ETV Bharat / bharat

ಸಿಎಂ ಗಾದಿಗೆ ಬೇಡಿಕೆಯಿಟ್ಟ ಗೇಮ್​ ಚೇಂಜರ್​ ದುಷ್ಯಂತ್​...!

ಹರಿಯಾಣದಲ್ಲಿ ಯಾವೊಂದು ಪಕ್ಷವೂ ಬಹುಮತ ಪಡೆಯದೇ ಇರಲು ಕಾರಣ ಜನನಾಯಕ್​​ ಜನತಾ ಪಕ್ಷ (ಜೆಜೆಪಿ) ಪಕ್ಷದ ನಾಯಕ ದುಷ್ಯಂತ್​ ಸಿಂಗ್​ ಚೌಟಾಲ. ಇವರನ್ನು ಜೂನಿಯರ್ ಚೌಟಾಲ ಎಂದೂ ಕರೆಯುತ್ತಾರೆ.

author img

By

Published : Oct 24, 2019, 11:55 PM IST

Dushyant Chautala emerging as gamechanger in Haryana

ಚಂಡೀಗಢ: ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್​ ಅಧಿಕಾರಕ್ಕಾಗಿ ಹಗ್ಗಜಗ್ಗಾಟ ನಡೆಸುತ್ತಿವೆ. ಯಾವೊಂದ ಪಕ್ಷವೂ ಬಹುಮತ ಪಡೆಯದೇ ಇರಲು ಕಾರಣ ಜೆಜೆಪಿ ಪಕ್ಷದ ನಾಯಕ ದುಷ್ಯಂತ್​ ಸಿಂಗ್​ ಚೌಟಾಲ.

ಕಳೆದ ಬಾರಿ ಒಂದು ಸ್ಥಾನವನ್ನೂ ಗೆಲುವನ್ನು ಸಾಧಿಸದ ಜೆಜೆಪಿ ಈ ಬಾರಿ 10 ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಚೌಟಾಲ ಅವರು ಗೇಮ್​​ ಚೇಂಜರ್​ ಆಗಿ ಹೊರಹೊಮ್ಮಿದ್ದಾರೆ. ದುಷ್ಯಂತ್ ಸಿಂಗ್​ ಅವರು ಉಚನಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಮಾಜಿ ಸಚಿವರೊಬ್ಬರ ಪತ್ನಿಯ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನೇ ಅಸ್ತ್ರವಾಗಿಸಿಕೊಂಡು ನಡೆಸಿದ ಅಬ್ಬರದ ಪ್ರಚಾರದಿಂದಲೇ ಇತ್ತ ಬಿಜೆಪಿ, ಅತ್ತ ಕಾಂಗ್ರೆಸ್​ಗೂ ಸ್ಪಷ್ಟ ಬಹುಮತ ಸಿಗಲಿಲ್ಲ.

ಕಾಂಗ್ರೆಸ್​ ಪಕ್ಷ ಜೆಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಮುಂದಾಗಿತ್ತು. ಆದರೆ, ದುಷ್ಯಂತ್​ ಸಿಂಗ್​ ಮುಖ್ಯಮಂತ್ರಿ ಪಟ್ಟ ಬೇಡಿಕೆ ಇಟ್ಟಿದ್ದಾರೆ. ಸಿಎಂ ಸ್ಥಾನ ಕೊಟ್ಟರೆ ಮಾತ್ರ ನಿಮ್ಮೊಂದಿಗೆ ಕೈ ಜೋಡಿಸುತ್ತೇನೆ ಎಂದು ಖಡಾ ಕಂಡಿತವಾಗಿ ನುಡಿದ್ದಾರೆ. ಆದ್ದರಿಂದ ಕರ್ನಾಟಕದಲ್ಲಿ ಕಾಂಗ್ರೆಸ್​ ಪಕ್ಷ, ಜೆಡಿಎಸ್​ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟ ಪರಿಸ್ಥಿತಿಯೇ ಎದುರಾಗಿದೆ.

