ಬರ್ಹಾನ್ಪುರ್ (ಮಧ್ಯಪ್ರದೇಶ): ಜಾತಿ ವ್ಯವಸ್ಥೆಯ ಬೇರು ಪ್ರಸ್ತುತ ಸಮಾಜದಲ್ಲಿ ಇನ್ನೂ ಆಳಕ್ಕಿಳಿಯುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಂತಿದೆ. ಇಲ್ಲಿನ ಬಿರೋಡಾ ಗ್ರಾಮದಲ್ಲಿ ದೇವಸ್ಥಾನದ ಒಳ ಪ್ರವೇಶಿಸಲು ಮುಂದಾದ ದಲಿತ ವರನೊಬ್ಬನನ್ನು ಕೆಲವು ದುಷ್ಕರ್ಮಿಗಳು ತಡೆದು 'ನೀವು ಕೆಳಜಾತಿಯವರು ಒಳಹೋಗಬಾರದು' ಎಂದು ಹೇಳಿ ಹೊರಕಳುಹಿಸಿ ಅವಮಾನಿಸಿದ್ದಾರೆ.
ವರ ಸಂದೀಪ್ ಗವಾಲೆ ಮಾತನಾಡಿ, ದೇವಾಲಯದಲ್ಲಿ ವಿವಾಹವಾಗಲು ಜಿಲ್ಲಾಧಿಕಾರಿ ಅನುಮತಿ ಪಡೆದುಕೊಂಡಿದ್ದೆವು. ಅದಕ್ಕಾಗಿ ಕುಟುಂಬಸಮೇತ ಇಲ್ಲಿಗೆ ಬಂದಿದ್ದೇವೆ. ಆದರೆ, ಮದುವೆ ನಡೆಯಬೇಕಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ದೇವಾಲಯದ ಗೇಟ್ಗಳನ್ನು ಮುಚ್ಚಿ ಬೀಗ ಹಾಕಿದರು. ಕೆಳಜಾತಿಯವರು ದೇವಸ್ಥಾನದ ಒಳಗೆ ಹೋಗಬಾರದು. ಮುಟ್ಟಾಗುತ್ತದೆ ಎಂದು ಅಡ್ಡಿಪಡಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.
ದೇವಸ್ಥಾನದಲ್ಲಿ ಮದುವೆಯಾಗಲು ನಿಮ್ಮಿಂದ ಅನುಮತಿ ಪಡೆದರೂ ನಮ್ಮ ಕುಟುಂಬವನ್ನು ಒಳಗೆ ಬಿಡಲಿಲ್ಲ ಎಂದು ಸಂದೀಪ್ ಗವಾಲೆ ಜಿಲ್ಲಾಧಿಕಾರಿಗೆ ದೂರು ಕೊಟ್ಟಿದ್ದಾರೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
-
Madhya Pradesh:A Dalit groom was allegedly stopped from entering a temple by few ppl in Biroda village,Burhanpur. SDM, Kashiram Badole, says,'A complaint was received that miscreants did not allow Dalit families to enter, appropriate action will be taken against them. (21.11) pic.twitter.com/7jPtHUiqI5
— ANI (@ANI) November 21, 2019 " class="align-text-top noRightClick twitterSection" data="
">Madhya Pradesh:A Dalit groom was allegedly stopped from entering a temple by few ppl in Biroda village,Burhanpur. SDM, Kashiram Badole, says,'A complaint was received that miscreants did not allow Dalit families to enter, appropriate action will be taken against them. (21.11) pic.twitter.com/7jPtHUiqI5
— ANI (@ANI) November 21, 2019Madhya Pradesh:A Dalit groom was allegedly stopped from entering a temple by few ppl in Biroda village,Burhanpur. SDM, Kashiram Badole, says,'A complaint was received that miscreants did not allow Dalit families to enter, appropriate action will be taken against them. (21.11) pic.twitter.com/7jPtHUiqI5
— ANI (@ANI) November 21, 2019
ಜಿಲ್ಲಾಧಿಕಾರಿಯಿಂದ ದೂರು ಬಂದ ಹಿನ್ನೆಲೆಯಲ್ಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಕಾಶಿರಾಮ್ ಬಡೋಲೆ ಅವರು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡುವುದಾಗಿ ತಿಳಿಸಿದ್ದಾರೆ.
ದಲಿತ ಕುಟುಂಬಕ್ಕೆ ಯಾವುದೇ ರೀತಿ ತೊಂದರೆ ಆಗದಂತೆ ಭದ್ರತೆ ಒದಗಿಸುತ್ತೇವೆ ಎಂದು ಪೊಲೀಸ್ ಅಧಿಕಾರಿ ಬಿಕ್ರಮ್ ಸಿಂಗ್ ಬೊಮಾನಿಯಾ ಭರವಸೆ ನೀಡಿದರು.