸಲು ಪೊಲೀಸರು ಜಲ ಫಿರಂಗಿ ಪ್ರಯೋಗಿಸಿದ್ದರು. ಈ ವೇಳೆ ರೊಚ್ಚಿಗೆದ್ದ ರೈತರು, ಪೊಲೀಸ್​ ಬ್ಯಾರಿಕೇಡ್​ಗಳನ್ನು ನದಿಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.

ಇದನ್ನೂ ಓದಿ: ಕೇಂದ್ರದ ವಿರುದ್ಧ ಸಿಡಿದೆದ್ದ ಅನ್ನದಾತ: ಲಕ್ಷಾಂತರ ರೈತರಿಂದ ‘ದೆಹಲಿ ಚಲೋ’

ಘಟನೆಯ ವಿಡಿಯೋವನ್ನು ಟ್ವೀಟ್​ ಮಾಡಿರುವ ರಾಹುಲ್ ಗಾಂಧಿ, ಮೋದಿ ಸರ್ಕಾರದ ಕ್ರೌರ್ಯದ ವಿರುದ್ಧ ದೇಶದ ರೈತರು ದೃಢವಾಗಿ ನಿಂತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುವ ರೈತರ ಧೈರ್ಯವನ್ನು ಶ್ಲಾಘಿಸುತ್ತಾ, ಹಿಂದಿಯಲ್ಲಿ ಒಂದು ಪದ್ಯವನ್ನೂ ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ.

ನವದೆಹಲಿ : ಮೋದಿ ಸರ್ಕಾರ ಕ್ರೌರ್ಯದ ವಿರುದ್ಧ ರೈತರು ದೃಢವಾಗಿ ನಿಂತಿದ್ದಾರೆ ಎಂದು ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಹೇಳಿದ್ದಾರೆ.

ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್‌ನಿಂದ ದೆಹಲಿಯತ್ತ ಮೆರವಣಿಗೆ ನಡೆಸುತ್ತಿದ್ದ ನೂರಾರು ರೈತರನ್ನು ಚದುರಿಸಲು ಹರಿಯಾಣ ಪೊಲೀಸರು ಜಲ ಫಿರಂಗಿ ಬಳಿಸಿದ್ದಕ್ಕಾಗಿ ಕಿಡಿ ಕಾರಿರುವ ರಾಹುಲ್ ಈ ರೀತಿ ಹೇಳಿದ್ದಾರೆ.

  • नहीं हुआ है अभी सवेरा,
    पूरब की लाली पहचान
    चिड़ियों के जगने से पहले,
    खाट छोड़ उठ गया किसान
    काले क़ानूनों के बादल गरज रहे गड़-गड़,
    अन्याय की बिजली चमकती चम-चम
    मूसलाधार बरसता पानी,
    ज़रा ना रुकता लेता दम!

    मोदी सरकार की क्रूरता के ख़िलाफ़ देश का किसान डटकर खड़ा है। pic.twitter.com/UMtYbKqSkM

    — Rahul Gandhi (@RahulGandhi) November 26, 2020 " class="align-text-top noRightClick twitterSection" data=" ">

ರೈತರು ರಾಜ್ಯಕ್ಕೆ ಪ್ರವೇಶಿಸದಂತೆ ಹರಿಯಾಣದ ಪಂಜಾಬ್ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಹಲವೆಡೆ ಬಹು ಹಂತದ ಬ್ಯಾರಿಕೇಡ್​ ಅಳವಡಿಸಲಾಗಿದೆ. ಹರಿಯಾಣದ ಶಂಭು ಪ್ರದೇಶದ ಅಂತಾರಾಜ್ಯ ಗಡಿಯಲ್ಲಿ, ಪಂಜಾಬ್​ನಿಂದ 'ದೆಹಲಿ ಚಲೋ ರ್ಯಾಲಿ'ಯಲ್ಲಿ ಬರುತ್ತಿದ್ದ ರೈತರನ್ನು ಚದುರಿಸಲು ಪೊಲೀಸರು ಜಲ ಫಿರಂಗಿ ಪ್ರಯೋಗಿಸಿದ್ದರು. ಈ ವೇಳೆ ರೊಚ್ಚಿಗೆದ್ದ ರೈತರು, ಪೊಲೀಸ್​ ಬ್ಯಾರಿಕೇಡ್​ಗಳನ್ನು ನದಿಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.

ಇದನ್ನೂ ಓದಿ: ಕೇಂದ್ರದ ವಿರುದ್ಧ ಸಿಡಿದೆದ್ದ ಅನ್ನದಾತ: ಲಕ್ಷಾಂತರ ರೈತರಿಂದ ‘ದೆಹಲಿ ಚಲೋ’

ಘಟನೆಯ ವಿಡಿಯೋವನ್ನು ಟ್ವೀಟ್​ ಮಾಡಿರುವ ರಾಹುಲ್ ಗಾಂಧಿ, ಮೋದಿ ಸರ್ಕಾರದ ಕ್ರೌರ್ಯದ ವಿರುದ್ಧ ದೇಶದ ರೈತರು ದೃಢವಾಗಿ ನಿಂತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುವ ರೈತರ ಧೈರ್ಯವನ್ನು ಶ್ಲಾಘಿಸುತ್ತಾ, ಹಿಂದಿಯಲ್ಲಿ ಒಂದು ಪದ್ಯವನ್ನೂ ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.