ಚೌಟಾಲ ಅವರು ಹಿಸ್ಸಾರ್​ ಲೋಕಸಭಾ ಕ್ಷೇತ್ರದಿಂದ 26ನೇ ವಯಸ್ಸಿನಲ್ಲೇ ಸ್ಪರ್ಧಿಸಿ ಗೆಲುವಿನ ಕೇಕೆ ಹಾಕಿದ್ದರು. ಇವರ ತಂದೆ ಅಜಯ್​ ಚೌಟಾಲ ಕೂಡ ಪಕ್ಷ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ದುಷ್ಯಂತ್​ ಚೌಟಾಲ ಅವರು ಮಾಜಿ ಉಪಪ್ರಧಾನಿ ದೇವೀಲಾಲ್‌ ಅವರ ಮರಿಮೊಮ್ಮಗ. ಹರಿಯಾಣದ ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಾ ಅವರ ಮೊಮ್ಮಗ.

ಚಂಡೀಗಢ: ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್​ ಅಧಿಕಾರಕ್ಕಾಗಿ ಹಗ್ಗಜಗ್ಗಾಟ ನಡೆಸುತ್ತಿವೆ. ಯಾವೊಂದ ಪಕ್ಷವೂ ಬಹುಮತ ಪಡೆಯದೇ ಇರಲು ಕಾರಣ ಜೆಜೆಪಿ ಪಕ್ಷದ ನಾಯಕ ದುಷ್ಯಂತ್​ ಸಿಂಗ್​ ಚೌಟಾಲ.

ಕಳೆದ ಬಾರಿ ಒಂದು ಸ್ಥಾನವನ್ನೂ ಗೆಲುವನ್ನು ಸಾಧಿಸದ ಜೆಜೆಪಿ ಈ ಬಾರಿ 10 ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಚೌಟಾಲ ಅವರು ಗೇಮ್​​ ಚೇಂಜರ್​ ಆಗಿ ಹೊರಹೊಮ್ಮಿದ್ದಾರೆ. ದುಷ್ಯಂತ್ ಸಿಂಗ್​ ಅವರು ಉಚನಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಮಾಜಿ ಸಚಿವರೊಬ್ಬರ ಪತ್ನಿಯ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನೇ ಅಸ್ತ್ರವಾಗಿಸಿಕೊಂಡು ನಡೆಸಿದ ಅಬ್ಬರದ ಪ್ರಚಾರದಿಂದಲೇ ಇತ್ತ ಬಿಜೆಪಿ, ಅತ್ತ ಕಾಂಗ್ರೆಸ್​ಗೂ ಸ್ಪಷ್ಟ ಬಹುಮತ ಸಿಗಲಿಲ್ಲ.

ಕಾಂಗ್ರೆಸ್​ ಪಕ್ಷ ಜೆಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಮುಂದಾಗಿತ್ತು. ಆದರೆ, ದುಷ್ಯಂತ್​ ಸಿಂಗ್​ ಮುಖ್ಯಮಂತ್ರಿ ಪಟ್ಟ ಬೇಡಿಕೆ ಇಟ್ಟಿದ್ದಾರೆ. ಸಿಎಂ ಸ್ಥಾನ ಕೊಟ್ಟರೆ ಮಾತ್ರ ನಿಮ್ಮೊಂದಿಗೆ ಕೈ ಜೋಡಿಸುತ್ತೇನೆ ಎಂದು ಖಡಾ ಕಂಡಿತವಾಗಿ ನುಡಿದ್ದಾರೆ. ಆದ್ದರಿಂದ ಕರ್ನಾಟಕದಲ್ಲಿ ಕಾಂಗ್ರೆಸ್​ ಪಕ್ಷ, ಜೆಡಿಎಸ್​ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟ ಪರಿಸ್ಥಿತಿಯೇ ಎದುರಾಗಿದೆ.

ಚೌಟಾಲ ಅವರು ಹಿಸ್ಸಾರ್​ ಲೋಕಸಭಾ ಕ್ಷೇತ್ರದಿಂದ 26ನೇ ವಯಸ್ಸಿನಲ್ಲೇ ಸ್ಪರ್ಧಿಸಿ ಗೆಲುವಿನ ಕೇಕೆ ಹಾಕಿದ್ದರು. ಇವರ ತಂದೆ ಅಜಯ್​ ಚೌಟಾಲ ಕೂಡ ಪಕ್ಷ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ದುಷ್ಯಂತ್​ ಚೌಟಾಲ ಅವರು ಮಾಜಿ ಉಪಪ್ರಧಾನಿ ದೇವೀಲಾಲ್‌ ಅವರ ಮರಿಮೊಮ್ಮಗ. ಹರಿಯಾಣದ ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಾ ಅವರ ಮೊಮ್ಮಗ.

Intro:Body:

blank


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.